![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 7, 2024, 7:39 AM IST
ಮೇಷ: ಶುಭಸೂಚನೆಗಳೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಕೆಲಸಗಳ ಮರು ಹಂಚಿಕೆ. ಉದ್ಯಮಗಳ ನಿರ್ವಹಣೆಗೆದುರಾದ ಸಮಸ್ಯೆಗಳು ದೂರ. ಲಕ್ಷ್ಮಿ ಕಟಾಕ್ಷಕ್ಕೆ ಗುರಿಯಾಗುವಿರಿ. ಪೂರ್ವದಿಕ್ಕಿನಿಂದ ಬಂಧುಗಳ ಆಗಮನ.
ವೃಷಭ: ಪೂರ್ವಯೋಜನೆಯಂತೆ ಕೈಗೊಂಡ ಕ್ರಮಗಳಿಂದಾಗಿ ಕಾರ್ಯಗಳು ಸುಗಮ. ಸರಕಾರಿ ನೌಕರರಿಗೆ ವರ್ಗಾವಣೆ ಖಚಿತ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ.
ಮಿಥುನ: ಅರ್ಹತೆಗೆ ಸರಿಯಾದ ಗೌರವದ ಸ್ಥಾನ ಪ್ರಾಪ್ತಿ. ಉದ್ಯಮಿಗಳಿಗೆ ಸಂತೋಷ ತರುವ ಯೋಜನೆಗಳು. ಸರಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಪ್ರಯತ್ನ ವಿಫಲ. ಸರಕಾರಿ ನೌಕರರಿಗೆ ಹೆಚ್ಚಿದ ಜವಾಬ್ದಾರಿ.
ಕರ್ಕಾಟಕ: ಬಡವರಿಗೆ ವಿದ್ಯಾರ್ಜನೆ, ವಿವಾಹ, ಚಿಕಿತ್ಸೆ ಮೊದಲಾದ ಆವಶ್ಯಕತೆಗಳಿಗೆ ಧನಸಹಾಯ. ಉದ್ಯೋಗದಲ್ಲಿ ವೇತನ ಏರಿಕೆ. ನೌಕರ ವರ್ಗಕ್ಕೆ ಮಾಲಕರ ಔದಾರ್ಯದ ನಡೆಯಿಂದ ಹರ್ಷ. ಹೊಸ ನೌಕರರರಿಗೆ ಮಾರ್ಗದರ್ಶನದ ಜವಾಬ್ದಾರಿ.
ಸಿಂಹ: ಉದ್ಯೋಗ ಸ್ಥಾನದಲ್ಲಿ ಪುನರಾರಂಭಗೊಂಡಿದ್ದ ಕಾಮಗಾರಿಗಳ ಮುಕ್ತಾಯ. ಅಧಿಕಾರಿ ವರ್ಗಕ್ಕೆ ತೃಪ್ತಿ. ಯಂತ್ರೋಪಕರಣ ಮಾರಾಟ ಗಾರರಿಗೆ ನಿರೀಕ್ಷೆ ಮೀರಿದ ವ್ಯಾಪಾರ. ಸಿವಿಲ್ ಎಂಜಿನಿಯರ್ಗಳಿಗೆ ಹೊಸ ಯೋಜನೆಗಳು ಲಭ್ಯ.
ಕನ್ಯಾ: ಕ್ರಿಯಾಶೀಲತೆಯೊಂದಿಗೆ ದೈವಾನು ಗ್ರಹವೂ ಇರುವುದರಿಂದ ಹಿನ್ನಡೆಯ ಪ್ರಶ್ನೆಯಿಲ್ಲ. ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಉದ್ಯೋಗ ಮುಂದುವರಿಕೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ.
ತುಲಾ: ಮನೋಬಲ ವೃದ್ಧಿಯೊಂದಿಗೆ ಕಾರ್ಯದ ವೇಗ ಹೆಚ್ಚಳ. ಕಾರ್ಯಕ್ಷೇತ್ರದಲ್ಲಿ ಪರಿಸ್ಥಿತಿ ಸುಧಾರಣೆ. ಸಂಗಾತಿಯ ಮನೋಧರ್ಮ ದೊಡನೆ ಉತ್ತಮ ಹೊಂದಾಣಿಕೆ. ಹಿಂದಿನ ಸಹಪಾಠಿಗಳ ಭೇಟಿ. ಊರಿನ ಶಿವಾಲಯದಲ್ಲಿ ವಿಶೇಷ ಪೂಜೆ.
ವೃಶ್ಚಿಕ: ಸಂಸ್ಥೆಯ ಮುಖ್ಯಸ್ಥರಿಂದ ಯೋಗ ಕ್ಷೇಮ ವಿಚಾರಣೆ. ಗೃಹೋದ್ಯಮದ ಉತ್ಪನ್ನ ಗಳ ಕಡೆಗೆ ಆಕರ್ಷಿತರಾದ ಗ್ರಾಹಕರು. ಮಕ್ಕಳಿಂದ ಹೊಸ ಉದ್ಯಮ ಆರಂಭ. ಕೃಷಿಕ್ಷೇತ್ರಕ್ಕೆ ಯುವಜನರ ಪ್ರವೇಶ.. ಸಾಮಾಜಿಕ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ.
ಧನು: ಕಳೆದ ಸಪ್ತಾಹದಲ್ಲಾದ ಸಣ್ಣಪುಟ್ಟ ಹಿನ್ನಡೆಗಳ ನಿವಾರಣೆ. ಪರಿಸರ ಸ್ವತ್ಛತೆಯ ಕಾರ್ಯಕ್ರಮಗಳ ನೇತೃತ್ವ. ಉಪೇಕ್ಷಿತ ವರ್ಗದ ಮಕ್ಕಳಿಗೆ ಅಕ್ಷರ ಬೋಧನೆ ಮತ್ತು ಸಂಸ್ಕಾರ ನೀಡುವ ಕ್ರಮಗಳ ಆರಂಭ.
ಮಕರ: ವೃತ್ತಿಸ್ಥಾನದಲ್ಲಿ ಕಡಿಮೆಯಾದ ಒತ್ತಡಗಳು. ಸುತ್ತಲಿನ ಪರಿಸರದಲ್ಲಿ ಗಮನಾರ್ಹ ಪರಿವರ್ತನೆ. ಕರಕುಶಲ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಳ. ಹೆಚ್ಚುವರಿ ಆದಾಯ ಹೊಂದಲು ಮುಂದುವರಿದ ಪ್ರಯತ್ನ.
ಕುಂಭ: ಉದ್ಯೋಗದಲ್ಲಿ ನಿತ್ಯ ಬಂದೆರಗುವ ಹೊಸ ಹೊಣೆಗಾರಿಕೆಗಳು. ಉದ್ಯಮದ ಉತ್ಪನ್ನಗಳಿಗೆ ಹೊಸ ಮಾರಾಟಗಾರರ ಅನ್ವೇಷಣೆ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವ ಪ್ರಯತ್ನ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳು ಯಶಸ್ವಿ. ಮಕ್ಕಳಿಗೆ ಸಮಾಧಾನದ ವಾತಾವರಣ.
ಮೀನ: ದಿನಾರಂಭದಲ್ಲಿ ಪ್ರಗತಿಯ ವೇಗವರ್ಧನೆ. ವೃತ್ತಿಬಾಂಧವರಿಂದ ಉತ್ಸಾಹಪೂರ್ಣ ಸಹಕಾರ. ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಸರಕಾರಿ ನೌಕರರಿಗೆ ಸಾರ್ವಜನಿಕರಿಂದ ಪ್ರಶಂಸೆ. ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಗೌರವ. ದಂಪತಿಗಳ ನಡುವೆ ಅನುರಾಗ ವೃದ್ಧಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.