![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jan 9, 2021, 7:56 AM IST
09-01-2021
ಮೇಷ: ಸ್ಥಾನ ಪ್ರಾಪ್ತಿಯೂ, ಮುಂಭಡ್ತಿಯು ದೊರಕುವುದರಿಂದ ಕೊಂಚ ನೆಮ್ಮದಿ ಕಂಡುಬರಲಿದೆ. ಸೋದರ ವರ್ಗದವರೊಡನೆ ಮನಸ್ತಾಪ ಕಂಡುಬಂದೀತು. ಬಂಧುವರ್ಗದವರಿಗೆ ಉಪಕಾರ ಮಾಡುವಿರಿ.
ವೃಷಭ: ಕಾರ್ಯ ಹೊರೆಯಿಂದ ಬೇಸರ, ಅಪವಾದದ ಭಯ ಕಂಡುಬಂದೀತು. ಸಾಹಸ ಪ್ರವೃತ್ತಿಯವರಿಗೆ ಸೂಕ್ತ ಅವಕಾಶ ಕಂಡುಬಂದೀತು. ಎಚ್ಚರ ತಪ್ಪಿದ್ದಲ್ಲಿ ಪತನ ಭಯವೂ ಕಂಡುಬಂದೀತು. ಶುಭವಾರ್ತೆ.
ಮಿಥುನ: ದೂರ ಪ್ರಯಾಣದಿಂದ ಆರೋಗ್ಯ ಹಾನಿ ಹಾಗೂ ಖರ್ಚಿನ ಬಾಬ್ತು ಹೆಚ್ಚು ಕಂಡುಬಂದೀತು. ಗೆಳೆತನದ ಸಹಾಯಹಸ್ತ ಕಂಡುಬರುವುದು. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾದೀತು. ಮಕ್ಕಳಿಂದ ಸಂತೋಷ.
ಕರ್ಕ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ವಿಳಂಬದಿಂದ ತೊಂದರೆ. ಕೃಷಿ ಕಾರ್ಯಕ್ಕೆ ಭಂಗ ಕಂಡುಬರಲಿದೆ. ಬರಬೇಕಾದ ಹಣವು ನಿಧಾನವಾದರೂ ಕೈಗೆ ಬರುವುದು. ಜಗಳ, ವಿವಾದಗಳ ಸಹವಾಸಕ್ಕೆ ಹೋಗದಿರುವುದು.
ಸಿಂಹ: ಆರೋಗ್ಯ ಹಾಗೂ ಮಾನಸಿಕವಾಗಿ ತುಂಬಾ ಚಿಂತೆಗೊಳಗಾಗಿರುವಿರಿ. ಶುಭ ಕಾರ್ಯ, ಧರ್ಮಕಾರ್ಯ ಗಳಲ್ಲಿ ವಿಘ್ನ ಕಂಡುಬರಲಿದೆ. ಅಧಿಕಾರಿ ವರ್ಗದವರಿಂದ ಕಿರಿಕಿರಿ ತೋರಿಬಂದು ಅಸಮಾಧಾನವಾದೀತು.
ಕನ್ಯಾ: ಮೋಸದ ವ್ಯವಹಾರದವರ ವ್ಯೂಹದಿಂದ ಹೊರಗೆ ಬರುವುದು ಉತ್ತಮ. ನೀವು ಸಿಕ್ಕಿ ಹಾಕಿಕೊಳ್ಳುವಿರಿ. ಹಣದ ಮುಗ್ಗಟ್ಟು ಕಾಡುತ್ತಿದ್ದರೂ ಸ್ಥಾನಮಾನಕ್ಕೆ ಸ್ಥಿರತೆ ಇರುವುದು. ಯಾತ್ರೆಯ ಸಂಭವವಿದೆ.
ತುಲಾ: ದೇಹಾರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ. ಪ್ರವಾಸದಿಂದ ನಿರೀಕ್ಷೆಗೆ ಮೀರಿ ಖರ್ಚು ಬಂದೀತು. ಆದರೂ ಸಂತೃಪ್ತಿ ಇದೆ. ಅವಿವಾಹಿತರಿಗೆ ಮಂಗಲ ಕಾರ್ಯದ ಶುಭವಾರ್ತೆ. ಸಂತಾನ ಲಾಭ ಕಂಡುಬರುವುದು.
ವೃಶ್ಚಿಕ: ಮುಂಗೋಪವನ್ನು ಕಡಿಮೆ ಮಾಡಿಕೊಳ್ಳಿರಿ. ಪೋಷಕರ ಆರೋಗ್ಯಕ್ಕಾಗಿ ಖರ್ಚು ಬರಲಿದೆ. ಭಡ್ತಿಯ ಸಂಭವವೂ ದೂರವಾದೀತು. ಮಂಗಲ ಕಾರ್ಯದ ಸಂಭ್ರಮ ತಂದೀತು. ಹಿತಶತ್ರುಗಳಿಂದ ದೂರವಿರಿ.
ಧನು: ಕ್ಷುಲ್ಲಕ ವಿಷಯಕ್ಕಾಗಿ ಜಗಳ ಮಾಡಿ ಸಂಬಂಧವನ್ನು ಕೆಡಿಸಿಕೊಳ್ಳದಿರಿ. ತೂಕತಪ್ಪಿ ಮಾತನಾಡದಿರುವುದೇ ಲೇಸು. ಧಾರ್ಮಿಕ ಪ್ರಕ್ರಿಯೆಗಳಿಗೆ ವಿಘ್ನ ಮೂಡಿ ಬಂದು ನಿಶ್ಚಿತ ಸಮಯದಲ್ಲಿ ನಡೆಯಲಾರದು.
ಮಕರ: ಕಲಾವಿದರಿಗೆ ಸಾಫಲ್ಯವಿದೆ. ಆದರೂ ಯೋಗ್ಯ ಪುರಸ್ಕಾರ ದೊರೆಯದು. ವೈವಾಹಿಕ ಹಾಗೂ ಮಂಗಲ ಕಾರ್ಯ ಮುಂದೆ ಹೋಗಲಿದೆ. ದೀರ್ಘಕಾಲೀಕ ಧನವಿನಿಯೋಗ ಸಾಫಲ್ಯ ತಂದುಕೊಡಲಿದೆ. ಆಕಸ್ಮಿಕ ಪ್ರಯಾಣವಿದೆ.
ಕುಂಭ: ಕರ ಸಂದಾಯದ ಚಿಂತೆಯಿದ್ದರೂ ಗೃಹಕೃತ್ಯದಲ್ಲಿ ತೃಪ್ತಿ ಇದೆ. ಉಷ್ಣಭಾದೆಯಿಂದಲೋ,ರಕ್ತದೋಷದಿಂದಲೋ ಆರೋಗ್ಯ ಹಾನಿಯಿದೆ. ಹೊಸದಾಗಿ ಉದ್ಯೋಗ ಪ್ರಾಪ್ತಿ ಸಂಭವವಿದೆ. ದೂರದೂರಿಗೆ ಪ್ರಯಾಣವಿದೆ.
ಮೀನ: ಕಾರ್ಯಬಾಹುಳ್ಯದಿಂದ ದೇಹಭಾದೆ, ಶಿಕ್ಷಣಕ್ಕಾಗಿ ಧನವಿನಿಯೋಗ, ಗೃಹ ಪರಿಹಾರಕ್ಕಾಗಿ ಖರ್ಚು ಹೆಚ್ಚಲಿದೆ. ನೆಂಟರಿಷ್ಟರ ಆಗಮನದಿಂದ ಕೊಂಚ ಸಂತಸವಿದ್ದರೂ ಬೇಡಿಕೆಗೂ, ಪೂರೈಕೆಗೂ ಅಜಗಜಾಂತರ. ಚಿಂತೆ ತಪ್ಪದು.
ಎನ್.ಎಸ್.ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.