US new chapter; ಕಮಲಾ ಹ್ಯಾರಿಸ್ ರನ್ನು ಹಾಡಿ ಹೊಗಳಿದ ಒಬಾಮಾ
ಟ್ರಂಪ್ ಅವರದ್ದು ನಿರಂತರವಾದ ಹಿಡಿತ ತಪ್ಪಿದ ಮತ್ತು ಕುಂದುಕೊರತೆಗಳ ಸರಣಿ
Team Udayavani, Aug 21, 2024, 11:22 AM IST
ವಾಷಿಂಗ್ಟನ್: ‘ಅಮೆರಿಕದ(US)ಜ್ಯೋತಿಯನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್( Kamala Harris) ಅವರಿಗೆ ರವಾನಿಸಲಾಗಿದೆ. ಆದರೆ ಡೆಮಾಕ್ರಟಿಕ್ ಗಳ ಕೆಲಸ ಇನ್ನೂ ಮುಗಿದಿಲ್ಲ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ(Barack Obama) ಹೇಳಿದ್ದಾರೆ.
ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಷನ್ನಲ್ಲಿ ಭಾಷಣ ಮಾಡಿದ ಒಬಾಮಾ, ‘ಕಮಲಾ ಹ್ಯಾರಿಸ್ ಮತ್ತು ಟಿಮ್ ವಾಲ್ಜ್ ಅವರು ಬ್ಲೂ ಕಾಲರ್ ಕಾರ್ಮಿಕರ ಯೋಗಕ್ಷೇಮಕ್ಕೆ ಆಳವಾಗಿ ಬದ್ಧರಾಗಿರುವ ನಾಯಕರು. ಈ ನೂತನ ಆರ್ಥಿಕತೆಯಲ್ಲಿ, ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ನೋಡಿಕೊಳ್ಳಲು, ನಮ್ಮ ಬೀದಿಗಳನ್ನು ಸ್ವಚ್ಛಗೊಳಿಸಲು, ನಮ್ಮ ಪ್ಯಾಕೇಜ್ಗಳನ್ನು ತಲುಪಿಸಲು ಅಗತ್ಯವಾದ, ಕೋಟ್ಯಂತರ ಜನರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಅಧ್ಯಕ್ಷರ ಅಗತ್ಯವಿದೆ’ ಎಂದರು.
“ಕಮಲಾ ಅಧ್ಯಕ್ಷೆಯಾಗುತ್ತಾರೆ, ಅಮೆರಿಕದ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂದು ಒಬಾಮಾ ಹೇಳಿದರು. ಈ ವೇಳೆ ಭಾರಿ ಸಂಖ್ಯೆಯಲ್ಲಿದ್ದ ಸಭಿಕರು “ಹೌದು, ಅವರು ಅಧ್ಯಕ್ಷರಾಗುತ್ತಾರೆ” ಎಂದು ಘೋಷಣೆಗಳನ್ನು ಮೊಳಗಿಸಿದರು.
”ಯುಎಸ್ ಚುನಾವಣೆ ಜಿದ್ದಾಜಿದ್ದಿನ ಓಟ. ಕಳೆದ ಕೆಲವು ವಾರಗಳಿಂದ ನಾವು ಉತ್ಪಾದಿಸಲು ಸಾಧ್ಯವಾದ ಎಲ್ಲ, ನಂಬಲಾಗದ ಶಕ್ತಿಯಿಂದಾಗಿ ಎಲ್ಲಾ ರ್ಯಾಲಿಗಳಿಂದಾಗಿ ಇನ್ನೂ ಬಿಗಿಯಾದ ಓಟದ ಸ್ಪರ್ಧೆಯಾಗಲಿದೆ” ಎಂದು ಒಬಾಮಾ ಹೇಳಿದರು.
‘ಅಮೆರಿಕನ್ನರು ತಮ್ಮ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು ಎಂದ ಒಬಾಮಾ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದರು.ಟ್ರಂಪ್ ಅವರದ್ದು ನಿರಂತರವಾದ ಹಿಡಿತ ತಪ್ಪಿದ ಮತ್ತು ಕುಂದುಕೊರತೆಗಳ ಸರಣಿಯಾಗಿದ್ದು ಈಗ ಅವರು ಕಮಲಾ ಎದುರು ಸೋಲುವ ಭಯದಲ್ಲಿದ್ದಾರೆ’ ಎಂದರು.
ಒಬಾಮಾ ಅವರಿಗೆ ಪತ್ನಿ ಮಿಚೆಲ್ ಕೂಡ ಪ್ರಚಾರದಲ್ಲಿ ಸಾಥ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್
Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.