ಸದ್ಗುಣಗಳಿದ್ದಾಗ ಭೂಮಿಯೇ ಸ್ವರ್ಗ


Team Udayavani, Mar 16, 2020, 5:41 AM IST

ಸದ್ಗುಣಗಳಿದ್ದಾಗ ಭೂಮಿಯೇ ಸ್ವರ್ಗ

ಬಟ್ಟೆಯಲ್ಲಿನ ಗಾಢ ಕೊಳೆಯ ಮುಂದೆ ಸಾಬೂನು ಸೋಲುವಂತೆ ದುರ್ಗುಣಗಳ ಮುಂದೆ ಸದ್ಗುಣಗಳು ಸೋಲುತ್ತವೆ. ಬಣ್ಣದ ಮಾತುಗಳ ಮುಂದೆ ಸತ್ಯ ವಾಕ್ಯಗಳು ಧ್ವನಿ ಕಳೆದುಕೊಳ್ಳುತ್ತವೆ. ಕುಕರ್ಮಗಳ ಮುಂದೆ ಸತ್ಕರ್ಮಗಳು ಗೌಣವಾಗುತ್ತವೆ. ಆದರೂ ಸುದೈವವಶಾತ್‌ ಅಂತಿಮ ವಿಜಯವು ವಿರುದ್ಧ ರೀತಿಯದ್ದಾಗಿರುತ್ತದೆ. ಏಕೆಂದರೆ, ಸಾಬೂನು ಸೋತರೂ ಕಲೆ, ಕೊಳೆಯ ಅಸ್ತಿತ್ವವು ಅತ್ಯಲ್ಪ ಕಾಲದ್ದು. ಹಾಗೆಯೇ ದುರ್ಗುಣಗಳು, ಕುಕರ್ಮಗಳು, ಬಣ್ಣದ ಮಾತುಗಳು. ಒಳಿತಿಗೆ ಬಾಳಿಕೆ ಹೆಚ್ಚು.

ಡಿ.ವಿ.ಜಿ. ಹೇಳುತ್ತಾರೆ:
ಸತ್ಯವಂತನನರಸಲೆನುತ ಪೇಟೆಗಳೊಳಗೆ |
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು |
ತಾತ್ತಿÌಕ ಡಯೋಜೆನಿಸ್‌-ಮಂಕುತಿಮ್ಮ ||
ಕ್ರಿ.ಶ. 412-322 ರ ಕಾಲದಲ್ಲಿ ಗ್ರೀಸ್‌ ದೇಶದ ಡಯೋಜೆನಿಸ್‌ ಎಂಬವನು ಸತ್ಯವಂತನಾದವನನ್ನು ಕಾಣಬೇಕೆಂದು ನಡುಹಗಲಿನಲ್ಲಿ ದೀವಟಿಗೆ ಹಿಡಿದು ಹುಡುಕಾಡಿ, ಸತ್ಯವಂತರು ಎಲ್ಲೂ ಕಾಣ ಸಿಗಲಿಲ್ಲ, ಇಂತಹ ಈ ಲೋಕದ ಸಹವಾಸ ನನಗೆ ಬೇಡ ಎಂದು ಲೋಕಸಂಪರ್ಕದಿಂದ ದೂರವಾಗುವುದಕ್ಕಾಗಿ ಒಂದು ತೊಟ್ಟಿಯ ಒಳಗೆ ವಾಸ ಮಾಡಿದನಂತೆ.

ಆ ಕಾಲದಲ್ಲಿಯೇ ಸತ್ಯವಂತರು ಆತನಿಗೆ ಕಾಣಸಿಗಲಿಲ್ಲ. ಆದರೂ ಕಾಲ ಪೂರ್ತಿ ಕೆಟ್ಟುಹೋಗಿಲ್ಲ. ಒಳಿತು ಅಲ್ಲೊ ಇಲ್ಲೊ ಆದರೆ ಎಲ್ಲೆಲ್ಲೂ ಇದೆ. ಸತ್ಯವಂತರು ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ದೀವಟಿಗೆ ಹಿಡಿದು ಹುಡುಕಿದರೆ ಸತ್ಯವಂತರು ಸಿಗುತ್ತಾರೋ ಇಲ್ಲವೋ; ಅಂತರಂಗದ ಕಣ್ಣು ತೆರೆದು ನೋಡಿದರೆ ಸತ್ಯವಂತರೇ ಏಕೆ? ಸತ್ಯವೇ ಗೋಚರಿಸುತ್ತದೆ. ಸದ್ಗುಣಗಳು, ನಮಗೆ ಒಳಿತನ್ನೇ ನೀಡುತ್ತವೆ. ಸತ್ಕರ್ಮಗಳನ್ನು ಮಾಡುವುದು ನಮ್ಮ ಸ್ವಭಾವವಾಗಬೇಕು.

ನರಕ ತಪ್ಪಿತು ಧರ್ಮಜಂಗೆ, ದಿಟ, ಆದೊಡೇಂ |
ನರಕದರ್ಶನದುಃಖ ತಪ್ಪದಾಯಿತಲ? ||
ದುರಿತತರುವಾರು ನೆಟ್ಟುದೊ, ನಿನಗಮುಂಟು ಫ‌ಲ |
ಚಿರಋಣದ ಲೆಕ್ಕವದು-ಮಂಕುತಿಮ್ಮ ||
ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ “ಹತೋಶ್ವತ್ಥಾಮೋ ನಾಮ ಕುಂಜರಃ’ ಎಂದು ಧರ್ಮರಾಜನ ಬಾಯಿಯಿಂದ ಕೂಗಿಸಿ, “ಹತೋಶ್ವತ್ಥಾಮೋ..’ ಎಂದ ಕೂಡಲೇ ಪಾಂಚಜನ್ಯ ಮೊಳಗಿಸಿದ್ದರಿಂದ ದ್ರೋಣರು ತನ್ನ ಮಗ ಅಶ್ವತ್ಥಾಮನೇ ಸತ್ತನೆಂದು ಭ್ರಮಿಸಿ ಶಸ್ತ್ರಸಂನ್ಯಾಸ ಮಾಡಿ ಶತ್ರುಗಳಿಂದ ಹತನಾಗುತ್ತಾನೆ. ಇದರಿಂದ ಧರ್ಮರಾಜನಿಗೆ ಮೊದಲು ನರಕದರ್ಶನ ಮಾಡಿ ಬಳಿಕ ಸ್ವರ್ಗಕ್ಕೆ ಹೋಗಬೇಕಾಯಿತು. ಜೀವನ ಪೂರ್ತಿ ಸತ್ಯಸಂಧನಾಗಿದ್ದು, ಇಲ್ಲಿ ಪೂರ್ತಿ ಸತ್ಯವೂ ಅಲ್ಲದ, ಪೂರ್ತಿ ಸುಳ್ಳೂ ಅಲ್ಲದ ಮಾತನ್ನು ಆಡಿದುದಕ್ಕಾಗಿ ಈ ಪ್ರಮೇಯ ಎದುರಾಯಿತು. ಹಾಗಾಗಿ ಸ್ವರ್ಗ ಸಿಗುತ್ತದೆಯೋ ಇಲ್ಲವೋ, ಸತ್ಯ, ಸದ್ಗುಣಗಳಿದ್ದಾಗ ಜೀವನವೇ ಸ್ವರ್ಗ.

- ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.