Udupi ಶ್ರೀಕೃಷ್ಣಾಷ್ಟಮಿ ಸಂದೇಶ: ಜಗದ್ರಕ್ಷಣೆಗಾಗಿ ಜಗದೋದ್ಧಾರಕನಲ್ಲಿ ಪ್ರಾರ್ಥನೆ


Team Udayavani, Aug 26, 2024, 1:24 AM IST

Udupi ಶ್ರೀಕೃಷ್ಣಾಷ್ಟಮಿ ಸಂದೇಶ: ಜಗದ್ರಕ್ಷಣೆಗಾಗಿ ಜಗದೋದ್ಧಾರಕನಲ್ಲಿ ಪ್ರಾರ್ಥನೆ

ಭಗವಂತ ಶ್ರೀಕೃಷ್ಣನಾಗಿ ಅವತರಿಸಿದ್ದು ಸಿಂಹ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರ ಕೂಡಿಬಂದಾಗ. ಶ್ರೀಕೃಷ್ಣಾವತಾರವಾದದ್ದು ಮಧ್ಯರಾತ್ರಿ ಚಂದ್ರೋದಯದ ಕಾಲದಲ್ಲಿ. ಈ ಹೊತ್ತಿನಲ್ಲಿ ಭಗವಂತನನ್ನು ಹಾರ್ದಿಕವಾಗಿ ಸ್ವಾಗತಿಸಬೇಕು.

ಶ್ರೀಕೃಷ್ಣನ ಅವತಾರದ ಉದ್ದೇಶವೇ “ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್‌| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||’ ಎಂದು ಹೇಳಿದಂತೆ ಜಗತ್ತಿನ ಉದ್ಧಾರಕ್ಕಾಗಿ. ಆತ ಜನ್ಮತಳೆದ ದಿನ, ಹೊತ್ತಿನಲ್ಲಿ ಆತನನ್ನು ಭಕ್ತಿಯಿಂದ ಸ್ಮರಿಸುವುದು ಮತ್ತು ಆತ ಕೈಗೊಂಡ ಕೆಲಸದಲ್ಲಿ ನಾವೂ ಕೈಜೋಡಿಸುವುದು ಅತ್ಯಂತ ಪವಿತ್ರವಾಗಿದೆ. ಶ್ರೀಕೃಷ್ಣನನ್ನು ಜ್ಞಾನದ ದೃಷ್ಟಿಯಿಂದ ಚಿಂತನೆ ನಡೆಸಬೇಕು. ಇದೇ ವೇಳೆ ಲೀಲೆಯ ನೆಲೆಯಲ್ಲಿಯೂ ಆಚರಿಸುವುದನ್ನು ಶ್ರೀಕೃಷ್ಣಲೀಲೋತ್ಸವ ಎನ್ನುತ್ತೇವೆ. ಇಂದು (ಸೋಮವಾರ) ಮಧ್ಯರಾತ್ರಿ 12.07 ಗಂಟೆಗೆ ಶ್ರೀಕೃಷ್ಣನಿಗೆ ಶುದ್ಧ ಜಲದಿಂದ ಅರ್ಘ್ಯವನ್ನು ಅರ್ಪಿಸಿ ಅವನನ್ನು ಮತ್ತು ಆತ ಜಗತ್ತಿನ ಉದ್ಧಾರಕ್ಕಾಗಿ ಪಟ್ಟ ಶ್ರಮವನ್ನು ನೆನಪಿಸಿಕೊಳ್ಳಬೇಕು. ಅರ್ಘ್ಯವೆಂದರೆ ಕೃತಜ್ಞತೆ ಸೂಚಕ. ಇದಕ್ಕೂ ಮುನ್ನ ಬಿಲ್ವ, ತುಳಸಿ, ಗರಿಕೆ, ಪಾರಿಜಾತ, ಕಮಲ ಪುಷ್ಪಗಳಿಂದ ಮೂರು ಹೊತ್ತು ಪೂಜಿಸಬೇಕು. ಇದನ್ನು ಸ್ತ್ರೀಪುರುಷ, ಬಾಲವೃದ್ಧರಾದಿಯಾಗಿ ಎಲ್ಲರೂ ಮಾಡಬೇಕು.

ಮರು ದಿನ ಶ್ರೀಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಲೀಲೋತ್ಸವವನ್ನು ಆಚರಿಸಬೇಕು. ಜಗತ್ತಿನ ಸೇವೆ ಮಾಡಲು ಇದೊಂದು ಅಪೂರ್ವ ಅವಕಾಶ. ದ್ವಾರಕೆಯಲ್ಲಿ ಸುಮಾರು 5,000 ವರ್ಷಗಳ ಹಿಂದಿದ್ದ ಐತಿಹಾಸಿಕವಾದ ಶ್ರೀಕೃಷ್ಣನ ಶಿಲಾವಿಗ್ರಹವನ್ನು ಆಚಾರ್ಯ ಮಧ್ವರು ಮೋಕ್ಷಪ್ರದವಾದ ಸಪ್ತಕ್ಷೇತ್ರಗಳಲ್ಲಿ ಮೊದಲನೆಯದಾದ ರೂಪ್ಯಪೀಠಪುರದಲ್ಲಿ (ಉಡುಪಿ) ಪ್ರತಿಷ್ಠಾಪಿಸಿ ಭಕ್ತರಿಗೆ ವಿಶೇಷ ಅವಕಾಶವನ್ನು ಕಲ್ಪಿಸಿಕೊಟ್ಟರು. ವರ್ಷಕ್ಕೊಂದಾವರ್ತಿ ಆಚರಿಸುವ ಈ ಹಬ್ಬವನ್ನು ಆಚರಿಸುವ ಕ್ರಮವನ್ನೂ “ಜಯಂತೀ ಕಲ್ಪ’ ಮತ್ತು “ಜಯಂತೀ ನಿರ್ಣಯ’ ಎಂಬ ಕೃತಿಯ ಮೂಲಕ ತೋರಿಸಿಕೊಟ್ಟರು. ಇಂದು ಇಡೀ ಜಗತ್ತಿನಲ್ಲಿ ಆತಂಕಗಳು ಎದ್ದು ಕಾಣುತ್ತಿದೆ. ಮನುಕುಲ ಎದುರಿಸುವ ಆತಂಕಗಳು ಕಡಿಮೆಯಾಗಲು ಕೃಷ್ಣಾವತಾರದ ಕೆಲಸ ಇಂದು ಅತ್ಯಗತ್ಯವಾಗಿದೆ. ಜಗತ್ತಿನ ಉದ್ಧಾರ ನಿರಂತರವಾಗಿ ನಡೆಯಲಿ ಎಂದು ಜಗದೋದ್ಧಾರಕನನ್ನು ಪ್ರಾರ್ಥಿಸೋಣ, ಹಾಗೆ ನಡೆಯೋಣ.
– ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ.

ಟಾಪ್ ನ್ಯೂಸ್

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DOOMAKETHU

Space Wonder: ಸೆ.27 ಸೂರ್ಯ, ಅ.12ಕ್ಕೆ ಭೂಮಿಗೆ ಸಮೀಪಿಸುವ ಧೂಮಕೇತು

Cylinder

Server Problem: ಗೃಹಬಳಕೆ ಅಡುಗೆ ಅನಿಲ ಪೂರೈಕೆ ವ್ಯತ್ಯಯ

Kapu-Police-Station

Manipura: ಎರಡು ಗುಂಪುಗಳ ನಡುವೆ ಗಲಾಟೆ; ಪ್ರಕರಣ ದಾಖಲು

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-yellapur

Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

police

Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.