ಮುಗುಳುನಗೆ ಉತ್ತರವಾಗಲಿ


Team Udayavani, Sep 23, 2019, 5:20 AM IST

Smile

ಬಸ್ಸಿನಲ್ಲಿ ದೂರದೂರಿಗೆ ಪಯಣಿಸುತ್ತಿದ್ದೆ. ಮೊಬೈಲ್‌ನಲ್ಲಿ ಹಾಕಿದ್ದ “ಹಾಡು ಹಳೆಯದಾದರೇನು ಭಾವ ನವನವೀನ’ ಹಾಡು ಮೆಲುವಾಗಿ ಕೇಳಿಸುತ್ತಿತ್ತು. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿ ಫೋನಿನಲ್ಲಿ ಅಳುತ್ತಾ ಸಾಯುವ ಮಾತನಾಡುತ್ತಿದ್ದಳು. ಅವಳ ಧ್ವನಿ ಅಲ್ಪ ಸ್ವಲ್ಪ ಕೇಳಿಸುತ್ತಿತ್ತು. ಅವಳಿದ್ದ ಪರಿಸ್ಥಿತಿಯಲ್ಲಿ ಅವಳಿಗದು ದೊಡ್ಡ ಬಂಡೆ ಕಲ್ಲಿನಂತಹ ಸಮಸ್ಯೆ, ಅದನ್ನು ಸರಿಸಲೂ ಸಾಧ್ಯವಿಲ್ಲ ಎಂಬರ್ಥದಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದಳು.

ಇಂದು ಸರಳವಾದ ಬದುಕನ್ನು ಕಗ್ಗಂಟು ಮಾಡಿಕೊಳ್ಳುವವರೇ ಹೆಚ್ಚು. ಸಮಸ್ಯೆ ಸಣ್ಣದಾಗಿರುತ್ತದೆ. ಆದರೆ ನಾವೇ ಅದನ್ನು ದೊಡ್ಡ ಸಮಸ್ಯೆ ಎಂದು ಬಿಂಬಿಸಿ ಕುಸಿಯುತ್ತಾ ಹೋಗುತ್ತೇವೆ. ಅದರಿಂದ ಇಂದು ದಿನದಿಂದ ದಿನಕ್ಕೆ ಆತ್ಮಹತ್ಯೆ, ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತಿವೆ. ನಮ್ಮ ಪಕ್ಕದ ಮನೆಯ ಅಜ್ಜಿ ಇಂದಿನ ಯುವಜನತೆಯ ಕುರಿತು ಮಾತನಾಡಿಸಿದಾಗಲೆಲ್ಲ ನಮ್ಮ ಕಾಲದಲ್ಲಿ ಎಲ್ಲ ಹೀಗಿರಲಿಲ್ಲ ಎನ್ನುತ್ತಿದ್ದರು. ಕೆಲವೊಮ್ಮೆ ಹೌದು ಎನಿಸುತ್ತದೆ. ನಾವು ಮುಂದುವರಿದಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದೇವೆ. ಆದರೆ ಇನ್ನೊಂದು ಕಡೆಯಿಂದ ದಿನದಿಂದ ದಿನಕ್ಕೆ ಸಮಸ್ಯೆಗಳನ್ನು ಹೆಚ್ಚಿಸುತ್ತಾ ಹೋಗುತ್ತಿದ್ದೇವೆ.

ಪ್ರತಿಯೊಬ್ಬರಿಗೂ ತನ್ನದೇ ಆದ ಕಷ್ಟಗಳಿರುತ್ತವೆ. ಅದನ್ನು ತೆಗೆದುಕೊಳ್ಳುವ ರೀತಿ ಅದಕ್ಕೆ ಸ್ಪಂದಿಸುವ ರೀತಿ ಭಿನ್ನವಾಗಿರುತ್ತದೆ ಎಂದು ಯೋಚಿಸದ ನಾವು ನಮಗೆ ಕಷ್ಟಗಳೂ ಬಂದಾಗಲೆಲ್ಲ ಅದು ತನಗೆ ಮಾತ್ರ ಬರುತ್ತದೆ ಅಂದುಕೊಳ್ಳುತ್ತೇವೆ. ತನ್ನ ಪಕ್ಕದಲ್ಲಿರುವವರು ಖುಷಿಯಾಗಿದ್ದಾರೆ. ನಾನು ಅವ‌ರಾಗಬೇಕಿತ್ತು ಎಂದೆಲ್ಲಾ ಯೋಚಿಸುತ್ತೇವೆ. ಎಷ್ಟೇ ಸಮಸ್ಯೆಗಳು ಬಂದರೂ ಆತ್ಮವಿಶ್ವಾಸದಿಂದ ಇರಬೇಕು. ಕಷ್ಟಗಳ ಕುರಿತು ಆಡಿಕೊಳ್ಳುವವರ ಮುಂದೆ ಮುಗಳು ನಗುತ್ತಾ ಬದುಕಬೇಕು. ಕಷ್ಟವನ್ನು ಮುಗುಳು ನಗುತ್ತಾ ಎದುರಿಸಲು ಕಲಿತರೆ ಆತ್ಮಹತ್ಯೆಯಂತಹ ಹೇಡಿತನದ ಯೋಚನೆಗಳೂ ಮನಸ್ಸಿನತ್ತ ಸುಳಿಯುವುದಿಲ್ಲ. ಯುವಜನತೆಗೆ ಇಂದು ಬೇಕಾಗಿರುವುದು ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಕಲೆ.

ಮಗು ಅಂಬೆಗಾಲಿಡುತ್ತಾ, ಎಡವುತ್ತಾ ಬಿದ್ದರೂ ಮತ್ತೆ ಎದ್ದು ನಡೆಯಲು ಕಲಿಯುತ್ತದೆ. ಬಿದ್ದು ಎಷ್ಟೇ ಏಟು ಮಾಡಿಕೊಂಡರೂ ಮತ್ತೆ ಎದ್ದು ಮುಗುಳು ನಗೆಯೊಂದಿಗೆ ನಡೆಯಲು ಆರಂಭಿಸುತ್ತದೆ. ಆದರೆ ನಾವು ಇಂದು ಪ್ರತಿಯೊಂದರಲ್ಲೂ ಗೆಲ್ಲಬೇಕು, ಅದರಲ್ಲೂ ಮೊದಲ ಪ್ರಯತ್ನದಲ್ಲೇ ಗೆಲ್ಲಬೇಕು ಎನ್ನುವ ಮನೋಭಾವ ಬೆಳೆಸುತ್ತಾ ಹೋಗುತ್ತಿದ್ದೇವೆ. ಗೆಲುವಿನ ಹಿಂದೆ ಓಡುವ ನಮಗೆ ಸೋಲು ಎಂದರೆ ಸಹಿಸಲಾಗದ್ದು. ಸೋಲು ಗೆಲುವಿನ ಮೊದಲ ಮೆಟ್ಟಿಲು ಎನ್ನುವುದನ್ನು ಮರೆತಿದ್ದೇವೆ.

-ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

Lap

Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್‌ಟಾಪ್‌

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

LiQer

Dakshina Kannada: ಅಬಕಾರಿ ಕಾರ್ಯಾಚರಣೆ; ಮದ್ಯ, ಗಾಂಜಾ ವಶ

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Lap

Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್‌ಟಾಪ್‌

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.