ಸಂತೋಷವಾಗಿರಲು ಕಲಿಯೋಣ


Team Udayavani, May 13, 2019, 6:00 AM IST

AA2

ಸಂತೋಷದಿಂದ ಬದುಕಬೇಕು ಎಂಬ ಹಂಬಲವಿದೆ ದಾರಿ ಯಾವುದು ತಿಳಿಯುವುದಿಲ್ಲ. ಇದ್ದರೂ ಗೋಚರಿಸುವುದಿ ಲ್ಲ.ವೃತ್ತಿಯಲ್ಲಿ ಖುಷಿಯಿಲ್ಲ, ಪ್ರವೃತ್ತಿಯ ಹುಡುಕುವ ಮನಸ್ಸಿ ಲ್ಲ.ಆದರೂ ಸಂತೋಷವಾಗಿರಬೇಕು. ಹೇಗೆ ಎಂದು ದಾರಿ ಹುಡುಕಬೇಕು

ಹೊತ್ತು ಮುಳುಗುವ ಹೊತ್ತು. ಹಕ್ಕಿಗಳು ಇನ್ನೇನು ಗೂಡು ಸೇರುವ ಸಮಯ. ಪ್ರಶಾಂತವಾಗಿ ಬೀಸುವ ಗಾಳಿ. ಮೌನವಾಗಿ ಕುಳಿತು ನೀಲ ಆಕಾಶದ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುವುದಿದೆಯಲ್ಲ ಅದರ ಸವಿಯೇ ಬೇರೆ. ನಿಜ ಹೇಳಬೇಕೆಂದರೆ ಇವೆಲ್ಲದರ ನಡುವಿನ ಕಪ್ಪು ಕತ್ತಲು ನಮ್ಮನ್ನು ಶೂನ್ಯದತ್ತ ತಳ್ಳಿ ಬಿಡುವುದಿಲ್ಲ. ಬದಲಾಗಿ ನಾಳೆ ಎಂಬ ಸುಂದರ ನಾವೆ ಬದುಕೆಂಬ ಸಾಗರದಲ್ಲಿ ಈಜಾಡುವುದಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತದೆ. ಈ ಕತ್ತಲು ಕಳೆದರೆ ನಾಳೆ ಮತ್ತೆ ಮಾಡಬೇಕಾಗಿರುವ ಕಾರ್ಯಗಳಿಗೆ ಬೇಕಾಗಿರುವ ಉತ್ಸಾಹಕ್ಕೆ ಜೀವ ನೀಡುವ ಕೆಲಸ ಮಾಡುತ್ತದೆ.

ಹೌದು ಬದುಕಿನ ಪ್ರತಿಯೊಂದು ದಿನವೂ ಇಲ್ಲ ನಾವು ಸಂತೋಷವನ್ನೇ ಬಯಸಿದರೆ, ಅದಕ್ಕಾಗಿ ಹಾತೊರೆಯುತ್ತಿದ್ದರೆ ನಾಳೆ ಏನು? ಎಂಬ ಅಗೋಚರ ಆತಂಕವೇ ನಮ್ಮಲ್ಲಿನ ಮನೋಸ್ಥೈರ್ಯವನ್ನು ಕುಗ್ಗಿಸಿ ಬಿಡುತ್ತದೆ. ಮನಸ್ಸಿನಲ್ಲಿ ನಾಳೆ ಎಂಬುದರ ಅಸ್ಪಷ್ಟ ಚಿತ್ರಣ, ಕಲ್ಪನೆಗಳ ಮಧ್ಯೆ ಇಂದು, ಈ ಕ್ಷಣ ಸಿಗುವ ಆನಂದವನ್ನು ಸವಿಯುವ ಸಮಯ ಕೈ ತಪ್ಪಿ ಹೋಗುತ್ತದೆ. ಇಂದು ಎಂಬ ಬೆಳಕನ್ನು ಆಸ್ವಾದಿಸಬೇಕಾದ ನಾವು ಬರಬೇಕಾಗಿರುವ ಕತ್ತಲಿನ ಗಂಟನ್ನು ಯೋಚಿಸುತ್ತಾ ಜೀವನವನ್ನು ಅರ್ಥ ಹೀನವನ್ನಾಗಿಸಿ ಬಿಡುತ್ತೇವೆ. ಈ ಮಧ್ಯೆ ದೇವರು ನೀಡಿದ, ಒಮ್ಮೆ ಕಳೆದರೆ ಮತ್ತೆ ಪಡೆಯಲಾಗದ ಸಮಯ ಎನ್ನುವ ಅಮೂಲ್ಯ ಉಡುಗೊರೆಯನ್ನು ನಷ್ಟ ಮಾಡಿಕೊಳ್ಳುತ್ತಿದ್ದೇವೆ ಎನ್ನುವ ಕನಿಷ್ಠ ಪರಿವೆಯೂ ನಮಗಾಗುವುದಿಲ್ಲ. ಈ ಅರಿವು ನಮ್ಮೊಳಗೆ ಹುಟ್ಟಿದಾಗ ಆ ಅಜ್ಞಾತ ಶೂನ್ಯದಲ್ಲಿಯೂ ಸವಿಯುಣ್ಣುವ ಮನಸ್ಸು ನಮ್ಮದಾಗುತ್ತದೆ.

ಈ ಜಗತ್ತು ಅಚ್ಚರಿಗಳ ಸಂತೆ. ಇಲ್ಲಿ ನೋಡಿ ಅನಂದಿಸುವುದಕ್ಕೆ ಅನೇಕ ವಿಚಾರಗಳಿವೆ. ಅದನ್ನು ತಿಳಿದುಕೊಳ್ಳುವ ಚಿತ್ತ ನಮ್ಮಲ್ಲಿದ್ದರೆ ಬದುಕು ಬೆಳಗುತ್ತದೆ. ಹಾಗಾಗಿ, ಏನೇ ಬರಲಿ ಸಂತೋಷ ಪಡುವುದನ್ನು ಮೊದಲು ಕಲಿತುಕೊಳ್ಳಿ.

-  ಭುವನ ಬಾಬು, ಪುತ್ತೂರು

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.