ಸಕ್ಕರೆ ತ್ಯಜಿಸಿ ದೇಹದಲ್ಲಿ ಬದಲಾವಣೆ ಕಾಣಿ


Team Udayavani, Jul 23, 2019, 5:32 AM IST

i-37

ಇತ್ತೀಚೆಗೆ ಎಲ್ಲರು ಸಕ್ಕರೆಯನ್ನು ದ್ವೇಷಿಸಲಾರಂಭಿಸಿದ್ದಾರೆ. ಹೌದು ಸಕ್ಕರೆ ದೇಹ ತೂಕ ಇಳಿಕೆಯ ಯೋಜನೆಯನ್ನು ಹಾಳುಗೆಡವುತ್ತದೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ತರುತ್ತದೆ ಎಂಬ ಕಾರಣಕ್ಕೆ ಸಕ್ಕರೆಯನ್ನು ದ್ವೇಷಿಸುವವರು ಹೆಚ್ಚು. ಡಯಟ್ ಯೋಜನೆಗೆ ಸಕ್ಕರೆ ಬಹುದೊಡ್ಡ ದುಷ್ಟ. ಆದರೆ ಸಿಹಿ ಪದಾರ್ಥಗಳನ್ನು ನೋಡಿದಾಕ್ಷಣ ಅದನ್ನು ತಿನ್ನಬೇಕೆಂಬ ಆಸೆ ಹುಟ್ಟುವುದು ಸಹಜ. ಸಕ್ಕರೆ ಬಳಕೆಯನ್ನು ನಿಲ್ಲಿಸುವುದರಿಂದ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅವು ಯಾವ ಬದಲಾವಣೆ ಎಂಬ ಮಾಹಿತಿ ಇಲ್ಲಿದೆ.

ತೂಕ ಇಳಿಕೆ
ವರದಿಗಳ ಪ್ರಕಾರ ಸಕ್ಕರೆಯನ್ನು ತ್ಯಜಿಸಿದರೆ ಗ್ಲೂಕೋಸ್‌ ಇಲ್ಲದಿರುವ ಕಾರಣ ದೇಹ ಕೊಬ್ಬಿನಿಂದ ಕೀಟೋನ್‌ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುತ್ತದೆ. ಇದು ಕೊಬ್ಬನ್ನು ಕರಗಿಸುವ ಲಕ್ಷಣ. ಒಂದು ವೇಳೆ ಕೀಟೋ ಜ್ವರ ಅಂದರೆ ತಲೆನೋವು, ವಿವರಿಸಲಾಗದ ಸುಸ್ತು ಹಾಗೂ ಸೆಳೆತಗಳಿಂದ ಕೂಡಿರುವ ಜ್ವರವನ್ನು ಹೊಂದಿದ್ದರೆ ಒಂದು ವಾರದೊಳಗೆ ರೋಗಲಕ್ಷಣಗಳು ಕಡಿಮೆಯಾಗುತ್ತದೆ. ಕೀಟೋದ ಅಡ್ಡಪರಿಣಾಮ ಹಾಗೂ ಈ ಡಯಟ್ ಸೂಕ್ತವೆ ಎಂಬುದನ್ನು ಪೌಷ್ಟಿಕತಜ್ಞರಲ್ಲಿ ಕೇಳಿ ಅನುಸರಿಸುವುದು ಉತ್ತಮ.

ಆರೋಗ್ಯಕರ ಹೃದಯ
ಸಕ್ಕರೆಯನ್ನು ಸೇವಿಸಿದಾಗ ಇನ್ಸುಲಿನ್‌ ಮಟ್ಟ ಹೆಚ್ಚುತ್ತದೆ. ಇದು ನರಮಂಡಲವನ್ನು ಉತ್ತೇಜಿಸುತ್ತದೆ. ಹೀಗಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚುತ್ತದೆ. ಒಂದು ವೇಳೆ ಸಕ್ಕರೆಯನ್ನು ತ್ಯಜಿಸಿದಾಗ ಒಂದು ವಾರದಲ್ಲಿ ರಕ್ತದೊತ್ತಡ ಸ್ಥಿರವಾಗುತ್ತದೆ ಹಾಗೂ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ.

ಮಧುಮೇಹ ನಿಯಂತ್ರಣ
ಎಲ್ಲ ಮಧುಮೇಹಿಗಳಿಗೆ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೇಗೆ ಕಡಿಮೆಗೊಳಿಸುವುದೆಂಬ ಚಿಂತೆ. ಸಕ್ಕರೆ ಪ್ರಮಾಣ ಕುಗ್ಗಿಸಿದಲ್ಲಿ ದೇಹದಲ್ಲಿನ ಇನ್ಸುಲಿನ್‌ ಉತ್ಪಾದನೆ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳುತ್ತಾರೆ. ಆಹಾರ ಸೇವನೆಯಲ್ಲಿ ಸಕ್ಕರೆಯನ್ನು ಬಿಟ್ಟು ಆರೋಗ್ಯಕರ ಆಯ್ಕೆಯನ್ನು ಸೇರಿಸಿದಾಗ ದೇಹದಲ್ಲಿ ಕೊಬ್ಬು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತದಲ್ಲಿನ ಇನ್ಸುಲಿನ್‌ ಮಟ್ಟ ಆರೋಗ್ಯಕರವಾಗಿರುವುದು.
ಹೊಳೆಯುವ ಚರ್ಮ
ಸಕ್ಕರೆ ಕೇವಲ ತೂಕ, ಮಧುಮೇಹ ಮತ್ತು ಇತರ ಜೀವನಶೈಲಿಯನ್ನು ಕೆಡಿಸುವುದು ಮಾತ್ರವಲ್ಲದೇ ಮೊಡವೆಗಳನ್ನು ಪ್ರಚೋದಿಸುತ್ತದೆ.ವಾಸ್ತವವಾಗಿ ಅಮೆರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ ನಡೆಸಿದ ಅಧ್ಯಯನವು ಸಕ್ಕರೆ ತುಂಬಿರುವ ಸೋಡಾ, ಸಾಫ್ಟ್ ಡ್ರಿಂಕ್ಸ್‌ಗಳನ್ನು ತ್ಯಜಿಸಿದ ಮಹಿಳೆಯರು ಉತ್ತಮ ಚರ್ಮವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಉತ್ತಮ ಮನಸ್ಥಿತಿ
ಕೊಲಂಬಿಯಾ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಅಧಿಕ ಸಕ್ಕರೆಯುಳ್ಳ ಆಹಾರವನ್ನು ಸೇವಿಸುವ ಮಹಿಳೆಯರಲ್ಲಿ ಕಿರಿಕಿರಿ ಮತ್ತು ಆತಂಕಗಳು ಹೆಚ್ಚಿರುತ್ತವೆ ಎಂದು ತಿಳಿದು ಬಂದಿದೆ. ಸಕ್ಕರೆಯನ್ನು ತ್ಯಜಿಸಿದ್ದಲ್ಲಿ ಉತ್ತಮ ಮನಃಸ್ಥಿತಿ ಹೊಂದಲು ಸಾಧ್ಯ.

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.