![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 8, 2020, 8:53 AM IST
08-12-2020
ಮೇಷ: ಆದಾಯ ಕೊರತೆ ಇಲ್ಲವಾದರೂ ಖರ್ಚು- ವೆಚ್ಚಗಳು ನಿರಂತರ ಇವೆ. ಹಿಡಿತ ಬಲವಿರಲಿ. ಸಾಂಸಾರಿಕ ಸುಖ ಸಮಾಧಾನ ತಂದೀತು. ಬಂಧುಮಿತ್ರರ ಸಹಕಾರ, ಶುಭ ಸಂದೇಶ, ಸಂತೋಷಾಧಿಕ್ಯದಿಂದ ವಾರಾಂತ್ಯ ಮುಗಿದದ್ದೇ ಗಮನಕ್ಕೆ ಬಾರದು.
ವೃಷಭ: ಅವಿವಾಹಿತರು ಪ್ರಯತ್ನ ಹೆಚ್ಚಿಸುವಂತಾದೀತು. ನಿರೀಕ್ಷಿತ ಕಾರ್ಯಗಳು ಮನಸ್ಸಿನಂತಾಗುತ್ತವೆ. ನೆಮ್ಮದಿ ಕಡಿಮೆ ಇದ್ದರೂ ಆರ್ಥಿಕವಾಗಿ ಚಿಂತೆ ಇರದು. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ವಾರಾಂತ್ಯ ಶುಭವಿದೆ.
ಮಿಥುನ: ವಿದ್ಯಾರ್ಥಿಗಳಿಗೆ ವಿದ್ಯಾಭಿವೃದ್ಧಿ, ಗೃಹದಲ್ಲಿ ಬಂಧುಗಳಾಗಮನದಿಂದ ಶಾಂತಿ, ಸಮಾಧಾನ ಸಿಕ್ಕೀತು. ಯಾವುದಕ್ಕೂ ಎಚ್ಚರಿಕೆಯಿಂದ ಮುಂದಡಿ ಇಡಿ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯಕ್ಕೆ ಯೋಗ್ಯ ಸಂಬಂಧಗಳು ಒದಗಿ ಬಂದಾವು.
ಕರ್ಕ: ದೇವತಾ ಕಾರ್ಯಗಳಿಂದ ಮನಶಾಂತಿ ಸಿಗಲಿದೆ. ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ. ವಾಯು ಪ್ರಕೋಪದಿಂದ ಕಿರಿಕಿರಿ ತೋರಿ ಬಂದರೂ ಕಾರ್ಯದಲ್ಲಿ ಉತ್ಸಾಹ ಹಾಗೂ ಧನಾಗಮನ ವೃದ್ಧಿಯಾಗಲಿದೆ.
ಸಿಂಹ: ಮಿತ್ರರ ಸಹಯೋಗ, ಸಹಕಾರ, ನಿರಂತರ ಧನಾಗಮನ ಬದುಕನ್ನು ಹಸನಾಗಿಸೀತು. ದೇವತಾ ಕಾರ್ಯಗಳಿಂದ ಮನಶಾಂತಿ ಸಿಗಲಿದೆ. ಅಪವಾದ ಭೀತಿಗೆ ಒಳಗಾಗದಿರಿ. ಪತ್ನಿ, ಪುತ್ರರಿಂದ ಸಮಾಧಾನದ ಮಾತುಗಳು ನೆಮ್ಮದಿ ತಂದಾವು.
ಕನ್ಯಾ: ದೈವಾನುಗ್ರಹದಿಂದ ಗುರು, ದೇವರ ಸೇವೆ, ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಕಾರ್ಯಭಾಗವು ಕೈಗೂಡುವಂತಿದ್ದರೂ ಚಿಂತೆ ತಪ್ಪದೆನ್ನುವಂತಿದೆ. ಹಿರಿಯರ ಭರ್ತ್ಯನೆ ಮನಸ್ಸಿಗೆ ನೋವಾಗಲಿದೆ. ಹೆಚ್ಚಿನ ಜಾಗ್ರತೆ ವಹಿಸಬೇಕು.
ತುಲಾ: ಆರೋಗ್ಯ ಹಂತಹಂತವಾಗಿ ಸುಧಾರಣೆಯಾಗುತ್ತದೆ. ನಿರುದ್ಯೋಗಿ, ಅವಿವಾಹಿತರಿಗೆ ಸಂತಸ ತರಲಿದೆ. ಆರ್ಥಿಕ ಲಾಭ ಉತ್ತಮಗೊಂಡು ಮನ ಮುದಗೊಂಡೀತು. ಉದ್ಯೋಗಿಗಳಿಗೆ ಹೊಸ ವೃತ್ತಿ ಹೊಳಹು ಆಕಸ್ಮಿಕ ದನಾಭಿವೃದ್ಧಿ ಗೋಚರಕ್ಕೆ ಬಂದಾವು.
ವೃಶ್ಚಿಕ: ಕಹಿ ನೆನಪೆಲ್ಲಾ ಕಳೆದು ಶುಭ, ಸಂತೋಷ ತರುವ ಕಾಲವಿದು. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆದಾವು. ಸಾಂಸಾರಿಕವಾಗಿ ಮಮತೆ, ಶಿಸ್ತು ಸಮತೋಲನವಿರಲಿ. ಸುಖಭೋಗ ವೃದ್ಧಿ ಇದೆ.
ಧನು: ನಿರುದ್ಯೋಗಿಗಳಿಗೆ ಜೀವನ ಕಹಿ ಎನಿಸೀತು. ಷೇರು, ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಇರದು. ಕಾರ್ಯಶೀಲರಾದ ನಿಮಗೆ ನಿಮ್ಮ ಪ್ರಯತ್ನ ಬಲವನ್ನು ಒರೆಗಲ್ಲಿಗೆ ತಿಕ್ಕಿ ನೋಡುವ ಅವಕಾಶಗಳು ಒದಗಿ ಬರಲಿವೆ.
ಮಕರ: ವಾರಾಂತ್ಯದಲ್ಲಿ ಶುಭವಾರ್ತೆಗಳು ಕಾರ್ಯಾನುಕೂಲಕ್ಕೆ ಪೂರಕ. ಧೈರ್ಯೋತ್ಸಾಹದ ಅನುಭವವಾಗಲಿದೆ. ಅವಿವಾಹಿತರು ಬಾಳಸಂಗಾತಿಯನ್ನು ಪಡೆಯಲಿದ್ದಾರೆ. ಉದ್ಯೋಗಿಗಳಿಗೆ ಮುಂಭಡ್ತಿಯ ಜತೆಗೆ ವರ್ಗಾವಣೆಯ ಬವಣೆ.
ಕುಂಭ: ಕಿರು ಸಂಚಾರದಲ್ಲಿ ಕಾರ್ಯಸಿದ್ಧಿ. ರಾಜಕೀಯ ರಂಗದಲ್ಲಿಯೂ ಹಣಾಹಣಿಯ ಸ್ಪರ್ಧೆಗೆ ಇಳಿಯ ಬೇಕಾಗುತ್ತದೆ. ಮಾತು ಕಡಿಮೆ ಮಾಡಿರಿ. ತಾಳ್ಮೆ, ಸಮಾಧಾನವಿರಲಿ. ಕಿರು ಸಂಚಾರದಲ್ಲಿ ಕಾರ್ಯಸಿದ್ಧಿ. ವಾರಾಂತ್ಯ ಶುಭವಿದೆ.
ಮೀನ: ಹಿರಿಯರಿಂದ ತೀರ್ಥಯಾತ್ರೆ, ಧರ್ಮ ಕಾರ್ಯಗಳು ನಡೆದಾವು. ಉದ್ಯೋಗಿಗಳಿಗೆ ಮುಂಭಡ್ತಿ ಇದೆ. ಸದ್ಯದಲ್ಲೇ ಮಂಗಲಕಾರ್ಯಗಳ ವೀಕ್ಷಣೆ ಆನಂದವಿದೆ. ಉದ್ಯೋಗಿಗಳಿಗೆ ಮುಂಭಡ್ತಿ ಇದೆ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.