Horoscope: ಅವಿವಾಹಿತ ಹುಡುಗರಿಗೆ ವಿವಾಹ ಯೋಗ ಒದಗಿಬರಲಿದೆ


Team Udayavani, Nov 26, 2023, 7:57 AM IST

Horoscope: ಅವಿವಾಹಿತ ಹುಡುಗರಿಗೆ ವಿವಾಹ ಯೋಗ ಒದಗಿಬರಲಿದೆ

ಮೇಷ: ಎಣಿಸಿದ್ದು ಕೈಗೂಡಲಿಲ್ಲ ಎಂಬ ಚಿಂತೆ ಬೇಡ,  ದೇವರು ಇನ್ನೊಂದು ಕೊಡುತ್ತಾನೆ ಎಂಬ ಭರವಸೆ ಇರಲಿ. ವಿರಾಮದ ದಿನವಾದರೂ ಕೆಲಸದ ಚಿಂತೆ. ಉದ್ಯಮ,  ವ್ಯವಹಾರದಲ್ಲಿ  ಉತ್ತಮ ಲಾಭ. ಲೇವಾದೇವಿ ವ್ಯವಹಾರ ನಿಮಗೆ  ಹಿಡಿಸದು.  ಅಪರೂಪದ ನೆಂಟರ ಆಗಮನ.

ವೃಷಭ: ಕಾಲ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ.  ವಿರಾಮದಲ್ಲಿ ಗೆಳೆಯರ ಭೇಟಿ. ಸ್ವಂತ ಉದ್ಯಮದ ಉತ್ಪನ್ನಗಳಿಗೆ   ದಿಢೀರ್‌ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ  ನೌಕರಿ  ಸಿಗುವ ಸೂಚನೆ.  ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ಕೃಷ್ಯುತ್ಪಾದನೆ ಮಾರಾಟದಿಂದ ಉತ್ತಮ ಲಾಭ.

ಮಿಥುನ: ಭಗವಂತನೇ ಭವಿಷ್ಯ ನಿರ್ಣಾಯಕ. ಸ್ವಂತ ಉದ್ಯಮಕ್ಕೆ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ.  ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಸಫ‌ಲವಾಗುವ ಸೂಚನೆ.  ಪರಿಸರ ರಕ್ಷಣೆಗೆ ಶ್ರಮದಾನ. ಮನೆಮಂದಿಯ ನಡುವೆ  ಪ್ರೀತಿ, ಸಾಮರಸ್ಯ ವೃದ್ಧಿ.

ಕರ್ಕಾಟಕ: ಮಲಿನ ಪರಿಸರದಿಂದ ಪ್ರಭಾವಿತರಾಗಬೇಡಿ. ಸತತ ಪ್ರಯತ್ನದಿಂದ ಸದ್ಭಾವನೆ. ಸ್ವಂತ ಉದ್ಯಮವನ್ನು ದೀರ್ಘ‌ಕಾಲದಿಂದ ಕಾಡುತ್ತಿದ್ದ ಸಮಸ್ಯೆ ನಿವಾರಣೆ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ದೇವತಾರಾಧನೆ, ಸದ್ಗ್ರಂಥ ಪಾರಾಯಣ, ಧ್ಯಾನ, ಭಜನೆ, ಸತ್ಸಂಗಗಳತ್ತ ಸೆಳೆತ.

ಸಿಂಹ: ಆರು ದಿನಗಳ ಸತತ ಶ್ರಮದ ಬಳಿಕ ವಿರಾಮದಲ್ಲೂ ಕ್ರಿಯೆಯ ಚಿಂತನೆ. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳ ಯೋಚನೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಹೊರಗಿನ ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಬೇಡಿಕೆ. ಹಿರಿಯರ ಆರೋಗ್ಯ ಉತ್ತಮ.

ಕನ್ಯಾ: ಹೊಸ ಬಗೆಯ ಅನು ಭವಗಳಿಂದಲೇ ಬದುಕಿಗೆ ರುಚಿ. ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್ಸ್ ರಿಪೇರಿಯವರಿಗೆ ವಿರಾಮ ಇಲ್ಲ. ವಯಸ್ಸು ಮೀರುವ ಭೀತಿಯಲ್ಲಿರುವ ಅವಿವಾಹಿತರಿಗೆ ವಿವಾಹ ಯೋಗ.  ವೃತ್ತಿ ಪರಿಣತಿ ವೃದ್ಧಿಗೆ ನುರಿತವರ ಸಹಾಯ.

ತುಲಾ: ಚಿತ್ತಸ್ಥೈರ್ಯ ಪ್ರಾಪ್ತಿಯ ಪ್ರಯತ್ನದಲ್ಲಿ  ಮುನ್ನಡೆ.  ಬಾಲ್ಯದ ಒಡನಾಡಿಗಳ ಅಕಸ್ಮಾತ್‌ ಮಿಲನ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ. ಆಧ್ಯಾತ್ಮಿಕ ಸಾಹಿತ್ಯ ಅಧ್ಯಯನ. ಮನೆಗೆ ಬಂದ ಹಿರಿಯರೊಂದಿಗೆ ಹತ್ತಿರದ ದೇವಾಲಯಕ್ಕೆ ಸಂದರ್ಶನ.

ವೃಶ್ಚಿಕ: ವಿರಾಮದ ದಿನ ಕೆಲಸದ ಚಿಂತೆಯನ್ನು ದೂರವಿಡಿ. ಬಂಧು ಮಿತ್ರರ ಭೇಟಿ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ  ಸುಧಾರಣೆ. ಹಳೆಯ  ನಿಕಟ ಪರಿಚಿತರ ಅಕಸ್ಮಾತ್‌ ಭೇಟಿ.  ಉದ್ಯೋಗ ಅರಸುವ ಶಿಕ್ಷಿತರಿಗೆ ಶುಭ ಸೂಚನೆ.

ಧನು: ಸೇವಾಸ್ಥಾನದಲ್ಲಿ ನಿಮ್ಮಿಂದ ಉಪಕೃತ ರಾದವರ ಆಗಮನ.  ಸಣ್ಣ ಪ್ರಮಾಣದ ಗೃಹೋದ್ಯಮ ಕೈಗೊಳ್ಳಲು ಸಿದ್ಧತೆ. ಸ್ವಂತ ಮನೆ ಹೊಂದುವ ಹಂಬಲ  ಈಡೇರುವ ಸೂಚನೆ. ಮನೆಯಲ್ಲಿ ಇಷ್ಟದೇವತಾರ್ಚನೆ. ಸೋದರ, ಸೋದರಿಯರ ಭೇಟಿ. ಕೃಷಿ ಕ್ಷೇತ್ರಕ್ಕೆ ಭೇಟಿ.

ಮಕರ: ವಿರಾಮದ ದಿನ ವಾದರೂ  ಹಲವು ಬಗೆಯ ಕರ್ತವ್ಯಗಳಿಂದಾಗಿ ದೈಹಿಕ ವಿಶ್ರಾಂತಿಯ ಪ್ರಶ್ನೆ ಇಲ್ಲ. ನಿಕಟ ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅರ್ಧ ದಿನದ ವ್ಯಾಪಾರದಲ್ಲೇ ನಿರೀಕ್ಷೆ ಮೀರಿದ ಲಾಭ.

ಕುಂಭ: ವಿರಾಮದ  ದಿನ ಸೇವೆಗೆ ಮೀಸಲಾಗಿಡುವ ಮನಸ್ಸಿದ್ದರೂ  ಕಾರ್ಯ ರಂಗದ ಕರೆಗೆ ಸ್ಪಂದನ. ವೃತ್ತಿರಂಗದ ಮಿತ್ರರಿಂದ ಮಾರ್ಗದರ್ಶನಕ್ಕೆ ಕೋರಿಕೆ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಅತಿಯಾದ ಬೇಡಿಕೆ.

ಮೀನ: ವಿರಾಮದ ದಿನ ಬಂದ ಸಹಾಯದ ಕರೆಗಳಿಂದ ವಿಚಲಿತರಾಗದಿರಿ.ಒಡನಾಡಿಗಳಿಂದ ಸರ್ವವಿಧ ಸಹಾಯ. ಜನಸೇವಾ ಕಾರ್ಯಗಳು ನಿರಾತಂಕವಾಗಿ ಮುಂದುವರಿಕೆ. ನಿಕಟಬಂಧುವಿಗೆ ನಿರ್ಮಾಣ ವ್ಯವಹಾರ  ಮುಂದುವರಿಸಲು ಮಾರ್ಗದರ್ಶನ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Horoscope: ಧೈರ್ಯವೊಂದೇ ಮಿತ್ರನೆಂಬ ಅರಿವು ಇರಲಿ, ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಕಾಟ

1-horoscope

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ, ಮನೋಬಲದಿಂದ ಕಾರ್ಯಸಿದ್ದಿ

1-horoscope

Daily Horoscope: ಉದ್ಯೋಗಾನ್ವೇಷಿಗಳಿಗೆ ಶುಭ ವಾರ್ತೆ, ಆರೋಗ್ಯ ಉತ್ತಮ

Dina Bhavishya

Daily Horoscope; ಉದ್ಯೋಗಸ್ಥರಿಗೆ ವಿಶಿಷ್ಟ ಜವಾಬ್ದಾರಿ, ನಿಲ್ಲದ ಹಿತಶತ್ರುಗಳ ಕಾಟ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.