Daily Horoscope: ಅವಿವಾಹಿತರಿಗೆ ಯೋಗ್ಯ ವಿವಾಹ ಯೋಗ, ಮಿಶ್ರಫ‌ಲಗಳ ದಿನ


Team Udayavani, Nov 25, 2023, 7:14 AM IST

1-Saturday

ಮೇಷ: ಮಿಶ್ರಫ‌ಲಗಳ ದಿನ. ಉದ್ಯೋಗಕ್ಕೆ ಅರ್ಧವಿರಾಮವಾಗಿದ್ದರೂ ಜವಾಬ್ದಾರಿಯಿಂದ ಮುಕ್ತಿ ಇಲ್ಲ. ಸಾಂಸಾರಿಕ ಜೀವನ ತೃಪ್ತಿಕರ. ಪಾಲುದಾರಿಕೆಯ ಉದ್ಯಮದ ವ್ಯವಹಾರ ನಿರಾತಂಕ. ಪಶ್ಚಿಮ ದೇಶದಲ್ಲಿರುವ ಬಂಧುವಿನೊಡನೆ ದೂರವಾಣಿ ಸಂಭಾಷಣೆ. ಹಿರಿಯ ರಾಜಕಾರಣಿಯ ಅಕಸ್ಮಾತ್‌ ಭೇಟಿ.

ವೃಷಭ: ಕೆಲವು ಒಳ್ಳೆಯ ಘಟನೆಗಳು ನಡೆಯುವ ದಿನ.ಉದ್ಯೋಗದಲ್ಲಿ ಪದೋನ್ನತಿಯ ಸೂಚನೆ ಮುಂಚಿತವಾಗಿ ಲಭ್ಯ. ಉದ್ಯಮಕ್ಕೆ ಹೊಸ ಯಂತ್ರಸಾಮಗ್ರಿ ಖರೀದಿ. ನೌಕರರಿಗೆ ಹೊಸ ವಸತಿ ವ್ಯವಸ್ಥೆ. ವಿದೇಶದಲ್ಲಿರುವ ಮಕ್ಕಳೊಡನೆ ಸಂಭಾಷಣೆ. ವೈದ್ಯಕೀಯ ಪರೀಕ್ಷೆಯಿಂದ ಸಮಾಧಾನ.

ಮಿಥುನ: ದೇವರ ಮೇಲಿನ ಅಚಲ ವಿಶ್ವಾಸದಿಂದ ಜಟಿಲ ಸಮಸ್ಯೆಗಳಿಗೆ ಸರಳ ಪರಿಹಾರ. ಉದ್ಯೋಗ ಸ್ಥಾನದಲ್ಲಿ ಸಹಚರರಿಂದ ಪ್ರೋತ್ಸಾಹದ ಮಾತುಗಳು. ಲೇವಾದೇವಿ ವ್ಯವಹಾರದಿಂದ ಪ್ರತಿಕೂಲ ಪರಿಣಾಮ. ಸರಕಾರಿ ಕಚೇರಿಗಳಲ್ಲಿ ಮಂದಗತಿ. ಗುರುಸಮಾನರ ದರ್ಶನದಿಂದ ಮನಶಾಂತಿ.

ಕರ್ಕಾಟಕ: ಸ್ಪಂದನಶೀಲ ವ್ಯಕ್ತಿತ್ವದೊಡನೆ ವ್ಯವಹಾರ ಸುಲಭ ಸಮಾಜದಲ್ಲಿ ಎಲ್ಲರೊಡನೆ ಬೆರೆತುದಕ್ಕೆ ಪ್ರತಿಫ‌ಲ ಪ್ರಾಪ್ತಿ. ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆ ನಿವಾರಣೆ. ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿ ಹೂಡಿಕೆಯ ಚಿಂತನೆ. ಲೇವಾದೇವಿ ವ್ಯವಹಾರ ಕೈಹಿಡಿಯದು. ದೇವಸನ್ನಿಧಿಗೆ ಭೇಟಿ.

ಸಿಂಹ: ಹವಾಮಾನದ ಸಣ್ಣ ಏರುಪೇರು ಕೂಡಾ ಮನಸ್ಸು, ದೇಹಗಳ ಮೇಲೆ ಪರಿಣಾಮ ಬೀರುವುದು ಸಹಜ. ಉದ್ಯೋಗದಲ್ಲಿ ಸ್ವಲ್ಪ ಮಂದ ನಡೆಯಾದರೂ ಫ‌ಲ ಕಡಿಮೆಯಾಗದು. ಉದ್ಯಮದಲ್ಲಿ ಮುನ್ನಡೆ. ಲೇವಾದೇವಿ ವ್ಯವಹಾರದಲ್ಲಿ ಸಾಧಾರಣ ಲಾಭ. ಅವಿವಾಹಿತರಿಗೆ ಯೋಗ್ಯ ವಿವಾಹ ಯೋಗ.

ಕನ್ಯಾ: ಜೀವನದ ಮುಖ್ಯ ಘಟ್ಟವೊಂದನ್ನು ದಾಟುತ್ತಿದ್ದೀರಿ. ಉದ್ಯೋಗ ಬದಲಾವಣೆಗೆ ಸಿದ್ಧತೆ.ಅಪರಿಚಿತರೊಂದಿಗೆ ವಾಗ್ವಾದ ಬೇಡ. ಪಶುಪಾಲನೆ, ಹೈನುಗಾರಿಕೆಯಲ್ಲಿ ಆಸಕ್ತಿ. ಕುಟುಂಬದ ಹಿರಿಯ ವ್ಯಕ್ತಿಯಿಂದ ಅನಿರೀಕ್ಷಿತ ಸಹಾಯ. ದಂಪತಿಗಳ ನಡುವೆ ಸಾಮರಸ್ಯ.

ತುಲಾ: ಹಿರಿಯರ ಕಡೆಯಿಂದ ಶುಭ ಸಮಾಚಾರದ ನಿರೀಕ್ಷೆ.ಹೊಸ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಜವಾಬ್ದಾರಿ. ಕುಟುಂಬದಲ್ಲಿ ಶಿಶು ಜನನ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪಣೆಗೈಯುವ ನಿರ್ಧಾರ. ರೋಗಿಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ. ವಿನಾಯಕನ ಕ್ಷೇತ್ರ ಸಂದರ್ಶನ.

ವೃಶ್ಚಿಕ: ಬದುಕಿನಲ್ಲಿ ಭರವಸೆಯಿಂದ ಮುನ್ನಡೆ. ನೊಂದವರಿಗೆ ಸಾಂತ್ವನ ಹೇಳುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಸೋದರಿಯ ಪುತ್ರನಿಗೆ ವಿವಾಹ ನಿಶ್ಚಯ. ಪಿತ್ರಾರ್ಜಿತ ಕೃಷಿಭೂಮಿಯಿಂದ ಲಾಭ. ಮನೆಯಲ್ಲಿ ದೇವತಾ ಕಾರ್ಯ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ.

ಧನು: ಕೈಚೆಲ್ಲಿ ಕುಳಿತುಕೊಳ್ಳದೆ ಮುಂದುವರಿದ ಕಾರಣ ಜೀವನಕ್ಕೊಂದು ಮಾರ್ಗ ಗೋಚರ. ಉದ್ಯೋಗದಲ್ಲಿ ಯಥಾರೀತಿ ಭದ್ರ ಸ್ಥಾನ. ಉದ್ಯಮ ಸಣ್ಣದಾದರೂ ಜನಪ್ರಿಯತೆ ದೊಡ್ಡದು.ಆಪ್ತರೊಬ್ಬರ ಒಡೆದ ಸಂಸಾರವನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ಯಶಸ್ಸು. ಮನೆಯಲ್ಲಿ ಇಷ್ಟದೇವರ ವಿಶೇಷ ಪೂಜೆ.

ಮಕರ: ಸಮಸ್ಯೆ ಪರಿಹಾರವಾದಂತೆ ಕಂಡರೂ ಸಂಶಯ ನಾಶವಾಗದೆ ಸಮಾಧಾನ ಇರದು. ಉದ್ಯೋಗದಲ್ಲಿ ಒತ್ತಡ ಕೊಂಚ ಸಡಿಲಿಕೆ. ಹೊಸ ಉದ್ಯೋಗ ಅರಸುವ ಕಾರ್ಯ ಮುಂದುವರಿಕೆ. ಅಂಚೆ ಮೂಲಕ ಶಿಕ್ಷಣ ಮುಂದುವರಿಸಲು ನಿರ್ಧಾರ. ಸಂಸಾರ ನಿರ್ವಹಣೆಗೆ ಹಿರಿಯರ ಸಹಾಯ.

ಕುಂಭ: ಹೊಸದಾಗಿ ಪರಿಚಯವಾದ ವ್ಯಕ್ತಿಯಿಂದ ಹೊಸ ಉದ್ಯಮ ಆರಂಭಿಸುವ ಪ್ರಸ್ತಾವ. ಉದ್ಯೋಗ ಸ್ಥಾನದಲ್ಲಿ ಹೊಸ ಮೇಲಧಿಕಾರಿಯ ಆಗಮನ. ಉದ್ಯಮದಲ್ಲಿ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಕ್ರಮ. ಬರಬೇಕಾದ ದೊಡ್ಡಮೊತ್ತದ ಬಾಕಿ ವಸೂಲಿಯ ಚಿಂತೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.

ಮೀನ: ಸಪ್ತಾಹದ ಕೊನೆಯಲ್ಲಿ ಬಾಕಿ ಉಳಿದಿರುವ ಕಾರ್ಯಗಳನ್ನು ಮುಗಿಸುವ ತರಾತುರಿ. ವೃತ್ತಿಬಾಂಧವರ ಸಹಕಾರ. ಸರಕಾರಿ ಇಲಾಖೆಯವರಿಂದ ಅನು ಕೂಲಕರ ಸ್ಪಂದನ. ಸಮಾಜದ ಹಿರಿಯರ ಸಮ್ಮಾನ ಕಾರ್ಯಕ್ರಮದಲ್ಲಿ ಅಗ್ರಸ್ಥಾನ. ಕೃಷಿ ಭೂಮಿಯಲ್ಲಿ ಹೊಸ ಪ್ರಯೋಗಕ್ಕೆ ಪೂರ್ವಸಿದ್ಧತೆ. ನೀರಾವರಿಗೆ ಸ್ವಂತ ವ್ಯವಸ್ಥೆ ಮಾಡುವ ನಿರ್ಧಾರ. ಹತ್ತಿರದ ದೇವಾಲಯಕ್ಕೆ ಭೇಟಿ.

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

016

Horoscope: ಆಲಸ್ಯ ಬಿಟ್ಟು ದುಡಿಯುವುದನ್ನು ಕಲಿಯಿರಿ

1-Horoscope

Daily Horoscope: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

1-horoscope

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಶುಭಫಲಗಳೇ ಅಧಿಕ

1-horoscope

Daily Horoscope: ಅಪಾರ್ಥಕ್ಕೆ ಗುರಿಯಾಗದಂತೆ ಎಚ್ಚರ ವಹಿಸಿ, ಉದ್ಯೋಗಾವಕಾಶ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.