ಕನಸು ಕಾಣಿ ಸಾಕಾರಗೊಳಿಸಿ


Team Udayavani, Feb 24, 2020, 5:53 AM IST

sudina-a

ಯಾವ ಮನುಷ್ಯನಿಗೆ ಕನಸು ಬೀಳುವುದಿಲ್ಲ ಹೇಳಿ. ಕೆಲವರಿಗೆ ಒಂದೊಂದು ರೀತಿಯ ಕನಸುಗಳು ಅವರನ್ನು ಎಚ್ಚರಿಸುತ್ತಿರುತ್ತವೆ. ಭವಿಷ್ಯ, ಪ್ರೀತಿ, ಜೀವನ ಮೊದಲಾದ ಸಂಗತಿಗಳ ಕುರಿತು ಆಲೋಚನೆಗಳೇ ನಮ್ಮ ಕನಸುಗಳು ಆಗಿರುತ್ತವೆ. ಈ ನಿಟ್ಟಿನಲ್ಲಿ ಕನಸುಗಳ ಬಗೆಗಿನ ಪಿಸುಮಾತು ಇಲ್ಲಿ ಅಕ್ಷರದಲ್ಲಿ ವ್ಯಕ್ತವಾಗಿದೆ.

ಕನಸು ಕಾಣುವ ಮನಸ್ಸು ಎಲ್ಲರಿಗೆ ಇರುತ್ತದೆ. ಎಲ್ಲ ಕನಸುಗಳಿಗೆ ನನಸಾಗುವ ಸೌಭಾಗ್ಯ ಇರುವುದಿಲ್ಲ ಅಷ್ಟೇ!.

ಅದೊಂದು ಸಮಯದಲ್ಲಿ ನಮಗೆ ಶಿಕ್ಷಕರು ದೊಡ್ಡವರರಾದ ಮೇಲೆ ಏನು ಆಗುತ್ತೀಯಾ? ಎಂದು ಕೇಳುತ್ತಿದ್ದರು. ಬಹುಶಃ ಎಲ್ಲರಿಗೂ ಆ ವಯಸ್ಸಿನಲ್ಲಿ ಕನಸನ್ನು ಬಾಯಿ ಮಾತಿನಲ್ಲಿ ಹೇಳುವ ಧೈರ್ಯ ಇರುತ್ತಿತ್ತು. ಬದಲಾಗಿ ಕನಸಿನ ದಾರಿಯಲ್ಲಿ ನಡೆಯುವ ಸ್ಥೈರ್ಯ ಮೊಳಕೆಯೊಡೆಯುದಿರುವುದಿಲ್ಲ. ಅದು ಬೆಳೆಯುವುದು ವಯಸ್ಸಿನ ಹಾಗೆ ಹಂತ ಹಂತವಾಗಿಯೇ.

ಶಿಕ್ಷಕರು ಕೇಳುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಾಗಿದ್ದ ನಾವು ಅಂದು ಹೇಳಿದ ಉತ್ತರಗಳು, ನಾನಾ ಬಗೆಯದು. ಒಬ್ಬರು ಪೊಲೀಸ್‌, ಕೆಲವರು ಡಾಕ್ಟರ್‌, ಇನ್ನೂ ಕೆಲವರು ಟೀಚರ್‌, ಕೆಲವರದು ಅಂದು ಸರಿಯಾಗಿ ಪದದ ಅರ್ಥವೇ ತಿಳಿಯಾದ ಎಂಜಿನಿಯರಿಂಗ್‌, ವಿಜ್ಞಾನಿ ಕನಸಿನೊಂದಿಗೆ ಉತ್ತರಗಳು ತೇಲಿ ಬರುತ್ತಿದ್ದವು. ಇನ್ನೂ ಹೈಸ್ಕೂಲ್‌ ಹಂತದಲ್ಲಿ ಬಂದಾಗ ಅದೇ ಪ್ರಶ್ನೆಗಳಿಗೆ ಒಂದು ಅರೆ ಸ್ಪಷ್ಟತೆವುಳ್ಳ ಉತ್ತರವನ್ನು ಹೇಳುತ್ತಿದ್ದೆವು.

ಕನಸು ಹಾಗೂ ಗುರಿಯ ವ್ಯತ್ಯಾಸವೇ ಅರಿಯದ ಹರೆಯದಲ್ಲಿ ಮಾಡಿದ ಶಪಥಗಳು, ನಿದ್ದೆ ಬಿಟ್ಟು ನಾನು ಹೀಗೆ ಆಗಬೇಕು, ಹಾಗೆ ಆಗಬೇಕೆನ್ನುವ ಹಠವನ್ನು ರೂಢಿಸಿಕೊಂಡಿದ್ದು ಇದೆ. ಕನಸು ಹಾಗೂ ಗುರಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮೊದಲು ಗುರಿಯನ್ನು ಸಾಧಿಸಬೇಕು. ಗುರಿಯ ಯಶಸ್ಸಿನ ಬಳಿಕ ಬರುವುದು ಕನಸು. ಕನಸಿಗೆ ರೆಕ್ಕೆ ಬರುವುದೇ ಗುರಿ ಸಾಧನೆಯ ಅನಂತರ. ಕನಸು ಹಾಗೂ ಗುರಿ ಒಂದೇ ಆಗಿ ನಾವು ಪರಿಗಣಿಸಬಾರದು. ಕನಸು ಕಲರ್‌ಫುಲ್‌ , ಗುರಿ ಸುಲಭವಾಗಿ ದಕ್ಕದ, ನಾನಾ ಅಡ್ಡಿಗಳು-ಆತಂಕಗಳು ಬರುವ ಗೊಂದಲದ ಗೂಡು ಆಗಿರುತ್ತದೆ.

ಬಣ್ಣ ಬಣ್ಣದ ಕನಸು ನನಸಾಗುವುದು ಡೌಟ್‌ !
ನಿದ್ದೆಯ ಕನಸುಗಳೆಂದರೆ, ಅಲ್ಲಿ ಸ್ವಾರ್ಥಗಳಿರುತ್ತವೆ, ಆಸೆಗಳಿರುತ್ತವೆ. ನಮ್ಮ ಮೆಚ್ಚಿನ ನಟ- ನಟಿಯರನ್ನು ಭೇಟಿಯಾಗ ಬೇಕು, ತಾನು ಒಂದೊಳ್ಳೆ ವ್ಯಕ್ತಿಯಾಗಬೇಕು, ಬೆಳೆಯಬೇಕು, ಸಾಧಿಸಬೇಕು, ಹೀಗೆ ಬಣ್ಣದ ಜಗತ್ತಿನ ಕನಸುಗಳು ಎಷ್ಟು ಸುಲಭವಾಗಿ ಕಣ್ಣಿನಂಚಿನಲ್ಲಿ ಬರುತ್ತದೆ. ನಾವು ಗಾಢ ನಿದ್ದೆಗೆ ಹೋದಷ್ಟು ನಮ್ಮ ಕನಸಿನ ಕಲ್ಪನೆ ಅಷ್ಟೇ ಗಾಢವಾಗಿ ನಮ್ಮನ್ನು ಕಾಡಿಸುತ್ತದೆ. ಕನಸಿನ ಮೂಲ ಉದ್ದೇಶವೇ ಮನಸ್ಸನ್ನು ಎಚ್ಚರಿಸುವುದು, ಭೀತಿಗೊಳಿಸುವುದು.

ನಮ್ಮ ಜೀವನದಲ್ಲಿ ಕನಸುಗಳಿಗೆ ಮಹತ್ವ ಹೆಚ್ಚು, ಯಾರ ಬಳಿಯೂ ಹೇಳಿಕೊಳ್ಳದೆ ಇದನ್ನು ಮಾಡಬೇಕು, ಯಾರು ಇದನ್ನು ಮಾಡಿರಬಾರದು ಹೀಗೆ ಗೌಪ್ಯವಾಗಿಟ್ಟು ಕನಸಿನ ಮಹತ್ವವನ್ನು ನಾವು ಕಾಪಿಟ್ಟುಕೊಳ್ಳುತ್ತೇವೆ. ಆದರೆ ಕಾಪಿಟ್ಟ ಎಲ್ಲ ಸಂಗತಿಗಳು ಅನುಭವಿಸುವ ಮುನ್ನವೇ ಮುಗ್ಗರಿಸಿ ಬಿಡುತ್ತವೆ ಅನ್ನುವುದು ವಿಪರ್ಯಾಸ.

ಕನಸುಗಳು ಯಾವುದೇ ಇರಲಿ, ಅಲ್ಲಿ ಸ್ವಾರ್ಥ, ಆಸೆ, ನಿರಾಸೆ, ಭೀತಿ ಅಕಾಂಕ್ಷೆ, ನಿರೀಕ್ಷೆಗಳು ಇದ್ದೇ ಇರುತ್ತವೆ. ಅಂದ ಹಾಗೆ ನಿನ್ನೆ ಯಾವ ಕನಸು ಬಿತ್ತು ನೆನಪಿಕೊಳ್ಳಿ, ಅದರಲ್ಲಿ ಮೇಲಿನ ಅಂಶವೊಂದು ಇದ್ದೆ ಇರುತ್ತದೆ.

ಕನಸೊಂದೇ ಉಚಿತ ಉಡುಗೊರೆ
ನಿದ್ದೆಯಲ್ಲಿ ಕಾಣುವ ಕನಸುಗಳು ಒಂಥರ ವಿಭಿನ್ನ, ಕೆಲವೊಮ್ಮೆ ವಿಚಿತ್ರ. ಜಗತ್ತಿನಲ್ಲಿ ಕನಸಿಲ್ಲದೆ ನಿದ್ರಿಸುವವನು ಯಾರೂ ಇಲ್ಲ. ನಿದ್ದೆಗೆ ಭಂಗ ತರುವುದು ಕನಸು, ನಿದ್ದೆಗೆ ಆಧಾರವಾಗುವುದು ಇದೇ ಕನಸು. ನಡುರಾತ್ರಿಯ ಭಯಭೀತಿಯ ಕನಸು, ಅರೆ ಮುಂಜಾನೆಯ ವಿಚಿತ್ರ ಕನಸು, ಕನಸಿನ ನಡುವೆ ಮನೆಯ ಅಟ್ಟದಲ್ಲಿ ಇಲಿಯೂ ಬೆಕ್ಕೋ ಹಾರುವ ಸದ್ದು ಕೇಳಿ ಒಮ್ಮೆ ಜೀವ ಹೌಹಾರುವುದುಂಟು. ಈ ಅನುಭವ ಆಸ್ವಾದಿಸುವುದೇ ಒಂದು ಖುಷಿ. ಶ್ರೀಮಂತರು ಬಡವರಾಗುವ ಕನಸು, ಬಡವ ಶ್ರೀಮಂತನಾಗುವ ಕನಸು, ಯಾರೋ ಅಸ್ಪಷ್ಟವಾಗಿ ಆಳುವ ಕನಸು, ಮಗು ಹುಟ್ಟುವ ಕನಸು ಈ ಕನಸುಸಗಳಿಗೆಲ್ಲ ಒಂದೊಂದು ರೂಪ, ಅರ್ಥ ಕೊಡುವವರು ನಮ್ಮ ಅಜ್ಜಿ ಅಜ್ಜಂದಿರು…

 ಸುಹಾನ್‌ ಶೇಕ್‌

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.