ಪದಚ್ಯುತಿಯ ಹಂತದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್?
ಐಎಸ್ಐ ಮುಖ್ಯಸ್ಥರ ನೇಮಕ ತಂದ ಕಗ್ಗಂಟು; ನ.20ರ ಒಳಗಾಗಿ ನಿರ್ಧಾರವಾಗಲಿದೆ ಖಾನ್ ರಾಜಕೀಯ ಭವಿಷ್ಯ
Team Udayavani, Nov 15, 2021, 10:00 PM IST
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ರನ್ನು ಕಿತ್ತೂಗೆಯಲು ಅಲ್ಲಿನ ಸೇನೆ ಸಿದ್ಧತೆ ನಡೆಸುತ್ತಿದೆಯೇ? ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ)ನ ಮುಖಸ್ಥರ ನೇಮಕ ವಿಚಾರವೇ ಸೇನೆ ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯದ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ.
ಲೆ.ಜ.ನದೀಮ್ ಅಂಜುಮ್ ಅವರು ಐಎಸ್ಐ ಮುಖ್ಯಸ್ಥರಾಗಿ ನ.20ರಂದು ಅಧಿಕಾರ ಸ್ವೀಕರಿಸಲಿರುವಂತೆಯೇ ಹಾಲಿ ಮುಖ್ಯಸ್ಥ ಲೆ.ಜ.ಫೈಜ್ ಹಮೀದ್ ಅವರನ್ನೇ ಮುಂದುವರಿಸಲು ಪ್ರಧಾನಿ ಇಮ್ರಾನ್ ಖಾನ್ ಒಲವು ಹೊಂದಿದ್ದಾರೆ. ಈ ವಿಚಾರವೇ ಸೇನಾ ಮುಖ್ಯಸ್ಥ ಜ.ಖಮರ್ ಜಾವೇದ್ ಬಾಜ್ವಾ ಮತ್ತು ಪ್ರಧಾನಿ ಖಾನ್ ನಡುವಿನ ವಿರಸಕ್ಕೆ ಕಾರಣ. ಪ್ರಧಾನಿ ಹಠಹಿಡಿದದ್ದೇ ಆದಲ್ಲಿ ಸರ್ಕಾರದ ಆಡಳಿತವನ್ನು ಸೇನೆ ಕೈವಶ ಮಾಡಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.
ಹೀಗಾಗಿ, ನ.20ರ ಒಳಗಾಗಿ ಇಮ್ರಾನ್ ಖಾನ್ ಹುದ್ದೆಗೆ ರಾಜೀನಾಮೆ ನೀಡುವುದು ಮತ್ತು ನಾಯಕತ್ವ ಬದಲಾವಣೆಯಾಗಬೇಕು ಎಂದು ಸಂಸತ್ನಲ್ಲಿ ಪ್ರತಿಪಕ್ಷಗಳು ಬೇಡಿಕೆ ಮುಂದಿಡಲಿವೆ. ಜತೆಗೆ ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಜತೆಗಿನ ಮೈತ್ರಿಗೆ ಮುತ್ತಹಿದಾ ಕ್ವಾಮಿ ಮೂವ್ಮೆಂಟ್ (ಎಂಕ್ಯೂಎಂ), ಪಾಕಿಸ್ತಾನ ಮುಸ್ಲಿಂ ಲೀಗ್-ಕ್ಯೂ (ಪಿಎಂಎಲ್-ಕ್ಯೂ) ಅಂತ್ಯ ಹಾಡಲಿವೆ ಎನ್ನ ಲಾಗಿದೆ. ಹೀಗಾಗಿ ಖಾನ್ ಹುದ್ದೆ ತೊರೆಯುವುದು ಬಹುತೇಕ ನಿಚ್ಚಳವಾಗಲಿದೆ.
ಇದನ್ನೂ ಓದಿ:ವಾಕಿಂಗ್ ಹೋಗುತ್ತಿದ್ದಾಗ ನಟಿಗೆ ಹಲ್ಲೆ; ಮೊಬೈಲ್ ಕಿತ್ತುಕೊಂಡು ಪರಾರಿ
ಪ್ರಧಾನಿ ಹುದ್ದೆಗೆ ಯಾರು?
ಇಮ್ರಾನ್ ಖಾನ್ ಅವರೇ ಹುದ್ದೆಗೆ ರಾಜೀನಾಮೆ ನೀಡಿದಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ನ ಪರ್ವೇಝ್ ಖಟ್ಟಕ್, ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಜ್ ಪಕ್ಷದ ಶಾಭಾಝ್ ಷರೀಫ್ ಪ್ರಧಾನಿ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಇದೆ.
ಕಠಿಣ ಪರಿಸ್ಥಿತಿ:
ಹದಗೆಟ್ಟ ಅರ್ಥ ವ್ಯವಸ್ಥೆ, ಪಾಕಿಸ್ತಾನದಲ್ಲಿ ಬಲಪಂಥೀಯ ಎಂದು ಗುರುತಿಸಿಕೊಂಡ ತೆಹ್ರೀಕ್-ಇ- ಲಬೈಕ್ ಪಾಕಿಸ್ತಾನ್ ಎಂಬ ಪಕ್ಷದ ಕಾರ್ಯಕರ್ತರ ಸತತ ಪ್ರತಿಭಟನೆ ಮತ್ತು ಘರ್ಷಣೆಯಿಂದ ಹಲವರು ಅಸುನೀಗಿದ ಪ್ರಕರಣಗಳು ಕೂಡ ಇಮ್ರಾನ್ ಅವರಿಗೆ ಪದತ್ಯಾಗದ ಅನಿವಾರ್ಯತೆ ಮೂಡಿಸಿ ದೆ. ವಿಶೇಷವಾಗಿ ಐಎಸ್ಐಗೆ ಮುಖ್ಯಸ್ಥರನ್ನು ನೇಮಿಸುವ ವಿಚಾರ ಕೈಮೀರಿ ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್ಗೆ ಟ್ರಂಪ್
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.