ವ್ಹಾವ್‌ ಎಂಬಂತಿದೆ ಬರೋಡಾದ ವಡೋದರ


Team Udayavani, May 23, 2019, 6:00 AM IST

tour3

ಗುಜರಾತಿನ ಐತಿಹಾಸಿಕ ನಗರಗಳಲ್ಲಿ ಒಂದಾಗಿರುವ ಬರೋಡಾದ ವಡೋದರ ಪ್ರೇಕ್ಷಣೀಯ ತಾಣಗಳಲ್ಲಿ ಒಂದು. ಅನೇಕ ಚಾರಿತ್ರಿಕ ಸ್ಥಳಗಳು ಇಲ್ಲಿದ್ದರೂ ಸರಕಾರದ ನಿರ್ಲಕ್ಷ್ಯದಿಂದಾಗಿ ಅನಾಥವಾದಂತಿದ್ದು, ಪ್ರವಾಸಿಗರ ಮನಕಲಕುವಂತಿದೆ.

ಗುಜರಾತಿನಲ್ಲಿರುವ ಬರೋಡಾದ ವಡೋದರದ ಬಗ್ಗೆ ಸಾಕಷ್ಟು ಕೇಳಿ ತಿಳಿದಿದ್ದರಿಂದ ಇಲ್ಲಿಗೊಮ್ಮೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಖುಷಿಯಿಂದ ಹೊರಟು ನಿಂತೆ.

ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಇಲ್ಲಿ ವಾವ್‌ ಎಂದು ಕರೆಯಲ್ಪಡುವ ಮೆಟ್ಟಿಲು ಬಾವಿಗಳು ಆಕರ್ಷಣೀಯವಾಗಿವೆ. ಬರೋಡ ನಗರದ ಸುತ್ತಮುತ್ತಲೂ ಇಂತಹ ಸುಮಾರು 14 ವಾವ್‌ ಗಳು ಕಂಡು ಬರುತ್ತವೆ. ಮುಖ್ಯವಾಗಿ ಖಂಡೇರಾವ್‌ ವಾವ್‌, ಕೊಯಾಲಿ ವಾವ್‌, ತಾಂಡಲ್ಜ ವಾವ್‌, ನಾವ್ಲಕೀ ವಾವ್‌, ಹೇತಾಂಪುರ ವಾವ್‌, ಕೆಳಾಂಪುರ ವಾವ್‌, ಸಯಾಜಿ ವಾವ್‌, ಸೇವಾಸೀ ವಾವ್‌, ಸಪ್ತಮುಖೀ ವಾವ್‌, ದುಮದ್‌ ಚೌಕಿxà ವಾವ್‌, ಅಸೋಜ್‌ ವಾವ್‌, ಗೌರಾÌ ವಾವ್‌, ಕಡಕ್‌ ಬಜಾರ್‌ ವಾವ್‌ ಇತ್ಯಾದಿ.

ಗುರ್ಜರ್‌ ಆಳಿಕೆಯನ್ನು ಸಾರುವ ಏಕೈಕ ಐತಿಹಾಸಿಕ ತಾಣವೆಂದು ಗುರುತಿಸಲ್ಪಡುವ ನವಾಲಾಕಿಯ ವಾವ್‌, ಮೆಟ್ಟಿಲು ಬಾವಿಯನ್ನು 15ನೇ ಶತಮಾನದಲ್ಲಿ ಸುಲ್ತಾನ್‌ ಮುಜಾಪುರ್‌ ಷಾನ ಕಾಲದಲ್ಲಿ ರಚಿಸಲ್ಟಟ್ಟಿದೆ ಎಂಬುದು ಇಲ್ಲಿ ರುವ ಶಾಸನದಿಂದ ತಿಳಿದುಬರುತ್ತದೆ. ಇದರಲ್ಲಿ ಆಗಿನ ಕಾಲದ ಇನ್ನಷ್ಟು ಮಾಹಿತಿಗಳಿದ್ದು, ಗುರ್ಜರ್‌ ಸಾಮ್ರಾಜ್ಯದ ಸೂರ್ಯರಾಜ್‌ ಕಲಚೂರಿ ಇದನ್ನು ನಿರ್ಮಿಸಿದ್ದನು. ಒಂಬತ್ತು ಲಕ್ಷ ನಾಣ್ಯಗಳನ್ನು ಇದಕ್ಕಾಗಿ ವಿನಿಯೋಗಿಸಿದ್ದರಿಂದ ನವಲಾಕಿ ವಾವ್‌ ಎಂದು ಹೆಸರಾಯಿತು ಎಂಬ ಉಲ್ಲೇಖವಿದೆ. ಇದು ಲಕ್ಷ್ಮೀ ವಿಲಾಸ್‌ ಅರಮನೆಯ ಸರಹದ್ದಿನಲ್ಲಿದ್ದು, ಮಹಾರಾಜ ಸಯ್ನಾಜಿರಾವ್‌ ಇದನ್ನು ಅಭಿವೃದ್ಧಿಗೊಳಿಸಿದ್ದ. ಮೊದಲು ಅರಮನೆಗೆ ಇದರ ನೀರನ್ನು ಬಳಸಲಾಗುತ್ತಿತ್ತು ಎಂಬ ಉಲ್ಲೇ ಖವೂ ಇದೆ.

ಸೇವಾಸಿ ವಾವ್‌ ಸುಮಾರು 500 ವರ್ಷಗಳಷ್ಟು ಪ್ರಾಚೀನ ಮತ್ತು ಅತ್ಯಂತ ಸುಂದರವಾದ ಮೆಟ್ಟಿಲು ಬಾವಿ. ಸುಲ್ತಾನ್‌ ಮಹಮೂದ್‌ ಬೇಗಡನ ಕಾಲದಲ್ಲಿ ನಿರ್ಮಿಸಲ್ಪಟ್ಟಿತು. ಆ ಕಾಲದ ಸಂತ ವಿದ್ಯಾಧರನ ಸ್ಮರಣಾರ್ಥವಾಗಿ ಇದನ್ನು ವಿದ್ಯಾಧರ್‌ ವಾವ್‌ ಎಂದು ಹೆಸರಿಸಲಾಗಿದೆ.ನೆಲ ಮಟ್ಟದಿಂದ ಕೆಳಗೆ ಏಳು ಅಂತಸ್ತುಗಳನ್ನು ಹೊಂದಿದ್ದು,ಕೆತ್ತನೆಯುಳ್ಳ ನೂರಾರು ಆಕರ್ಷಣೀಯ ಕಂಬಗಳು ಪ್ರತಿ ಅಂತಸ್ತಿನಲ್ಲೂ ಇದೆ. ಮಳೆ ನೀರಿನ ಸಂಗ್ರಹಕ್ಕಾಗಿ ಈ ಬಾವಿಯನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

13ನೇ ಶತಮಾನದ ಸಪ್ತಮುಖೀ ವಾವ್‌ ವಡೋದರದ ದಾಭೋಯ್‌ಲ್ಲಿದೆ. 200 ವರ್ಷ ಹಳೆಯ ತಾಂಡಲ್ಜಾ ಮೆಟ್ಟಿಲು ಬಾವಿಯ ನೀರನ್ನು ಇತ್ತೀಚೆಗಿನವರೆಗೂ ಬಳಸಲಾಗು ತ್ತಿತ್ತು ಎನ್ನುತ್ತಾರೆ ಸ್ಥಳೀಯರು. ಆದರೆ ಈಗ ಮಾತ್ರ ಇದು ತ್ಯಾಜ್ಯ ಸಂಗ್ರಹ ತಾಣದಂತಾಗಿದೆ. ಇಲ್ಲಿನ ಸ್ತಂಭಗಳಲ್ಲಿ ಕೆತ್ತಲಾಗಿರುವ ಶಿಲ್ಪ,ಶಾಸನಗಳು ಸರಕಾರದ ನಿರ್ಲಕ್ಷ್ಯಕ್ಕೆ ಒಳ ಗಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಪುರಾತನ ಕಾಲದ ಮೆಟ್ಟಿಲು ಬಾವಿಯ ಅದ್ಭುತ ವಿನ್ಯಾಸ ಕಂಡು ಅಚ್ಚರಿಯಾಗುವುದು ಸಹಜ. ಒಟ್ಟಿನಲ್ಲಿ ಐತಿಹಾಸಿಕ ಮಹತ್ವ ವನ್ನು ಸಾರುವ ಇಂಥ ಸ್ಥಳಕ್ಕೆ ಸರಿಯಾದ ರಕ್ಷಣೆ ಸಿಗದೇ ಇರು ವುದನ್ನು ಕಂಡು ಬೇಸರದ ಮನಸ್ಸಿನಿಂದಲೇ ಅಲ್ಲಿಂದ ಊರಿ ನತ್ತ ಮರಳಬೇಕಾಯಿತು.

ರೂಟ್‌ ಮ್ಯಾಪ್‌
-ಮಂಗಳೂರಿನಿಂದ ವಡೋದರಕ್ಕೆ 1,293 ಕಿ.ಮೀ. ದೂರ
-  ರೈಲು,ಬಸ್‌,ವಿಮಾನ ಸೌಲಭ್ಯವಿದೆ.
- ಪ್ರವಾಸಿ ತಾಣವಾಗಿರುವುದರಿಂದ ಮೊದಲೇ ಬುಕ್ಕಿಂಗ್‌ ಮಾಡಿದರೆ ಊಟ, ವಸತಿ ಸಮಸ್ಯೆಯಿಲ್ಲ.
-  ಹತ್ತಿರದಲ್ಲೇ ಇದೆ ಲಕ್ಷ್ಮೀ ವಿಲಾಸ ಅರಮನೆ.
–  ಬರೋಡ ಮ್ಯೂಸಿಯಂ, ಸಯ್ನಾಜಿ ಭಾಗ್‌ಗೂ ಭೇಟಿ ನೀಡಬಹುದು.

-ಜಲಂಚಾರು ರಘುಪತಿ ತಂತ್ರಿ

ಟಾಪ್ ನ್ಯೂಸ್

Vijayapura ತೆಪ್ಪ ದುರಂತ ಪ್ರಕರಣ: ರಕ್ಷಕರ ಮೊಬೈಲ್ ಸಮೇತ ಪರಾರಿಯಾದರೆ ಪೊಲೀಸರು ?

Vijayapura ತೆಪ್ಪ ದುರಂತ ಪ್ರಕರಣ: ರಕ್ಷಕರ ಮೊಬೈಲ್ ಸಮೇತ ಪರಾರಿಯಾದರೆ ಪೊಲೀಸರು ?

Jharkhand: ಚಂಪೈ ಸೊರೇನ್‌ ರಾಜೀನಾಮೆ…ಹೇಮಂತ್‌ ಸೊರೇನ್ ಮತ್ತೆ ಜಾರ್ಖಂಡ್‌ ಸಿಎಂ?

Jharkhand: ಚಂಪೈ ಸೊರೇನ್‌ ರಾಜೀನಾಮೆ…ಹೇಮಂತ್‌ ಸೊರೇನ್ ಮತ್ತೆ ಜಾರ್ಖಂಡ್‌ ಸಿಎಂ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

3-chikkamagaluru

ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Bridges collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bridges Collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Vijayapura ತೆಪ್ಪ ದುರಂತ ಪ್ರಕರಣ: ರಕ್ಷಕರ ಮೊಬೈಲ್ ಸಮೇತ ಪರಾರಿಯಾದರೆ ಪೊಲೀಸರು ?

Vijayapura ತೆಪ್ಪ ದುರಂತ ಪ್ರಕರಣ: ರಕ್ಷಕರ ಮೊಬೈಲ್ ಸಮೇತ ಪರಾರಿಯಾದರೆ ಪೊಲೀಸರು ?

Jharkhand: ಚಂಪೈ ಸೊರೇನ್‌ ರಾಜೀನಾಮೆ…ಹೇಮಂತ್‌ ಸೊರೇನ್ ಮತ್ತೆ ಜಾರ್ಖಂಡ್‌ ಸಿಎಂ?

Jharkhand: ಚಂಪೈ ಸೊರೇನ್‌ ರಾಜೀನಾಮೆ…ಹೇಮಂತ್‌ ಸೊರೇನ್ ಮತ್ತೆ ಜಾರ್ಖಂಡ್‌ ಸಿಎಂ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

5-tavaragera

Tavaragera: ಕಾರು ಅಡ್ಡಗಟ್ಟಿ ಹಾಡಹಗಲೇ 5 ಲಕ್ಷ ರೂ. ದರೋಡೆ !

4-panaji

ಯುವಪೀಳಿಗೆ ಪತ್ರಿಕೆ ಓದುವ ಆಸಕ್ತಿ ಬೆಳೆಸುವ ರೀತಿ ಬರವಣಿಗೆ ಪತ್ರಕರ್ತರಲ್ಲಿರಬೇಕು : ಸಾವಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.