ಸಂಬಂಧಗಳನ್ನು ಉಳಿಸುವ ಮೌನ


Team Udayavani, Jul 8, 2019, 5:55 AM IST

n-18

ಮೌನ ಅದೊಂದು ಸುಂದರ ಭಾವ. ಅದರ ಸುಂದರತೆ ಅದೆಷ್ಟೋ ಜನರಿಗೆ ತಿಳಿದಿಲ್ಲ. ಮಾತಿನಲ್ಲೇ ಎಲ್ಲವನ್ನು ಜಯಿಸಬಹುದು ಎಂಬ ಅಹಂಕಾರ ಬಹಳಷ್ಟು ವ್ಯಕ್ತಿಗಳಲ್ಲಿರುತ್ತೆ. ಆದರೆ ಅದೇ ಮಾತು ಅದೆಷ್ಟೋ ಮನೆ, ಮನಗಳನ್ನು ಒಡೆದು ಹಾಕುತ್ತವೆ. ಸಂಬಂಧಗಳ ನಡುವೆ ಬಿರುಕು ಬೀಳುವುದೇ ಮಾತುಗಳ ಭರಾಟೆಯಲ್ಲಿ. ಸಂಬಂಧಗಳ ವಿಷಯದಲ್ಲಿ ಮೌನದ ಪ್ರಾತ ಬಹುದೊಡ್ಡದು. ಸಂಬಂಧಗಳ ಬಾಳಿಕೆಗೆ ಅಲ್ಲಿ ಮೌನ ಸಂದೇಶಗಳು ರವಾನೆಯಾಗುತ್ತಿರುಬೇಕು. ಸಂಬಂಧಗಳಲ್ಲಿ ಮೌನ ಹೇಗೆ ಮಹತ್ತರ ಪಾತ್ರವಹಿಸುತ್ತದೆ ಎಂಬುದನ್ನು ದೃಷ್ಠಾಂತದೊಂದಿಗೆ ವಿವರಿಸುತ್ತೇನೆ ಓದಿ.

ಒಂದು ಊರಿನಲ್ಲಿ ಇಬ್ಬರು ಆತ್ಮೀಯ ಸ್ನೇಹಿತರು. ಎಲ್ಲ ಕೆಲಸಗಳನ್ನು ಜತೆಯಾಗಿ ಮಾಡುತ್ತಿದ್ದರು. ಇವರಿಬ್ಬರ ಸ್ನೇಹವನ್ನು ನೋಡಿ ಊರಿನ ಜನತೆ ಹೆಮ್ಮೆಪಡುತ್ತಿದ್ದರು. ಆದರೆ ಕೆಲವರು ಹೊಟ್ಟೆಯುರಿ ಪಡುತ್ತಿದ್ದರು. ಆ ಆತ್ಮೀಯ ಸ್ನೇಹಿತರ ನಡುವೆ ಅದೆಷ್ಟೋ ಜನರು ಹುಳಿ ಹಿಂಡಲು ಯತ್ನಿಸಿದರೂ ಅವರನ್ನು ಬೇರ್ಪಡಿಸಲು ಸಾಧ್ಯವಾಗುತ್ತಿರಲ್ಲ. ಇವರಿಬ್ಬರ ನಡುವೆ ಯಾವುದೇ ಮನಸ್ತಾಪ ಗಳಿರಲಿಲ್ಲ. ಏನೇ ಕೆಲಸಗಳಿದ್ದರೂ ಇಬ್ಬರಲ್ಲಿದ್ದ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಗುಣ ಎಲ್ಲ ಕೆಲಸಗಳನ್ನು ಸುಗಮಗೊಳಿಸುತ್ತಿತ್ತು. ಅವರಿಬ್ಬರ ಆಲೋಚನಾ ಲಹರಿ ಸಮವಾಗಿದ್ದ ಕಾರಣ ಅಲ್ಲಿ ದೊಡ್ಡ ಪ್ರಮಾಣದ ಮನಸ್ತಾಪ, ಕೋಪ, ಸಿಟ್ಟಿಗೆ ಅವಕಾಶವಿರಲಿಲ್ಲ.

ಇವರಿಬ್ಬರ ನಡುವೆ ಯಾಕೆ ಮನಸ್ತಾಪಗಳಾಗುತ್ತಿರಲಿಲ್ಲ ಎಂಬುದಕ್ಕೆ ಒಂದು ಕಾರಣವಿದೆ. ಇವರಿಬ್ಬರು ಪರಿಚಿತರಾಗಿ ಸ್ನೇಹ ಮೂಡಿ ಆತ್ಮೀಯರು ಎಂದೆನಿಸಿಕೊಂಡ ಇವರಿಬ್ಬರ ನಡುವೆ ಒಂದು ಒಪ್ಪಂದವಾಗಿತ್ತು. ಒಂದು ವೇಳೆ ಯಾವುದೇ ಸಂದರ್ಭದಲ್ಲಿ ಯಾರಾದರೊಬ್ಬರು ಕೋಪಗೊಂಡುಯಾವುದೇ ಕಾರಣಕ್ಕೂ ಮಾತಿಗೆ ಮಾತು ಬೆಳೆಸದಿರುವುದು. ಹೀಗಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬಂದಾಗ ಅವರಿಬ್ಬರು ಅದರ ಬಗ್ಗೆ ಚರ್ಚೆಸದೇ ಕೊಂಚ ಹೊತ್ತು ತಮ್ಮ ಪಾಡಿಗಿದ್ದು ಬಿಡುತ್ತಿದ್ದರು. ಆಗ ಅಲ್ಲಿ ಮನಸ್ತಾಪಕ್ಕೆ ತಾರಕಕ್ಕೇರುವ ಪ್ರಮೇಯವೇ ಇರಲಿಲ್ಲ. ಇಬ್ಬರ ಕೋಪ ತಣ್ಣಗಾದಾಗ ಪರಸ್ಪರ ಮಾತುಕತೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಮನಸ್ತಾಪದ ವಿಷಯವನ್ನು ಮತ್ತೆ ಚರ್ಚಿಸುತ್ತಲೇ ಇರಲಿಲ್ಲ. ಅದನ್ನು ಅಲ್ಲೇ ಬಿಟ್ಟು ಮುಂದಿನ ಯೋಜನೆಯ ಬಗ್ಗೆ ಕಾರ್ಯಗತಗೊಳ್ಳುತ್ತಿದ್ದರು. ಇದು ಅವರ ನಡುವಿನ ಒಪ್ಪಂದ.

ಇವರಿಬ್ಬರ ಈ ಒಪ್ಪಂದಕ್ಕೆ ಪೂರಕವಾಗಿದ್ದು ಮೌನ ಎಂಬ ಮುತ್ತು. ಒಂದು ವೇಳೆ ಮನಸ್ತಾಪದ ಸಂದರ್ಭದಲ್ಲಿ ಇಬ್ಬರು ಮೌನ ತಾಳದೇ ಮಾತಿಗೆ ಮಾತು ಬೆಳದು ಜಗಳ ಮಾಡಿಕೊಳ್ಳುತ್ತಿದ್ದರೆ ಸುಂದರವಾದ ಸ್ನೇಹದಲ್ಲಿ ಬಿರುಕು ಬೀಳುವ ಸಾಧ್ಯತೆಗಳು ದಟ್ಟವಾಗಿತ್ತು. ಅದು ಅವರು ಮಾಡದೇ ಇದ್ದ ತಪ್ಪು. ಏನೋ ಸಮಸ್ಯೆ ಯಾಗಿದೆ ಎಂದಾ ದಾಗ ಇಬ್ಬರ ಆ ಸಮಸ್ಯೆ ಗಳ ಬಗ್ಗೆ ಮಾತು ಮುಂದು ವರಿಸದೆ ಮೌನಕ್ಕೆ ಶರಣಾದಾಗ ಅಲ್ಲಿ ಸಂಬಂಧದ ಬೇರು ತುಂಡಾಗದೇ ಇನ್ನಷ್ಟು ಬಲಿಷ್ಠವಾ ಗತೊಡಗಿತು. ಅದಕ್ಕೆ ಮೌನಕ್ಕೆ ಹೆಚ್ಚಿನ ಮೌಲ್ಯವಿದೆ ಎಂದು ಹೇಳು ವುದು. ಈ ಮೌನ ಎಲ್ಲ ಸಂಬಂಧ ಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

•ರಮ್ಯಾ ಕೆದಿಲಾಯ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.