ಕಷ್ಟಗಳಿಂದಲೇ ಬದುಕಿಗೆ ಅನುಭವದ ಪಾಠ


Team Udayavani, Jul 9, 2018, 3:46 PM IST

9-july-15.jpg

ಎಷ್ಟೋ ಸಂಬಂಧಗಳು ನಾವು ಹುಟ್ಟುವಾಗಲೇ ನಮ್ಮೊಂದಿಗೆ ಬೆಸೆದಿದ್ದರೆ, ಮತ್ತೆ ಕೆಲವನ್ನು ನಾವು ಬೆಸೆಯುತ್ತಾ ಹೋಗುತ್ತೇವೆ. ಯಾವುದೂ ಶಾಶ್ವತವಲ್ಲ ಎಂಬುದು ನಮ್ಮ ಒಳಮನಸ್ಸಿಗೆ ಗೊತ್ತಿದ್ದರೂ ಮತ್ತೆಮತ್ತೆ ಈ ಬಂಧನಗಳ ಸುಳಿಯೊಳಗೆ ಸಿಲುಕುತ್ತೇವೆ, ಅದನ್ನು ನಾವು ಇಷ್ಟ ಪಡುತ್ತೇವೆ. ಎಷ್ಟೇ ಕಷ್ಟಗಳು ಬಂದರೂ ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ. ಆದರೆ ಸಿಟ್ಟು, ಅಹಂಕಾರ, ನಿರ್ಲಕ್ಷ್ಯವೆಂಬ ಮೂರು ವಿಚಾರಗಳು ಬಾಂಧವ್ಯದೊಳಗೆ ನುಸುಳಿಕೊಂಡರೆ ಸಾಕು ಸಂಬಂಧಗಳು ಮುರಿದು ಬೀಳುತ್ತವೆ.

ಇದನ್ನು ಹೊರತಾಗಿ ಬದುಕಿನಲ್ಲಿ ಎದುರಾಗುವ ಕಷ್ಟಗಳು ಕೂಡ ನಾವು ನಮ್ಮ ಸಂಬಂಧಗಳಿಂದ ದೂರ ಸರಿಯುವಂತೆ ಮಾಡುತ್ತದೆ. ಇದರಿಂದ ನಾವು ನೆಮ್ಮದಿಯಾಗಿರುತ್ತೇವೆ. ಆದರೆ ನಮ್ಮನ್ನು ನಂಬಿಕೊಂಡವರು, ನಮಗಾಗಿ ಹಂಬಲಿಸುತ್ತಿರುತ್ತಾರೆ. ಸಂಬಂಧಗಳಿಂದ ದೂರ ಹೋಗುವುದೆಂದರೆ ಒಂದು ರೀತಿಯಲ್ಲಿ ನಾವಿಲ್ಲಿ ನಮ್ಮ ಕರ್ತವ್ಯ, ಜವಾಬ್ದಾರಿಯಿಂದ ಓಡಿ ಹೋಗುವುದೆಂದೇ ಅರ್ಥ. ಆದರೆ ಎಲ್ಲದಕ್ಕೂ ಇದು ಪರಿಹಾರವಲ್ಲ. ಇದನ್ನು ನಿರೂಪಿಸುವ ಪುಟ್ಟ ಕಥೆಯೊಂದು ಇಲ್ಲಿದೆ.

ಒಂದು ಊರಿನಲ್ಲಿ ವಿಷ್ಣು ಎಂಬ ಯುವಕನಿದ್ದ. ಬದುಕಿನಲ್ಲಿ ಸಾಕಷ್ಟು ತೊಂದರೆಗಳು ಎದುರಾದವು. ದುಡಿಯಲು ಶಕ್ತಿ ಇಲ್ಲದ ತಂದೆ, ತಾಯಿಯನ್ನು ನೋಡಿಕೊಳ್ಳಲು ಹಣದ ಕೊರತೆಯೂ ಎದುರಾಯಿತು. ಕೊನೆಗೆ ತಾನು ಸನ್ಯಾಸಿಯಾಗುತ್ತೇನೆ ಎಂದುಕೊಂಡು ಯಾರಲ್ಲೂ ಹೇಳದೆ ಮನೆಯಿಂದ ಹೊರಡುತ್ತಾನೆ. ಊರ ಹೊರಗಿದ್ದ ಸನ್ಯಾಸಿಯೊಬ್ಬರನ್ನು ಭೇಟಿಯಾಗಿ ನೀವು ನನಗೆ ಸನ್ಯಾಸತ್ವವನ್ನು ಕೊಡಿಸಬೇಕು ಎಂದು ಹೇಳುತ್ತಾನೆ. ಆಗ ಸನ್ಯಾಸಿ ಸರಿ. ಆದರೆ ಅದಕ್ಕಿಂತಲೂ ಮೊದಲು ನೀನು ನನಗೆ ಈ ಪ್ರಪಂಚದಲ್ಲಿ ಅತಿ ಸುಂದರವಾದ ಮೂರು ವಸ್ತುಗಳನ್ನು ತಂದುಕೊಡಬೇಕು ಎನ್ನುತ್ತಾನೆ.

ಗುರುಗಳ ಒಪ್ಪಿಗೆ ಪಡೆದು ಹೊರಟ ವಿಷ್ಣು, ಮೊದಲು ಮನೆಗೆ ಹೋಗಿ ಅಪ್ಪ, ಅಮ್ಮನಿಗೆ ವಿಷಯ ತಿಳಿಸಬೇಕು ಎಂದುಕೊಳ್ಳುತ್ತಾನೆ. ಮನೆಗೆ ಬಂದಾಗ ಅಪ್ಪ, ಅಮ್ಮ ಇಬ್ಬರೂ ಮಗನಿಗಾಗಿ ಎದುರು ನೋಡುತ್ತಿರುತ್ತಾರೆ. ಮೂರು ದಿನಗಳಿಂದ ಊಟ, ವಿಶ್ರಾಂತಿ ಇಲ್ಲದೆ ಮಗನಿಗಾಗಿ ಹುಡುಕಿ ಸುಸ್ತಾಗಿದ್ದ ಅವರು ಮಗ ಬಂದ ತತ್‌ಕ್ಷಣ ಆತನ್ನು ಸಂತೋಷದಿಂದ ಆಲಂಗಿಸುತ್ತಾರೆ. ಮನೆ ಬಿಟ್ಟು ಹೋಗಿದ್ದಕ್ಕೆ ಬಯ್ಯುತ್ತಾರೆ. ಪ್ರೀತಿಯಿಂದ ಮುದ್ದಿಸುತ್ತಾರೆ. ಬಿಸಿಬಿಸಿಯಾದ ಅಡುಗೆ ಮಾಡಿ ಬಡಿಸುತ್ತಾರೆ. ತಾನಿಲ್ಲದೆ ಮನೆಗೆ ಅಡುಗೆ ಸಾಮಗ್ರಿಗಳು ಎಲ್ಲಿಂದ ಬಂತು ಎಂದು ಕೇಳುತ್ತಾನೆ ವಿಷ್ಣು. ಆಗ ಅಪ್ಪ, ಅಮ್ಮ ಹೇಳುತ್ತಾರೆ, ನಿನಗೋಸ್ಕರ ಊರೀಡಿ ಸುತ್ತಾಡಿದೆವು. ಆಗ ಒಂದುಕಡೆ ತೋಟ ನೋಡಿಕೊಳ್ಳುವ ಕೆಲಸ ಸಿಕ್ಕಿತು. ಹೆಚ್ಚು ಕಷ್ಟವಿಲ್ಲ. ನಮಗಿಬ್ಬರಿಗೂ ಇದು ಸಾಧ್ಯ ಎಂದೆನಿಸಿತು. ಕೂಡಲೇ ಒಪ್ಪಿಕೊಂಡೆವು. ಆಗ ವಿಷ್ಣುವಿಗೆ ಅವರನ್ನು ಬಿಟ್ಟು ತಾನು ಸನ್ಯಾಸತ್ವ ಸ್ವೀಕರಿಸಲು ಹೋದದ್ದಕ್ಕೆ ಆತನಿಗೆ ಬೇಸರವಾಗುತ್ತದೆ. ತನ್ನ ತಪ್ಪಿನ ಅರಿವಾಗುತ್ತದೆ.

ಮತ್ತೆ ಮರಳಿ ಸನ್ಯಾಸಿಗಳ ಬಳಿ ಬಂದು ಗುರುಗಳೇ ನನಗೆ ಬದುಕಿನ ಅತ್ಯಮೂಲ್ಯವಾದ ವಸ್ತುಗಳು ಸಿಕ್ಕಿವೆ. ಆದರೆ ಅದನ್ನು ನಾನು ನಿಮಗೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ಗುರುಗಳು ಏನದು ಎನ್ನುತ್ತಾರೆ. ಅಪ್ಪ, ಅಪ್ಪನ ಪ್ರೀತಿ, ನನ್ನ ಪ್ರತಿ ಸುಖ- ದುಃಖದಲ್ಲೂ ಜತೆ ಇರುವ ಅವರ ಸ್ನೇಹ, ನನಗಾಗಿ ಏನು ಬೇಕಾದರೂ ಕಳೆದುಕೊಳ್ಳಬಹುದಾದ ಅವರ ತ್ಯಾಗ. ಇದಕ್ಕಿಂತ ಹೆಚ್ಚು ಸುಖ ಕೊಡುವಂತದ್ದು, ಬೆಲೆಬಾಳುವಂತದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅದನ್ನು ಬಿಟ್ಟು ನಾನು ಸನ್ಯಾಸಿಯಾಗಲು ಸಾಧ್ಯವಿಲ್ಲ ಎನ್ನುತ್ತಾನೆ.

ಆಗ ಸನ್ಯಾಸಿ, ಬದುಕಿನಲ್ಲಿ ಎಲ್ಲವನ್ನು ಇದ್ದೂ ನೀನು ಸನ್ಯಾಸಿಯಾಗಬಹುದು. ಅದಕ್ಕಾಗಿ ಎಲ್ಲವನ್ನೂ ತೊರೆದು ಬರಬೇಕಿಲ್ಲ. ಪ್ರೀತಿ, ತ್ಯಾಗ, ಸ್ನೇಹ ನೀನು ಇನ್ನೊಬ್ಬರಿಗೆ ಕೊಡು. ಆಗ ನೀನು ಬದುಕಿನಲ್ಲಿ ಹೆಚ್ಚು ಖುಷಿಯಾಗಿರಲು ಸಾಧ್ಯ ಎನ್ನುತ್ತಾನೆ. ವಿಷ್ಣುವಿಗೆ ಇದು ಸರಿ ಎಂದೆನಿಸುತ್ತದೆ. ಮರಳಿ ಮನೆಗೆ ಹೊರಡುತ್ತಾನೆ.

ಬದುಕಿನಲ್ಲಿ ಕಷ್ಟಗಳು ಬಂದಾಗ ಕರ್ತವ್ಯ, ಜವಾಬ್ದಾರಿಗಳನ್ನು ಮರೆತು ದೂರ ಹೋಗುವುದು, ನಮ್ಮನ್ನು ಆಗಾಧವಾಗಿ ಪ್ರೀತಿಸುವವರನ್ನು ಬಿಟ್ಟುಹೋಗುವುದು ಪರಿಹಾರವಲ್ಲ. ಹೀಗೆ ಮಾಡುವುದರಿಂದ ನಾವು ಖುಷಿಯಾಗಿರಬಹುದು.
ಆದರೆ ಇನ್ನೊಂದು ಕಡೆ ನೂರಾರು ಸಮಸ್ಯೆಗಳು ಹುಟ್ಟಿಕೊಂಡಿರುತ್ತವೆ. ಮಾಡದ ತಪ್ಪಿಗೆ ನಮ್ಮನ್ನೇ ನಂಬಿಕೊಂಡವರು ಶಿಕ್ಷೆ  ಅನುಭವಿಸಬೇಕಾಗುತ್ತದೆ.

 ದಾಕ್ಷಾಯಿಣಿ

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.