![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jan 17, 2021, 8:13 AM IST
17-01-2021
ಮೇಷ: ಕ್ಲಿಷ್ಟಕರ ದಿನವು ನಿಮ್ಮ ಮುಂದಿದೆ. ಯಾವುದಕ್ಕೂ ಸಹನೆ ಕಳೆದುಕೊಳ್ಳದಿರಿ. ಇತರರಿಗೆ ಬುದ್ಧಿವಾದ ಹೇಳಲು ಹೋಗುವುದು ಸರಿಯಲ್ಲ. ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ನಿಮಗೆದುರಾಗಲಿದೆ.
ವೃಷಭ: ಗೆಳಯರಿಂದ ಉತ್ತಮ ಸಲಹೆಗಳು ಕಂಡುಬಂದಾವು. ಅವನ್ನು ಕಡೆಗಣಿಸದಿರಿ. ಸ್ವೀಕರಿಸುವುದು ಬಿಡುವುದು ನಿಮ್ಮಿಚ್ಛೆ. ವೃತ್ತಿಯಲ್ಲಿ ಯಶಸ್ಸು ಅಭಿವೃದ್ಧಿ ಕಂಡು ಬರುವುದು ಯಶಸ್ಸಿದೆ.
ಮಿಥುನ: ಕೌಟುಂಬಿಕವಾಗಿ ಅಸಹನೆ ತೋರಿಬಂದೀತು. ಗೊಂದಲದ ಪರಿಸ್ಥಿತಿ ಮುಂದುವರಿಯಲು ಅವಕಾಶ ಕೊಡದಿರಿ. ಆರ್ಥಿಕವಾಗಿ ಸಂಕಷ್ಟಗಳು ಎದುರಾದರೂ ಅದನ್ನು ಚೆನ್ನಾಗಿ ನಿಭಾಯಿಸುವ ಶಕ್ತಿಯು ನಿಮ್ಮಲ್ಲಿದೆ.
ಕರ್ಕ: ಆಪ್ತೇಷ್ಟರೊಂದಿಗೆ ಆತ್ಮೀಯ ಸಮಯವನ್ನು ಕಳೆಯುವಿರಿ. ಸಂಬಂಧಗಳಲ್ಲಿ ಸುಧಾರಣೆಯು ತೋರಿ ಬರುವುದು. ಪರಸ್ಪರರಲ್ಲಿ ಸೌಹಾರ್ದ, ಪ್ರೀತಿ ವಿಶ್ವಾಸ ತಲೆದೋರಬಹುದು. ಆತ್ಮೀಯರೊಂದಿಗೆ ಭೇಟಿಯಿದೆ.
ಸಿಂಹ: ಬದಲಾವಣೆಗೆ ಹೊಂದಿಕೊಂಡು ಹೋಗಲು ಕಲಿಯಿರಿ. ಗೆಳೆಯನೊಬ್ಬನಿಂದ ಉಪಯುಕ್ತ ಸಲಹೆಗಳು ದೊರಕಬಹುದು. ಖರ್ಚುವೆಚ್ಚಗಳನ್ನು ನಿಯಂತ್ರಿಸುವುದು ಅತೀ ಮುಖ್ಯವಾಗಿದೆ. ದುರ್ಜನರಿಂದ ದೂರವಿರಿ.
ಕನ್ಯಾ: ನೀವು ನಂಬಿದ ವ್ಯಕ್ತಿಯೊಬ್ಬರ ನಿಜಬಣ್ಣ ತೋರುವುದು. ಅವರ ಕುಟಿಲತೆಯ ಅರಿವು ನಿಮಗಾಗಲಿದೆ. ಅವರೊಂದಿಗೆ ಸಂಘರ್ಷಕ್ಕೆ ಇಳಿಯದಿರಿ. ನಿಮ್ಮ ಮರ್ಯಾದೆಗೆ ಮೂರುಕಾಸು ಆದೀತು. ಜಾಗ್ರತೆ ಇರಲಿ.
ತುಲಾ: ಗೊಂದಲದ ಪರಿಸ್ಥಿತಿಯು ಏರ್ಪಟ್ಟಿತು. ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಂಡರೆ ಉತ್ತಮ. ಕಠಿಣ ನಿರ್ಧಾರ ಮಾಡಬೇಕಾದೀತು. ಆತುರತೆ ಬೇಡ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬಂದರೂ ಕಾಳಜಿ ಇರಲಿ.
ವೃಶ್ಚಿಕ: ಮಾನಸಿಕವಾಗಿ ಅಸ್ಥಿರತೆಯು ಕಾಡಲಿದೆ. ಪ್ರಮುಖ ನಿರ್ಧಾರವನ್ನು ದೃಢತೆಯಿಂದ ತೆಗೆದುಕೊಳ್ಳಿರಿ. ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು. ಕಾರ್ಯಾರ್ಥ ಪ್ರಯಾಣವು ಕೂಡಿಬರಲಿದೆ. ದೇಹಾಯಾಸವು ತೋರಿಬರುವುದು.
ಧನು: ಆರೋಗ್ಯದಲ್ಲಿ ಏರುಪೇರು ಹೇಗೋ ಹಾಗೇ ಆರ್ಥಿಕ ಏಳುಬೀಳುಗಳು ಕಂಡುಬರಬಹುದು. ಹಾಗೆಂದು ಚಿಂತೆ ಅನಾವಶ್ಯಕ. ಪತ್ನಿಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ತೋರಿಬಂದು ಸಮಾಧಾನವಾದೀತು. ಶುಭವಿದೆ.
ಮಕರ: ಅವಿಶ್ರಾಂತ ದುಡಿತದಿಂದ ದೇಹಾಯಾಸ ತೋರಿಬಂದರೂ ಸೂಕ್ತ ಪ್ರತಿಫಲ ದೊರಕಿದುದರಿಂದ ತುಂಬಾ ಸಮಾಧಾನವಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ತೋರಿಬರುವುದು. ಮಾರ್ಗದರ್ಶನ ಪಾಲಿಸಿರಿ.
ಕುಂಭ: ನಿಮ್ಮ ಮನೆಯ ವಿಷಯದಿಂದ ನೊಂದು ಬೇಸರವಾದೀತು. ಆದರೆ ಅದನ್ನು ದೃಢತೆ ಹಾಗೂ ವಿಶ್ವಾಸದಿಂದ ಎದುರಿಸುವ ಛಾತಿ ನಿಮ್ಮಲ್ಲಿದೆ. ಮನೆಯಲ್ಲಿ ನೆಂಟರಿಷ್ಠರ ಆಗಮನವು ಸಂತೋಷ ನೀಡಲಿದೆ.
ಮೀನ: ಭಾವುಕ ಸನ್ನಿವೇಶವು ಎದುರಾಗಲಿದೆ. ದೂರದರ್ಶಿತ್ವ ಕಳಕೊಳ್ಳದಿರಿ. ಸಹನೆಯ ಅಗತ್ಯವಿದೆ. ಮಾತುಮಾತಿಗೆ ಸಿಡುಕಿ ಭಾವೋದ್ವೇಗಕ್ಕೆ ಒಳಗಾಗದಂತೆ ಸಹನೆ ಕಾಯ್ದುಕೊಳ್ಳುವದು. ಆತ್ಮವಿಶ್ವಾಸ ಅಗತ್ಯವಿದೆ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.