ಹಂಸಧ್ವನಿಯಾಗಿ ಬೆಳಗಿದ ಕಾರಂತರು 


Team Udayavani, May 4, 2018, 6:00 AM IST

s-5.jpg

ಮಂಗಳೂರಿನ ಚಿತ್ರ ಕಲಾ ಕ್ಷೇತ್ರಕ್ಕೆ ವೇದಿಕೆ ಕಟ್ಟಿಕೊಟ್ಟು ಕೊನೆಯವರೆಗೂ ತೆರೆಯ ಹಿಂದೆ ಇದ್ದು ತೃಪ್ತಿ ಕಂಡುಕೊಂಡ ಕಲಾವಿದ ಪಣಂಬೂರು ಪುರುಷೋತ್ತಮ ಕಾರಂತರು ಇಂದು ನಮ್ಮನ್ನಗಲಿದರೂ ಅವರು ಕಟ್ಟಿರುವ ಬಣ್ಣದ ತೋರಣ ಇನ್ನೂ ಹಸುರಾಗಿಯೇ ಹಸನಾಗಿದೆ. ಸದಾ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಇರುವ ಅವರ ಕಲಾಕೃತಿಗಳಲ್ಲೂ ತಿಳಿ ಬಣ್ಣಗಳೇ ಇದು,ª ವಿಚಾರಧಾರೆಗಳ ಸಾಕಾರ ಸಂಕಲ್ಪಗಳ ಛಾಪು ಮೂಡಿಸುತ್ತಿತ್ತು. ಹಂಸ, ನವಿಲು, ಕೊಳಲು, ಹೂ, ಮರ, ಗಿಡಗಳೆಂಬ ಚಿತ್ತವನ್ನರ‌ಳಿಸುವ ಚಿತ್ರಗಳೇ ವ್ಯಕ್ತವಾಗುತ್ತಿದ್ದು ಕಡು, ಕರಿ ಕೆಂಪು ಬಣ್ಣಗಳ ವಿಕಾರವು ಜತನವಾಗುತ್ತಿರಲಿಲ್ಲ. ವಿವೇಕಾನಂದ ಹಾಗೂ ರಾಮಕೃಷ್ಣರ ಬಹುತೇಕ ಬದುಕಿನ ಅಂಶಗಳನ್ನು ಚಿತ್ರಿಸಿದ್ದು ಅವೆಲ್ಲವೂ ಇಂದು ರಾಮಕೃಷ್ಣ ಮಠದಲ್ಲಿ ಸಂಗ್ರಹಗೊಂಡಿದ್ದು ಮಾತ್ರವಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ಕಲಾಕೃತಿಗಳು ಗ್ಯಾಲರಿಯ ರೂಪದಲ್ಲಿ ಪ್ರದರ್ಶನಗೊಂಡಿರುತ್ತವೆ. ಕಾರಂತರಿಗೂ ರಾಮಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿತ್ತು. ಕಾರಂತರು ತನ್ನ ಬಿಡುವಿನ ವೇಳೆಯನ್ನು ಮಠದಲ್ಲೇ ಕಳೆಯುತ್ತಿದ್ದುದರಿಂದ ಆಧ್ಯಾತ್ಮಿಕ ಚಿಂತನೆ, ಧ್ಯಾನಗಳೊಂದಿಗೆ ಚಿತ್ರಗಳ ನಂಟು ಕೂಡಾ ಬೆಳೆದು ಬಂದಿತ್ತು. 

 ಮಂಗಳೂರಿನ ಮಹಾಲಸಾ ಚಿತ್ರಕಲಾ ಶಿಕ್ಷಣ ಸಂಸ್ಥೆಯ ಆರಂಭದಲ್ಲಿ ಪ್ರಾಂಶುಪಾಲರಾಗಿ ಪಿ.ಪಿ.ಕಾರಂತರು ಉದ್ಯೋಗದಲ್ಲಿದ್ದರು. ಕೋಡಿಕಲ್‌ನಲ್ಲಿ ಕಾರಂತರ ಹಂಸವು ಹಲವಾರು ಮಕ್ಕಳಿಗೆ ಚಿತ್ರ ರಚಿಸುವ ತರಬೇತಿಗೆ ಕುಟೀರವಾಗಿತ್ತು. ಉಡುಗೆ ಹಾಗೂ ಮನಸು ಸದಾ ಶ್ವೇತಮಯವಾಗಿರುತ್ತಿದ್ದುದರಿಂದ ಸೌಮ್ಯ, ಸಜ್ಜನ, ಶಾಂತಭಾವದಲ್ಲೇ ಸಮಾಜವನ್ನು ಕಂಡವರು. ವಿಶ್ವಕಲಾ ದಿನದಂದು ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಚಿತಕಾಮಾನಂದಜೀ ಮಹಾರಾಜ್‌ ಮತ್ತು ಏಕಗಮ್ಯಾನಂದಜೀ ಮಹಾರಾಜ್‌ರವರ ಅಭಿಲಾಷೆಯ ಮೇರೆಗೆ ಕರಾವಳಿ ಚಿತ್ರಕಲಾ ಚಾವಡಿಯು ಕಾರಂತರನ್ನು ನೆನಪಿಸುವ ಚಿತ್ರ – ಸೂತ್ರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರಂತರ ಬದುಕಿನ ಬಗ್ಗೆ ಕಿರು ಸಾಕ್ಷ್ಯಚಿತ್ರದೊಂದಿಗೆ ಚಾವಡಿಯ 24 ಕಲಾವಿದರು ಚಿತ್ರ ಕಲಾಪ್ರದರ್ಶನವನ್ನು ಮಾಡಿರುವರು. ಕಾರಂತರ ಶಿಷ್ಯೆ ಲಲಿತಾ ಕಲ್ಕೂರವರು ಕಾರಂತರ ಬಣ್ಣದ ಬದುಕಿನ ಮೆರುಗಿನ ಸೊಬಗನ್ನು ವಿವರಿಸಿದರು. ಚಾವಡಿಯ ಅನೇಕ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. 

 ವಿಶ್ವಕಲಾ ದಿನದಂದು ಕರಾವಳಿಯ ಹಿರಿಯ ಕಲಾವಿದ ಪಿ.ಪಿ. ಕಾರಂತರನ್ನು ಸ್ಮರಿಸುವ ಮೂಲಕ ಕರಾವಳಿ ಚಿತ್ರಕಲಾ ಚಾವಡಿಯು ರಾಮಕೃಷ್ಣ ಮಠದ ಆಶಯದಲ್ಲಿ ಕರಾವಳಿಯಲ್ಲಿ ಚಿತ್ರ ಕಲಾಕ್ಷೇತ್ರಕ್ಕೆ ನೀಡಿರುವ ಕೊಡುಗೆಯಲ್ಲಿ ಹಿರಿತನದಲ್ಲಿರುವ ಕಾರಂತರನ್ನು ಶಾಶ್ವತವಾಗಿ ನೆನಪಿಸುವಂತ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದೆಂದು ತೀರ್ಮಾನಿಸಲಾಯಿತು. ಕಾರಂತರ ಬದುಕಿನ ಬಗ್ಗೆ ಪುಸ್ತಕ ಪ್ರಕಟಣೆ ಮತ್ತು ಅವರ ಕಲಾಕೃತಿಗಳಿಗೊಂದು ಗ್ಯಾಲರಿಯಾಗಬೇಕೆಂದು ಅವರ ಶಿಷ್ಯರು ಮತ್ತು ಅಭಿಮಾನಿ ಬಳಗದ ದೊಡ್ಡದೊಂದು ಕನಸು ನನಸಾಗಲಿರುವ ಬೆಳಕು ಕಾಣುತ್ತಿದೆ.

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.