![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 13, 2021, 6:20 AM IST
ಸಾಂದರ್ಭಿಕ ಚಿತ್ರ
ಕಾಬೂಲ್: ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಕುಳಿತುಕೊಳ್ಳಲು ಅವಕಾಶವಿರುವ ವಿವಿಗಳಲ್ಲಿ ಮಾತ್ರ ಅಫ್ಘಾನ್ ಮಹಿಳೆಯರು ಶಿಕ್ಷಣ ಕೈಗೊಳ್ಳಬಹುದು ಎಂದು ಅಫ್ಘಾನಿಸ್ಥಾನದ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಕಿ ಹಕ್ಕಾನಿ ತಿಳಿಸಿದ್ದಾನೆ.
ರವಿವಾರ ಮಾತನಾಡಿದ ಆತ ಅಫ್ಘಾನಿಸ್ಥಾನದ ಮಹಿಳೆಯರ ಶಿಕ್ಷಣಕ್ಕಾಗಿ ರೂಪಿಸಲಾಗಿರುವ ಹೊಸ ನಿಯಮಾವಳಿಗಳನ್ನು ವಿವರಿಸಿದ್ದಾನೆ. “ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಕೂರಿಸಿ, ಮಧ್ಯದಲ್ಲಿ ಪರದೆ ಹಾಕಿರುವ ವ್ಯವಸ್ಥೆ ಇರುವ ಕಡೆಯಲ್ಲಿ ಮಾತ್ರ ವ್ಯಾಸಂಗ ಮಾಡಬಹುದು. ಪದವಿ ಮಾತ್ರವಲ್ಲದೆ ಸ್ನಾತಕೋತ್ತರ ವಿಷಯಗಳಲ್ಲೂ ಮಹಿಳೆಯರು ವ್ಯಾಸಂಗ ಮಾಡಬಹುದು. ವಿದ್ಯಾರ್ಥಿನಿಯರು ಕಡ್ಡಾಯವಾಗಿ ಹಿಜಾಬ್ ಧರಿಸಲೇಬೇಕು’ ಎಂದಿದ್ದಾರೆ.
ಪೊಲೀಸರು ಸೇವೆಗೆ ಪುನರಾಗಮನ: ಕಾಬೂಲ್ನ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಸೇವೆಯಲ್ಲಿದ್ದ ಪೊಲೀಸ್ ಸಿಬಂದಿ, ರವಿವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತಾಲಿಬಾನಿಗಳು ಕಾಬೂಲನ್ನು ಆಕ್ರಮಣ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರೆಲ್ಲರೂ ವಿಮಾನ ನಿಲ್ದಾಣ ತೊರೆದಿದ್ದರು.
ಪಾಕಿಗಳ ಬೆಂಬಲ:
ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಸರಕಾರ ಅಸ್ತಿತ್ವಕ್ಕೆ ಬಂದಿರುವುದನ್ನು ಪಾಕ್ ಜನರು ಸ್ವಾಗತಿಸಿದ್ದಾರೆ. “ಗಾಲ್ಅಪ್ ಪಾಕಿಸ್ಥಾನ’ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಪಾಕಿಸ್ಥಾನದ ಜನರಲ್ಲಿ ಶೇ. 55ರಷ್ಟು ಮಂದಿ ತಾಲಿಬಾನಿ ಆಡಳಿತಕ್ಕೆ ಬೆಂಬಲ ಸೂಚಿಸಿದ್ದರೆ, ಉಗ್ರ ಆಡಳಿತಕ್ಕೆ ಶೇ. 25 ಜನ ಬೇಸರ ವ್ಯಕ್ತಪಡಿಸಿದ್ದಾರೆ. ಶೇ. 20 ಮಂದಿ ಪ್ರತಿಕ್ರಿಯೆ ನೀಡಿಲ್ಲ. ಖೈಬರ್ ಪಕು¤ಂಖ್ವಾದಲ್ಲಿ ಹೆಚ್ಚಿನವರು ತಾಲಿಬಾನ್ ಆಡಳಿತಕ್ಕೆ ದೊಡ್ಡಮಟ್ಟದ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮೂಹಿಕ ಕ್ಷಮಾದಾನ :
ಹಿಂದಿನ ಅಫ್ಘಾನ್ ಸರಕಾರದಲ್ಲಿ ಸೇವೆ ಸಲ್ಲಿಸಿರುವ ಎಲ್ಲ ಸರಕಾರಿ ನೌಕರಿಗೆ ಸಾಮೂ ಹಿಕ ಕ್ಷಮಾದಾನವನ್ನು ನೀಡಿರುವುದಾಗಿ ತಾಲಿಬಾನ್ ಸರಕಾರ ಘೋಷಿಸಿದೆ. ಸೇನೆ, ಪೊಲೀಸ್ ಹಾಗೂ ಇನ್ನಿತರ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸಿರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು ಸರಕಾರ ತಿಳಿಸಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.