Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಇರಲಿದೆ
Team Udayavani, Oct 28, 2024, 7:12 AM IST
ಮೇಷ: ಗುರು ದೇವತಾನುಗ್ರಹದಿಂದ ಕಾರ್ಯಸಿದ್ಧಿ. ಹಿರಿಯರ ಆರೋಗ್ಯ ಉತ್ತಮ. ಪಾಲುದಾರಿಕೆ ವ್ಯವಹಾರ ಸುಗಮ. ದೂರದ ಬಂಧುಗಳ ಆಗಮನ. ವಿದ್ಯಾರ್ಥಿಗಳು ಏಕಾಗ್ರತೆಗೆ ಪ್ರಯತ್ನಿಸಲು ಸಕಾಲ.
ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಮಿತ್ರರೊಡನೆ ಮನಸ್ತಾಪಕ್ಕೆ ಎಡೆಗೊಡದಿರಿ. ವೃತ್ತಿ ಸಂಬಂಧ ಸಣ್ಣ ಪ್ರವಾಸ ಸಂಭವ. ಮನೆಯಲ್ಲಿ ಅನುಕೂಲದ ವಾತಾವರಣ.
ಮಿಥುನ: ಆರೋಗ್ಯದ ಕಡೆಗೆ ಗಮನವಿರಲಿ. ಕಾರ್ಯ ಮುಗಿಸಲು ಆತುರ ಬೇಡ. ಕಿರಿಯರ ಭವಿಷ್ಯ ಚಿಂತನೆ. ಸಣ್ಣ ಉದ್ಯಮಿಗಳಿಗೆ ಪೂರಕ ವಾತಾವರಣ. ಅವಿವಾಹಿತರಿಗೆ ವಿವಾಹ ಯೋಗ ಸನ್ನಿಹಿತ.
ಕರ್ಕಾಟಕ: ವೃತ್ತಿಪರ ಕಲಾವಿದರಿಗೆ ಸಿಹಿ ಸುದ್ದಿ. ಉದ್ಯೋಗ, ವ್ಯವಹಾರ ರಂಗದಲ್ಲಿ ಹೊಸ ಸಾಧ್ಯತೆ. ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಮನೋಲ್ಲಾಸ. ಮಕ್ಕಳ ಏಕಾಗ್ರತೆ ವೃದ್ಧಿಗೆ ಪ್ರಯತ್ನ ಅಗತ್ಯ.
ಸಿಂಹ: ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ. ನಿರಂತರ ಶ್ರಮದಿಂದ ಆಯಾಸ. ಕೃಷಿ ಕ್ಷೇತ್ರದಲ್ಲಿ ಆಸಕ್ತರಿಗೆ ಶುಭ ಸಮಾಚಾರ. ಗೃಹಿಣಿಯರ ಆರೋಗ್ಯ ಗಮನಿಸಿ. ಅಧ್ಯಾಪನ ವೃತ್ತಿಯವರಿಗೆ ಶ್ರಮ.
ಕನ್ಯಾ: ಉದ್ಯೋಗ, ವ್ಯವಹಾರ ಕ್ಷೇತ್ರ ಗಳಲ್ಲಿ ಸ್ಥಿರ ವಾತಾವರಣ. ವಿಳಂಬಿತ ಕಾರ್ಯ ಪೂರ್ಣಗೊಳ್ಳುವ ಸಮಯ. ಧಾನ್ಯ ವ್ಯಾಪಾರಿಗಳಿಗೆ ಶುಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಲವಲವಿಕೆ.
ತುಲಾ: ಬಹುದಿನ ಅಪೇಕ್ಷೆಯೊಂದು ಕೈಗೂಡಿದ ಆನಂದ. ತೃಪ್ತಿಯಿಂದ ಕಾಲುಚಾಚಿ ಕೂರುವ ಸಮಯ ಅಲ್ಲ. ದಂಪತಿಗಳ ನಡುವೆ ಹೊಂದಾಣಿಕೆ. ಅಧಿಕಾರಿ ವರ್ಗಕ್ಕೆ ಹೆಚ್ಚು ಹೊಣೆಗಾರಿಕೆ. ಮಕ್ಕಳಿಂದ ಸಂತಸ.
ವೃಶ್ಚಿಕ: ಅನ್ಯಾಯಕ್ಕೆ ಪ್ರತಿ ಅನ್ಯಾಯ ಬೇಡ. ತಾಳ್ಮೆಯಿಂದ ಹಿರಿಯರ ಒಲವು, ಪ್ರೋತ್ಸಾಹ ಲಭ್ಯ. ದಕ್ಷಿಣ ದಿಕ್ಕಿನಲ್ಲಿ ಪಯಣ ಸಂಭವ. ಹಿರಿಯರ ಆರೋಗ್ಯ ಉತ್ತಮ. ನೆರೆಯವರ ಸಹಕಾರ.
ಧನು: ಅನಿರೀಕ್ಷಿತ ಧನಾಗಮ. ದಾಂಪತ್ಯ ಜೀವನದಲ್ಲಿ ತೃಪ್ತಿ. ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭಿಸುವ ಸಾಧ್ಯತೆ. ಮಕ್ಕಳಿಗೆ ಸಂತಸ.
ಮಕರ: ನೂತನ ವಸ್ತು ಖರೀದಿ ಯೋಜನೆ. ಹೊಸ ಅವಕಾಶಗಳ ಶೋಧನೆ. ಸಹೋದ್ಯೋಗಿಗಳಿಂದ ಸಹಕಾರ. ಸಾಂಸಾರಿಕ ಬಿಕ್ಕಟ್ಟು ದೂರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಸ್ಥಿರ. ದಾಂಪತ್ಯದಲ್ಲಿ ಅನುರಾಗ ವೃದ್ಧಿ
ಕುಂಭ: ಸಂಚಿತ ಧನ ಸದ್ವಿನಿಯೋಗ. ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಶ್ಲಾಘನೆ. ವೈದ್ಯರ ಭೇಟಿ ಸಂಭವ. ಮಾನಸಿಕ ದುಗುಡ ದೂರ. ಮನೆಮಂದಿಗೆ ಹರ್ಷ. ಮನೆಯಲ್ಲಿ ಅನುಕೂಲದ ವಾತಾವರಣ.
ಮೀನ: ಉದ್ಯೋಗ, ವ್ಯವಹಾರದಲ್ಲಿ ತೃಪ್ತಿ. ಹಣಕಾಸು ವ್ಯವಹಾರ ಸ್ಥಿರ. ಹಳೆಯ ಗೆಳೆಯರ ಭೇಟಿ.ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳಿಂದ ಹಿರಿಯರಿಗೆ ಆನಂದ. ಹಿರಿಯರ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಈ ರಾಶಿಯ ಗೃಹಿಣಿಯರಿಗೆ ನೆಮ್ಮದಿಯ ಅನುಭವ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Horoscope: ಹೊಸ ಅವಕಾಶಗಳು ಅಯಾಚಿತವಾಗಿ ಲಭಿಸುವ ಸಾಧ್ಯತೆ, ವಧೂವರಾನ್ವೇಷಿಗಳಿಗೆ ಅನುಕೂಲ
Daily Horoscope: ಲಾಭ- ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಿ
Daily Horoscope; ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ
MUST WATCH
ಹೊಸ ಸೇರ್ಪಡೆ
Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…
Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್ಬಸ್ ಸ್ಥಾವರ ಉದ್ಘಾಟನೆ
Actor Darshan: ನಟ ದರ್ಶನ್ ಜಾಮೀನು ಅರ್ಜಿ ಹೈಕೋರ್ಟ್ನಲ್ಲಿ ಇಂದು ವಿಚಾರಣೆ
Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್
ಡಾಲರ್ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.