ಪುಳಕಗೊಳಿಸಿದ ಪುಟಾಣಿಗಳ ಹರಿದರ್ಶನ

ಯಶಸ್ವಿ ಕಲಾವೃಂದ ಪ್ರಸ್ತುತಿ

Team Udayavani, Oct 25, 2019, 5:00 AM IST

q-53

ಪಾಂಡವರು ದಿಗ್ವಿಜಯಕ್ಕಾಗಿ ಪೂಜಿಸಿ ಬಿಟ್ಟ ತುರಗ ಚಂಪಕಾವತಿಯನ್ನು ಪ್ರವೇಶಿಸಿದಾಗ ಶ್ರೀ ಕೃಷ್ಣನ ದರ್ಶನ ಭಾಗ್ಯ ಸಮೀಪಿಸುತ್ತಿದೆ ಎಂದು ಚಂಪಕಾನಗರದ ಸರ್ವಜನರೂ ಹರ್ಷಿತರಾದರು. ಹಂಸಧ್ವಜ ನೃಪಾಲ ಸುಧನ್ವನನ್ನು ದಳಾಧಿಪತಿಯಾಗಿ ನಿಯಮಿಸಿದಾಗ ಸುಧನ್ವನ ಪ್ರವೇಶ.

ಕುಂಭಾಶಿಯ ಚಂಡಿಕಾ ಪರಮೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿಯ ವಿಷೇಶ ಕಾರ್ಯಕ್ರಮವಾಗಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆಯ ಪುಟಾಣಿಗಳು ಗುರು ಕೊಕೂರು ಸೀತಾರಾಮ ಶೆಟ್ಟಿಯವರ ನಿರ್ದೇಶನದಲ್ಲಿ ಹರಿದರ್ಶನ ಯಕ್ಷಗಾನ ಪ್ರದರ್ಶಿಸಿದರು.

ಚಂಪಕಾಪುರದ ಅರಸ ಹಂಸಧ್ವಜನಾಗಿ ರಂಗ ಪ್ರವೇಶಿಸಿದ ಕು| ನಿಶಾ ಮಲ್ಯಾಡಿ ಗಾಂಭೀರ್ಯವನ್ನು ಪ್ರದರ್ಶಿಸಿ, ಸಾಂಪ್ರದಾಯಿಕ ನಡೆಯೊಂದಿಗೆ ಭಕ್ತಿಯ ಹೂರಣವನ್ನು ತುಂಬಿಕೊಟ್ಟರು. ಜೊತೆಗೆ ಮಂತ್ರಿಯಾಗಿ ಮಾ| ಹೃಷಿಕೇಶ ಪಾತ್ರ ಪೋಷಣೆ ಮಾಡುವಲ್ಲಿ ಯಶಸ್ವಿಯಾದರು.

ಪಾಂಡವರು ದಿಗ್ವಿಜಯಕ್ಕಾಗಿ ಪೂಜಿಸಿ ಬಿಟ್ಟ ತುರಗ ಚಂಪಕಾವತಿಯನ್ನು ಪ್ರವೇಶಿಸಿದಾಗ ಶ್ರೀ ಕೃಷ್ಣನ ದರ್ಶನ ಭಾಗ್ಯ ಸಮೀಪಿಸುತ್ತಿದೆ ಎಂದು ಚಂಪಕಾನಗರದ ಸರ್ವಜನರೂ ಹರ್ಷಿತರಾದರು. ಹಂಸಧ್ವಜ ನೃಪಾಲ ಸುಧನ್ವನನ್ನು ದಳಾಧಿಪತಿಯಾಗಿ ನಿಯಮಿಸಿದಾಗ ಸುಧನ್ವನ ಪ್ರವೇಶ. ಪ್ರಭುದ್ಧತೆಯ ರೀತಿಯಲ್ಲಿ ಸಭ್ಯತೆಯನ್ನು ಮೆರೆದು ಪ್ರಸಂದ ಕೊನೆಯ ತನಕವೂ ಪಾತ್ರದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟರು. ವೀರ, ಶೃಂಗಾರ, ಕರುಣ ಹೀಗೆ ಎಲ್ಲಾ ರಸದ ಇತಿಮಿತಿಯರಿತು ಪಾತ್ರಕ್ಕೆ ಔಚಿತ್ಯ ಒದಗಿಸಿಕೊಟ್ಟರು. ಕು| ಪಂಚಮಿ ವೈದ್ಯ ವೀರ ಸುಧನ್ವರಾದರು, ಧೀರ ಸುಧನ್ವರಾದರು. ಮೋಕ್ಷದ ಸುಧನ್ವರಾದರು.

ರಣರಂಗಕ್ಕೆ ಹೊರಡುವಲ್ಲಿ ತಾಯಿಯ ಆಶೀರ್ವಾದಕ್ಕಾಗಿ ಆಕೆಯ ಅಂತಃಪುರಕ್ಕೆ ತೆರಳಿ ಮಾತೆ ಸುಗಭೆìಗೆ ವಂದಿಸಿದಾಗ ಲೇಸು ಮಗನೆ ಎಂದು ಮಗನಿಗೆ ಶುಭ ಹಾರೈಸಿ, ಕರ್ತವ್ಯ ಪ್ರಜ್ಞೆಯನ್ನು ನೆನಪಿಸಿಕೊಟ್ಟವರು ಸುಭದ್ರಾ ಪಾತ್ರದಾರಿ ಮಾ| ಪ್ರತೀಕ್‌ ಗಾಣಿಗ. ಮುದ್ದಾದ ವೇಷಕ್ಕೆ ನ್ಯಾಯ ಒದಗಿಸಿಕೊಟ್ಟು ಪ್ರೇಕ್ಷಕರ ಮನಗೆದ್ದರು.

ಬಳಿಕ ಮಡದಿ ಪ್ರಭಾವತಿಯಲ್ಲಿ ನಡೆಯೋಣವೆಂದರೆ ಗಂಧ, ಅಕ್ಷತೆ, ವೀಳ್ಯವನ್ನು ಹಿಡಿದು ಅಣ್ಣನಿಗೆ ಶುಭ ಹಾರೈಸುವುದಕ್ಕೆ ಇದಿರಾದವಳು ತಂಗಿ ಕುವಲೆ. 6 ವರ್ಷದ ಬಾಲಕಿ ಕು| ಪರಿಣಿತಾ ವೈದ್ಯ ಚುರುಕಾಗಿ ಅಭಿನಯಿಸಿ ಪ್ರಶಂಸೆಗೆ ಪಾತ್ರಳಾದರು.

ಸತಿ ಶಿರೋಮಣಿ ಪ್ರಭಾವತಿ ಪದ್ಯಕ್ಕೆ ರಂಗ ಪ್ರವೇಶ ಮಾಡಿದವರು ಕು| ಪೂಜಾ ಆಚಾರ್‌. ಮನೋಜ್ಞ ನೃತ್ಯದೊಂದಿಗೆ ಜನ ಮಾನಸದಲ್ಲಿ ಉಳಿದರು. ಮನೆಯಲ್ಲಿ ಉಳಿವ ಸತಿಗೆ ಜವಾಬ್ದಾರಿ ಎಷ್ಟು? ತಾನೆಷ್ಟು ಕರ್ತವ್ಯ ನಿರತಳು? ಹೆಣ್ಣಿಗೆ ಸ್ವರ್ಗ ಯಾವುದು? ಹೆಣ್ಣಾದವಳು ಹೇಗಿರಬೇಕು? ಇವೆಲ್ಲವನ್ನು ರಂಗದಲ್ಲಿ ತುಂಬಿಕೊಟ್ಟು ಪಾತ್ರದ ಪ್ರಬುದ್ಧತೆ ಮೆರೆದರು.

ಅರ್ಜುನನಾಗಿ ಮಾ| ಸಾತ್ಯಕಿ ಮಾತಿನ ಶೈಲಿ, ಕುಣಿತ, ರಂಗನಡೆ ಎಲ್ಲಾ ಕಡೆಯಲ್ಲಿಯೂ ಹದವರಿತು ವ್ಯವಹರಿಸಿದರು. ಸಂಗಡ ಒಡ್ಡೋಲಗಕ್ಕೆ ಪ್ರದ್ಯಮ್ನ-ವೃಷಕೇತುವಾಗಿ ನೆರವಾದವರು ಮಾ| ಹೃಷಿಕೇಶ, ಕು| ನಿಶಾ ಭಂಡಾರಿ ಮಲ್ಯಾಡಿ. ಅರ್ಜುನನ ಒಡ್ಡೋಲಗದಲ್ಲಿ ಮುಂಡಾಸು ವೇಷಧಾರಿಯಾಗಿ ಭರ್ಜರಿ ರಂಗದಲ್ಲಿ ಅಬ್ಬರದಿಂದ ಕಾಣಿಸಿಕೊಂಡರು.

ಸುಧನ್ವಾರ್ಜುನರಿಗೆ ಯುದ್ಧ. ಅರ್ಜುನ ಕೈ ಸೋತಾಗ ಸುಧನ್ವನಿಗೆ ಹರಿದರ್ಶನ. ತನ್ಮೂಲಕ ಚಂಪಕಾನಗರಕ್ಕೇ ಹರಿದರ್ಶನ. ಕು| ಪೂಜಾಳ ಬಂದ ತಕ್ಷಣದೊಳಲ್ಲಿಗೆ… ಪದ್ಯಕ್ಕೆ ಮಿಂಚಿನ ಪ್ರವೇಶ.

ಸುಧನ್ವನ ಮೋಕ್ಷ, ಹರಿದರ್ಶನ ಪ್ರಸಂಗ ಪ್ರದರ್ಶನದ ಯಶಸ್ಸಿಗೆ ಕಾರಣರಾದವರು ಭಾಗವತರು ಪ್ರಾಚಾರ್ಯ ಕೆ.ಪಿ. ಹೆಗಡೆ, ಲಂಬೋದರ ಹೆಗಡೆ. ಮದ್ದಲೆಯಲ್ಲಿ ಲೋಹಿತ್‌ ಕೊಮೆ, ಭರತ್‌ಚಂದನ್‌ ಕೋಟೇಶ್ವರ. ಚಂಡೆಯಲ್ಲಿ ಪ್ರಸಿದ್ಧ ಚಂಡೆ ವಾದಕ ಕೋಟ ಶಿವಾನಂದ.

ಪ್ರಶಾಂತ್‌ ಮಲ್ಯಾಡಿ

ಟಾಪ್ ನ್ಯೂಸ್

10-sagara

Sagara: ಬಾಣಂತಿಗೆ ಕಪಾಳಮೋಕ್ಷ; ಪ್ರಸೂತಿ ವೈದ್ಯರ ವಿರುದ್ಧ ಪ್ರಕರಣ ದಾಖಲು

Retro style trends in social media

Retro Style; ಸೋಶಿಯಲ್‌ ಮೀಡಿಯಾದಲ್ಲೊಂದು ರೆಟ್ರೋ ಸ್ಟೈಲ್‌

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

Koppala; ‘ಒಂದು ವರ್ಷ ಅವಕಾಶ ಕೊಡಿ’ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

Koppala; ‘ಒಂದು ವರ್ಷ ಅವಕಾಶ ಕೊಡಿ’ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

Road Mishap: ಟ್ರಕ್-ಟ್ರ್ಯಾಕ್ಟರ್ ಡಿಕ್ಕಿ; 10 ಕಾರ್ಮಿಕರು ಸಾವು, 3 ಮಂದಿಗೆ ಗಾಯ

Road Mishap: ಟ್ರಕ್-ಟ್ರ್ಯಾಕ್ಟರ್ ಡಿಕ್ಕಿ; 10 ಕಾರ್ಮಿಕರು ಸಾವು; 3 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

10-sagara

Sagara: ಬಾಣಂತಿಗೆ ಕಪಾಳಮೋಕ್ಷ; ಪ್ರಸೂತಿ ವೈದ್ಯರ ವಿರುದ್ಧ ಪ್ರಕರಣ ದಾಖಲು

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

Retro style trends in social media

Retro Style; ಸೋಶಿಯಲ್‌ ಮೀಡಿಯಾದಲ್ಲೊಂದು ರೆಟ್ರೋ ಸ್ಟೈಲ್‌

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.