US; ಜೀವ ಉಳಿದ ರಹಸ್ಯ ಬಿಚ್ಚಿಟ್ಟ ಡೊನಾಲ್ಡ್‌ ಟ್ರಂಪ್‌

ಭಿನ್ನಾಭಿಪ್ರಾಯ ಇದ್ದರೂ ನಾವೆಲ್ಲ ಅಮೆರಿಕನ್ನರು: ಅಧ್ಯಕ್ಷ ಬೈಡೆನ್‌

Team Udayavani, Jul 16, 2024, 6:35 AM IST

Donald-Trumph

ವಾಷಿಂಗ್ಟನ್‌: ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌, ಸಾವಿನ ಹತ್ತಿರದ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. “”ದಾಳಿಯ ವೇಳೆ ನನಗೆ ಸಂಭವಿಸಿದ ಅತ್ಯಂತ ನಂಬಲಾಗದ ವಿಷಯ ಏನೆಂದರೆ, ನಾನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ತಿರುಗಿದ್ದರಿಂದ ಕೂದಲೆಳೆಯ ಅಂತರದಲ್ಲಿ ಪಾರಾದೆ. ಇಲ್ಲದಿದ್ದರೆ ನಾನು ಶವವಾಗಿರುತ್ತಿದ್ದೆ” ಎಂದು ಟ್ರಂಪ್‌ ಪತ್ರಕರ್ತರಿಗೆ ತಿಳಿಸಿದ್ದಾರೆ.

ಒಂದು ವೇಳೆ, ಆ ಕ್ಷಣದಲ್ಲಿ ನಾನು ಅರ್ಧದಷ್ಟೇ ತಿರುಗಿದ್ದರೆ ಬುಲೆಟ್‌ ನನ್ನ ತಲೆಯ ಸೀಳಿಕೊಂಡು ಹೊರ ಬರುತ್ತಿತ್ತು. ನಾನು ಆ ಪರಿಪೂರ್ಣ ತಿರುವನ್ನು ಮಾಡುವ ಸಾಧ್ಯತೆಗಳು ಬಹುಶಃ ಶೇ.10ನೆಯ 1 ಭಾಗವಾಗಿತ್ತು. ಹಾಗಾಗದಿದ್ದರೆ ನಾನು ಇಲ್ಲಿರುತ್ತಿರಲಿಲ್ಲ. ಯಾಕೆಂದರೆ, ಸಾವು ನನ್ನಿಂದ ಕೇವಲ 1/8 ಇಂಚಿನಷ್ಟೇ(3.18 ಮಿ.ಮೀ) ದೂರವಿತ್ತು. ಆ ಸರಿಯಾದ ಕ್ಷಣದಲ್ಲೇ ನಾನು ತಿರುಗಿದೆ. ಆದರೆ ದಾಳಿಕೋರ ಗುಂಡು ಹಾರಿಸುವುದನ್ನು ನಿಲ್ಲಿಸಲಿಲ್ಲ. ನಾನು ಅದೃಷ್ಟವಷಾತ್‌ ಅಥವಾ ದೇವರ ಕಾರಣದಿಂದ ಬದುಕಿದ್ದೇನೆ ಎಂದು ಟ್ರಂಪ್‌ ಅವರು ವರದಿಗಾರರಿಗೆ ತಿಳಿಸಿದ್ದಾರೆ. ಪ್ರಚಾರದ ವೇಳೆ ನೆರೆದಿದ್ದ ಸಭಿಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಬಾರಿ ಗುಂಡು ಹಾರಿದರೂ ಜನರು ಅಲ್ಲಾಡಲಿಲ್ಲ. ನನ್ನ ಜತೆ ಸ್ಥಿರವಾಗಿ ನಿಂತರು . ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಟ್ರಂಪ್‌ ಹೇಳಿದರು.

ಟ್ರಂಪ್‌ ಜೀವ ರಕ್ಷಿಸಿದ್ದು “ವಲಸಿಗರ ಚಾರ್ಟ್‌’!
ಭಾಷಣದ ವೇಳೆ ಟ್ರಂಪ್‌ ತಮ್ಮ ತಲೆಯನ್ನು ಸ್ವಲ್ಪವೇ ಸ್ವಲ್ಪ ತಿರುಗಿಸಿದ್ದರಿಂದ ಪ್ರಾಣ ಉಳಿಯಿತು. ಇಲ್ಲವೆಂದಾದರೆ ಬುಲೆಟ್‌ ನೇರವಾಗಿ ತಲೆ ಹೊಕ್ಕಿರುತ್ತಿತ್ತು. ಅವರ ಜೀವ ಉಳಿಸಿದ್ದು ವಲಸಿಗರಿಗೆ ಸಂಬಂಧಿಸಿದ ಚಾರ್ಟ್‌ ಎನ್ನುವುದು ಸ್ವತಃ ಟ್ರಂಪ್‌ ಸೇರಿದಂತೆ ಅನೇಕರ ವಾದ. ಭಾಷಣದಲ್ಲಿ ವಲಸಿಗರ ನೀತಿ ಕುರಿತು ಪ್ರಸ್ತಾವಿಸಿದ್ದ ಟ್ರಂಪ್‌, ಅದಕ್ಕೆ ಸಂಬಂಧಿಸಿದ ಚಾರ್ಟ್‌ ತೋರಿಸಲು ತಮ್ಮ ತಲೆಯನ್ನು ಅತ್ತ ಕಡೆಗೆ ತಿರುಗಿಸಿದ ಕ್ಷಣದಲ್ಲಿ ಗುಂಡು ಅವರ ಕಿವಿ ಸವರಿ ಹೋಗಿದೆ.

ದಾಳಿಕೋರನಿಗೆ ಗುರಿ ಇಡಲು ಬರುತ್ತಿರಲಿಲ್ಲ!
ಟ್ರಂಪ್‌ ಹತ್ಯೆ ಯತ್ನದ ಆರೋಪಿ ಮ್ಯಾಥ್ಯೂ ಈ ಹಿಂದೆ ತನ್ನ ಹೈಸ್ಕೂಲ್‌ನ ರೈಫ‌ಲ್‌ ತಂಡಕ್ಕೆ ಸೇರಲು ಮುಂದಾಗಿದ್ದ. ಆದರೆ “ನಿಖರವಾಗಿ ಗುರಿ ಇಡಲು ಬರಲಿಲ್ಲ’ ಎಂಬ ಕಾರಣಕ್ಕೆ ಆತನನ್ನು ತಿರಸ್ಕರಿಸಲಾಗಿತ್ತು ಎಂದು ಕ್ಲಬ್‌ನ ಸದಸ್ಯರೊಬ್ಬರು ಹೇಳಿದ್ದಾರೆ. ಕ್ಲಬ್‌ಗ ಸೇರಲು ಬಂದಾಗ, ಕೇವಲ 20 ಅಡಿ ದೂರದಿಂದ ಶೂಟ್‌ ಮಾಡಲು ಹೇಳಲಾಗಿತ್ತು. ಆದರೂ ಅವನು ಗುರಿ ತಪ್ಪಿದ್ದ. ಆಗ ಎಲ್ಲರೂ ಸೇರಿ ಅವನನ್ನು ತಮಾಷೆ ಮಾಡಿದ್ದರು. ಹಾಗಾಗಿ ಬಂದ ದಿನವೇ ಆತ ವಾಪಸ್‌ ಹೋದ. ಮತ್ತೆಂದೂ ಕ್ಲಬ್‌ಗ ಮರಳಲಿಲ್ಲ ಎಂದು ಅವರು ಹೇಳಿದ್ದಾರೆ.
ಏಕಾಂಗಿ ಯುವಕನ ದಾಳಿ- ಎಫ್ಬಿಐ: ದಾಳಿಕೋರ ಮ್ಯಾಥ್ಯೂ ಏಕಾಂಗಿಯಾಗಿಯೇ ಈ ಕೃತ್ಯವೆಸಗಿದ್ದ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಈ ಕುರಿತು ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಎಫ್ಬಿಐ ಹೇಳಿದೆ. ಸದ್ಯಕ್ಕೆ ಈ ಪ್ರಕರಣವನ್ನು ದೇಶೀಯ ಭಯೋತ್ಪಾದನೆ ಎಂದು ಪರಿಗಣಿಸಲಾಗಿದೆ

ಭಿನ್ನಾಭಿಪ್ರಾಯ ಇದ್ದರೂ ನಾವೆಲ್ಲ ಅಮೆರಿಕನ್ನರು: ಅಧ್ಯಕ್ಷ ಬೈಡೆನ್‌
ತನಿಖೆ ಬಳಿಕವೇ ದಾಳಿಕೋರನ ಉದ್ದೇಶ ಬಯಲು: ಅಧ್ಯಕ್ಷ

ಟ್ರಂಪ್‌ ಹತ್ಯೆ¬ಯತ್ನದ ಬೆನ್ನಲ್ಲೇ ಸೋಮವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಇಂಥ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾ ಗಿದೆ. ರಾಜಕೀಯ ಕಾವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬೇಕಿದೆ. ನಮ್ಮೆಲ್ಲರ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ನಾವು ಯಾರೂ ಶತ್ರುಗಳಲ್ಲ. ನಾವೆಲ್ಲ ಸ್ನೇಹಿತರು, ನೆರೆಹೊರೆಯವರು ಎಲ್ಲದಕ್ಕಿಂತಲೂ ಹೆಚ್ಚಾಗಿ ಅಮೆರಿಕನ್ನರು ಎಂಬುದನ್ನು ಮರೆಯಬಾರದು. ನಾವು ಇಂಥ ಹೊತ್ತಲ್ಲಿ ಒಂದಾಗಿ ನಿಲ್ಲಬೇಕು. ಶೂಟರ್‌ನ ಉದ್ದೇಶವೇನಿತ್ತು ಎಂಬುದು ನಮಗೆ ಇನ್ನೂ ಗೊತ್ತಿಲ್ಲ. ಆತನ ಅಭಿಪ್ರಾಯಗಳು, ಸಿದ್ಧಾಂತಗಳ ಕುರಿತೂ ಮಾಹಿತಿ ಲಭ್ಯವಿಲ್ಲ. ತನಿಖೆಯ ಬಳಿಕವೇ ಇದೆಲ್ಲ ಗೊತ್ತಾಗಬೇಕಿದೆ’ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಐವನ್‌ ಡಿಸೋಜ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು: ಆ.28 ರಂದು ಜಿಲ್ಲೆಯಾದ್ಯಂತ ರಸ್ತೆ ತಡೆ

ಬಿಜೆಪಿಯದ್ದು ಕಲ್ಲನ್ನು ಪೂಜೆ ಮಾಡುವ ಸಂಸ್ಕೃತಿಯೇ ಹೊರತು ಕಲ್ಲು ಎಸೆಯುವ ಸಂಸ್ಕೃತಿಯಲ್ಲ

5-yashoda-krishna

Krishna Janmashtami: ಯಶೋದಾ ಕೃಷ್ಣ ಸ್ಪ ರ್ಧೆಗೆ ಫೋಟೋ ಕಳಿಸಿ ಬಹುಮಾನ ಗೆಲ್ಲಿ

Digant Starrer Powder Movie Review

Powder Review; ಕಾಮಿಡಿ ಪುರಾಣಕ್ಕೆ ʼಪೌಡರ್‌ʼ ಸಾಕ್ಷಿ!

details of Karkala incident

Karkala Case; ಇನ್ಸ್ಟಾಗ್ರಾಮ್‌ ಪರಿಚಯ… ಅಪಹರಿಸಿ ನೀಚ ಕೃತ್ಯ; ಕಾರ್ಕಳದಲ್ಲಿ ಆಗಿದ್ದೇನು?

Siruguppa: ನಗರದಲ್ಲಿ ಸ್ವಚ್ಛತೆ ಮಾಯ, ಹೆಚ್ಚಿದ ಅನಾರೋಗ್ಯ ಸಮಸ್ಯೆ, ಡೆಂಗಿ ಪ್ರಕರಣ ಪತ್ತೆ

Siruguppa: ನಗರದಲ್ಲಿ ಸ್ವಚ್ಛತೆ ಮಾಯ, ಹೆಚ್ಚಿದ ಅನಾರೋಗ್ಯ ಸಮಸ್ಯೆ, ಡೆಂಗಿ ಪ್ರಕರಣ ಪತ್ತೆ

3-karkala

Karkala: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಇನ್ನೋರ್ವ ಆರೋಪಿ ಬಂಧನ

Kolkata: ಬೈಕ್ ಸವಾರನಿಂದ ಬೆಂಗಾಲಿ ನಟಿ ಪಾಯೆಲ್ ಮುಖರ್ಜಿ ಮೇಲೆ ಹಲ್ಲೆ, ಕಾರು ಧ್ವಂಸ

Kolkata: ಬೈಕ್ ಸವಾರನಿಂದ ಬೆಂಗಾಲಿ ನಟಿ ಪಾಯೆಲ್ ಮುಖರ್ಜಿ ಮೇಲೆ ಹಲ್ಲೆ, ಕಾರು ಧ್ವಂಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

office- bank

Australia: ಕೆಲಸದ ಅವಧಿ ಬಳಿಕ ಬಾಸ್‌ ನೌಕರರ ಮಧ್ಯೆ ಸಂಪರ್ಕ ಇಲ್ಲ

1-gb

Norway ಕಾಯ್ದೆ ಸಡಿಲ: 18ನೇ ವಾರಕ್ಕೂ ಗರ್ಭಪಾತಕ್ಕೆ ಸಮ್ಮತಿ

1-zz

Modi ಜತೆಗಿನ ಝೆಲೆನ್ಸ್ಕಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳು

1-I-U

Prime Modi ಉಕ್ರೇನ್ ನೊಂದಿಗೆ ಭಾರತವಿದೆ… : 4 ಒಪ್ಪಂದಗಳಿಗೆ ಸಹಿ

1-rakesh

First in history; ಡೆಮಾಕ್ರಾಟ್‌ ಸಭೆಯಲ್ಲಿ ಕನ್ನಡಿಗನ ವೇದ ಘೋಷ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

ಐವನ್‌ ಡಿಸೋಜ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು: ಆ.28 ರಂದು ಜಿಲ್ಲೆಯಾದ್ಯಂತ ರಸ್ತೆ ತಡೆ

ಬಿಜೆಪಿಯದ್ದು ಕಲ್ಲನ್ನು ಪೂಜೆ ಮಾಡುವ ಸಂಸ್ಕೃತಿಯೇ ಹೊರತು ಕಲ್ಲು ಎಸೆಯುವ ಸಂಸ್ಕೃತಿಯಲ್ಲ

5-yashoda-krishna

Krishna Janmashtami: ಯಶೋದಾ ಕೃಷ್ಣ ಸ್ಪ ರ್ಧೆಗೆ ಫೋಟೋ ಕಳಿಸಿ ಬಹುಮಾನ ಗೆಲ್ಲಿ

Digant Starrer Powder Movie Review

Powder Review; ಕಾಮಿಡಿ ಪುರಾಣಕ್ಕೆ ʼಪೌಡರ್‌ʼ ಸಾಕ್ಷಿ!

details of Karkala incident

Karkala Case; ಇನ್ಸ್ಟಾಗ್ರಾಮ್‌ ಪರಿಚಯ… ಅಪಹರಿಸಿ ನೀಚ ಕೃತ್ಯ; ಕಾರ್ಕಳದಲ್ಲಿ ಆಗಿದ್ದೇನು?

Siruguppa: ನಗರದಲ್ಲಿ ಸ್ವಚ್ಛತೆ ಮಾಯ, ಹೆಚ್ಚಿದ ಅನಾರೋಗ್ಯ ಸಮಸ್ಯೆ, ಡೆಂಗಿ ಪ್ರಕರಣ ಪತ್ತೆ

Siruguppa: ನಗರದಲ್ಲಿ ಸ್ವಚ್ಛತೆ ಮಾಯ, ಹೆಚ್ಚಿದ ಅನಾರೋಗ್ಯ ಸಮಸ್ಯೆ, ಡೆಂಗಿ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.