ಆಶಯದ ಬದುಕಲ್ಲಿ ನಿರಾಶೆ ಅನಿರೀಕ್ಷಿತ


Team Udayavani, Feb 10, 2020, 5:55 AM IST

hanidhani2

ಆಶಯಗಳನ್ನು ಬಯಸುವ ಬದುಕಿನಲ್ಲಿ ನಿರಾಶೆಗಳು ಅನಿರೀಕ್ಷಿತ ಅತಿಥಿಗಳಾಗಿ ನೆಮ್ಮದಿಯ ಗೂಡನ್ನು ಕೆಡವಿ ಬಿಡುತ್ತವೆ. ಖುಷಿಯಾಗಿ ಇರುವ ವ್ಯಕ್ತಿ ಖುಷಿಯನ್ನೇ ಶಾಶ್ವತವಾಗಿಸುವ ಕೋರಿಕೆಯನ್ನು ಬೇಡಿಕೊಳ್ಳುವ ಹಾಗಿನ ಬದುಕು ಎಲ್ಲರಿಗೂ ಫ‌ಲಿಸದು.

ನಾವೆಲ್ಲಾ ಹದಿಹರೆಯದ ಹಂತದಲ್ಲಿ ಬೆಳದು ನಿಂತಾಗ ಬದುಕಿನ ಭವಿಷ್ಯಕ್ಕೆ ಒಂದು ಸ್ಪಷ್ಟ ರೂಪ ಕೊಟ್ಟು, ತಾನೇನು ಆಗಬೇಕು, ತಾನೇನು ಕಲಿಯಬೇಕು, ತಾನು ಹೇಗೆ ಬೆಳೆಯಬೇಕು, ಯಾರ ಮಾತು ಕೇಳಬೇಕು ಹೀಗೆ ಎಲ್ಲವನ್ನು ನಮ್ಮ ಸ್ವಂತಿಕೆ ಯೋಚನೆಯಿಂದ ನಿರ್ಧರಿಸುವ ಮಟ್ಟಿಗೆ ಬೆಳೆದು ಬಿಡುತ್ತೇವೆ. ಆದರೆ ಈ ಹಂತದಲ್ಲಿ ನಮ್ಮ ಅಪ್ಪ ಅಮ್ಮನ ಆಸರೆಯಂತೆ, ಅವರ ಇಚ್ಛೆಯಂತೆ, ಅವರ ಕನಸಿನ ದಾರಿಯಲ್ಲಿ ನಡೆಯಲು ಹಿಂಜರಿಯುತ್ತೇವೆ. ನಾನು ಮಾಡಿದ್ದೇ ಸರಿ, ನನ್ನ ತೀರ್ಮಾನವೇ ಸೂಕ್ತ ಎಂಬ ವಾದವೇ ನಮ್ಮನ್ನು ಕೆಲವೊಮ್ಮೆ ದಾರಿ ತಪ್ಪಿಸಿಬೀಡುತ್ತದೆ.

ಹದಿಹರೆಯದ ವಯಸ್ಸೇ ಹಾಗೆ. ದೂರದಿಂದ ಕಂಡದ್ದು ಅದ್ಭುತ. ಹತ್ತಿರ ಹೋದಷ್ಟು ಆಕರ್ಷಣೆಯಾಗಿ ಹೊಳೆಯುತ್ತದೆ. ಅದೇ ಆಕರ್ಷಣೆ ಹೊಳಪು ಬದುಕಿನೂದ್ದಕ್ಕೂ ಹಾಗೆಯೇ ಇರಬೇಕೆನ್ನುವ ಮನಸ್ಸು. ಮೂಗಿನ ತುದಿ ಕೆಂಡದಂತೆ ಕೆಂಪು, ಕೋಪ ನೆತ್ತಿಯ ಮೇಲೆ, ಈ ಹಂತದಲ್ಲಿ ಒಳಿಗೆ ಹೇಳುವ ಬುದ್ಧಿ ಮಾತು, ಅನುಭವದ ಆಧಾರದಲ್ಲಿ ಹೇಳುವ ಪಿಸು ಮಾತು ಯಾವುದು ಹದಿಹರೆಯದಲ್ಲಿ ಹಬೆಯಾಡುವ ಭಾವನೆಗಳಿಗೆ ಕೇಳದು.

ಹದಿಹರೆಯ ಎಂಬುದು ಉತ್ಸಾಹಗಳು ನಿರಂತರವಾಗಿ ಹರಿಯುವ ಘಟ್ಟ. ಈ ಘಟ್ಟದಲ್ಲಿ ಕೆಲವರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ನೂರಾರು ದಾರಿ, ಅಡ್ಡ ದಾರಿಗಳನ್ನು ಹಿಡಿದು ಬದುಕನ್ನು ಕೂಪಕ್ಕೆ ದೂಡಿಕೊಳ್ಳುವ ದುಡುಕುತನ ಹೀಗೆ ಏನಾದರೂ ಮಾಡಿ ಸಾಧಿಸಲು ಹಾಗೂ ಏನೂ ಇಲ್ಲದೇ ಸುಮ್ಮನೆ ಕೂತು ರೋಧಿಸಲು ಇರುವ ಏಕೈಕ ಹಂತವೇ ಈ ಹದಿಹರೆಯ ಎಂಬ ಮಾಯೆ.

ನಾಯಕ ಆಗುವುದು
ಒಬ್ಬ ವ್ಯಕ್ತಿ ಸೂಫಿ ಗುರುಗಳ ಬಳಿಗೆ ತೆರಳಿದ್ದ. ಅಲ್ಲಿ ಹಲವಾರು ಪ್ರತಿಮೆಗಳಿದ್ದವು. ಅವುಗಳಲ್ಲಿ ಕೆಲವು ಪ್ರತಿಮೆಗಳ ಕಿವಿಗಳು ಜೋಡಣೆಯಾಗಿದ್ದರೆ ಕೆಲವು ದೇಹಗಳು ಅಂಟಿಕೊಂಡಿದ್ದವು. ಆದರೆ ಅಲ್ಲಿ ಏಕ ಪ್ರತಿಮೆಗಳು ಇರಲೇ ಇಲ್ಲ. ಹೋದ ವ್ಯಕ್ತಿಗೆ ಅನುಮಾನ ಶುರುವಾಯಿತು. ಅವನು ಗುರುಗಳ ಬಳಿ ತೆರಳಿ ಈ ಪ್ರತಿಮೆಗಳೆಲ್ಲ ಏಕೆ ಒಂದಕ್ಕೊಂದು ಅಂಟಿಕೊಂಡಿವೆ. ಇಲ್ಲಿ ಏಕ ಪ್ರತಿಮೆಗಳು ಯಾಕೆ ಇಲ್ಲ ಎಂದು ಪ್ರಶ್ನಿಸಿದ ಅದಕ್ಕೆ ಗುರುಗಳು ಇವುಗಳೆಲ್ಲ. ಸಾಮಾನ್ಯ ಮನುಷ್ಯರ ಸ್ವಭಾವ ರೂಪಕಗಳು. ಮನುಷ್ಯರು ಸಾಧಾರಣವಾಗಿ ಗುಂಪಿನಲ್ಲೇ ವಾಸಿಸಲು ಇಷ್ಟಪಡುತ್ತಾರೆ. ಪರಸ್ಪರ ದೂರುಗಳು ಹೇಳಿಕೊಂಡು ಬದುಕುತ್ತಿದ್ದಾರೆ ಎಂಬುದನ್ನು ಈ ಪ್ರತಿಮೆಗಳು ಹೇಳುತ್ತವೆ. ನಾಯಕರಾದಾಗ ಮಾತ್ರ ಮನುಷ್ಯರು ಒಬ್ಬಂಟಿಗರಾಗಿರುತ್ತಾರೆ. ಅವರಲ್ಲಿ ಒಬ್ಬನೇ ಜಗವನ್ನು ಎದುರಿಸುವ ಧೈರ್ಯ ಬರುತ್ತದೆ ಎಂದು ಹೇಳಿದರು. ಇಲ್ಲಿ ಬಂದವರೆಲ್ಲ ಆ ಪಾಠವನ್ನು ಕೇಳಿ ನಾಯಕರಾಗಿ ಮುನುಗ್ಗುವ ಸತತ ಪ್ರಯತ್ನಿಸಬೇಕೆನ್ನುವುದೇ ನನ್ನ ಪ್ರಾರ್ಥನೆ ಎಂದರು.

- ಸುಹಾನ್‌ ಶೇಕ್‌

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.