Daily Horoscope: ಒಂದೇ ಲಕ್ಷ್ಯವಿಟ್ಟುಕೊಂಡು ಮುಂದುವರಿಯಿರಿ, ತಾತ್ಕಾಲಿಕ ಆತಂಕಗಳು ದೂರ
Team Udayavani, Sep 8, 2023, 7:25 AM IST
ಮೇಷ: ವ್ಯವಹಾರ ಕ್ಷೇತ್ರದಲ್ಲಿ ಏಕ ಲಕ್ಷ್ಯದಲ್ಲಿ ಸ್ಥಿರವಾಗುವ ಪ್ರಯತ್ನದಲ್ಲಿ ಯಶಸ್ಸಿನತ್ತ ಸಾಗುವಿರಿ. ವಸ್ತ್ರ ಹಾಗೂ ಉಡುಪುಗಳಿಗೆ ಸಂಬಂಧಪಟ್ಟ ವ್ಯವಹಾರಸ್ಥರಿಗೆ ಹೆಚ್ಚು ಲಾಭದ ಸೂಚನೆ. ದೂರಗಾಮೀ ಲಾಭದ ಹೂಡಿಕೆಗಳಿಗೆ ಇದು ಸಕಾಲ.
ವೃಷಭ: ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುತ್ತಿರುವ ಹಿತಶತ್ರುಗಳ ಪರಾಭವ. ಉದ್ಯೋಗ, ವ್ಯವಹಾರ, ಸಂಸಾರ ಈ ಮೂರು ಕ್ಷೇತ್ರಗಳಲ್ಲೂ ನೆಮ್ಮದಿಯ ವಾತಾವರಣ. ಈ ದಿನ ನಿಮಗೆ ಎಲ್ಲ ದಿಕ್ಕುಗಳಿಂದಲೂ ಶುಭ ಸಮಾಚಾರಗಳು ಬರಲಿವೆ.
ಮಿಥುನ: ಒಂದೇ ಲಕ್ಷ್ಯವಿಟ್ಟುಕೊಂಡು ಮುಂದುವರಿಯಿರಿ. ದೇವತಾರಾಧನೆಯಿಂದ ಅಧಿಕ ಬಲ ಪ್ರಾಪ್ತಿ.ಉದ್ಯೋಗಸ್ಥರ ಮುನ್ನಡೆ. ಖನಿಜಗಳಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ಮಾಡುವವರಿಗೆ ವಿಶೇಷ ಯಶಸ್ಸು. ಗೃಹಾಲಂಕಾರ ಉದ್ಯಮಿಗಳಿಗೆ ಲಾಭ.
ಕರ್ಕಾಟಕ: ಪದೇ ಪದೇ ಕಾಡುತ್ತಿದ್ದ ಅನಾರೋಗ್ಯ ದೂರ. ಪ್ರೇಕ್ಷಣೀಯ ಸ್ಥಳವೊಂದಕ್ಕೆ ಭೇಟಿ ನೀಡುವ ಸಾಧ್ಯತೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಉತ್ತೇಜನ ಹಾಗೂ ಸಹೋದ್ಯೋಗಿಗಳ ಪೂರ್ಣ ಸಹಕಾರ. ಬಂಧುವರ್ಗದಲ್ಲಿ ಮಂಗಲ ಕಾರ್ಯ.
ಸಿಂಹ: ಗುರಿ ಮುಟ್ಟುವ ಸಮಯ ದೂರವಿಲ್ಲವಾದ್ದರಿಂದ ವೇಗದ ಪ್ರಯತ್ನ ಸಫಲ. ಉದ್ಯೋಗಸ್ಥರಿಗೆ ಶುಭಾನುಭವ. ಕಟ್ಟಡ ಸಾಮಗ್ರಿ, ಸಿದ್ಧ ಉಡುಪು ಹಾಗೂ ಕೃಷ್ಯುತ್ಪನ್ನ ಮಾರಾಟಗಾರರಿಗೆ ಅಧಿಕ ಲಾಭ ಸಂಭವ. ಸಾಹಿತ್ಯ ಸೇವಾಸಕ್ತರಿಗೆ ಗೌರವ ಪ್ರಾಪ್ತಿ.
ಕನ್ಯಾ: ಜಾಣತನದ ಮೃದು ಮಾತಿನಿಂದ ಕಾರ್ಯಸಾಧನೆ. ಕಾರ್ಯಕ್ಷೇತ್ರ ವಿಸ್ತರಣೆಗೆ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಲ್ಲಿ ಯಶಸ್ಸು ಶತಸ್ಸಿದ್ಧ. ಬಂಧು ಗಳ ಭೇಟಿಯಿಂದ ಹರ್ಷ. ಬಂಧುವರ್ಗದಲ್ಲಿ ಉಪನಯನ, ವಿವಾಹಾದಿ ಮಂಗಲ ಕಾರ್ಯಗಳ ಸೂಚನೆ.
ತುಲಾ: ಡೋಲಾಯಮಾನ ಸ್ಥಿತಿಯಿಂದ ಮುಕ್ತಿ ಹೊಂದುವ ಯತ್ನ ಸಫಲ. ಗಣೇಶನ ಉಪಾಸನೆಯಿಂದ ಶೀಘ್ರ ಫಲ ಪ್ರಾಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಉದ್ಯೋಗಾನ್ವೇಷಕರಿಗೆ ಯಶಸ್ಸು ಸನ್ನಿಹಿತ. ಹತ್ತಿರದ ದೇವತಾ ಸನ್ನಿಧಾನ ಭೇಟಿ ಸಂಭವ.
ವೃಶ್ಚಿಕ: ದೇವತಾರಾಧನೆಯಲ್ಲಿ ವಿಶೇಷ ಆಸಕ್ತಿ. ಗೃಹಿಣಿಯರಿಂದ ವಸ್ತ್ರಾಭರಣ ಖರೀದಿ. ಉದ್ಯೋಗಸ್ಥರಿಂದ ಸವಾಲುಗಳ ಯಶಸ್ವೀ ನಿರ್ವಹಣೆ. ವಧೂ-ವರಾನ್ವೇಷಣೆಯಲ್ಲಿ ತೊಡಗಿರುವವರಿಗೆ ಯಶಸ್ಸು. ಮಕ್ಕಳಿಗೆ ಅಧ್ಯಯನಾಸಕ್ತಿ ಮೂಡಿಸಲು ಪ್ರಯತ್ನ.
ಧನು: ಕಾರ್ಯದಲ್ಲಿ ಪರಿಪೂರ್ಣತೆ ಸಾಧಿಸುವ ಪ್ರಯತ್ನದಲ್ಲಿ ಯಶಸ್ಸು. ದೀರ್ಘಕಾಲೀನ ಹೂಡಿಕೆಗಳಿಂದ ಶುಭ. ವೈದ್ಯರ ಭೇಟಿಯಿಂದ ಸಮಸ್ಯೆ ಪರಿಹಾರ. ತಾತ್ಕಾಲಿಕ ಆತಂಕಗಳು ದೂರ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಃಪ್ರಾಪ್ತಿ.
ಮಕರ: ಮಕ್ಕಳ ಭವಿಷ್ಯದ ಕುರಿತಾದ ಚಿಂತೆಗೆ ಪರಿಹಾರ ಲಭ್ಯ. ಆಪ್ತರಿಂದ ಕಾರ್ಯ ಸಾಧ್ಯ ಸಲಹೆ. ಉದ್ಯೋಗ, ವ್ಯವಹಾರಗಳಲ್ಲಿ ಪೈಪೋಟಿ ಎದುರಿಸು ವುದರಲ್ಲಿ ಯಶಸ್ವಿಯಾಗುವಿರಿ. ಕೃಷ್ಯಾ ಧಾರಿತ ಉದ್ಯಮ ಗಳಲ್ಲಿ ಆಸಕ್ತರಿಗೆ ಶುಭ ಸಮಾಚಾರ.
ಕುಂಭ: ನಿಮ್ಮ ಆಸಕ್ತಿಯ ಕ್ಷೇತ್ರವಾಗಿರುವ ಸಮಾಜ ಸೇವೆಯಲ್ಲಿ ಹೊಸ ಅವಕಾಶಗಳು ಲಭ್ಯ. ವಿವಾದಗಳಿಂದ ದೂರವುಳಿಯುವ ಪ್ರಯತ್ನ. ಸ್ವಂತದ ಹಾಗೂ ಮನೆಯವರ ಆರೋಗ್ಯ ಗಮನಿಸಿ. ದೂರದ ಅತಿಥಿಗಳ ಆಗಮನ. ಸಂಗೀತ ಶ್ರವಣ, ನಾಮಸಂಕೀರ್ತನೆಗಳಲ್ಲಿ ಆಸಕ್ತರಿಗೆ ಆನಂದ.
ಮೀನ: ಮನೆಯಲ್ಲಿ ಎಲ್ಲರ ಆರೋಗ್ಯ ಸಮಾಧಾನಕರ. ಉದ್ಯೋಗ ದಲ್ಲಿ ನೆಮ್ಮದಿ.ವ್ಯವಹಾರದಲ್ಲಿ ಸುಧಾರಣೆ.ಹಣಕಾಸು ಪರಿಸ್ಥಿತಿ ಕೊಂಚ ಉತ್ತಮ. ಹಿರಿಯರ ಅಪೇಕ್ಷೆ ಈಡೇರಿಸುವ ಪ್ರಯತ್ನದಲ್ಲಿ ಯಶಸ್ಸು ಲಭ್ಯ. ಕುಟುಂಬದ ಬಂಧುಗಳ ಆಗಮನ ನಿರೀಕ್ಷೆ. ಉದ್ಯೋಗ ಅರಸುತ್ತಿರುವವರಿಗೆ ಯಶಸ್ಸು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಗೆ ವಿಶೇಷ ಪ್ರಯತ್ನ ಅವಶ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.