![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 11, 2023, 7:25 AM IST
ಮೇಷ: ಅವಿವಾಹಿತರಿಗೆ ವಿವಾಹ ಯೋಗ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ಉತ್ತಮ. ಶ್ರೀ ಗುರು, ದೇವತಾನುಗ್ರಹದಿಂದ ಕಾರ್ಯಸಿದ್ಧಿ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಉದ್ಯಮಿಗಳಿಗೆ ಲಾಭ ತರುವ ದಿನ.
ವೃಷಭ: ಅಂತರ್ವಾಣಿಯ ಆದೇಶವನ್ನು ಪಾಲಿಸಿ ಸಮಯಾನುಸಾರ ಮುಂದುವರಿಯು ವುದರಿಂದ ಕಾರ್ಯಸಾಧನೆ. ಉದ್ಯೋಗ, ಉದ್ಯಮದಲ್ಲಿ ಹೊಸ ಅವಕಾಶಗಳ ಅನ್ವೇಷಣೆ. ಲೇವಾದೇವಿ ವ್ಯವಹಾರ ದಲ್ಲಿ ನಷ್ಟ. ಪಾಲುದಾರಿಕೆ ವ್ಯವಹಾರದಲ್ಲಿ ಕೊಂಚ ಹಿನ್ನಡೆ.
ಮಿಥುನ: ಎದುರಿಗಿರುವ ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ. ಮೇಲಧಿಕಾರಿಗಳ ಉತ್ತೇಜನ, ಸಹೋದ್ಯೋಗಿ ಮಿತ್ರರ ಸಹಕಾರ. ಸ್ವಂತ ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ಸಹಾಯ. ಗೃಹೋಪಕರಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ.
ಕರ್ಕಾಟಕ:ಉದ್ಯೋಗ, ವ್ಯವಹಾರದಲ್ಲಿ ಉತ್ಸಾಹದ ವಾತಾವರಣ. ಅನಿರೀಕ್ಷಿತ ಧನಲಾಭ. ಹೊಸ ಶಿಕ್ಷಣ ಸಂಸ್ಥೆ ಸ್ಥಾಪನೆಯಲ್ಲಿ ಊರಿನ ಪ್ರಮುಖರಿಗೆ ಸಹಕಾರ. ಗ್ರಂಥಾಲಯ ಬೆಳೆಸಲು ಆಸಕ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಮಕ್ಕಳಿಗೆ ವ್ಯಾಸಂಗದಲ್ಲಿ ಪ್ರಗತಿ.
ಸಿಂಹ: ಸಂಕಲ್ಪಿಸಿದ ಕಾರ್ಯಾರಂಭವನ್ನು ಮುಂದೂ ಡುವುದು ಸಲ್ಲದು. ಉದ್ಯೋಗ ಸ್ಥಾನದಲ್ಲಿ ಕರ್ತವ್ಯಪರಾಯಣರಿಗೆ ಪ್ರಾಶಸ್ತ್ಯ ಸ್ಥಾನ ಲಭ್ಯ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ.ಉತ್ತರ ದಿಕ್ಕಿನಿಂದ ಹೊಸ ವ್ಯವಹಾರದ ಪ್ರಸ್ತಾವ.
ಕನ್ಯಾ: ಮನಸ್ಸಿನ ವಿಕಾಸ ಹಾಗೂ ಬಲವರ್ಧನೆಗೆ ಸರ್ವ ಪ್ರಯತ್ನ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಖಾದಿ, ರೇಶೆ¾ ವಸ್ತ್ರೋದ್ಯಮದಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ. ದೇವತಾರಾಧನೆಯಿಂದ ಸೌಭಾಗ್ಯ ಪ್ರಾಪ್ತಿ. ಧಾರ್ಮಿಕ ಸಾಹಿತ್ಯ ಅಧ್ಯಯನ.
ತುಲಾ: ಸ್ಥಿರಚಿತ್ತದ ಅಧ್ಯಯನ ಹಾಗೂ ಏಕಾಗ್ರತೆಯಿಂದ ಕಾರ್ಯಸಾಧನೆ. ಉದ್ಯೋಗ ದಲ್ಲಿ ಪ್ರಗತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಗೃಹಿಣಿಯರಿಗೆ ಹೆಚ್ಚು ಸಾಂಸಾರಿಕ ಜವಾಬ್ದಾರಿ.ಕೃಷ್ಯುತ್ಪಾದನೆ ವ್ಯಾಪಾರಿಗಳಿಗೆ ಅನುಕೂಲದ ವಾತಾವರಣ.
ವೃಶ್ಚಿಕ: ಹಿತಶತ್ರುಗಳನ್ನು ಮತ್ತು ನಯವಂಚಕ ರನ್ನು ದೂರವಿಡಿ. ಉದ್ಯೋಗಸ್ಥರಿಗೆ ಹಿತಾನುಭವ. ಉದ್ಯಮಿಗಳಿಗೆ ಸರಕಾರದ ಕಡೆಯಿಂದ ಪ್ರೋತ್ಸಾಹ.ಪಶ್ಚಿಮ ದಿಕ್ಕಿನಿಂದ ಶುಭವಾರ್ತೆ. ದೇವತಾರಾಧನೆಯಲ್ಲಿ ಆಸಕ್ತಿ. ಕಿರಿಯ ಬಂಧುವಿನ ಕ್ಷೇಮ ಚಿಂತನೆ.
ಧನು: ಕಾರ್ಯಸಾಧನೆಯಲ್ಲಿ ವಿಳಂಬ. ನಿರೀಕ್ಷಿತ ಲಾಭ ಸಮಯಕ್ಕೆ ಸರಿಯಾಗಿ ಕೈಸೇರಿ ಸಂತೃಪ್ತಿ. ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಸ್ವಂತ ಉದ್ಯಮದ ನೌಕರರಿಗೆ ಪ್ರೋತ್ಸಾಹಕ ಧನ ಲಭಿಸಿ ಕಾರ್ಯೋತ್ಸಾಹ ವೃದ್ಧಿ. ಹಿರಿಯರ, ಸಂಗಾತಿಯ ಅಪೇಕ್ಷೆ ಅರಿತು ಈಡೇರಿಸಿ.
ಮಕರ: ಹಿತ ಹಾಗೂ ಪ್ರಿಯವಾದ ಮಾತುಗಾರಿ ಕೆಯಿಂದ ಕಾರ್ಯಸಿದ್ಧಿ. ವೃತ್ತಿ ರಂಗದಲ್ಲಿ ಪ್ರತಿಭೆ ಹಾಗೂ ಕಾರ್ಯಸಾಮರ್ಥ್ಯಕ್ಕೆ ಗೌರವ ಪ್ರಾಪ್ತಿ. ಉದ್ಯಮ ಯಶಸ್ಸಿನತ್ತ ವೇಗದ ಮುನ್ನಡೆ. ವಾಹನ ಬಿಡಿಭಾಗ ವ್ಯಾಪಾರ ವೃದ್ಧಿ. ದೂರದ ಬಂಧುಗಳ ಅನಿರೀಕ್ಷಿತ ಭೇಟಿ.
ಕುಂಭ: ಉದ್ಯೋಗಾಸಕ್ತ ಯುವಜನರಿಗೆ ಮಾರ್ಗದರ್ಶನ. ಸಾಮಾಜಿಕ ರಂಗದಲ್ಲಿ ಅಯಾ ಚಿತವಾಗಿ ಸೇವೆಗೆ ಸಂಬಂಧಪಟ್ಟಂತೆ ಸದವಕಾಶಗಳು ಲಭ್ಯ. ಗಳಿಸಿದ ಸಂಪತ್ತಿನ ಜೋಪಾನಕ್ಕೆ ಮುನ್ನೆಚ್ಚರಿಕೆ ಕ್ರಮ. ಉದ್ಯೋಗ ರಂಗದಲ್ಲಿ ಹಿತಶತ್ರುಗಳ ಬಗ್ಗೆ ಎಚ್ಚರ.
ಮೀನ: ವಿತ್ತಾಪಹಾರಕರ ಬಗ್ಗೆ ಎಚ್ಚರವಿರಲಿ. ತಾಯಿಯ ಆರೋಗ್ಯ ಗಮನಿಸಿ.ಉದ್ಯೋಗ ಕ್ಷೇತ್ರದಲ್ಲಿ ವೃತ್ತಿಬಾಂಧವರ ಸಹಕಾರ. ಸರಕಾರಿ ಇಲಾಖೆಗಳವರ ಸಕಾಲಿಕ ಸ್ಪಂದನ. ಕೃಷಿ ಕ್ಷೇತ್ರದಲ್ಲಿ ಪ್ರಗತಿ. ಸಾಮಾಜಿಕರಿಂದ ಗೌರವದ ಸ್ಥಾನಕ್ಕೆ ಆಹ್ವಾನ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವ ಸೂಚನೆ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.