Karnataka poll 2023; ಡೈಲಿ ಡೋಸ್- ಸಸಿ ತಂದರೆ ಸಾಕೇ ?ಬುಡಕ್ಕೆ ಗೊಬ್ಬರ ಬೇಕಲ್ವಾ?

ನಾವೆಲ್ಲ ಆದೆವು ಅಂದ್ರೂ ನಮ್ಮ ವೋಟು ನಾವು ಹಾಕಿಕೊಳ್ಳಬೇಕಷ್ಟೇ

Team Udayavani, Apr 15, 2023, 1:05 PM IST

Karnataka poll; ಡೈಲಿ ಡೋಸ್- ಸಸಿ ತಂದರೆ ಸಾಕೇ ?ಬುಡಕ್ಕೆ ಗೊಬ್ಬರ ಬೇಕಲ್ವಾ?

“ಈ ಹೊಸ ಮುಖ, ಹಳೆ ಮುಖ, ಪರಿಚಿತ ಮುಖ, ಅಪರಿಚಿತ ಮುಖ’- ಇವೆಲ್ಲ ಏನು ಗುರುಗಳೇ? ಈ ಎಲೆಕ್ಷನ್‌ ನಲ್ಲಿ ಎಂದು ಕೇಳಿದ ಸೀತಾರಾಮು. ಹದಿನೈದು ದಿನಗಳಿಂದ ಈ ಪದಗಳನ್ನು ಕೇಳಿ ಕೇಳಿ ಸೀತಾರಾಮು ಕಂಗೆಟ್ಟು ಹೋಗಿದ್ದ. ಈ ಹೊಸ ಮುಖ, ಹಳೆ ಮುಖವನ್ನೇನೋ ಅರ್ಥ ಮಾಡಿಕೊಳ್ಳಬಹುದು,. ಆದರೆ ಈ ಪರಿಚಿತ, ಅಪರಿಚಿತ ಅಂದರೆ ಹೇಗೆ ಎಂಬುದು ಅವನ ಪ್ರಶ್ನೆಯ ಮೂಲವಾಗಿತ್ತು. ಒಂದು ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಇರ್ತಾರೆ ಅಂದುಕೊಂಡರೆ ಅವರನ್ನೆಲ್ಲ ನೆನಪಾಗಿಟ್ಟುಕೊಳ್ಳೋದಕ್ಕೆ ಆಗುತ್ತಾ ಪರಿಚಯ ಇರುವುದಕ್ಕೆ ಎಂದು ಬೇರೆ ತನ್ನ ಮಾತಿಗೆ ಸೇರಿಸಿದ ಸೀತಾರಾಮು.

ಎಲ್ಲವನ್ನೂ ಕೇಳಿಸಿಕೊಂಡ ಶೀನಪ್ಪನವರು ಮೆಲ್ಲಗೆ ಇನ್ನೇನಿದ್ದರೂ ಹೇಳಿಬಿಡಲಿ ಅಂತ ಸುಮ್ಮನೇ ಇದ್ದರು. ಈ ಮೌನವನ್ನು ಅರಿತ ಸೀತಾರಾಮು ಮಾತು ಮುಂದುವರಿಸಿದ. “ಈ ಪರಿಚಿತರೇ ಕ್ಯಾಂಡಿಡೇಟ್‌ ಆಗಬೇಕು ಅಂದ್ರೆ ನೀವೇ ಆಗಬೇಕು. ಇಲ್ಲವೇ ನಾನು ಆಗಬೇಕು. ಅದೂ ಇಲ್ಲದೇ ಹೋದರೆ ಪಕ್ಕದಮನೆಯವರು ಆಗಬೇಕು. ನಾವೆಲ್ಲ ಆದೆವು ಅಂದ್ರೂ ನಮ್ಮ ವೋಟು ನಾವು ಹಾಕಿಕೊಳ್ಳಬೇಕಷ್ಟೇ’ ಎಂದ. ಶೀನಪ್ಪನವರ ರಂಗ ಪ್ರವೇಶವಾಯಿತು.

“ಅದು ರಾಜಕೀಯ ಭಾಷೆ ಕಣಯ್ಯ. ಈ ಹೊಸ ಮುಖವೆಂದರೆ ಇದುವರೆಗೂ ಪಟ್ಟು ಕಲಿಯದವರು ಅಥವಾ ಎಲೆಕ್ಷನ್‌ಗೆ ನಿಲ್ಲದವರು ಅಂತ. ಹಳೆ ಮುಖ ಅಂದರೆ ಈಗಾಗಲೇ ನಾಲ್ಕು, ಐದು, ಆರು, ಏಳು, ಎಂಟು ಬಾರಿ ಎಲೆಕ್ಷನ್‌ ಗೆ ನಿಂತು ಸೋತೋ ಅಥವಾ ಗೆಧ್ದೋ ಅನುಭವ ಉಳ್ಳವರು ಕಣಯ್ಯ. ಅವರಿಗೆ ಯಾವ ಪಟ್ಟು ಎಲ್ಲಿ ಹಾಕಬೇಕು ಅಂತಾ ಗೊತ್ತಿರುತ್ತೆ. 20-30-40 ವರ್ಷಗಳಿಂದ ಪಂಚ ವಾರ್ಷಿಕ ಯೋಜನೆ ರೀತಿಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಗೆಲ್ಲುವುದನ್ನು ಪ್ರಾಕ್ಟ್ರೀಸ್‌ ಮಾಡುತ್ತಿದ್ದರು. ಕೆಲವೊಮ್ಮೆ ಗೆಲುತ್ತಿದ್ದರು, ಇನ್ನು ಕೆಲವೊಮ್ಮೆ ಮಕಾಡೆ ಮಲಗ್ತಾ ಇದ್ದಿದ್ದರು.

ಇವರ ಜತೆ ಪರಿಚಿತ ಮುಖ ಅಂದರೆ ಈ ಹೊಸ ಮತ್ತು ಹಳೆಯ ಕಾಂಬಿನೇಷನ್‌ ಕಣೋ. ಅಂದರೆ ಹಳೆ ಮುಖನಾ ಅಂದರೆ ಹೌದು ಅಷ್ಟೊಂದು ಹಳತಲ್ಲ, ಹೊಸತಾ ಅಂದರೆ ಹೌದು, ಅದೂ ತೀರಾ ಹೊಸತಲ್ಲ. ಒಂದೋ-ಎರಡೋ ಬಾರಿ ಪ್ರಾಕ್ಟೀಸ್‌ ಮಾಡಿ ಗೆಧ್ದೋ-ಸೋತೋ ಜನರಿಗೆ ಪರಿಚಿತವಾಗಿರ್ತಾರಲ್ಲ’. ಅದ್ಸರಿ. ಇದರ ಮಧ್ಯೆ “ಈ ಅಪರಿಚಿತ ಮುಖವೆಂದರೆ ಹೇಗೆ? ಎಂದು ಉಳಿದವಗಳೆಲ್ಲದಕ್ಕೂ ಸಿಕ್ಕಾ (ಮುದ್ರೆ) ಒತ್ತಿದಂತೆ’ ಹೇಳಿದ.

“ಲೋ ತಮ್ಮಾ, ರಾಜಕೀಯದಲ್ಲಿ ಹಳತು, ಪರಿಚಿತ, ಹೊಸತು ಎಲ್ಲವೂ ಕೆಲವೊಮ್ಮೆ ಅಪರಿಚಿತರ ಎದುರು ಪಲ್ಟಿ ಹೊಡೀತಾವೆ. ಯಾಕೆಂದರೆ ಬರೀ ಸಸಿ ಸಿಕ್ಕರೆ ಸಾಲದಣ್ಣ, ಅದರ ಬುಡಕ್ಕೆ ಗೊಬ್ಬರ ಕೊಡೋರೂ ಬೇಕಲ್ವಾ?’ ಎಂದರು ಶೀನಪ್ಪ.

-ಡಾ| ಗಂಪತಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka BJP: ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ನುಂಗಲಾರದ ತುತ್ತು?

Karnataka BJP: ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ನುಂಗಲಾರದ ತುತ್ತು?

By Poll:ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್‌ ಬಿಜೆಪಿ ತೆಕ್ಕೆಗೆ

By Poll: ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್‌ ಬಿಜೆಪಿ ತೆಕ್ಕೆಗೆ

Delhi Polls Results 2025:ದೆಹಲಿಯಲ್ಲಿ ಸತತ 3ನೇ ಅವಧಿಗೂ ಕಾಂಗ್ರೆಸ್‌ ಶೂನ್ಯ ಸಂಪಾದನೆ!?

Delhi Polls Results 2025:ದೆಹಲಿಯಲ್ಲಿ ಸತತ 3ನೇ ಅವಧಿಗೂ ಕಾಂಗ್ರೆಸ್‌ ಶೂನ್ಯ ಸಂಪಾದನೆ!?

Delhi Assembly Election: ದೆಹಲಿ ಮತ ಎಣಿಕೆ ಆರಂಭ; ಯಾರ ಪಾಲಾಗಲಿದೆ ದಿಲ್ಲಿಯ ಗದ್ದುಗೆ?

Delhi Assembly Election: ದೆಹಲಿ ಮತ ಎಣಿಕೆ ಆರಂಭ; ಯಾರ ಪಾಲಾಗಲಿದೆ ದಿಲ್ಲಿಯ ಗದ್ದುಗೆ?

Voting in Delhi today: A triangular battle for the Capital

Delhi Election: ದಿಲ್ಲಿಯಲ್ಲಿಂದು ಮತದಾನ: ಕುರ್ಚಿಗಾಗಿ ತ್ರಿಕೋನ ಕದನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.