ಮುಸ್ಲಿಂ ಕುಟುಂಬದಿಂದಲೇ ಠೇವಣಿ!


Team Udayavani, Apr 21, 2023, 12:51 PM IST

tdy-11

ಚಿತ್ರದುರ್ಗ: ಚುನಾವಣೆಗಳಲ್ಲಿ ಒಬ್ಬೊಬ್ಬ ನಾಯಕರದ್ದು ಒಂದೊಂದು ನಂಬಿಕೆಯಿರುತ್ತದೆ. ಆ ನಂಬಿಕೆ ಗೆಲುವಿನ ಗುಟ್ಟಾಗಿರುತ್ತದೆ. ಇಂಥದ್ದೇ ಒಂದು ನಂಬಿಕೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಎಚ್‌.ತಿಪ್ಪಾರೆಡ್ಡಿ ರಾಜಕೀಯ ಜೀವನದಲ್ಲೂ ಇದೆ.

ಅದೇ ರೀತಿಯಲ್ಲಿ ಜಿ.ಎಚ್‌.ತಿಪ್ಪಾರೆಡ್ಡಿ ಪ್ರತಿ ಚುನಾವಣೆ ಯಲ್ಲೂ ಒಂದು ಮುಸ್ಲಿಂ ಕುಟುಂಬದಿಂದ ಠೇವಣಿ ಕಟ್ಟಿಸಿಕೊಳ್ಳುತ್ತಾರೆ.

ತಿಪ್ಪಾರೆಡ್ಡಿ ಎದುರಿಸಿರುವ ಕಳೆದ 6 ಚುನಾವಣೆಗಳಿಗೂ ಟಿಎಂಕೆ ಫ್ಯಾಮಿಲಿಯ ಮಹಮ್ಮದ್‌ ಜಕ್ರಿಯಾ ಅವರೇ ಮೊದಲ ಚುನಾವಣೆಯಿಂದ ಇಂದಿನ ಚುನಾವಣೆವರೆಗೆ ಠೇವಣಿ ಕಟ್ಟುತ್ತಿದ್ದಾರೆ.

ಕಳೆದ 35 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಜಿ.ಎಚ್‌.ತಿಪ್ಪಾರೆಡ್ಡಿ ಸತತ 6 ಚುನಾವಣೆಗಳನ್ನು ಎದುರಿಸಿದ್ದು, ಒಮ್ಮೆ ಮಾತ್ರ ಸೋತಿದ್ದಾರೆ. ಈಗ ತಿಪ್ಪಾರೆಡ್ಡಿ ಎದುರಿಸುತ್ತಿರುವುದು ಸತತ ಏಳನೇ ಚುನಾವಣೆ. ಈ ಚುನಾವಣೆಗೂ ಸೂಚಕರಾಗಿ ಆಗಮಿಸಿದ್ದ ಮಹಮ್ಮದ್‌ ಜಕ್ರಿಯಾ ಅವರು ಠೇವಣಿಯೊಂದಿಗೆ ಬಂದಿದ್ದರು. ಆದರೆ, ಮೊದಲೇ ಒಂದು ಸೆಟ್‌ ನಾಮಪತ್ರ ಸಲ್ಲಿಸಿದ್ದ ಜಿ.ಎಚ್‌.ತಿಪ್ಪಾರೆಡ್ಡಿ, ಠೇವಣಿ ಹಣವನ್ನು ಚುನಾವಣಾ ಆಯೋಗಕ್ಕೆ ತುಂಬಿದ್ದರು.

ಈ ಬಗ್ಗೆ ಉದಯವಾಣಿ’ ಜತೆ ಮಾತನಾಡಿದ ಮಹಮ್ಮದ್‌ ಜಕ್ರಿಯಾ ಸಾಬ್‌, ತಿಪ್ಪಾರೆಡ್ಡಿ ಅವರ ಮೊದಲ ಚುನಾವಣೆಯಿಂದಲೂ ನಾವು ಸೂಚಕರು ಹಾಗೂ ಠೇವಣಿ ಕಟ್ಟುತ್ತೇವೆ. ಈ ಚುನಾವಣೆಗೆ ಅವರು ಮೊದಲೇ ಹಣ ತುಂಬಿದ್ದರೂ ಈಗ ತಂದಿರುವ ಹಣ ಅವರಿಗೆ ಸೇರಬೇಕು ಎಂದರು.

ಟಿಎಂಕೆ ಫ್ಯಾಮಿಲಿ ಅಂದ್ರೆ ತುರುವನೂರು ಮಹಮ್ಮದ್‌ ಖಾಸೀಂ ಎಂದರ್ಥ. ಜಿ.ಎಚ್‌. ತಿಪ್ಪಾರೆಡ್ಡಿ ಅವರ ಮೂಲ ತುರುವನೂರು ಗ್ರಾಪಂ ವ್ಯಾಪ್ತಿಯ ಕಡಬನಕಟ್ಟೆ. ಇವರದ್ದು ಜಿಎಚ್‌ಆರ್‌ ಫ್ಯಾಮಿಲಿ. ಅಲ್ಲಿಂದ ಈ ಎರಡೂ ಕುಟುಂಬಗಳ ಹಿರಿಯರು ಒಟ್ಟಿಗೆ ಚಿತ್ರದುರ್ಗಕ್ಕೆ ಬಂದು ನೆಲೆಸಿ ವ್ಯವಹಾರ ಶುರು ಮಾಡುತ್ತಾರೆ. ಹಿಂದಿನ ತಲೆಮಾರಿನಿಂದಲೂ ಎರಡೂ ಕುಟುಂಬಗಳ ನಡುವೆ ಅಣ್ಣ-ತಮ್ಮಂದಿರ ವಿಶ್ವಾಸವಿದೆ.

ಜಿ.ಎಚ್‌.ತಿಪ್ಪಾರೆಡ್ಡಿ ಅವರ 7 ಚುನಾವಣೆಗ ಳಿಗೂ ಸೂಚಕರಾಗಿದ್ದೇವೆ. ಪ್ರತಿ ಸಲವೂ ಡಿಪಾಸಿಟ್‌ ಕಟ್ಟುತ್ತಿದ್ದೇವೆ. ಎರಡೂ ಕುಟುಂಬಗಳು ಒಂದೇ ಮನೆಯವರಂತೆ ಇದ್ದೇವೆ. ಹಾಗಾಗಿ ಆ ಸ್ನೇಹ ಹಾಗೇ ಉಳಿದುಕೊಂಡು ಬಂದಿದೆ. ಮಹಮ್ಮದ್‌ ಜಕ್ರಿಯಾ ಸಾಬ್‌

ತಿಪ್ಪೇಸ್ವಾಮಿ ನಾಕೀಕೆರೆ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.