ಮದುವೆ, ವೃತ್ತಿ ಜೀವನ ಸಮಾನತೆಯಲ್ಲಿರಲಿ


Team Udayavani, Oct 22, 2018, 1:07 PM IST

22-october-11.gif

ಹೆಣ್ಣು ಮಕ್ಕಳಿಗೆ ಇಪ್ಪತ್ತು ವರ್ಷ ಆಯಿತು ಎಂದಾಕ್ಷಣ ವರಾನ್ವೇಷಣೆ ಆರಂಭಿಸುವುದು ಸಾಂಪ್ರದಾಯಿಕ ಜೀವನ ಪದ್ಧತಿ. ಆದರೆ ಈಗ ಜಗತ್ತು ಬದಲಾಗಿದೆ. ಯುವ ಜನತೆಯ ಆಸೆಗಳು ದೊಡ್ಡದಾಗಿವೆ. ಎಲ್ಲರೂ ಯಾರ ಹಂಗಿಲ್ಲದೆ ಬದುಕನ್ನು ಸಾಗಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ಎಲ್ಲರೂ ಅವರ ಇಷ್ಟಕ್ಕೆ ಅಡ್ಡಿಪಡಿಸದೆ ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಲು ಪ್ರೋತ್ಸಾಹಿಸುವುದು ಈಗಿನ ಆವಶ್ಯಕತೆ. 

ನವ ಯುಗದಲ್ಲಿ ಮಹಿಳೆಯರು ವೃತ್ತಿ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡು ವೃತ್ತಿಪರರಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿದ್ದಾರೆ. ಹಾಗಾಗಿ ಅವರ 20ನೇ ವರ್ಷಕ್ಕೆ ಅವರಿಗೆ ಉಂಟಾಗುವ ಗೊಂದಲಗಳು, ಹಿರಿಯರ ಒತ್ತಾಯಗಳು, ಒತ್ತಡಗಳನ್ನು ಅವಳು ಎದುರಿಸಿ ಕೊಂಡು ಅವಳ ಇಚ್ಛೆಯಂತೆ ವೃತ್ತಿ ಜೀವನವನ್ನು ಮೊದಲಿಗೆ ಕಟ್ಟಿ ಅನಂತರ ಸಂಸಾರದ ಜೀವನಕ್ಕೆ ಕಾಲಿಡುವುದು ಉತ್ತಮ ಎನ್ನುವುದು ಹೆಚ್ಚಿನವರ ಸಲಹೆ.

ಮದುವೆ ಮತ್ತು ವೃತ್ತಿ ಜೀವನ
20 ವರ್ಷ ಆಗಿರುವಾಗ ಭವಿಷ್ಯದ ಕಟ್ಟಡಗಳನ್ನು ನಿರ್ಮಿಸುವ ಜೀವನ ಹಂತ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಕಾಲೇಜು ಜೀವನದಿಂದ ಸುತ್ತಲಿನ ಹೊಸ ಪ್ರಪಂಚವನ್ನು ನೋಡುತ್ತೇವೆ. ಹಾಗಾಗಿ ಪ್ರಪಂಚದ ಪರಿಚಯವಾಗಬೇಕು. ಕಾರ್ಪೊರೇಟ್‌ ಜಗತ್ತಿನಲ್ಲಿ ನಾವು ಮಗುವಿನಂತೆ ಕಾಲಿಡುವವರು. ಇಲ್ಲಿ ನಾವು ಏನು ಪಡೆಯಬೇಕು ಎಂದು ಅನ್ವೇಷಿಸುತ್ತೇವೆ. ಆದರೆ 20 ವರ್ಷವಾದ ಮೇಲೆ ಮದುವೆಯಾಗಲು ಒಳ್ಳೆಯ ಸಮಯ ಎನ್ನುವ ಸಮಾಜದಲ್ಲಿ ನಾವಿದ್ದೇವೆ. ಹಾಗಾಗಿ ಈ ಒತ್ತಡಕ್ಕೆ ನಾವು ಒಳಗಾಗುವ ಮೊದಲು ಮುಂದಿನ ಜೀವನದ ಕುರಿತು ಸ್ವಲ್ಪ ಆಲೋಚಿಸುವುದು ಉತ್ತಮ.

ನಿಮ್ಮ ವೃತ್ತಿ ಎಂದಿಗೂ ನಿಮ್ಮಿಂದ ದೂರವಿರುವುದಿಲ್ಲ
ಭವಿಷ್ಯ ಏನೆಂದು ಯಾರಿಗೆ ಗೊತ್ತು? ನಿಮ್ಮ ಸಂಬಂಧ ಮುಂದೆ ಕೆಲಸಕ್ಕೆ ಬಾರದಿದ್ದರೆ, ಅಥವಾ ಹಾಸ್ಯಾಸ್ಪದವಾದರೆ? ಮುಂದೆ ಜೀವನ ಪರ್ಯಾಂತ ಇನ್ನೊಬ್ಬರ ಹಂಗಿನಲ್ಲಿ ಅಥವಾ ಅವಲಂಬಿಸಿಯೇ ಬದುಕಬೇಕಾಗುತ್ತದೆ. ನಿಮ್ಮ ಹೆತ್ತವರು, ಸ್ನೇಹಿತರು ಸಹಾಯದ ಕೈ ಎಷ್ಟೆಂದು ಚಾಚಿಯಾರು? ಹಾಗಾಗಿ ನಿಮ್ಮ ಜೀವನದಲ್ಲಿ ಬದುಕಲು ಯಾವತ್ತೂ ಸಹಾಯ ಮಾಡುವುದು ವೃತ್ತಿ ಜೀವನ.

ಇದು ಸಮಯ
ನಿಮ್ಮ ಆಸಕ್ತಿಯ ಮೇಲೆ ನಿಮ್ಮ ಸಾಧ್ಯಾ-ಸಾಧ್ಯತೆಗಳನ್ನು ಎದುರಿಸುವ ಸಮಯ. ಏಕೆಂದರೆ ಮದುವೆಯಾದರೆ ಇನ್ನೊಬ್ಬ ವ್ಯಕ್ತಿಯ ಕುಟುಂಬದ ಕ್ಷೇಮಕ್ಕಾಗಿ ನೀವು ಜವಾಬ್ದಾರರಾಗುತ್ತೀರಿ ಆದರೆ ಹಣಕಾಸಿನ ಹೊರೆ ಇರುವುದಿಲ್ಲ. ಆದರೆ ನೀವು ಜೀವನದಲ್ಲಿ ಏನನ್ನು ಮಾಡಲು ಬಯಸುತ್ತೀರಿ ಎಂಬುದನ್ನು ಕಂಡುಹಿಡಿಯಲು ಈ ಸಮಯವನ್ನು ನೀವು ಬಳಸುವುದು ಮತ್ತು ನೀವು ವೃತ್ತಿಪರರಾಗಿ ಸ್ಥಿರವಾಗಿದ್ದರೆ ಒಮ್ಮೆ ನಿಮ್ಮ ಕಾಲಮೇಲೆ ನಿಲ್ಲಬಹುದು.

ಆರ್ಥಿಕ ಸ್ಥಿರತೆ
ನಿಮ್ಮ ಪತಿ ಎಷ್ಟು ಸಂಪಾದಿಸುತ್ತಾನೆ ಅಥವಾ ಅವನ ಕುಟುಂಬ ಎಷ್ಟು ಶ್ರೀಮಂತವಾಗಿದೆ ಎನ್ನುವುದರ ಬದಲು ನೀವು ಆರ್ಥಿಕವಾಗಿ ಸ್ವತಂತ್ರವಾಗಿರುವುದು ಮುಖ್ಯ. ಏಕೆಂದರೆ ನೀವು ಕುಟುಂಬದಲ್ಲಿ ಅವಲಂಬಿತರಾಗುವುದಕ್ಕಿಂತ ನೀವೇ ಕುಟುಂಬಕ್ಕೆ ಕೊಡುಗೆದಾರರಾದರೆ, ಕುಟುಂಬ ನಿರ್ವಹಿಸುವ ಶಕ್ತಿ ನಿಮ್ಮಲ್ಲಿದ್ದರೆ ಒಳ್ಳೆಯದಲ್ಲವೇ. ಹಾಗಾಗಿ ಬೇಗ ಮದುವೆಯಾಗುವ ಮುಂಚೆ ಆಲೋಚಿಸಿ.

ಜ್ಞಾನ ಕೌಶಲ ಹೆಚ್ಚಿಸಿ
ನಿಮ್ಮ ವೃತ್ತಿಪರ ಪ್ರಪಂಚವು ಹೊಸ ಜನರನ್ನು ಭೇಟಿ ಮಾಡಿಸುತ್ತದೆ, ಅನುಭವ ನೀಡುತ್ತದೆ, ಕಲಿಸುತ್ತದೆ, ಜ್ಞಾನದ ಮಟ್ಟ, ಕೌಶಲಗಳನ್ನು ಸುಧಾರಿಸುತ್ತದೆ. ರಾಜಕೀಯ, ಕೆಲಸದ ಒತ್ತಡ, ಕಟ್ಟುನಿಟ್ಟಾದ ಗಡು ಎಲ್ಲವನ್ನೂ ನಿಮ್ಮ ಸ್ವಂತ ಜ್ಞಾನದಿಂದ ಅರಿತುಕೊಳ್ಳುತ್ತೀರಿ. ಹಾಗಾಗಿ ಇಪ್ಪತ್ತರ ವಯಸ್ಸು ನಿಮ್ಮ ಸ್ವಂತ ದೃಷ್ಟಿಕೋನ ಮತ್ತು ವ್ಯಕ್ತಿತ್ವ ಅಭಿವೃದ್ಧಿಪಡಿಸುವ ಸಮಯ.

ಪ್ರಮುಖ ವಿಷಯ
ನೀವು ಹೊಸತನಕ್ಕೆ ಕಾಲಿಡುವಾಗಲೇ ನಿಮ್ಮ ಸಂಗಾತಿಗೆ ನಿಮ್ಮ ವೃತ್ತಿಪರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ತಿಳಿಸಬೇಕು. ನೀವು ಮದುವೆ ಆದ ಅನಂತರ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸಿದ್ದೀರಿ ಎಂದು ಸಂಭಾಷಣೆಯ ಮುಖಾಂತರ ಇಬ್ಬರು ಅರಿತುಕೊಂಡು ಜೀವನ ಸಾಗಿಸಿದರೆ ಉತ್ತಮ. ವೃತ್ತಿಜೀವನವನ್ನು ಮುಂದುವರಿಸುವವರು ವೃತ್ತಿ ಜತೆಗೆ ಜೀವನದ ಒಂದು ಅಂಗವಾದ ಮದುವೆಯನ್ನು ಕಡೆಗಣಿಸದೆ ಅರ್ಥ ಮಾಡಿಕೊಂಡು ಇಬ್ಬರೂ ತಮ್ಮ ವೃತ್ತಿಯನ್ನು ಮುಂದುವರಿಸುವುದು ಅಥವಾ ಅವರ ಇಷ್ಟದಂತೆ ಜೀವನ ನಡೆಸುವುದು ಮುಖ್ಯ.  

 ಭರತ್‌ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.