ಐವತ್ತರ ಅನಂತರ ಆರೋಗ್ಯದ ಬಗ್ಗೆ ಇರಲಿ ಕಾಳಜಿ


Team Udayavani, Apr 30, 2019, 6:00 AM IST

HEALTHA

ಯೌವನದಲ್ಲಿ ದೇಹದ ಬಗ್ಗೆ ಕಾಳಜಿ ಹೊಂದಿರುವ ಅದೆಷ್ಟೋ ಮಂದಿ 50 ದಾಟಿದಂತೆ ದೇಹಾರೋಗ್ಯದ ಮೇಲಿನ ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಇದರಿಂದಾಗಿ ವೃದ್ಧಾಪ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.50 ವರ್ಷ ದಾಟಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಆದರೆ ಒಳ್ಳೆಯ ಜೀವನ ಕ್ರಮದಿಂದ ದೇಹವನ್ನು ಚುರುಕಾಗಿರಿಸಲು ಸಾಧ್ಯ. ನಿಯಮಿತ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ನಿದ್ದೆ, ಒತ್ತಡ ರಹಿತ ಜೀವನ ಇವೆಲ್ಲ ಆರೋಗ್ಯ ಸಮತೋಲನಕ್ಕೆ ಕಾರಣಗಳಾಗಿ ರುತ್ತದೆ.

ಆಹಾರ ಮಿತವಾಗಿರಲಿ
ಆಹಾರ ಕ್ರಮದಲ್ಲಿ ನಿಯಂತ್ರಣವಿದ್ದರೆ 50ರ ಬಳಿಕ ಟೈಪ್‌ 2 ಡಯಾಬಿಟೀಸ್‌, ಸ್ಥೂಲಕಾಯಿಲೆಯಂಥ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಹೆಚ್ಚು ತರಕಾರಿ, ಹಣ್ಣು ಹಂಪಲು, ಡ್ರೈ ಫ‌ೂಟ್ಸ… , ಕೊಬ್ಬು ರಹಿತ ಆಹಾರ , ಮೀನು, ಪ್ರೋಟಿನ್‌ ಉಳ್ಳ ಪದಾರ್ಥಗಳ ಸೇವನೆ ಮಾಡಬೇಕು. ಉಪ್ಪು, ಹುಳಿ, ಖಾರ, ಸಕ್ಕರೆ ಪದಾರ್ಥ ಮಿತವಾಗಿ ಬಳಸಿದಷ್ಟು ಉತ್ತಮ.

ಆರೋಗ್ಯ ತಪಾಸಣೆ
ಪಾರಂಪರಿಕ ಕಾಯಿಲೆಗಳು ಕೆಲವೊಮ್ಮೆ 50 ವರ್ಷದ ಬಳಿಕ ಬಾಧಿಸುವ ಸಾಧ್ಯತೆ ಇದೆ. ಬಿಪಿ, ಡಯಾಬಿಟಿಸ್‌ ಇತ್ಯಾದಿಗಳು ವಂಶ ಪಾರಂಪರ್ಯದಿಂದ ಬರುವುದರಿಂದ ತಿಂಗಳಿಗೆ ಒಂದು ಬಾರಿ ದೇಹದ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು. ನುರಿತ ವೈದ್ಯರಿಂದ ಸಲಹೆ ಪಡೆದು ಕಣ್ಣಿನ ತಪಾಸಣೆ, ರಕ್ತದೊತ್ತಡ ಕುರಿತು ಜಾಗರೂಕರಾಗಿರಬೇಕು. ವೈದ್ಯರು ನೀಡುವ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಯೋಗಾಸನಗಳಿಗೆ ಸಮಯವಿರಲಿ
50 ವರ್ಷ ದಾಟಿದ ಬಳಿಕ ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಒಂದು ತಾಸು ನಡಿಗೆ, ದಿನಕ್ಕೆ 7ರಿಂದ 8 ತಾಸು ನಿದ್ದೆ, ಯೋಗಾಸನಗಳು ಅವಶ್ಯ. ದುರಾಭ್ಯಾಸದಿಂದ ದೂರ ಉಳಿದಲ್ಲಿ ಮತ್ತಷ್ಟು ಆರೋಗ್ಯ ಉತ್ತಮವಾಗಿರುತ್ತದೆ. ದಿನಕ್ಕೆ 2ರಿಂದ 3 ಲೀಟರ್‌ ನೀರು ಸೇವನೆ ಚಯಾಪಚನ ಕ್ರಿಯೆಗೆ ಸಹಾಯವಾಗಲಿದೆ. ರೋಗ ಲಕ್ಷಣ ಗೋಚರಿಸುವ ಮೊದಲು ಆರೋಗ್ಯ ಕಾಳಜಿ ಇದ್ದಲ್ಲಿ ಸಂಭವಿಸಬಹುದಾದ ಆಘಾತವನ್ನು ತಡೆಯಬಹುದು. ಸ್ನಾಯು ಸಂಬಂಧಿಸಿದ‌ ವ್ಯಾಯಾಮ ತೂಕವನ್ನು ಸಮತೋಲದಲ್ಲಿ ಇರಿಸುತ್ತದೆ. ಪ್ರಾಣಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ದಿನ ಪೂರ್ತಿ ಸಕ್ರಿಯವಾಗುತ್ತದೆ.

-ಧನ್ಯಾ ಶ್ರೀ ಬೋಳಿಯಾರ್‌

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.