Daily Horoscope: ಸತತ ಸಾಧನೆಯಿಂದ ಮುಂದೆ ಬಂದ ನಿಮ್ಮ ನಡೆಗೆ ತಡೆಯಿಲ್ಲ


Team Udayavani, Nov 13, 2023, 7:30 AM IST

TDY-1

ಮೇಷ: ಹಬ್ಬದ ದಿನಗಳ ಮಧ್ಯದಲ್ಲಿ ಕರ್ತವ್ಯದ ಕರೆಗೆ ಓಗೊಡಬೇಕಾದ ಪರಿಸ್ಥಿತಿ. ಕಾರ್ಯ ಭಾರ ನಿರ್ವಹಣೆಯಲ್ಲಿ ಯಶಸ್ವಿ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆಯನ್ನು ಹಿಡಿದಿಡುವ ಪ್ರಯತ್ನ. ಪಾಲುದಾರರೊಂದಿಗೆ ಕಾರ್ಯಯೋಜನೆ ವಿಮರ್ಶೆ.

ವೃಷಭ: ಉದ್ಯೋಗ ಸ್ಥಾನದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಕಾರ್ಯ. ಉದ್ಯಮದ ನೌಕರ ವರ್ಗಕ್ಕೆ ಸಂತೋಷ. ಬಂಧುಗಳೊಂದಿಗೆ ಸಮ್ಮಿಲನ. ದೂರದ ಊರಿನಲ್ಲಿರುವ ಬಂಧುಗಳ ಮನೆಯಲ್ಲಿ ಶುಭಕಾರ್ಯದ ವಾರ್ತೆ. ಪ್ರಾಚೀನ ವಿದ್ಯಾಪಾರಂಗತರ ಭೇಟಿಯಿಂದ ಲಾಭ.

ಮಿಥುನ: ಸ್ವಯಂಸಾಧನೆ ಯಿಂದ ಆತಂಕ ದೂರ. ಉದ್ಯೋಗದಲ್ಲಿ ಪ್ರತಿಭೆಗೆ ಮನ್ನಣೆ. ಊರಿನಿಂದ ಬಂದ ಗಣ್ಯರಿಗೆ ಗೌರವ. ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆ ಮುಂದೂಡಲು ನಿರ್ಧಾರ. ಸಾಹಿತ್ಯ ಉಪಾಸಕರಿಗೆ ಸಮಾಧಾನದ ದಿನ.

ಕರ್ಕಾಟಕ: ಸತತ ಸಾಧನೆಯಿಂದ ಮುಂದೆ ಬಂದ ನಿಮ್ಮ ನಡೆಗೆ ತಡೆಯಿಲ್ಲ. ಉದ್ಯೋಗದಲ್ಲಿ ನಿಮ್ಮದೇ ಛಾಪು ಮೂಡಿಸುವುದರಲ್ಲಿ ಯಶಸ್ವಿ. ಉದ್ಯಮ ಕ್ಷೇತ್ರದಲ್ಲಿ ಎಳೆಯರಿಗೆ ಪೋ›ತ್ಸಾಹ ನೀಡುವ ಕ್ರಮಗಳು. ಸರಕಾರಿ ಕ್ಷೇತ್ರದ ಮಹಿಳಾ ಅಧಿಕಾರಿಯಿಂದ ಸಹಾಯ.

ಸಿಂಹ: ಸ್ವಯಂ ಯೋಗ್ಯತೆ ಯಿಂದ ಉನ್ನತಿಗೇರಿದ ನಿಮಗೆ ಭವಿಷ್ಯದ ಚಿಂತೆಯಿಲ್ಲ. ಉದ್ಯೋಗ ಸ್ಥಾನದಲ್ಲಿ ಅನಭಿಷಿಕ್ತ  ದೊರೆಯ ಸ್ಥಾನ. ಆತಂಕ ಒಡ್ಡುವವರ ಪರಾಜಯ.  ಸ್ವಂತ ಉದ್ಯಮಕ್ಕೆ ಎದುರಾದ ಪೈಪೋಟಿ ಹೇಳಹೆಸರಿಲ್ಲದೆ ಮಾಯ.

ಕನ್ಯಾ: ಆರ್ಥಿಕ ಪ್ರಗತಿಗೆ ಹಿತಶತ್ರುಗಳು ಒಡ್ಡಿದ ಬಾಧೆ ನಿವಾರಣೆ. ಉದ್ಯೋಗದಲ್ಲಿ ವೇತನ ಏರಿಕೆ. ಅಕಸ್ಮಾತ್‌ ಧನಲಾಭ. ವಾಹನ ಸಂಬಂಧಿ ವ್ಯಾಪಾರದಲ್ಲಿ ನಿರೀಕ್ಷೆ ಮೀರಿದ ಲಾಭ. ವಸ್ತ್ರೋದ್ಯಮಿಗಳ ಆದಾಯ ಊಹಾತೀತ ಮಟ್ಟದಲ್ಲಿ  ವೃದ್ಧಿ. ಸಣ್ಣ ಪ್ರಯಾಣದಲ್ಲಿ ಅನಿರೀಕ್ಷಿತ ಖರ್ಚು.

ತುಲಾ: ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಸಂತೋಷದ ಕ್ಷಣಗಳು ನಿಮ್ಮದಾಗಿವೆ. ಉದ್ಯೋಗ ಸ್ಥಾನದಲ್ಲಿ ಸದಾ ಬೇಡಿಕೆಯಲ್ಲಿದ್ದೀರಿ. ಉದ್ಯಮದಲ್ಲಿ ಪ್ರತಿಭೆಗೆ ಮನ್ನಣೆ ನೀಡಿದ್ದರಿಂದ ಆದರಣೀಯರಾಗಿದ್ದೀರಿ. ನೆರೆಯ ಮಿತ್ರರ ಆನಂದದಲ್ಲಿ ಪಾಲುಗೊಂಡ ಸಂತೃಪ್ತಿ.

ವೃಶ್ಚಿಕ: ಇಲ್ಲದಿರುವುದರ ಚಿಂತೆ ಬಿಟ್ಟು ಇರುವುದಕ್ಕೆ ಸಂತೋಷ ಪಡಿ.ಮಕ್ಕಳ ಏಳಿಗೆ ಯನ್ನು ನೋಡಿ ನೆಮ್ಮದಿಯ ಕ್ಚಣಗಳನ್ನು ಅನುಭವಿಸಿ.ಹತ್ತಿರದ ದೇವತಾ ಸಾನ್ನಿಧ್ಯಕ್ಕೆ  ಭೇಟಿ. ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಪರಿಣತರೊಂದಿಗೆ ಸಮಾಲೋಚನೆ.

ಧನು: ಬಹುದಿನಗಳ ಅಪೇಕ್ಷೆ ಯೊಂದು ಈಡೇರುವ ದಿನ.  ಉದ್ಯೋಗ ಸ್ಥಾನದಲ್ಲಿ ವಿಶೇಷ ಮಾನ್ಯತೆ. ಪರಿಚಿತರ ಸಲಹೆಯಂತೆ ನಡೆದು ಅಪೇಕ್ಷಿತ ಕಾರ್ಯವನ್ನು ಮುಗಿಸಲು ಸಾಧ್ಯವಾದ ಸಂತೃಪ್ತಿ. ಸಂಗಾತಿಯ ಆರೋಗ್ಯ ಸುಧಾರಣೆ.

ಮಕರ: ಹಬ್ಬದ ದಿನಗಳ ನಡುವೆ ಉದ್ಯೋಗ ಸ್ಥಾನದ ಕರ್ತವ್ಯ ಪಾಲನೆ. ಪ್ರತಿಭೆಗೆ ಮೇಲಧಿಕಾರಿಗಳ ಮೆಚ್ಚುಗೆ. ಉದ್ಯಮಿಗಳಿಗೆ ಕಾರ್ಯಯೋಜನೆ ರೂಪಿಸುವ ಒತ್ತಡ. ವಾಹನ ಚಾಲನೆಯಲ್ಲಿ ಎಚ್ಚರ.  ಮನೆಯಲ್ಲಿ ನೆಮ್ಮದಿ.

ಕುಂಭ: ಸಂತೃಪ್ತಿಯ ಮನಸ್ಥಿತಿಯಲ್ಲಿ  ದಿನಾರಂಭ.ಉದ್ಯೋಗ ಸ್ಥಾನದಲ್ಲಿ ಕಿರಿಯರಿಗೆ ಮಾರ್ಗದರ್ಶನ. ಸ್ವಂತ ಉದ್ಯಮದ ನೌಕರರಿಗೆ ಆನಂದ. ಉತ್ಪನ್ನಗಳಿಗೆ ಹೊಸಬರಿಂದ ಬೇಡಿಕೆ. ದೀರ್ಘಾವಧಿ ಯೋಜನೆಗಳಲ್ಲಿ ಪಾಲುಗೊಳ್ಳಲು ನಿರ್ಧಾರ.

ಮೀನ: ಕೆಲಸಗಳ  ಬದಲಾವಣೆಯೇ ವಿಶ್ರಾಂತಿ ಎಂಬುದು  ನಿಮಗೆ ಹೇಳಿ ಮಾಡಿಸಿದಂತಿದೆ.  ಉದ್ಯೋಗ ಸ್ಥಾನದಲ್ಲಿ ದಿನಕ್ಕೊಂದು ಬಗೆಯ ಹೊಸ ಜವಾಬ್ದಾರಿ ಬೆನ್ನಟ್ಟಿಕೊಂಡು ಬರುತ್ತದೆ. ಸರಕಾರಿ ಇಲಾಖೆಗಳಿಂದ  ಸಕಾಲಿಕವಾಗಿ ಅನುಕೂಲಕರ ಸ್ಪಂದನ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Horoscope: ಧೈರ್ಯವೊಂದೇ ಮಿತ್ರನೆಂಬ ಅರಿವು ಇರಲಿ, ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಕಾಟ

1-horoscope

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ, ಮನೋಬಲದಿಂದ ಕಾರ್ಯಸಿದ್ದಿ

1-horoscope

Daily Horoscope: ಉದ್ಯೋಗಾನ್ವೇಷಿಗಳಿಗೆ ಶುಭ ವಾರ್ತೆ, ಆರೋಗ್ಯ ಉತ್ತಮ

Dina Bhavishya

Daily Horoscope; ಉದ್ಯೋಗಸ್ಥರಿಗೆ ವಿಶಿಷ್ಟ ಜವಾಬ್ದಾರಿ, ನಿಲ್ಲದ ಹಿತಶತ್ರುಗಳ ಕಾಟ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.