Daily Horoscope: ಸ್ವಂತ ಉದ್ಯಮದ ಅಭಿವೃದ್ಧಿಗೆ ಹೊಸ ಮಾರ್ಗ ಅನ್ವೇಷಣೆ
Team Udayavani, Nov 21, 2023, 7:24 AM IST
ಮೇಷ: ಗುರಿ ನೇರವಾಗಿದ್ದರೆ ಹಣ್ಣು ಬೀಳುವುದರಲ್ಲಿ ಸಂಶಯವಿಲ್ಲ. ಉದ್ಯೋಗದಲ್ಲಿ ನಿರ್ದಿಷ್ಟ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿ. ಮಾರ್ಗದರ್ಶನ ಕೋರಿಕೆಗೆ ಸ್ಪಂದನ. ಅತಿಥಿ ಸತ್ಕಾರ ಯೋಗ. ಉದ್ಯೋಗ ಅರಸುತ್ತಿರುವರಿಗೆ ಅವಕಾಶ ಗೋಚರ.
ವೃಷಭ: ಪ್ರಗತಿ ಕುಂಠಿತವಾಗುವುದಕ್ಕಿಂತ ಮಂದಗತಿ ಮೇಲು. ಉದ್ಯೋಗದಲ್ಲಿ ಹಂತ ಹಂತ ವಾಗಿ ಏರಿಕೆ. ಉದ್ಯಮದ ಬೆಳವಣಿಗೆ ಸ್ಥಿರ. ಇದ್ದಕ್ಕಿದ್ದಂತೆ ಎದುರಾಳಿಗಳ ಪೈಪೋಟಿ. ಗುರುದರ್ಶನ ಪ್ರಾಪ್ತಿ. ದೂರದಲ್ಲಿರುವ ಬಂಧುಗಳ ಆಗಮನ.
ಮಿಥುನ: ಭೌತಿಕ ಪ್ರಪಂಚದ ಜಂಜಾಟಗಳು ಮುನ್ನಡೆಗೆ ಅಡ್ಡಿಯಾಗದಿರಲಿ. ವೃದ್ಧಿಯಾಗಿರುವ ಕ್ರಿಯಾಶೀಲತೆ ಉದ್ಯೋಗದಲ್ಲಿ ಪ್ರಕಟ. ಕೃಷ್ಯುತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಸ್ವಂತ ಉದ್ಯಮದ ಅಭಿವೃದ್ಧಿಗೆ ಹೊಸ ಮಾರ್ಗ ಅನ್ವೇಷಣೆ. ಹೊಸ ವಿದ್ಯೆಯನ್ನು ಕಲಿಯುವ ನಿರ್ಧಾರ.
ಕರ್ಕಾಟಕ: ಸಾಹಸ ಯಾತ್ರೆಯ ಮುಂದುವರಿದ ಭಾಗದಲ್ಲಿ ಮಾರ್ಗಾಯಾಸ ಕಡಿಮೆಯಾಗಿರುವ ಅನುಭವ. ಉದ್ಯೋಗದಲ್ಲಿ ಮಾಡಿರುವ ಸಾಧನೆಗೆ ಸೂಕ್ತ ಪ್ರತಿಫಲ ಲಭ್ಯ. ಉದ್ಯಮದ ಸ್ಥಾನ ನವೀಕರಣಕ್ಕೆ ಧನವ್ಯಯ. ಅವಿವಾಹಿತ ಕನ್ಯೆಗೆ ವಿವಾಹ ನಿಶ್ಚಯ.
ಸಿಂಹ: ಧೈರ್ಯ, ಸಾಹಸಗಳಿಗೆ ಮಾದರಿ ಯಾಗಿರುವ ನೀವು ಇಟ್ಟ ಹೆಜ್ಜೆಯೇ ದಾರಿ. ಉದ್ಯಮ ಕ್ಷೇತ್ರದಲ್ಲಿ ತಂದೆ- ಮಕ್ಕಳ ಸ್ನೇಹಪೂರ್ಣ ಮೇಲಾಟ. ಹೊಲಿಗೆ, ಕಸೂತಿ, ಫ್ಯಾಶನ್ ಡಿಸೈನಿಂಗ್ ಕಲಿತ ಮಹಿಳೆಯರ ಸೊÌàದ್ಯೋಗಗಳಿಗೆ ಉತ್ಕರ್ಷ ಆರಂಭ.
ಕನ್ಯಾ: ಎಡ, ಬಲಕ್ಕೆ ತಿರುಗದೆ ಮುಂದುಗಡೆ ದೃಷ್ಟಿ ಹಾಯಿಸುತ್ತಾ ನಡೆದರೆ ಗಮ್ಯಸ್ಥಾನ ಲಭ್ಯ. ಉದ್ಯೋಗದಲ್ಲಿ ಸಮಯಪಾಲನೆಗೆ ಮಹತ್ವ ನೀಡಿರಿ. ಸರಕಾರಿ ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ. ಸಹಕಾರಿ ರಂಗದ ನೌಕರರಿಗೆ ಸವಾಲಿನ ಅನುಭವ.
ತುಲಾ: ಎಂತಹ ಕೊರಗಿನಿಂದಲೂ ವಿಚಲಿತರಾಗದ ಮನಸ್ಥಿತಿಯಿಂದ ಯಶಸ್ಸು ಸುಲಭ. ಉದ್ಯೋಗ ದಲ್ಲಿ ಮುನ್ನಡೆ. ಜನ್ಮತಃ ಇರುವ ಅಧ್ಯಾಪಕನ ಮನಸ್ಥಿತಿಯ ಪ್ರತ್ಯಕ್ಷ ಪ್ರಯೋಜನ ಲಭ್ಯ. ಅಂತರ್ವಾಣಿಯ ಮಾರ್ಗ ದರ್ಶನಕ್ಕಾಗಿ ಗಣೇಶನ ಪ್ರಾರ್ಥನೆ.
ವೃಶ್ಚಿಕ: ವಯಸ್ಸು ಎಂಬುದು ಕೇವಲ ಸಂಖ್ಯೆ ಎಂಬುದು ಮನಸ್ಸಿನಲ್ಲಿ ಬೇರೂರಿದ್ದರೆ ಪ್ರೌಢಾವಸ್ಥೆ ಯಶಸ್ಸಿಗೆ ಅಡ್ಡಿಯಾಗದು.ಉದ್ಯೋಗದಲ್ಲಿ ಮುನ್ನಡೆ. ಉದ್ಯಮದಲ್ಲಿ ಅಪ್ರತಿಮ ಸಾಧನೆಯಿಂದ ಕೀರ್ತಿ. ಲೇವಾದೇವಿ ವ್ಯವಹಾರ ದೂರವಿಡಿ. ದೀರ್ಘಾ ವಧಿ ಉಳಿತಾಯ ಯೋಜನೆಗಳ ಫಲ ಕೈಸೇರಿದ ಅನುಭವ.
ಧನು: ಅಹೇತುಕ ದಯಾಸಿಂಧು ಎಂದು ಹೆಸರಾಗಿರುವ ಪರಮಾತ್ಮನ ಮೇಲೆ ಅಚಲ ಶ್ರದ್ಧಾಭಕ್ತಿಗಳೇ ಶ್ರೀರಕ್ಷೆ. ಉದ್ಯೋಗದಲ್ಲಿ ಸ್ಥಾನ ಭದ್ರ. ಸ್ವಂತ ವ್ಯಾಪಾರ ಮುಂದುವರಿಸಲು ನಿರ್ಧಾರ. ಹೊಸ ಪಾಲುದಾರಿಕೆ ಉದ್ಯಮ ಆರಂಭ ಮುಂದೂಡಿಕೆ.
ಮಕರ: ಮಾನಸಿಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು. ಉದ್ಯೋಗ ಸ್ಥಾನ ದಲ್ಲಿ ಯಥಾಪ್ರಕಾರ ಒತ್ತಡ ಮುಂದುವರಿಕೆ. ಉದ್ಯಮಿ ಗಳಿಗೆ ವಿಶ್ವಾಸಾರ್ಹತೆ ಕಾಯ್ದುಕೊಳ್ಳುವ ಸವಾಲು. ಸಂಸಾರ ನಿರ್ವಹಣೆಯಲ್ಲಿ ಹಿರಿಯರಿಂದ ಸಹಾಯ.
ಕುಂಭ: ಆನಂದವನ್ನು ಹಂಚಿಕೊಂಡಷ್ಟು ಅದು ಬೆಳೆಯುತ್ತದೆ ಎಂಬುದು ನೆನಪಿನಲ್ಲಿರಲಿ. ಉದ್ಯೋಗದಲ್ಲಿ ಕಿರಿಯ ಸಹೋದ್ಯೋಗಿಗಳಿಗೆ ಪ್ರೋತ್ಸಾಹದ ಮಾತುಗಳಿಂದ ಮಾರ್ಗದರ್ಶನ. ಉದ್ಯಮದ ಉತ್ಪನ್ನಗಳಿಗೆ ಪೂರೈಸಲಾರದಷ್ಟು ಬೇಡಿಕೆ ವೃದ್ಧಿ.
ಮೀನ: ತಾತ್ಕಾಲಿಕ ಹಿನ್ನಡೆಗಳಿಂದ ಅಂಜದೆ ಮುಂದುವರಿಯಿರಿ. ಉದ್ಯೋಗದ ವ್ಯಾಪ್ತಿ ಅನಪೇಕ್ಷಿತವಾಗಿ ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಆರಂಭಿಸುವ ಯೋಜನೆ ಮುನ್ನಡೆ. ಸಾಮಾಜಿಕ ಸಂಘಟನೆಯಲ್ಲಿ ಆಯಕಟ್ಟಿನ ಸ್ಥಾನ ನಿರ್ವಹಣೆಗೆ ಆಹ್ವಾನ. ಗಣೇಶ, ಶಿವ, ದೇವಿಯ ಪ್ರಾರ್ಥನೆ ತಪ್ಪದಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕೇಳಿದವರಿಗೆ ಮಾತ್ರ ಸಲಹೆ ನೀಡಿ, ಅನವಶ್ಯವಾದ ವಿವಾದಕ್ಕೆ ಅವಕಾಶ ಬೇಡ
Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ
Daily Horoscope: ಕರ್ಮದ ಫಲವನ್ನು ಸಂತೋಷದಿಂದ ಸ್ವೀಕರಿಸಿ
Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ
Daily Horoscope ಚಾರಿತ್ರ್ಯ ವಂತರ ಹೆಸರು ಕೆಡಿಸಲು ಸಂಚು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
Kundapura: ಹುಲಿ ವೇಷಧಾರಿಗಳಿಗೆ ಕೆಂಪು ಬಟ್ಟೆ ಕಡ್ಡಾಯ
Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ
Hubbali: ಅಪಾರ್ಟ್ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.