ಹೂಕೋಸು, ಕ್ಯಾಬೇಜ್‌ ಕೃಷಿ

ಬಾಳಿಲದ ಗೃಹಿಣಿಯ ಪ್ರಯೋಗ ಯಶಸ್ಸು

Team Udayavani, Feb 23, 2020, 4:29 AM IST

ram-22

ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು ಯಶಸ್ವಿಯಾಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಪೋಷಣೆ ಮಾತ್ರ ನೀಡಿ ಬೆಳೆದ ವಿಷರಹಿತ ಕ್ಯಾಬೇಜ್‌ ಮತ್ತು ಹೂಕೋಸ್‌ ಗಿಡಗಳಲ್ಲಿ ಬೆಳೆಲದ ಬೆಳೆ ಖಾದ್ಯ ಸವಿಯಲು ಸಿದ್ಧವಾಗಿದೆ.

ವಾಟ್ಸ್‌ ಆ್ಯಪ್‌ ಪ್ರೇರಣೆ
ಸುಳ್ಯ ತಾಲೂಕಿನ ಬಾಳಿಲದ ಪ್ರಗತಿಪರ ಕೃಷಿಕ ನೆಟ್ಟಾರು ಗೋಪಾಲಕೃಷ್ಣ ಭಟ್ಟರ ಪತ್ನಿ ವಿಜಯಕುಮಾರಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಒಂದರಲ್ಲಿ ಬಂದ ಸಂದೇಶವೊಂದರಿಂದ ಪ್ರೇರಿತರಾಗಿ ಕ್ಯಾಬೇಜ್‌ ಮತ್ತು ಹೋಕೋಸು ಬೆಳೆಯನ್ನು ತನ್ನ ಮನೆಯಲ್ಲೂ ಬೆಳೆಯುವ ಉತ್ಸಾಹ ತೋರಿ ಯಶಸ್ಸು ಕಂಡವರು. ಬೆಟ್ಟಂಪಾಡಿ ಹರಿಕೃಷ್ಣ ಕಾಮತ್‌ ಅವರ ಮನೆಯಿಂದ ಈ ಎರಡೂ ಬೆಳೆಗಳ ತರಕಾರಿ ಬೀಜಗಳನ್ನು ತಂದು ಕೃಷಿ ಆರಂಭಿಸಿದ್ದರು.

ಸಾವಯವ ಪೋಷಣೆ
ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳಾದ ಇವುಗಳನ್ನು ಋತುಮಾನಕ್ಕೆ ತಕ್ಕಂತೆ ನವೆಂಬರ್‌ ತಿಂಗಳ ಮೊದಲ ವಾರ ಬಿತ್ತನೆ ಮಾಡಿದರು. ಮೊದಲ ಪ್ರಯೋಗವಾದ ಕಾರಣ ತಲಾ 15 ಬೀಜಗಳನ್ನು ಮಾತ್ರ ಬಿತ್ತನೆ ಮಾಡಿದರು. ಇವುಗಳ ಪೈಕಿ 5 ಕ್ಯಾಬೇಜು ಹಾಗೂ 10 ಹೂಕೋಸು ಗಿಡಗಳು ಸೊಂಪಾಗಿ ಬೆಳೆದವು. ಕೆಂಪು ಮಣ್ಣು, ಮರಳು, ಸುಡುಮಣ್ಣಿನ ಮಿಶ್ರಣದಲ್ಲಿ ಬೆಳೆಸಿದ ಈ ಗಿಡಗಳಿಗೆ ಪ್ರತಿನಿತ್ಯ ನೀರಿನ ಜೊತೆ ಹುಳಿ ಬರಿಸಿದ ಬೇವಿನ ಹಿಂಡಿ, ಸೆಗಣಿ ನೀರಿನಿಂದ ಶುದ್ಧ ಸಂಪೂರ್ಣ ಸಾವಯವ ಪೋಷಣೆ ನೀಡಿದ್ದಾರೆ.

ಸಿದ್ಧವಾಗಿದೆ ಬೆಳೆ
ಸಾವಯವ ಪೋಷಣೆಯಿಂದ ಬೆಳೆದ ಗಿಡದಲ್ಲಿ ಮೂರೇ ತಿಂಗಳಲ್ಲಿ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆದು ಕೊಯ್ಯಲು ಸಿದ್ಧವಾಗಿದೆ. ಈ ತಿಂಗಳಲ್ಲಿ ಬಾಳಿಲದ ವಿಜಯ ಕುಮಾರಿಯವರ ಮನೆಗೆ ಭೇಟಿ ನೀಡುವ ಆಸಕ್ತ ಕೃಷಿಕರಿಗೆ ಸಾವಯವವಾಗಿ ಬೆಳೆಸಿದ ಹೂಕೋಸಿನಿಂದ ಮಾಡಿದ ಖಾದ್ಯಗಳನ್ನು ಸವಿಯುವ ಭಾಗ್ಯ ಸಿಗಲಿದೆ.

ಮೊದಲ ಪ್ರಯೋಗ ಯಶಸ್ಸು
ಕರಾವಳಿಯ ಹವಾಮಾನಕ್ಕೆ ಒಗ್ಗದ ಹೂಕೋಸು ಮತ್ತು ಕ್ಯಾಬೇಜ್‌ ನಮ್ಮ ಮನೆಯಂಗಳದಲ್ಲಿ ಸೊಂಪಾಗಿ ಬೆಳೆದು ಫ‌ಲ ನೀಡಿರುವುದು ಖುಷಿ ತಂದಿದೆ. ಮೊದಲ ಪ್ರಯೋಗವಾದ ಕಾರಣ ಸೀಮಿತ ಮಟ್ಟಕ್ಕೆ ಬೆಳೆ ಸಿಕ್ಕಿದೆ.
– ವಿಜಯಕುಮಾರಿ , ಗೃಹಿಣಿ

ಉಮೇಶ್‌ ಮಣಿಕ್ಕಾರ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.