![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jan 15, 2021, 8:13 AM IST
15-01-2021
ಮೇಷ: ಸಾಂಸಾರಿಕವಾಗಿ ಹೆಂಡತಿ ಮಕ್ಕಳಿಂದ ಉತ್ತಮವಾದುದನ್ನೇ ನಿರೀಕ್ಷಿಸಬಹುದಾಗಿದೆ. ಆಗಾಗ ದೂರಸಂಚಾರದಿಂದ ಧನವ್ಯಯವು ಕಂಡು ಬರಲಿದೆ. ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ಚಿಂತನೆಯು ನಡೆಯಲಿದೆ.
ವೃಷಭ: ಉತ್ತಮ ಅನುಗ್ರಹವು ಇದ್ದು ಗೃಹ ಸೌಖ್ಯ ಇರುವುದು. ಸಾಮಾಜಿಕ ರಂಗದಲ್ಲಿ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ. ಮನೋನಿಶ್ಚಿತ ಕೆಲಸ ಕಾರ್ಯಗಳು ಹಂತಹಂತವಾಗಿ ನೆರವೇರಲಿದೆ. ಕಿರುಸಂಚಾರ ಕಂಡು ಬಂದೀತು.
ಮಿಥುನ: ಜೀವನದಲ್ಲಿ ನಾನಾ ರೀತಿಯ ಏರುಪೇರುಗಳಿಂದ ನೊಂದು ಬಳಲಿದ್ದ ನಿಮಗೆ ಈಗ ಸ್ವಲ್ಪ ಸಂತೋಷ ಸಮಾಧಾನವು ಕಂಡು ಬರುವುದು. ಆರೋಗ್ಯದಲ್ಲೂ ಉತ್ತಮ ಸುಧಾರಣೆಯು ಕಂಡು ಬರುವುದು ಶುಭವಿದೆ.
ಕರ್ಕ: ಹಲವು ಅಡೆತಡೆಗಳು ತೋರಿಬಂದರೂ ನಿಮ್ಮ ಕೆಲಸವು ಕೆಗೂಡಲಿದೆ. ವರ್ಷದ ಆರಂಭದಿಂದಲೇ ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಕಂಕಣ ಬಲಕ್ಕೆ ಸಾಧಕವಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಇದೆ.
ಸಿಂಹ: ಈ ವರ್ಷವಿಡೀ ಸುಖದುಃಖಗಳ ಸಮ್ಮಿಶ್ರ ಫಲವು ನಿಮಗೆ ಕಂಡು ಬರಲಿದೆ. ನಿಮ್ಮ ಆತ್ಮಸ್ಥೈರ್ಯ ಹಾಗೂ ದೃಢ ನಿರ್ಧಾರಗಳು ನಿಮ್ಮನ್ನು ಮುನ್ನಡೆಸಲಿದೆ. ಆರ್ಥಿಕವಾಗಿ ಋಣಭಾದೆ ಸ್ವಲ್ಪ ಸ್ವಲ್ಪ ಕಡಿಮೆಯಾಗಿ ಸಂತಸ.
ಕನ್ಯಾ: ವಿದ್ಯಾರ್ಥಿಗಳು ದುರ್ವ್ಯಸನಗಳಿಂದ ದೂರವಿದ್ದಷ್ಟು ಉತ್ತಮ. ಹೊಸ ಪರಿಸರಕ್ಕೆ ವರ್ಗಾವಣೆ ತಂದೀತು. ಹಿರಿಯರೊಂದಿಗೆ ದೂರ ಸ್ಥಳಗಳನ್ನು ಸಂದರ್ಶಿಸುವ ಅವಕಾಶವಿರುತ್ತದೆ. ಆರ್ಥಿಕವಾಗಿ ನೆಮ್ಮದಿಯ ದಿನಗಳಿವು.
ತುಲಾ: ನಾನಾ ರೀತಿಯ ಕಷ್ಟ ನಷ್ಟಗಳ ಅನುಭವವು ನಿಮಗೆ ಚಿಂತೆಗೀಡು ಮಾಡಿದರೂ ಅದು ಸುಧಾರಿಸುವುದು. ಹೊಸ ಹೊಸ ಅವಕಾಶಗಳು ಬರುವವು. ಗೃಹ ನಿರ್ಮಾಣ ಕಾರ್ಯದಲ್ಲಿ ಮುನ್ನಡೆ ಕಂಡು ಬಂದು ಸಮಾಧಾನವಾದೀತು.
ವೃಶ್ಚಿಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗಾವಕಾಶಗಳು ಒದಗಿ ಬಂದಾವು. ಹಿರಿಯರಿಗೆ ಉತ್ತಮ ವೈದ್ಯರಿಂದ ತಪಾಸಣೆ ಮಾಡಿದರೆ ಉತ್ತಮ. ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ಮಾಡತಕ್ಕದ್ದು. ಉದ್ಯೋಗದಲ್ಲಿ ಸ್ಪರ್ದೆ ಎದುರಾಗಲಿದೆ.
ಧನು: ಕುಟುಂಬಿಕವಾಗಿ ಸಮಾಧಾನಕರ ವಾತಾವರಣದಿಂದ ತುಸು ಮಾನಸಿಕ ಶಾಂತಿ ದೊರಕಲಿದೆ. ಕಾರ್ಯರಂಗದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರಕಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಖರ್ಚುವೆಚ್ಚ ಅಧಿಕವಾಗಲಿದೆ.
ಮಕರ: ಸೊಂಟದ ಕೆಳಭಾಗದಲ್ಲಿ ನೋವು ಕಾಡಲಿದೆ. ನಿಮ್ಮ ಸಂಬಂಧಿಕರಿಂದ ಉತ್ತಮ ಪ್ರೋತ್ಸಾಹವು ದೊರಕಲಿದೆ. ಅನಿರೀಕ್ಷಿತ ಧನಲಾಭ ಕಂಡು ಬರುವುದು. ಹಲವು ಸಮಯದಿಂದ ಬಾಕಿಯಾದ ಕೆಲಸ ಮುನ್ನಡೆದೀತು.
ಕುಂಭ: ಸ್ವಾಭಿಮಾನಿಗಳಾಗಿ ಗೌರವವನ್ನು ಉಳಿಸಿಕೊಳ್ಳಿರಿ. ಮಾನಸಿಕ ಚಂಚಲತೆ ಕಾಡಿದರೂ ನಿರಂತರವಾಗಿ ಧನಾಗಮನವಿದ್ದು ಸಮಾಧಾನವಾಗಲಿದೆ. ಎಲ್ಲಾ ವಿಚಾರದಲ್ಲಿ ಆದಷ್ಟು ಜಾಗ್ರತೆ ಮಾಡಿರಿ. ಹಳೆ ಕಾಯಿಲೆ ಪುನರಾಗಮನ.
ಮೀನ: ದೂರ ಸಂಚಾರದಲ್ಲಿ ಅಪಘಾತದ ಭಯ ಇರುವುದು. ನಿಮ್ಮಿಂದ ಉಪಕೃತರಾದವರೇ ನಿಮಗೆ ಸಮಸ್ಯೆ ತಂದಿಟ್ಟಾರು. ಕಚೇರಿ ವ್ಯವಹಾರದಲ್ಲಿ ಜಾಗ್ರತೆ ಮಾಡಿರಿ. ಕಾರ್ಮಿಕ ವರ್ಗಕ್ಕೆ ಅತೀ ಶ್ರಮವು ಕಂಡು ಬರಲಿದೆ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.