![Vinaya-kulakarni](https://www.udayavani.com/wp-content/uploads/2025/02/Vinaya-kulakarni-415x249.jpg)
![Vinaya-kulakarni](https://www.udayavani.com/wp-content/uploads/2025/02/Vinaya-kulakarni-415x249.jpg)
Team Udayavani, Jan 26, 2025, 7:24 AM IST
ಮೇಷ: ವಿರಾಮದ ದಿನ ವಿಭಿನ್ನ ಚಟುವಟಿಕೆ ಗಳು. ಉದ್ಯೋಗಸ್ಥರ ಬೆನ್ನಟ್ಟಿ ಬರುವ ಹೊಸ ಜವಾಬ್ದಾರಿಗಳು. ಹಿರಿಯರಿಗೆ ಸಮಾಜದಲ್ಲಿ ಗೌರವ ವೃದ್ಧಿ.ಕಿರಿಯ ಸಹಕಾರಿಗಳಿಗೆ ಮಾರ್ಗದರ್ಶನ. ಗೃಹಿಣಿಯರಿಗೆ ಸಂತಸ, ನೆಮ್ಮದಿಯ ವಾತಾವರಣ.
ವೃಷಭ: ಪ್ರತ್ಯುಪಕಾರ ಮಾಡಲು ಒದಗಿ ಬಂದ ಅವಕಾಶವನ್ನು ಕಳೆದುಕೊಳ್ಳಬೇಡಿ. ಬಂಧುಗಳೊಡನೆ ಪ್ರೀತಿ ವೃದ್ಧಿ. ದೂರದಿಂದ ಶುಭ ಸಮಾಚಾರ. ಮಾನಸಿಕ ಬಲದಿಂದ ಆರೋಗ್ಯ ಪ್ರಾಪ್ತಿ. ಕರಕುಶಲ ವಸ್ತು ತಯಾರಕರಿಗೆ ಸದವಕಾಶ.
ಮಿಥುನ: ಚಿಂತೆಗಳನ್ನು ಹತ್ತಿರಕ್ಕೆ ಕರೆಯಬೇಡಿ. ರೋಗಗ್ರಸ್ತರ ಚಿಕಿತ್ಸೆಗೆ ಸಹಾಯ ಮಾಡುವ ಅವಕಾಶ. ದೇವರ ದರ್ಶನಕ್ಕಾಗಿ ಸಣ್ಣ ಪ್ರಯಾಣ ಸಂಭವ. ಉದ್ಯೋಗ ಅರಸುವವರಿಗೆ ಶುಭವಾರ್ತೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ನಿಶ್ಚಿಂತೆ.
ಕಟಕ: ಸ್ಪರ್ಧೆಯಿಂದ ಮುನ್ನಡೆಗೆ ಅಡ್ಡಿಯಾಗದು. ಆತಂಕ ಸೃಷ್ಟಿಸಿ ಹಿಗ್ಗುವವರಿಗೆ ಹಿನ್ನಡೆ. ಆಸ್ತಿ ವ್ಯವಹಾರ ಮಾತುಕತೆ ಕೊನೆಯ ಹಂತಕ್ಕೆ. ಗೃಹೋದ್ಯಮಿಗಳಿಗೆ ಸಂತೋಷದ ದಿನ. ಹಿರಿಯರ, ಗೃಹಿಣಿಯರ. ಆರೋಗ್ಯದ ಕಡೆಗೆ ಗಮನವಿರಲಿ.
ಸಿಂಹ: ಆತಂಕಗಳನ್ನು ನಿರ್ಲಕ್ಷಿಸಿ ಮುನ್ನಡೆ ದಾಗ ಯಶಸ್ಸು ಶತಃಸಿದ್ಧ. ಇನ್ನೊಂದು ಹೊಸ ಉದ್ಯಮ ಸದ್ಯಕ್ಕೆ ಬೇಡ.ಅಧಿಕಾರಿಗಳಿಂದ, ಸಹೋದ್ಯೋಗಿಗಳಿಂದ ಸಕಾಲಿಕ ಸ್ಪಂದನ. ಬಂಧು ವರ್ಗದಲ್ಲಿ ವಿವಾಹದ ಸಿದ್ಧತೆ. ಉತ್ತರ ದಿಕ್ಕಿನಿಂದ ಶುಭವಾರ್ತೆ.
ಕನ್ಯಾ: ಯುವಕರಿಗೆ ಅಂಗಸಾಧನೆ,ಕ್ರೀಡೆಗಳಲ್ಲಿ ಆಸಕ್ತಿ. ಸೌಂದರ್ಯಸಾಧನಗಳ ವಿತರಕರಿಗೆ ಉತ್ತಮ ಲಾಭ. ಉದ್ಯೋಗ ರಂಗದಲ್ಲಿ ತೀವ್ರ ಪೈಪೋಟಿ. ಉದ್ಯೋಗ, ವ್ಯವಹಾರ ಬದಲಾವಣೆಗೆ ಚಿಂತನೆ. ಮಕ್ಕಳಿಂದ ಮನೆಯವರಿಗೆ ಸಂತಸ.
ತುಲಾ: ತಾನಾಗಿ ಒದಗಿ ಬಂದ ಅವಕಾಶ ದಿಂದ ಸಂತೃಪ್ತಿ. ಮಕ್ಕಳ ಆರೋಗ್ಯ ಸಮಸ್ಯೆ ನಿವಾರಣೆ. ನಿವೃತ್ತಿಯ ಹಂತದಲ್ಲಿರುವವರಿಗೆ ಶುಭ ಸಮಾಚಾರ. ರಾಜಕಾರಣಿಯೊಡನೆ ವ್ಯರ್ಥ ಭೇಟಿ. ಪ್ರಕೃತಿ ಸೌಂದರ್ಯದ ದೇವತಾ ಸಾನ್ನಿಧ್ಯಕ್ಕೆ ಭೇಟಿ.
ವೃಶ್ಚಿಕ: ಸಂಗೀತ ಶ್ರವಣದಲ್ಲಿ ಕಾಲಯಾಪನೆ.ಸಾಹಿತ್ಯ ಸಾಧಕರಿಗೆ ಗೌರವಾರ್ಪಣೆ.ಉದ್ಯೋಗ, ವ್ಯವಹಾರಸ್ಥರಿಗೆ ಯಶಸ್ಸು. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ. ಮಕ್ಕಳ ಅಧ್ಯಯನಕ್ಕೆ ಉತ್ತೇಜನ ಅವಶ್ಯ.
ಧನು: ಮುಖಸ್ತುತಿ ಮಾಡುವವರಿಂದ ದೂರವಿರಿ. ಏಕಾಗ್ರತೆಯಿಂದ ಸುಲಭವಾಗಿ ಯಶಸ್ಸು. ಯೋಜಿತ ಕಾರ್ಯ ಮುಂದೂಡಿಕೆ ಬೇಡ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ತೃಪ್ತಿಕರ.
ಮಕರ: ಮಹತ್ವಾಕಾಂಕ್ಷಿಗಳಿಗೆ ಕೊಂಚ ನೆಮ್ಮದಿಯ ದಿನ. ಕಾರ್ಯಸಾಧನೆಗೆ ಒದಗಿರುವ ವಿಘ್ನಗಳು ದೂರ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಶ್ಲಾಘನೆ. ಮಾತಿನಲ್ಲಿ ಜಾಣ್ಮೆ, ತಾಳ್ಮೆ ಎರಡೂ ಇರಲಿ. ವ್ಯವಹಾರ ಬದಲಾವಣೆಗೆ ಅವಸರ ಬೇಡ.
ಕುಂಭ: ಎಲ್ಲರ ಆರೋಗ್ಯ ಉತ್ತಮ. ಅನಿರೀಕ್ಷಿತ ಧನಲಾಭ ಯೋಗ. ಖಾದ್ಯ ಪದಾರ್ಥ ಉದ್ಯಮಿಗಳಿಗೆ ಲಾಭ. ಹಿರಿಯರ ಮಾರ್ಗದರ್ಶನದಿಂದ ವ್ಯವಹಾರದಲ್ಲಿ ಲಾಭ. ಹಿರಿಯರು ಮತ್ತು ಗೃಹಿಣಿಯರಿಗೆ ಮನಸ್ಸಂತೋಷ.
ಮೀನ: ಉತ್ತಮ ಅವಕಾಶಗಳು ಒದಗಿ ಬಂದು ಹರ್ಷ. ಮಧ್ಯವರ್ತಿ ವ್ಯವಹಾರಸ್ಥರಿಗೆ ನೆಮ್ಮದಿ. ನಿರೀಕ್ಷಿತ ಧನ ಕೈಸೇರುವ ಶುಭ ಸೂಚನೆ.ತಾಯಿ ಅಥವಾ ಮಾತೃಸಮಾನರ ನೆಮ್ಮದಿ ಹೆಚ್ಚಿಸಲು ಪ್ರಯತ್ನಿಸಿ. ಬಂಧುವರ್ಗದಿಂದ ಶುಭಸಮಾಚಾರ.
ಮಾರ್ಚ್ ಬಳಿಕ ಸಂಪುಟ ಪುನರ್ ರಚನೆ; ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ: ವಿನಯ್ ಕುಲಕರ್ಣಿ
Siddaramaiah; ಮಾರ್ಚ್ 3 ರಿಂದ ವಿಧಾನಸಭೆ ಅಧಿವೇಶನ, ಬಜೆಟ್ ದಿನಾಂಕ ತಿಳಿಸಿದ ಸಿಎಂ
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
You seem to have an Ad Blocker on.
To continue reading, please turn it off or whitelist Udayavani.