![Santhe-last](https://www.udayavani.com/wp-content/uploads/2025/02/Santhe-last-415x249.jpg)
![Santhe-last](https://www.udayavani.com/wp-content/uploads/2025/02/Santhe-last-415x249.jpg)
Team Udayavani, Dec 6, 2018, 12:45 PM IST
ಎಂಡೋಪೀಡಿತ ಕಥೆಯನ್ನು ಮುಖ್ಯವಾಗಿಟ್ಟು ಸಿದ್ಧಗೊಳಿಸಿರುವ ‘ಬಲಿಪ’ ಸಿನೆಮಾದ ಶೂಟಿಂಗ್ ಇದೀಗ ಕೊನೆಯ ಹಂತದಲ್ಲಿದೆ. ಹೇಮಂತ್ ಸುವರ್ಣ ಅವರ ಬಲಿಪ ಕೋಸ್ಟಲ್ವುಡ್ನಲ್ಲಿ ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ. ಪ್ರಸಾದ್ ಅರುವ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾಕ್ಕೆ ರಕ್ಷಿತ್ ಕೆಮರಾದಲ್ಲಿ ಕೈಜೋಡಿಸಿದ್ದಾರೆ. ಹರ್ಷಿತ್, ಅಂಕಿತಾ, ಪವಿತ್ರಾ ಸೇರಿದಂತೆ ಯುವ ಬಳಗದ ಈ ಸಿನೆಮಾದಲ್ಲಿ ಅರವಿಂದ ಬೋಳಾರ್ ಮತ್ತೊಮ್ಮೆ ನಗಿಸಲು ರೆಡಿಯಾಗಿದ್ದಾರೆ. ರಂಜನ್ ಸೇರಿದಂತೆ ಇನ್ನಷ್ಟು ಕಲಾವಿದರು ಈ ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ.
ಒಂದೆರಡು ದಿನದಲ್ಲಿ ಶೂಟಿಂಗ್ ಪೂರ್ಣಗೊಳಿಸುವ ಬಲಿಪನ ಮುಂದಿನ ತಯಾರಿ ಕೂಡ ಬೇಗನೆ ನಡೆಯಲಿದೆ. ಅಂತೂ, ಮುಂದಿನ ವರ್ಷ ಪ್ರಾರಂಭದಲ್ಲಿಯೇ ಬಲಿಪನನ್ನು ಕೋಸ್ಟಲ್ವುಡ್ನಲ್ಲಿ ಪರಿಚಯಿಸುವ ಹುರುಪಿನಲ್ಲಿ ಚಿತ್ರತಂಡವಿದೆ.
You seem to have an Ad Blocker on.
To continue reading, please turn it off or whitelist Udayavani.