ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಈ ವರ್ಷವಿಡೀ ಸುಖದುಃಖಗಳ ಸಮ್ಮಿಶ್ರ ಫ‌ಲವು ಕಂಡು ಬರಲಿದೆ


Team Udayavani, Jan 15, 2021, 8:13 AM IST

horoscope

15-01-2021

ಮೇಷ: ಸಾಂಸಾರಿಕವಾಗಿ ಹೆಂಡತಿ ಮಕ್ಕಳಿಂದ ಉತ್ತಮವಾದುದನ್ನೇ ನಿರೀಕ್ಷಿಸಬಹುದಾಗಿದೆ. ಆಗಾಗ ದೂರಸಂಚಾರದಿಂದ ಧನವ್ಯಯವು ಕಂಡು ಬರಲಿದೆ. ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ಚಿಂತನೆಯು ನಡೆಯಲಿದೆ.

ವೃಷಭ: ಉತ್ತಮ ಅನುಗ್ರಹವು ಇದ್ದು ಗೃಹ ಸೌಖ್ಯ ಇರುವುದು. ಸಾಮಾಜಿಕ ರಂಗದಲ್ಲಿ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ. ಮನೋನಿಶ್ಚಿತ ಕೆಲಸ ಕಾರ್ಯಗಳು ಹಂತಹಂತವಾಗಿ ನೆರವೇರಲಿದೆ. ಕಿರುಸಂಚಾರ ಕಂಡು ಬಂದೀತು.

ಮಿಥುನ: ಜೀವನದಲ್ಲಿ ನಾನಾ ರೀತಿಯ ಏರುಪೇರುಗಳಿಂದ ನೊಂದು ಬಳಲಿದ್ದ ನಿಮಗೆ ಈಗ ಸ್ವಲ್ಪ ಸಂತೋಷ ಸಮಾಧಾನವು ಕಂಡು ಬರುವುದು. ಆರೋಗ್ಯದಲ್ಲೂ ಉತ್ತಮ ಸುಧಾರಣೆಯು ಕಂಡು ಬರುವುದು ಶುಭವಿದೆ.

ಕರ್ಕ: ಹಲವು ಅಡೆತಡೆಗಳು ತೋರಿಬಂದರೂ ನಿಮ್ಮ ಕೆಲಸವು ಕೆಗೂಡಲಿದೆ. ವರ್ಷದ ಆರಂಭದಿಂದಲೇ ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಕಂಕಣ ಬಲಕ್ಕೆ ಸಾಧಕವಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಇದೆ.

ಸಿಂಹ: ಈ ವರ್ಷವಿಡೀ ಸುಖದುಃಖಗಳ ಸಮ್ಮಿಶ್ರ ಫ‌ಲವು ನಿಮಗೆ ಕಂಡು ಬರಲಿದೆ. ನಿಮ್ಮ ಆತ್ಮಸ್ಥೈರ್ಯ ಹಾಗೂ ದೃಢ ನಿರ್ಧಾರಗಳು ನಿಮ್ಮನ್ನು ಮುನ್ನಡೆಸಲಿದೆ. ಆರ್ಥಿಕವಾಗಿ ಋಣಭಾದೆ ಸ್ವಲ್ಪ ಸ್ವಲ್ಪ ಕಡಿಮೆಯಾಗಿ ಸಂತಸ.

ಕನ್ಯಾ: ವಿದ್ಯಾರ್ಥಿಗಳು ದುರ್ವ್ಯಸನಗಳಿಂದ ದೂರವಿದ್ದಷ್ಟು ಉತ್ತಮ. ಹೊಸ ಪರಿಸರಕ್ಕೆ ವರ್ಗಾವಣೆ ತಂದೀತು. ಹಿರಿಯರೊಂದಿಗೆ ದೂರ ಸ್ಥಳಗಳನ್ನು ಸಂದರ್ಶಿಸುವ ಅವಕಾಶವಿರುತ್ತದೆ. ಆರ್ಥಿಕವಾಗಿ ನೆಮ್ಮದಿಯ ದಿನಗಳಿವು.

ತುಲಾ: ನಾನಾ ರೀತಿಯ ಕಷ್ಟ ನಷ್ಟಗಳ ಅನುಭವವು ನಿಮಗೆ ಚಿಂತೆಗೀಡು ಮಾಡಿದರೂ ಅದು ಸುಧಾರಿಸುವುದು. ಹೊಸ ಹೊಸ ಅವಕಾಶಗಳು ಬರುವವು. ಗೃಹ ನಿರ್ಮಾಣ ಕಾರ್ಯದಲ್ಲಿ ಮುನ್ನಡೆ ಕಂಡು ಬಂದು ಸಮಾಧಾನವಾದೀತು.

ವೃಶ್ಚಿಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗಾವಕಾಶಗಳು ಒದಗಿ ಬಂದಾವು. ಹಿರಿಯರಿಗೆ ಉತ್ತಮ ವೈದ್ಯರಿಂದ ತಪಾಸಣೆ ಮಾಡಿದರೆ ಉತ್ತಮ. ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ಮಾಡತಕ್ಕದ್ದು. ಉದ್ಯೋಗದಲ್ಲಿ ಸ್ಪರ್ದೆ ಎದುರಾಗಲಿದೆ.

ಧನು: ಕುಟುಂಬಿಕವಾಗಿ ಸಮಾಧಾನಕರ ವಾತಾವರಣದಿಂದ ತುಸು ಮಾನಸಿಕ ಶಾಂತಿ ದೊರಕಲಿದೆ. ಕಾರ್ಯರಂಗದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರಕಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಖರ್ಚುವೆಚ್ಚ ಅಧಿಕವಾಗಲಿದೆ.

ಮಕರ: ಸೊಂಟದ ಕೆಳಭಾಗದಲ್ಲಿ ನೋವು ಕಾಡಲಿದೆ. ನಿಮ್ಮ ಸಂಬಂಧಿಕರಿಂದ ಉತ್ತಮ ಪ್ರೋತ್ಸಾಹವು ದೊರಕಲಿದೆ. ಅನಿರೀಕ್ಷಿತ ಧನಲಾಭ ಕಂಡು ಬರುವುದು. ಹಲವು ಸಮಯದಿಂದ ಬಾಕಿಯಾದ ಕೆಲಸ ಮುನ್ನಡೆದೀತು.

ಕುಂಭ: ಸ್ವಾಭಿಮಾನಿಗಳಾಗಿ ಗೌರವವನ್ನು ಉಳಿಸಿಕೊಳ್ಳಿರಿ. ಮಾನಸಿಕ ಚಂಚಲತೆ ಕಾಡಿದರೂ ನಿರಂತರವಾಗಿ ಧನಾಗಮನವಿದ್ದು ಸಮಾಧಾನವಾಗಲಿದೆ. ಎಲ್ಲಾ ವಿಚಾರದಲ್ಲಿ ಆದಷ್ಟು ಜಾಗ್ರತೆ ಮಾಡಿರಿ. ಹಳೆ ಕಾಯಿಲೆ ಪುನರಾಗಮನ.

ಮೀನ: ದೂರ ಸಂಚಾರದಲ್ಲಿ ಅಪಘಾತದ ಭಯ ಇರುವುದು. ನಿಮ್ಮಿಂದ ಉಪಕೃತರಾದವರೇ ನಿಮಗೆ ಸಮಸ್ಯೆ ತಂದಿಟ್ಟಾರು. ಕಚೇರಿ ವ್ಯವಹಾರದಲ್ಲಿ ಜಾಗ್ರತೆ ಮಾಡಿರಿ. ಕಾರ್ಮಿಕ ವರ್ಗಕ್ಕೆ ಅತೀ ಶ್ರಮವು ಕಂಡು ಬರಲಿದೆ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.