ಅಭಿಜಾತ ಪ್ರತಿಭೆಯ ನೃತ್ಯ ಪ್ರವೀಣೆ ಅನುಪಮಾ ಶೆಣೈ ಭಟ್‌


Team Udayavani, Apr 14, 2017, 3:50 AM IST

14-KALA-3.jpg

ಒಲಿದ ಕಲೆಯನ್ನು ಉಳಿಸಿ- ಬೆಳೆಸುವುದೊಂದು ಕಲೆಯೇ ಸರಿ. ಅದರಲ್ಲೂ ಕಲೆಯನ್ನು ನೌಕರಿ ಮತ್ತು ಸಂಸಾರದೊಂದಿಗೆ ಸಮತೋಲನಗೊಳಿಸಿ, ನಿಭಾಯಿಸುವುದು ಸುಲಭ ವಲ್ಲ. ಇದಕ್ಕೆ ಕಠಿನ ಪರಿಶ್ರಮ, ಏಕಾಗ್ರತೆ, ತಪಸ್ಸಿನಂತೆ ದುಡಿಮೆ ಇವೆಲ್ಲವೂ ಮುಖ್ಯ. ಅನುಪಮಾ ಶೆಣೈ ಭಟ್‌ ಕಲೆಯನ್ನು ನೌಕರಿ ಮತ್ತು ಸಂಸಾರದೊಂದಿಗೆ ಸಮನ್ವಯಗೊಳಿಸಿ ಯಶ ಕಂಡಿದ್ದಾರೆ.

ಉಡುಪಿ ಮೂಲದ ಕಲಾಪ್ರೇಮಿ ತೋನ್ಸೆ ವೆಂಕಟೇಶ ಶೆಣೈ ಮತ್ತು ಪದ್ಮಿನಿ ವಿ. ಶೆಣೈ ದಂಪತಿಯ ಸುಪುತ್ರಿ ಅನುಪಮಾ ದೂರದರ್ಶನದಿಂದ ಪ್ರಭಾವಿತರಾಗಿ ಆರನೇ ವಯಸ್ಸಿನಿಂದ ಭರತನಾಟ್ಯ ಕಲಿಯಲಾರಂಭಿಸಿದರು. ಹೆತ್ತವರ ಹುರಿದುಂಬಿಸು ವಿಕೆಯಿಂದ ಮುಂಬೈಯ ಮಲಯಾಳಂ ಸಮಾಜದಲ್ಲಿ ಭರತನಾಟ್ಯ ಕಲಿಕೆ ಮುಂದುವರಿಸಿದರು. ತದನಂತರ ಒಡಿಸ್ಸಿ ನೃತ್ಯಾಭ್ಯಾಸದಲ್ಲಿ ತೊಡಗಿ, ತನ್ನ ಅಭಿಜಾತ ಪ್ರತಿಭೆಯನ್ನು ಅನಾವರಣಗೊಳಿಸಲಾರಂಭಿಸಿದರು. ಭರತನಾಟ್ಯ, ಜಾನಪದ, ಒಡಿಸ್ಸಿ ನೃತ್ಯಕಲೆಗಳು ಇವರಲ್ಲಿ ಸಂಗಮಿಸಿವೆ. ಬಿ.ಎಚ್‌.ಎಂ.ಎಸ್ಸಿ ಪದವೀಧರೆಯಾಗಿದ್ದು, ಮುಂಬೈಯ ಪ್ರತಿಷ್ಠಿತ ಕೇಂಬ್ರಿಡ್ಜ್ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದಾರೆ.

30 ವರ್ಷ ವಯಸ್ಸಿನ ಇವರು ಪದವಿ ಓದುತ್ತಿರುವಾಗ ಮುಂಬೈ ವಿ.ವಿ.ಯನ್ನು ಪ್ರತಿನಿಧಿಸಿ ಪಡೆದ ಬಹುಮಾನಗಳು ಈ ರಂಗವನ್ನು ಅಪ್ಪಿಕೊಳ್ಳಲು ತಿರುವು ಎನ್ನುತ್ತಾರೆ ಅನುಪಮಾ. ಇಂದುಮತಿ ಲೆಲೆ, ಕೇಟಕಿ ತಂಬಿ ಮತ್ತು ದಿಲೀಪ್‌ ತಂಬಿ ಅನುಪಮಾರ ಗುರುಗಳು. ಏಕಪಾತ್ರಾಭಿನಯಕ್ಕೆ ಪ್ರಾಧಾನ್ಯ ಅವರ ಹೆಚ್ಚುಗಾರಿಕೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವೆಡೆ ಈ ತನಕ ನೀಡಿದ ನೂರಾರು ಕಾರ್ಯಕ್ರಮಗಳು, ಈಚೆಗೆ ಪ್ರತಿಷ್ಠಿತ ಸ್ವರ-ಸಾಧನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಮಾನ, ಮುಂಬೈಯ ಖ್ಯಾತ ಕೊಂಕಣಿ ಕಲಾಸಂಘದಲ್ಲಿ ಕೆಲಕಾಲ ಸಕ್ರಿಯ ಸೇವೆ, ಸಂಘದ ಲಿಮ್ಕಾ ಬುಕ್‌ನಲ್ಲಿ ದಾಖಲಾದ ನಾಟಕ “ನಂದಾದೀಪ’ದಲ್ಲಿ ಪಾತ್ರ ನಿರ್ವಹಣೆ, ಕವಳೆಶ್ರೀ, ನಾಗಾಲ್ಯಾಂಡ್‌ ರಾಜ್ಯಪಾಲ ಪದ್ಮನಾಭ ಆಚಾರ್ಯ ಸಹಿತ ಹಲವಾರು ಗಣ್ಯರಿಂದ ಗೌರವ-ಪ್ರಶಂಸೆ ಅನುಪಮಾರ ನೃತ್ಯಕಲೆಯ ಕ್ರಿಯಾಶೀಲತೆ-ಸೃಜನಶೀಲತೆ ಮತ್ತು ಸಾಧನೆಗಳಿಗೆ ಪ್ರಮಾಣಗಳು.  ಪ್ರಯೋಗ ಶೀಲೆಯೂ ಅಧ್ಯಯನಶೀಲೆಯೂ ಆಗಿರುವ ಅನುಪಮಾ ತನ್ನ ಸಾಧನೆಗೆ ತನ್ನ ಪತಿ ಮತ್ತು ಕುಟುಂಬಿಕರ ಉತ್ತೇಜನವನ್ನೂ ಸ್ಮರಿಸುತ್ತಾರೆ.

ಸಂದೀಪ್‌ ನಾಯಕ್‌ ಸುಜೀರ್‌

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.