25 ಕಾಂಗ್ರೆಸ್ ಅಭ್ಯರ್ಥಿಗಳಿಗೆ “ಬಿ- ಫಾರಂ’
Team Udayavani, Apr 14, 2023, 6:37 AM IST
ಬೆಂಗಳೂರು: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ ಕಾಂಗ್ರೆಸ್ನ 25ಕ್ಕೂ ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಿಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಿಸಿ ಗೆಲುವಿಗೆ ಶುಭ ಕೋರಿದರು.
ಇದಕ್ಕೂ ಮುನ್ನ ದೇವರ ಮೊರೆಹೋದ ಕೆಪಿಸಿಸಿ ಅಧ್ಯಕ್ಷರು, ಕಚೇರಿಯ ತಮ್ಮ ಕೊಠಡಿಯಲ್ಲಿದ್ದ ನೊಣವಿನಕೆರೆ ಅಜ್ಜಯ್ಯ ಫೋಟೋಗೆ ನಮಿಸಿದರು. ಅನಂತರ ಎಲ್ಲ ಫಾರಂಗಳನ್ನು ಸ್ವಲ್ಪ ಹೊತ್ತು ದೇವರ ಫೋಟೋಗಳ ಮುಂದಿಟ್ಟು ಪ್ರಾರ್ಥಿಸಿದರು. ಅನಂತರ ಕ್ಷಣಕಾಲ ಕಣ್ಣಿಗೊತ್ತಿ ಒಬ್ಬೊಬ್ಬ ಅಭ್ಯರ್ಥಿಗಳನ್ನು ಕರೆದು ವಿತರಣೆ ಮಾಡಿ, “ಗುಡ್ ಲಕ್…’, “ಆಲ್ ದಿ ಬೆಸ್ಟ್’ ಎಂದು ಬೆನ್ನುತಟ್ಟಿದರು. ಇದಕ್ಕೆ ಪ್ರತಿಯಾಗಿ ಫಾರಂ ಸ್ವೀಕರಿಸಿದ ಬಹುತೇಕ ಉಮೇದುವಾರರು, ಅಧ್ಯಕ್ಷರಿಗೆ ನಮಸ್ಕರಿಸಿ ಥ್ಯಾಂಕ್ಸ್ ಹೇಳಿದರೆ, ಕೆಲವರು ಕಾಲಿಗೆರಗಿ ಧನ್ಯವಾದ ಸಲ್ಲಿಸಿದರು. ಮೊದಲ ಬಿ.ಫಾರಂ ಅನ್ನು ಹೆಬ್ಟಾಳ ಶಾಸಕ ಬೈರತಿ ಸುರೇಶ್ಗೆ ನೀಡಿದರು.
ಮೊದಲ ದಿನ ಚಾಮರಾಜಪೇಟೆ ಯಿಂದ ಸ್ಪರ್ಧಿಸಲಿರುವ ಜಮೀರ್ ಅಹಮ್ಮದ್ ಖಾನ್, ಚಿತ್ತಾಪುರದ ಪ್ರಿಯಾಂಕ ಖರ್ಗೆ, ಹೆಬ್ಟಾಳದ ಬೈರತಿ ಸುರೇಶ್, ಆರ್.ಆರ್. ನಗರದ ಕುಸುಮಾ ಹನುಮಂತರಾಯಪ್ಪ, ಗೋವಿಂದರಾಜನಗರದ ಪ್ರಿಯಕೃಷ್ಣ, ಶಿವಾಜಿನಗರದ ರಿಜ್ವಾನ್ ಅರ್ಷದ್, ಮಧುಗಿರಿಯ ಕೆ.ಎನ್.ರಾಜಣ್ಣ, ಕೆಜಿಎಫ್ಗೆ ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಬಸವನಗುಡಿಗೆ ಯು.ಬಿ. ವೆಂಕಟೇಶ್ ಸೇರಿದಂತೆ ಹಲವು ಘಟಾನುಘಟಿಗಳು ಬಿ-ಫಾರಂ ಪಡೆದರು. ಶುಕ್ರವಾರ ಇನ್ನೂ ಕೆಲವರು ಬಿ-ಫಾರಂ ಪಡೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ
PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ
Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ
Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.