![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 7, 2021, 7:20 AM IST
7-6-2021
ಮೇಷ: ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ವಾತಾವರಣವು ಗೋಚರಕ್ಕೆ ಬರುವುದು. ಗೃಹದಲ್ಲಿ ಒಂದರ ನಂತರ ಇನ್ನೊಂದು ಎಂಬಂತೆ ತಾಪತ್ರಯಗಳು ಕಾಡಲಿವೆ. ಹೆಚ್ಚು ತಲೆಕೆಡಿಸಿಕೊಳ್ಳದಿರಿ. ಧಾರ್ಮಿಕ ಕಾರ್ಯ ನಡೆದೀತು.
ವೃಷಭ: ಉದ್ಯೋಗರಂಗದಲ್ಲಿ ಭಿನ್ನಮತ ಕರಗಿ ಸೌಹಾರ್ದತೆ ಮೂಡಿಬರುವುದು. ನಿಮ್ಮೆಣಿಕೆಯಂತೆ ಕೆಲಸ ಕಾರ್ಯಗಳು ನಡೆದರೂ ಸಮಾಧಾನ ಸಿಗದು ದೇಶಾರೋಗ್ಯದಲ್ಲ ಏರುಪೇರುಗಳು ಕಂಡುಬಂದು ಬೇಸರವಾದೀತು.
ಮಿಥುನ: ಪ್ರೇಮಿಗಳ ಪ್ರೀತಿ ಪ್ರಣಯವು ಸಕಾರಾತ್ಮಕವಾಗಿ ಬೆಳವಣಿಗೆ ಕಂಡು ಬರುವುದು. ಉದ್ಯೋಗದ ಅಪೇಕ್ಷಿಗಳಿಗೆ ಒಳ್ಳೆಯ ಶುಭ ಸುದ್ದಿ ಇರುವುದು. ವಿದ್ಯಾರ್ಥಿಗಳೂ ಮುನ್ನಡೆ ಸಾಧಿಸಿ ಹೆಮ್ಮೆ ಪಡುವಂತಾಗಲಿದೆ .
ಕರ್ಕ: ನಿಮ್ಮ ಸುತ್ತಮುತ್ತಲಿನ ವಾತಾವರಣ ಉದ್ವಿಗ್ನತೆಯಿಂದ ಕೂಡಿರುತ್ತದೆ. ಕೆಲವು ವಿಷಯಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಬಹುದು. ಖರ್ಚು ತಂದುಕೊಡುವ ಕೆಲಸಕಾರ್ಯಗಳನ್ನು ತಪ್ಪಿಸಿಕೊಳ್ಳಿರಿ.
ಸಿಂಹ: ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯವುದು ಉತ್ತವಾಗಿರುತ್ತದೆ. ಹಂತಹಂತವಾಗಿ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಯು ಅಭಿವೃದ್ಧಿಯಾಗದೆ ಅತ್ತನೂ ಅಲ್ಲ ಇತ್ತನೂ ಅಲ್ಲ ಎನ್ನುವಂತಿರುತ್ತದೆ. ಚಿಂತಿಸದಿರಿ.
ಕನ್ಯಾ: ತಾಳ್ಮೆ ಸಮಾಧಾನದಿಂದ ಮುಂದಿನ ಭವಿಷ್ಯಕ್ಕೆ ಪೂರಕವಾಗಿ ಹೋಗುತ್ತದೆ. ಆತ್ಮವಿಶ್ವಾಸ, ದೃಢ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಖಂಡಿತವಾಗಿಯೂ ಹಿಂಬಾಲಿಸಲಿದೆ. ವೃತ್ತಿರಂಗದಲ್ಲಿ ಒತ್ತಡವು ಹೆಚ್ಚಾಗಲಿದೆ.
ತುಲಾ: ಆಪೆ¤àಷ್ಟರ ಕುರಿತಂತೆ ಮನದಲ್ಲಿ ಚಿಂತಿಸಲಿದ್ದೀರಿ. ತಪ್ಪುಗಳಾಗದಂತೆ ಎಚ್ಚರ ವಹಿಸಿರಿ. ಹೊಸ ಗೆಳೆಯರು ದೊರಕಬಹುದು. ಹಂತಹಂತವಾಗಿ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ವಿಶ್ವಾಸದಿಂದ ಮುನ್ನಡೆಯಿರಿ.
ವೃಶ್ಚಿಕ: ನಿಮ್ಮ ವ್ಯಕ್ತಿತ್ವವು ಇತರರನ್ನು ಆಕರ್ಷಣೆ ಮಾಡಲಿದೆ. ಇತರರ ಸಲಹೆಗಳನ್ನು ಕುರುಡಾಗಿ ಒಪ್ಪಿಕೊಳ್ಳದಿರಿ. ಹಿಗೆಂದು ನಿಮ್ಮ ಕರ್ತವ್ಯಗಳನ್ನು ತಪ್ಪಿಸಿಕೊಳ್ಳದಿರಿ. ಅವಿವಾಹಿತರ ಸಂಬಂಧಗಳಿಗೆ ತಡೆಯುಂಟಾದೀತು.
ಧನು: ಕೌಟುಂಬಿಕವಾಗಿ ಅನಿರೀಕ್ಷಿತ ವರ್ತನೆಯ ಮೂಲಕ ಇತರರಲ್ಲಿ ಅಸಹನೆ ಮೂಡಿಸಲಿದ್ದೀರಿ. ನಿರ್ಧಾರಗಳಲ್ಲಿ ಅನಿಶ್ಚಿತತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಬಿಡುವಿಲ್ಲದ ವಾರವಾದೀತು. ತಲೆಬಿಸಿ ಮಾಡದಿರಿ.
ಮಕರ: ಪ್ರಮುಖ ವಿಚಾರದಲ್ಲಿ ಮುಂದುವರಿಯಲು ಸಕಾಲವಲ್ಲ. ನೌಕರವರ್ಗದವರಿಗೆ ಕಠಿಣ ದುಡಿಮೆಗೆ ಸೂಕ್ತ ಪ್ರತಿಫಲ ದೊರಕುವುದು. ಸದ್ಯದಲ್ಲೇ ಉದ್ಯೋಗ ಬದಲಾವಣೆಯ ಸಂಭವವಿದೆ. ಶುಭವಿದೆ.
ಕುಂಭ: ಸಣ್ಣ ಮಟ್ಟಿನ ಪ್ರಯಾಣದ ಸಂಭವವು ಕಂಡುಬರುವುದು. ಕೌಟುಂಬಿಕವಾಗಿ ಇತರರೊಡನೆ ಅಸಹನೆ ತೋರಿಬಂದೀತು. ಆರೋಗ್ಯದ ಬಗ್ಗೆ ಕಾಳಜಿ ಅವಶ್ಯಕವಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡದಿರಿ.
ಮೀನ: ಮಿತ್ರರಿಂದ ಉಪಯುಕ್ತ ಸಲಹೆಗಳು ದೊರಕಬಹುದು. ವೃತ್ತಿಪರರಿಗೆ ಯಶಸ್ಸು ದೊರಕಲಿದೆ. ಸಾಂಸಾರಿಕವಾಗಿ ಸುಖ ನೆಮ್ಮದಿ ತರಲಿದೆ. ನಿರುದ್ಯೋಗಿಗಳಿಗೆ ಕಾದುನೋಡುವ ಸಮಯವಿದು. ಕೆಲಸದಲ್ಲಿ ಮಿತಿ ಇಲ್ಲದಿರಬಹುದು.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.