Daily Horoscope: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ
Team Udayavani, Sep 15, 2024, 7:12 AM IST
ಮೇಷ: ಕಚೇರಿಗೆ ರಜೆಯಾದ ಕಾರಣ ಸಂಸಾರದ ಆವಶ್ಯಕತೆಗಳತ್ತ ಲಕ್ಷÂ. ಬಂಧು ಮಿತ್ರರ ಸೌಹಾರ್ದ ಭೇಟಿ. ಉದ್ಯಮಿಗಳಿಗೆ ವ್ಯವಹಾರ ಸುಧಾರಣೆಯ ಚಿಂತೆ. ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ.
ವೃಷಭ: ಉದ್ಯೋಗಸ್ಥರಿಗೆ ವಿರಾಮ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಪ್ರಾಪ್ತ ವಯಸ್ಕರಿಗೆ ವಿವಾಹ ನಿಶ್ಚಯ.ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ. ಭಜನೆ, ಸತ್ಸಂಗಗಳಲ್ಲಿ ಮಗ್ನತೆ.
ಮಿಥುನ: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ವಿದ್ಯಾರ್ಥಿಗಳಿಗೆ ಆಲಸ್ಯ. ಇಷ್ಟದೇವರ ಸ್ಥಳಕ್ಕೆ ಸಂದರ್ಶನ. ವೃದ್ಧಾಶ್ರಮಕ್ಕೆ ಭೇಟಿ, ಹಿರಿಯರಿಗೆ ಸಾಂತ್ವನ.
ಕರ್ಕಾಟಕ: ಕಳೆದುದಕ್ಕಾಗಿ ಚಿಂತಿಸದೆ ಒಳಿತಿಗೆ ಶ್ರಮಿಸಿರಿ. ವ್ಯವಹಾರ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ. ಛಲದಿಂದ ಉನ್ನತಿ ಸಾಧಿಸಿದ ವ್ಯಕ್ತಿಯ ಭೇಟಿ.
ಸಿಂಹ: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ. ವೃತ್ತಿಪರರಿಗೆ ಕೆಲಸದ ಒತ್ತಡ ಆರಂಭ.ಹಿರಿಯರ ಸ್ವಾಸ್ಥ್ಯದ ಕಡೆಗೆ ಗಮನ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ. ಇಷ್ಟಾರ್ಥ ಸಿದ್ಧಿಗಾಗಿ ದೇವತಾ ಪ್ರಾರ್ಥನೆ.
ಕನ್ಯಾ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ.ಬಂಧುಗಳ ಮನೆಯಲ್ಲಿ ದೇವತಾರಾಧನೆ.
ತುಲಾ: ರಜಾದಿನವಾದರೂ ಕೈತುಂಬಾ ಕೆಲಸಗಳು. ವ್ಯವಹಾರ ಸುಧಾರಣೆಯತ್ತ ಗಮನ. ಕ್ರೀಡೆ, ಸಂಗೀತಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಮಗ್ನತೆ.
ವೃಶ್ಚಿಕ: ಸ್ವಗೃಹದಲ್ಲಿ ದೇವತಾರಾಧನೆ. ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ವ್ಯವಹಾರದ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ಮಕ್ಕಳ ಉದ್ಯಮ ಸುಧಾರಣೆ. ನೆರೆಯವರ ಸಹಕಾರದಿಂದ ಕಾರ್ಯ ಮುಕ್ತಾಯ.
ಧನು: ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣಗಳು. ದಂಪತಿಗಳ ನಡುವೆ ಅನುರಾಗ ವೃದ್ಧಿ. ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆಸಕ್ತರಿಗೆ ಅನುಕೂಲ.
ಮಕರ: ಕುಟುಂಬದಲ್ಲಿ ಸಂತೋಷದ ಸಮಾರಂಭ. ಸಣ್ಣ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ.ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ.ಇಷ್ಟದೇವತಾ ಮಂದಿರ ಸಂದರ್ಶನ.
ಕುಂಭ: ಸತ್ಕಾರ್ಯಗಳಿಗೆ ಪ್ರತ್ಯಕ್ಷ ನೆರವು. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಆಸ್ಪತ್ರೆ, ಅನಾಥಾಲಯಕ್ಕೆ ಭೇಟಿ. ಅಪರೂಪದ ಬಂಧುಗಳ ಆಗಮನ, ಸಣ್ಣ ಪ್ರವಾಸ ಸಂಭವ.
ಮೀನ: ಮುಖ್ಯ ಕೆಲಸಗಳಿಗೆ ಪೂರ್ವಸಿದ್ಧತೆ,ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಸಹಚಿಂತನ. ಹಳೆಯ ಸಹಚರರ ಭೇಟಿ. ಕುಟುಂಬದಲ್ಲಿ ಶುಭಕಾರ್ಯಕ್ಕೆ ತಯಾರಿ. ದಂಪತಿಗಳ ನಡುವೆ ಅನುರಾಗ, ವಿಶ್ವಾಸ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.