ಮಹಾನದಿಯಾಗಲಿ ಜೀವನ…


Team Udayavani, Oct 21, 2019, 5:39 AM IST

LIfe

ಬದುಕು ನದಿ ಇದ್ದಂತೆ ಎನ್ನುವ ಮಾತಿದೆ. ಅದಕ್ಕೆ ಇರಬೇಕು, ಮಾನವನಿಗೂ ನದಿಗೂ ಬಿಡಿಸಲಾಗದ ನಂಟು. ಗಮನಿಸಿ ನೋಡಿ ನಾಗರಿಕತೆ ಆರಂಭವಾಗಿದ್ದೇ ನದಿ ದಂಡೆಯಲ್ಲಿ. ಮಾತ್ರವಲ್ಲ ಪ್ರಪಂಚದ ನಗರಗಳು ಹುಟ್ಟಿಕೊಂಡಿರುವುದು ನದಿ ದಡದಲ್ಲೇ.

ಸದಾ ಚಲನಶೀಲ
ನದಿ ಎನ್ನುವುದು ನಿರಂತರ ಚಲನೆ ಉಳ್ಳದ್ದು. ಏನೇ ಅಡೆ ತಡೆ ಎದುರಾದರೂ ಅವುಗಳನ್ನೆಲ್ಲ ದಾಟಿ ತನ್ನ ಗಮ್ಯದತ್ತ ಸಾಗುತ್ತಿರುತ್ತದೆ. ತನ್ನ ದಾರಿಯಲ್ಲಿ ಬಂಡೆ ಇರಲಿ ಪರ್ವತವೇ ಎದುರಾಗಲಿ ಅದನ್ನು ಕೊರೆದು ಚಲಿಸುತ್ತಲೇ ಇರುತ್ತದೆ. ಇದು ನಮ್ಮ ಬದುಕಿಗೆ ಪಾಠವಾಗಬಲ್ಲದು. ಬದುಕಿನ ನಿರಂತರ ಪ್ರಯಾಣದಲ್ಲಿ ಎದುರಾಗುವ ಹತಾಶೆ, ನೋವು, ಅವಮಾನದಂತಹ ಅನೇಕ ತೊಡರು ನಮ್ಮತನವನ್ನು ಇಲ್ಲವಾಗಿಸಲು ಪ್ರಯತ್ನಿಸಬಹುದು. ಇವುಗಳಿಗೆ ತಲೆಬಾಗಿ ಶರಣಾದರೆ ಸೋತಂತೆ. ಗುರಿ ತಲುಪುವ ಹಾದಿಯ ಮಧ್ಯದಲ್ಲೇ ಕುಸಿದು ಬಿದ್ದಂತೆ. ನಿರಂತರ ಪರಿಶ್ರಮಪಟ್ಟರೆ ನದಿ ಬಂಡೆಯನ್ನು ಕೊರೆದು ಮುನ್ನುಗ್ಗುವಂತೆ ನಾವೂ ಗೆಲುವಿನ ಗುರಿ ತಲುಪಬಹುದು.

ವಿವಿಧ ರೂಪ
ನದಿಯದ್ದು ವೈವಿಧ್ಯ ತುಂಬಿದ ರೂಪ. ಆರಂಭದಲ್ಲಿ ಸಣ್ಣ ತೊರೆಯಾಗಿ ಹರಿದು ಕ್ರಮೇಣ ವೇಗ, ಶಕ್ತಿ ಪಡೆದುಕೊಳ್ಳುತ್ತದೆ. ಗುಡ್ಡ ಎದುರಾದರೆ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಪ್ರಪಾತ ಇದ್ದರೆ ಗುಪ್ತಗಾಮಿನಿಯಾಗಿ ಹರಿಯುತ್ತದೆ. ಮಳೆಗಾಲದಲ್ಲಿ ರೊಚ್ಚಿಗೆದ್ದರೆ ಬೇಸಗೆಯಲ್ಲಿ ನಿಧಾನವಾಗಿ ಸಮುದ್ರದತ್ತ ಸಾಗುತ್ತದೆ. ಒಟ್ಟಿನಲ್ಲಿ ಚಲನೆಯಿಂದ ವಿಮುಖವಾಗುವುದೇ ಇಲ್ಲ.

ನಮ್ಮ ಬದುಕು ನದಿಯಂತಾಗಲಿ
ನದಿಯಂತೆ ನಾವು ಇತರರ ಬಾಳಿಗೆ ನೆರವಾಗಬೇಕು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವಂತೆ ಕೆಲವೊಮ್ಮೆ ನಮ್ಮ ಬದುಕು ಸಂತೋಷ, ಸಮೃದ್ಧಿಯಿಂದ ಕೂಡಿರುತ್ತದೆ. ಆದರೆ ಕಾಲ ಸರಿದು ಬೇಸಗೆ ಬಂದಾಗ ನದಿ ಬತ್ತುವಂತೆ ನಮಗೂ ನೋವು ಎದುರಾಗಬಹುದು. ಹಾಗಂತ ಕುಗ್ಗಿದರೆ ಜೀವನವೇ ತಟಸ್ಥವಾಗಿ ಬಿಡುತ್ತದೆ. ಬಂಡೆಯಂತೆ ಕಷ್ಟ ಇದ್ದಕ್ಕಿದ್ದಂತೆ ಅಡ್ಡಬರಬಹುದು. ಅದನ್ನು ಒಮ್ಮೆಲೆ ಒಡೆಯಲು ಸಾಧ್ಯವಾಗದಿರಬಹುದು. ಇನ್ನಷ್ಟು ಪರಿಶ್ರಮ ಹಾಕಿ ನಿರಂತರ ಪ್ರಯತ್ನ ನಡೆಸಿದರೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆ ಕಣ್ಣ ಮುಂದೆಯೇ ಇದೆ.

-ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.