ಕೀಳರಿಮೆಯಿಂದ ಮುಕ್ತಿ ಪಡೆಯಿರಿ


Team Udayavani, Apr 1, 2019, 1:24 PM IST

01-April-9

ಕೀಳರಿಮೆಗಳು ಕೆಲವೊಮ್ಮೆ ಮನುಷ್ಯ ಜೀವನದ ಮೇಲೆ ಕರಿನೆರಳನ್ನು ಬೀರುತ್ತವೆ. ಇಂತಹ ಭಾವನೆಗಳು ಬೆಳೆಯುತ್ತಿರುವ ಪ್ರತಿಭೆಯ ಚಿಗುರನ್ನು ಚಿವುಟುತ್ತವೆ. ಹಾಗಾದರೆ ಏನು ಕೀಳರಿಮೆ ಅಥವ ಇನ್‌ ಫೀರಿಯಾರಿಟಿ ಕಾಂಪ್ಲೆಕ್ಸ್‌ ಎಂದರೆ? ತನ್ನ ಸಾಮರ್ಥ್ಯದ ಅರಿವಿದ್ದರೂ, ನಕಾರಾತ್ಮಕ ಭಾವನೆಯಿಂದ ಅಳೆದು ತೂಗುವುದರಿಂದ ಇಂತಹ ಸಮಸ್ಯೆ
ಸೃಷ್ಟಿಯಾಗುತ್ತದೆ. ಮನಶಾಸ್ತ್ರದಲ್ಲಿ ಉಲ್ಲೇಖೀಸಿದಂತೆ ಇಂತಹ ನಡೆ ನಮ್ಮ
ಸಂತೋಷವನ್ನು ಕಿತ್ತುಕೊಳ್ಳುತ್ತದೆ. ಬಹಳಷ್ಟು ಮಂದಿ ಇಂತಹ ಮನೋ ವೈಕಲ್ಯದಿಂದ ಬಳಲುತ್ತಿರುತ್ತಾರೆ. ಇದಕ್ಕೆ ನಾವೇ ಪರಿಹಾರ ಕಂಡುಕೊಂಡರೆ ಬದುಕು ಬಂಗಾರವಾಗುವುದರಲ್ಲಿ ಅನುಮಾನ ಬೇಡ.

ಕೀಳರಿಮೆಯನ್ನು ದೂರ ಮಾಡುವುದು ಹೇಗೆ
· ಇತರರ ಸಾಧನೆಗಳನ್ನು ನಮ್ಮ ದೌರ್ಬಲ್ಯ ಎಂದು ಪರಿಗಣಿಸುವುದೇ ನಾವು ಮಾಡುವ ದೊಡ್ಡ ತಪ್ಪು. ಯಾವತ್ತಿಗೂ ಇತರರ ಸಾಧನೆಗಳು ನಮ್ಮ ದೌರ್ಬಲ್ಯವಾಗಲು ಬಿಡಬಾರದು. ಬದಲಾಗಿ ಅವುಗಳು ನಮಗೆ ಪ್ರೇರಣಾದಾಯಿಯಾದಾಗ ಮಾತ್ರ ಒಂದು ಹೆಜ್ಜೆ ಮುಂದೆ ತಲೆ ಎತ್ತಿ ನಡೆಯಲು ಸಾಧ್ಯವಾಗಬಲ್ಲುದು.

· ಯಾರಾದರೂ ನಿಮ್ಮ ಸಾಧನೆಗಳು ಅಥವ ನಿಮ್ಮ ತಪ್ಪುಗಳ ಕುರಿತಾಗಿ ಕೀಳಾಗಿ ಮಾತನಾಡಿದರೆ ಅದನ್ನೇ ಸ್ಫೂರ್ತಿಯಾಗಿ ‘ಚಾಲೆಂಜ್‌’ ರೂಪದಲ್ಲಿ ಪಡೆದುಕೊಳ್ಳಿ. ನಮ್ಮ ವೈಫ‌ಲ್ಯಗಳು ಯಾವತ್ತಿಗೂ ಇತರರಿಗೆ ಟೀಕಾ ವಸ್ತುವಾಗದಿರಲಿ. ಬದಲಾಗಿ ಟೀಕಾಕಾರ ಬಾಯಿ ಮುಚ್ಚಿಸುವಂತಿರಬೇಕು.

· ಇಂಗ್ಲಿಷ್‌ನಲ್ಲಿ ‘ಇನ್‌ ಫೀರಿಯರ್‌’ ಮತ್ತು ‘ಸುಪೀರಿಯರ್‌’ ಎಂಬ ಎರಡು ಶಬ್ದಗಳಿವೆ. ಈ ಎರಡು ಶಬ್ದಗಳಲ್ಲಿ ಯಾವುದು ನಮ್ಮ ತಲೆಯಲ್ಲಿ ಹೆಚ್ಚು ಅಚ್ಚಾಗಿರುತ್ತದೆಯೋ ಅದೇ ಪ್ರಕಾರ ನಮ್ಮ ವರ್ತನೆಗಳು ಬದಲಾಗುತ್ತದೆ. ನಮಗೆ ನಾವೆ ‘ಸುಪೀರಿಯರ್‌’ ಆಗಿದ್ದರೆ ಮಾತ್ರ
ಸಕಾರಾತ್ಮಕತೆ ದೀರ್ಘ‌ ಕಾಲ ನಮ್ಮಲ್ಲಿ ಉಳಿಯಲು ಸಾಧ್ಯ.

· ನಿಮ್ಮ ಮೇಲೆ ವಿಶ್ವಾಸ ಇಟ್ಟುಕೊಳ್ಳಿ. ನಮಲ್ಲಿ ನಾವೇ ವಿಶ್ವಾಸವನ್ನು ತುಂಬಲು ವಿಫ‌ಲವಾದರೆ, ಇನ್ನು ಮತ್ತೊಬ್ಬರು ನಮ್ಮ ಮೇಲೆ ವಿಶ್ವಾಸವನ್ನು ಇಡುವುದಾದರೂ ಹೇಗೆ?
ಇದಕ್ಕಾಗಿ ನೀವು ಮಾಡುವ ಕೆಲಸ, ಸಣ್ಣದಿರಲಿ ಅಥವ ಬಹುದೊಡ್ಡ ಕೆಲಸವೇ ಆದರೂ ವಿಶ್ವಾಸದಿಂದ ಪೂರೈಸಿ. ಇದು ನಿಮ್ಮನ್ನು ಬಹುದೂರ ಕೊಂಡೊಯ್ಯುತ್ತದೆ.

· ನಿಮ್ಮ ದುಖಃ ದುಮ್ಮಾನಗಳಿಗೆ ನೀವೆ ಕಿವಿಯಾಗಲು ಪ್ರಯತ್ನಿಸಿ. ಇನ್ನೊಬ್ಬರಲ್ಲಿ ನಮ್ಮ ಸಮಸ್ಯೆಗಳು ಅಥವ ಭಾವನೆಯನ್ನು ವ್ಯಕ್ತಪಡಿಸಲು ಹಿಂಜರಿಕೆಯಾದರೆ, ನಿಮಗೆ ನೀವೆ ಕಿವಿಯಾಗಲು ಪ್ರಯತ್ನಿಸಿ.

· ನಿಮ್ಮ ಸುತ್ತ ಮುತ್ತ ಸಕಾರಾತ್ಮಕ ಧೋರಣೆ ತಳೆದಿರುವ ಜನರೇ ಇರುವಂತೆ ನೋಡಿಕೊಳ್ಳಿ. ಅವರ ಪ್ರತಿ ಮಾತುಗಳು ಸಕಾರಾತ್ಮಕತೆಯನ್ನು ತುಂಬಿರುತ್ತದೆ. ನಿಮ್ಮ ದುರ್ಬಲ ಮನಸ್ಸಿಗೆ ಅದು ಶಕ್ತಿಯನ್ನು ತುಂಬಬಲ್ಲುದು.

ನಕಾರಾತ್ಮಕ ಚಿಂತನೆಯನ್ನು ಆದಷ್ಟು ದೈನಂದಿನ ಜೀವನದಿಂದ ದೂರ ಇಡಲು ಪ್ರಯತ್ನಿಸಿ. ಅವುಗಳು ಜೀವನದ ಅಂದವನ್ನು ಕೂರೂಪವಾಗಿ ಮಾರ್ಪಡಿಸಬಹುದು.

ನೀವು ಮಾಡಿದ ಪ್ರತಿ ಕೆಲಸದಲ್ಲಿ ತೃಪ್ತಿ ಕಾಣುವುದಕ್ಕೆ ಪ್ರಯತ್ನಿಸಿ. ನಿಮ್ಮ ಕಾರ್ಯ ತೃಪ್ತಿ ನಿಮಗೆ ಖುಷಿಯನ್ನು ಧಾರೆ ಎರೆಯಲಿದೆ.

ಟಾಪ್ ನ್ಯೂಸ್

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Varun tej starrer matka movie releasing on Nov 14

Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ

nidradevi next door Kannada Movie

Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್‌ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ನತ್ತ..

9

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.