Daily Horoscope: ಈ ರಾಶಿಯ ಗೃಹಿಣಿಯರಿಗೆ ನೆಮ್ಮದಿಯ ಅನುಭವ
Team Udayavani, Oct 27, 2024, 7:00 AM IST
26-10-2024
ಮೇಷ: ಇಂದು ಕೆಲಸಕ್ಕೆ ವಿರಾಮ, ಆದರೆ ಶಕ್ತಿ ಸಂಚಯನದ ದಿನ. ಗೃಹದ ಆವಶ್ಯಕತೆಗಳ ಕಡೆಗೆ ಗಮನ. ದೇವಾಲಯ, ಅನಾಥಾಲಯಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ ಸಮಾಧಾನದ ದಿನ. ಕೆಲವು ವರ್ಗದ ವ್ಯಾಪಾರಿಗಳಿಗೆ ಅನುಕೂಲ.
ವೃಷಭ: ಮುಂದಿನ ಸಪ್ತಾಹದ ಕೆಲಸಗಳು ಹಾಗೂ ಯೋಜನೆಗಳ ಚಿಂತನೆ. ದೂರದಲ್ಲಿರುವ ಮಕ್ಕಳ ಆಗಮನ. ವೃದ್ಧಾಶ್ರಮಗಳಿಗೆ ಭೇಟಿ. ಗೃಹಿಣಿಯರಿಗೆ ನೆಮ್ಮದಿಯ ಅನುಭವ. ಕುಟುಂಬದಲ್ಲಿ ವಿವಾಹದ ಸಿದ್ಧತೆ.
ಮಿಥುನ: ಮನೆ ಹಾಗೂ ಮನದಲ್ಲಿ ವಿರಾಮದ ಭಾವ. ಉದ್ಯೋಗಸ್ಥರಿಗೆ ನಾಳೆ ಆಗಬೇಕಾದ ಕೆಲಸಗಳ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಸಾಹಿತ್ಯ ಗೋಷ್ಠಿ, ಸಂಗೀತ ಶ್ರವಣಕ್ಕೆ ಸಮಯ ನೀಡಿಕೆ.
ಕರ್ಕಾಟಕ: ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಭೇಟಿ. ಉದ್ಯೋಗಾಸಕ್ತರಿಗೆ ಶುಭಸೂಚನೆ. ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ. ವ್ಯವಹಾರ ಸಂಬಂಧ ಪಾಲುದಾರರೊಂದಿಗೆ ಮಾತುಕತೆ. ದುಬಾರಿ ವಸ್ತುಗಳಿಗಾಗಿ ಹಣ ವ್ಯಯ.
ಸಿಂಹ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ವೈದ್ಯರು, ಎಂಜಿನಿಯರರು ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ. ಸಮಾಜ ಸೇವಾಸಕ್ತರಿಗೆ ಮಾರ್ಗದರ್ಶನ. ಪರಿಸರಕ್ಕೆ ಹಾನಿಯಾಗದ ಅಭಿವೃದ್ಧಿ ಕಾರ್ಯಗಳ ಕುರಿತು ಚಿಂತನೆ.
ಕನ್ಯಾ: ಎಲ್ಲರ ದೇಹಾರೋಗ್ಯ ಉತ್ತಮ. ಆಯ್ದ ವರ್ಗಗಳ ವ್ಯಾಪಾರಿಗಳಿಗೆ ಉತ್ತಮ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ.ಮಕ್ಕಳಿಗೆ ಸಂಭ್ರಮದ ದಿನ. ಕಿರಿಯರಿಗೆ ಧಾರ್ಮಿಕ ಶಿಕ್ಷಣ ಒದಗಿಸುವ ಹೊಣೆಗಾರಿಕೆ.
ತುಲಾ: ಭಗವಂತನ ಕೃಪೆಯಿಂದ ಎಲ್ಲ ಕಷ್ಟಗಳು ದೂರ. ಬಂಧುಗಳ ಕಡೆಯಿಂದ ಶುಭ ಸಮಾಚಾರ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ. ಮಕ್ಕಳ ಶಾಲಾ ಭವಿಷ್ಯದ ಚಿಂತನೆ.
ವೃಶ್ಚಿಕ: ಮಹಿಳೆಯರಿಂದ ವಸ್ತ್ರಾಭರಣ ಖರೀದಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಮಹಿಳೆಯರ, ಹಿರಿಯರ ಆರೋಗ್ಯ ಉತ್ತಮ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ಕುಟುಂಬದ ಹಿರಿಯ ಮನೆಯಲ್ಲಿ ದೇವತಾಕಾರ್ಯ.
ಧನು: ಗೃಹದ ಆವಶ್ಯಕತೆಗಳ ಕಡೆಗೆ ಗಮನ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಸಣ್ಣ ಪ್ರವಾಸದ ಸಾಧ್ಯತೆ. ಗೃಹಾಲಂಕಾರ, ತೋಟಗಾರಿಕೆಗೆ ಸಮಯ ನೀಡಿಕೆ. ಆಪ್ತಮಿತ್ರರ ಮನೆಗೆ ಸಂಸಾರಸಹಿತ ಭೇಟಿ. ಹಣದ ವ್ಯವಹಾರದಲ್ಲಿ ಜಾಗ್ರತೆ ಇರಲಿ.
ಮಕರ: ಪಟ್ಟುಹಿಡಿದು ಕಾರ್ಯ ಸಾಧಿಸಿದ ತೃಪ್ತಿ. ಬಾಲ್ಯದ ಒಡನಾಡಿಯ ಆಗಮನ. ಗೃಹಿಣಿಯರಿಗೆ ಅತಿಥಿ ಸತ್ಕಾರ ಯೋಗ. ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಸಾಮಾನ್ಯ ಲಾಭ. ಪುಸ್ತಕ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಲಾಭ.
ಕುಂಭ: ಹೊಸ ಸೇವಾಕ್ಷೇತ್ರಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದ ನೇತೃತ್ವ. ಗೃಹಿಣಿಯರಿಗೆ ಸ್ವ ಉದ್ಯೋಗದಲ್ಲಿ ಆಸಕ್ತಿ. ಆಪ್ತರೊಂದಿಗೆ ಪ್ರಸಿದ್ಧ ದೇವಾಲಯಕ್ಕೆ ಭೇಟಿ. ವ್ಯವಹಾರದ ಪಾಲುದಾರನ ಮನೆಯಲ್ಲಿ ದೇವತಾ ಕಾರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Horoscope: ಹೊಸ ಅವಕಾಶಗಳು ಅಯಾಚಿತವಾಗಿ ಲಭಿಸುವ ಸಾಧ್ಯತೆ, ವಧೂವರಾನ್ವೇಷಿಗಳಿಗೆ ಅನುಕೂಲ
Daily Horoscope: ಲಾಭ- ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಿ
Daily Horoscope; ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ
Horoscope: ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ ಇರಲಿದೆ
MUST WATCH
ಹೊಸ ಸೇರ್ಪಡೆ
MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್?
Manipal: ಬೆಳ್ಳಂಬೆಳಗ್ಗೆ ಕಾರು ಅಪಘಾತ
New Delhi: ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್ ಬೆದರಿಕೆ ಹಾಕಿದ್ದ ನಿರುದ್ಯೋಗಿ ಯುವಕನ ಬಂಧನ
IND-W vs NZ-W: ಇಂದು ದ್ವಿತೀಯ ಏಕದಿನ: ಸರಣಿ ಗೆಲ್ಲಲು ವನಿತೆಯರ ಸ್ಕೆಚ್
JioHotstar domain: ಜಿಯೋ ಹಾಟ್ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.