![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 1, 2023, 7:26 AM IST
ಮೇಷ: ಸಾವಧಾನದಿಂದ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಿರಿ..ಉದ್ಯೋಗ ಸ್ಥಾನದಲ್ಲಿ ತೋರುವ ಕಾರ್ಯ ವೈಖರಿಗೆ ಪ್ರಶಂಸೆ. ಸ್ವಂತ ಉದ್ಯಮ ದಾಖಲೆಯ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಅವಕಾಶ ಲಭ್ಯ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.
ವೃಷಭ: ಮಹತ್ವಾಕಾಂಕ್ಷೆಯಲ್ಲಿ ಕಾರ್ಯಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ವಿಭಾಗ ಆರಂಭ. ಸ್ವಂತ ಉದ್ಯಮದ ಹಳೆಯ ವಿವಾದ ನಿವಾರಣೆ. ಯಂತ್ರೋಪಕರಣ ಮಾರಾಟಗಾರರಿಗೆ ಗ್ರಾಹಕರ ಸಂಖ್ಯೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ರಖಂ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಲಾಭ.
ಮಿಥುನ: ಪ್ರಿಯವಾದುದನ್ನು ಬಿಟ್ಟು ಹಿತವಾದುದನ್ನು ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯದಕ್ಷತೆಗೆ ಗೌರವ. ದೂರದಲ್ಲಿರುವ ಕುಟುಂಬದ ಹಿತೈಷಿಯ ಭೇಟಿ. ಸ್ವಂತ ಉದ್ಯಮದ ಪ್ರಗತಿ ಸ್ಥಿರ. ತಂದೆಯ ಕಡೆಯ ಬಂಧುಗಳ ಆಗಮನ.
ಕರ್ಕಾಟಕ: ಆಗಿದ್ದ ನಷ್ಟ ತುಂಬಿಸಿಕೊಟ್ಟ ವ್ಯವಹಾರ ಕೌಶಲ! ಉದ್ಯೋಗ ಕ್ಷೇತ್ರದ ಆತಂಕ ದೂರ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ. ಹೊಸ ಉದ್ಯಮ ಆರಂಭಿಸಲು ಸಮಾಲೋಚನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ.
ಸಿಂಹ: ಒಂದೇ ದಿನದಲ್ಲಿ ಯಶಸ್ಸುಗಳ ಸರಮಾಲೆ ಧಾರಣೆಯ ಯೋಗ! ಉದ್ಯೋಗದಲ್ಲಿ ಸ್ಥಾನಕ್ಕೆ ತಕ್ಕ ಪ್ರತಿಫಲ. ಉದ್ಯಮ ಸ್ಥಳದಲ್ಲಿ ದೇವತಾ ಕಾರ್ಯ. ನೆಂಟರ ಮನೆಯಲ್ಲಿ ಶುಭಕಾರ್ಯ. ಕೌಟುಂಬಿಕ ವ್ಯಾಜ್ಯ ಮಾತುಕತೆಯ ಮೂಲಕ ಪರಿಹಾರ. ಹಿರಿಯರ ಆರೋಗ್ಯ ವೃದ್ಧಿ.
ಕನ್ಯಾ: ದೇವರಲ್ಲಿ ಸ್ಥಿರವಾದ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗಿರಿ. ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ.
ತುಲಾ: ಉದ್ಯೋಗದಲ್ಲಿ ಸಂತೃಪ್ತಿಯ ಅನುಭವ. ಉದ್ಯಮ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಗೃಹೋ ಪಯೋಗಿ ಸಾಮಗ್ರಿಗಳ ಖರೀದಿ ಗುರು ಮಂದಿರ ದರ್ಶನ, ಅಪೂರ್ವ ಸಾಧಕರ ಭೇಟಿ. ಆತ್ಮೀಯ ಗೆಳೆಯರ ಪುತ್ರಿಯ ವಿವಾಹ. ಉದ್ಯೋಗದ ನಿಮಿತ್ತ ಸಣ್ಣ ಪ್ರವಾಸ.
ವೃಶ್ಚಿಕ: ಆತ್ಮನಿಂದನೆ ಸಲ್ಲದು. ನಾವೇ ಭಾಗ್ಯವಂತ ರೆಂಬ ಭಾವನೆಗೆ ಜಯ. ಉದ್ಯೋಗದಲ್ಲಿ ಗೌರವದ ಸ್ಥಾನ. ಉದ್ಯಮದಲ್ಲಿ ಹೊಸ ವಿಭಾಗ ಆರಂಭ. ಯಂತ್ರೋಕರಣ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಯ ಕಾಲ. ಊರಿನ ದೇವಾಲಯ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ.
ಧನು: ಅನೇಕ ದಿನಗಳಿಂದ ಮಾಡುತ್ತಿದ್ದ ಪ್ರಯತ್ನಕ್ಕೆ ಫಲ ಲಭ್ಯ. ಉದ್ಯೋಗದಲ್ಲಿ ಹೊಸ ಬಗೆಯ ಹೊಣೆಗಾರಿಕೆ ನಿರ್ವಹಣೆಯಲ್ಲಿ ಯಶಸ್ಸು. ಆದಾಯ ವೃದ್ಧಿ ಯೋಜನೆಗಳ ಕುರಿತು ಸಹಚರರೊಡನೆ ಸಮಾಲೋಚನೆ. ಬಾಲ್ಯದ ಗುರುಗಳ ಹಠಾತ್ ಭೇಟಿ.
ಮಕರ: ಸಕಾರಾತ್ಮಕ ಚಿಂತನೆಯಿಂದ ಮನೋ ಬಲ ವೃದ್ಧಿ. ಹೊಸ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ಸು ಪ್ರಾಪ್ತಿ. ಉದ್ಯಮ ಸಂಸ್ಥೆಗೆ ಗಣ್ಯರ ಭೇಟಿ. ವಧೂ ವರಾನ್ವೇಷಣೆಯಲ್ಲಿ ನಿರತರಾಗಿರುವವರಿಗೆ ಶುಭ ಸಮಾಚಾರ. ಸಣ್ಣ ಕೃಷಿಭೂಮಿ ಖರೀದಿಸುವ ಪ್ರಯತ್ನ ಮುಂದುವರಿಕೆ.
ಕುಂಭ: ನಿರಂತರ ಕ್ರಿಯಾಶೀಲತೆಯ ಕಾರಣದಿಂದ ಮತ್ತಷ್ಟು ಹೊಸ ಜವಾಬ್ದಾರಿಗಳು. ಉದ್ಯೋಗ ಸ್ಥಾನದಲ್ಲಿ ಮುಂದಿನ ವ್ಯವಸ್ಥೆಗಳ ಚಿಂತನೆ. ಉದ್ಯಮ ನಿರ್ವಹಣೆ ನಿರಾತಂಕ. ಮುದ್ರಣ ಸಾಮಗ್ರಿಗಳ ಮಾರಾಟ ವೃದ್ಧಿ. ಹಿರಿಯರ, ಗೃಹಿಣಿಯರ ಹಾಗೂ ಮಕ್ಕಳ ಆರೋಗ್ಯ ಉತ್ತಮ.
ಮೀನ: ಸಪ್ತಾಹ ಅಂತ್ಯವಾಗುತ್ತಿದ್ದಂತೆ ಇನ್ನಷ್ಟು ಶುಭ ಸೂಚನೆಗಳು. ಸಹೋದ್ಯೋಗಿಗಳ ಉತ್ತಮ ಸಹಕಾರ. ಸರಕಾರಿ ಅಧಿಕಾರಿಗಳ ಪೂರ್ಣ ಸಹಾಯ. ವಿದ್ಯಾರ್ಥಿಗಳಿಗೆ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ. ಪ್ರಾಪ್ತವಯಸ್ಕರಿಗೆ ಶೀಘ್ರ ವಿವಾಹ ಯೋಗ. ಉದ್ಯೋಗ ಅರಸುತ್ತಿರುವವರಿಗೆ ಸ್ವಾವಲಂಬಿಗಳಾಗಲು ಮಾರ್ಗದರ್ಶನ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.