ಇಂದಿನ ಗ್ರಹಬಲ: ಈ ರಾಶಿಯವರಿಂದು ಉತ್ತಮ ಧಾರ್ಮಿಕ ನಡವಳಿಕೆಯಿಂದಾಗಿ ಜನ ಸಂಪರ್ಕ ಗಳಿಸುವಿರಿ


Team Udayavani, Feb 13, 2021, 7:47 AM IST

horoscope

13-02-2021

ಮೇಷ: ಮಾನಸಿಕವಾಗಿ ದುರ್ಬಲರಾಗಿ ಭಾವೋದ್ರೇಕಕ್ಕೆ ಅನಾವಶ್ಯಕವಾಗಿ ವಶವಾಗುತ್ತೀರಿ. ಅತಿಯಾದ ವಿಶ್ವಾಸವನ್ನು ತೋರಿಸುವುದು ಮುಖ್ಯವಲ್ಲ. ಕೈಗೊಳ್ಳುವ ಕೆಲಸಕಾರ್ಯಗಳಲ್ಲಿ ವೈಪರೀತ್ಯ ಹೆಚ್ಚು. ಮನಸ್ಸನ್ನು ಸರಿಯಾಗಿಟ್ಟುಕೊಳ್ಳಿ.

ವೃಷಭ: ಉತ್ತಮ ಸಂಸ್ಕಾರವನ್ನು ಹೊಂದಿ ಸಾತ್ವಿಕ ಮೇಧಾಶಕ್ತಿಯನ್ನು ಹೊಂದಿರುವ ನಿಮಗೆ ಜೀವನದಲ್ಲಿ ಹತ್ತು ಹಲವು ಬಗೆಯ ಕಷ್ಟಗಳು ಎದುರಾದಾವು. ಆದರೆ ಎದೆಗುಂದದಿರಿ. ವಿಶ್ವಾಸ, ಆತ್ಮಸ್ಥೈರ್ಯವು ನಿಮ್ಮನ್ನು ಮುನ್ನಡೆಸೀತು.

ಮಿಥುನ: ಮಾನಸಿಕವಾಗಿ ಪ್ರಬುದ್ಧರಾದ ನೀವು, ವಿದ್ಯಾರ್ಜನೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಿಮಗೆ ಹೆಚ್ಚಿನ ವಿದ್ಯೆಯು ತಗಲುವ ಭಾಗ್ಯವಿದೆ. ಉತ್ತಮ, ಭವ್ಯ ಭವಿಷ್ಯಕ್ಕಾಗಿ ಎದುರು ನೋಡುವಿರಿ. ಆರೋಗ್ಯವು ಉತ್ತಮವಿದೆ.

ಕರ್ಕ: ಸಂಕಷ್ಟದಲ್ಲಿರುವವರಿಗೆ ಸಹಕಾರ, ಸಹಾಯ ನೀಡುವ ನಿಮಗೆ ಕೆಲವು ಸಮಸ್ಯೆಗಳು ಕಾಡುತ್ತಿರುತ್ತದೆ. ಆದರೆ ಸಮಸ್ಯೆ ಹೇಗೆ ಬರುವುದೋ ಹಾಗೇ ಹಿಂತಿರುಗಲಿದೆ. ಮಕ್ಕಳ ವಿದ್ಯೆಯ ಬಗ್ಗೆ ಹೆಚ್ಚಿನ ಚಿಂತೆ ಮಾಡದಿರಿ.

ಸಿಂಹ: ವಿಪರೀತ ಆತ್ಮಾಭಿಮಾನ ಹಾಗೂ ಆತ್ಮಸ್ಥೈರ್ಯ ದಿಂದ ಬೃಹತ್‌ ಕಾರ್ಯಗಳನ್ನು ಏಕಾಂಗಿಯಾಗಿ ಮಾಡಲು ಯತ್ನಿಸುವಿರಿ. ಅದರಲ್ಲಿ ಜಯ ಗಳಿಸುವಿರಿ. ಕೆಲವೊಮ್ಮೆ ಕಷ್ಟಗಳನ್ನು ಎದುರಿಸಿ ಕುಗ್ಗಿ ಹೋಗುವಿರಿ. ಎದೆಗುಂದದಿರಿ.

ಕನ್ಯಾ: ಉತ್ತಮ ಧಾರ್ಮಿಕ ನಡವಳಿಕೆಯಿಂದಾಗಿ ಜನ ಸಂಪರ್ಕ ಗಳಿಸುವಿರಿ. ಅತ್ಯಂತ ಕಡಿಮೆ ಗೆಳೆಯರನ್ನು ಹೊಂದಿರುವ ನಿಮಗೆ ಯಾರ ಮೇಲೂ ವಿಶ್ವಾಸವಿರದು. ಸಂಶಯಪ್ರವೃತ್ತಿಯಿಂದ ಕೆಡುವಿರಿ. ಜಾಗ್ರತೆ ಮಾಡಿರಿ.

ತುಲಾ: ಚುರುಕು ಗ್ರಹಣಶಕ್ತಿ ಹೊಂದಿರುವ ನೀವು ಬೇಡದ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು ಮಾನಸಿಕವಾಗಿ ಪರದಾಡುವಿರಿ. ಪ್ರತಿಯೊಂದನ್ನೂ ತೂಗಿ ಅಳೆಯುವ ಪ್ರವೃತ್ತಿ ಬಿಟ್ಟುಬಿಡಿರಿ. ಸಾವಕಾಶವಾಗಿ ಇದ್ದರೆ ಉತ್ತಮ.

ವೃಶ್ಚಿಕ: ಜೀವನದಲ್ಲಿ ಉತ್ತೇಜನವನ್ನು ಕೊಡದಿದ್ದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಕೈಕಟ್ಟಿ ಕುಳಿತು ಕೊಳ್ಳದಿರಿ. ಹಾಗೂ ಮಾನಸಿಕವಾಗಿ ಕುಗ್ಗದಿರಿ. ಉತ್ಸಾಹದಿಂದ ಮುನ್ನಡೆದರೆ ಕಾರ್ಯಸಿದ್ಧಿಯಾಗಲಿದೆ. ಶುಭವಾರ್ತೆ ಇದೆ.

ಧನು: ವಿವಾಹದ ನಂತರ ನಿಮಗೆ ಎಲ್ಲಾ ರೀತಿಯ ಸಕಲ ಸೌಭಾಗ್ಯಗಳ ಯೋಗ ಮೂಡಿ ಬಂದು ದೈವಾನುಗ್ರಹವಾಗಲಿದೆ. ಪತ್ನಿಯ ಉದ್ಯೋಗದ ತಲೆಬಿಸಿಯು ಕಡಿಮೆಯಾಗಲಿದೆ. ಉತ್ತಮ ನಿರೀಕ್ಷೆಯನ್ನು ಮಾಡಿರಿ.

ಮಕರ: ಎಲ್ಲವನ್ನು ಸಮಭಾವದಿಂದ ಸ್ವಿಕರಿಸಿದ್ದಲ್ಲಿ ನೀವು ಧನ್ಯರಾದೀರಿ. ಇಲ್ಲದಿದ್ದಲ್ಲಿ ತಲೆಬಿಸಿ ತಪ್ಪದು. ನಿಮ್ಮ ಎಣಿಕೆಗೆ ವಿರೋಧವಾಗಿ ನಡೆಯುವುದರಿಂದ ಆಶಾಭಂಗದ ಅನುಭವವಾದೀತು. ಚಿಂತಿಸದೆ ಮುನ್ನಡೆಯಿರಿ.

ಕುಂಭ: ಮಕ್ಕಳ ಮೇಧಾಶಕ್ತಿಯಲ್ಲಿ ಅಪಾರ ನೀರೀಕ್ಷೆ ಇಟ್ಟುಕೊಂಡ ನಿಮಗೆ ಆಶಾಭಂಗವಾದೀತು. ಸಕಾಲಕ್ಕೆ ಮಿತ್ರರ ಸಹಾಯ ಒದಗಿ ಬಂದೀತು. ದ್ರವ್ಯ ವಸ್ತುಗಳ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದ್ದರೂ ಅಷ್ಟೇ ಖರ್ಚಿದೆ.

ಮೀನ: ವ್ಯವಹಾರದಲ್ಲಿ ಹೆಚ್ಚಿನ ಲಾಭ ಬಂದರೂ ವಂಚನೆಗೆ ಅವಕಾಶ ತಂದೀತು. ಯಾವುದೇ ವಿಚಾರದಲ್ಲಿ ಕಾದು ನೋಡುವ ಪ್ರವೃತ್ತಿ ರೂಢಿಸಿಕೊಳ್ಳಿರಿ. ತಟ್ಟನೆ ಯಾವುದಕ್ಕೂ ಉತ್ತರಿಸದಿರಿ. ಉದ್ವೇಗವು ನಿಮಗೆ ಒಳ್ಳೆಯದಲ್ಲ

 

ಎನ್.ಎಸ್. ಭಟ್‌

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.