ಕುಬಣೂರು ಶ್ರೀಧರ ರಾಯರು ಯಕ್ಷ-ಭೃಂಗ ನಾದ ಮರೆಯಾಗಿದೆ


Team Udayavani, Sep 23, 2017, 10:18 AM IST

23-Kalavihara.jpg

ಭಾಗವತ ಕುಬಣೂರು ಶ್ರೀಧರ ರಾಯರಿಗೆ ಬಂದ ಬದುಕು ಪ್ರಯಾಸದ್ದು; ದೊರೆತ ಸಾವು ನಿರಾಯಾಸವಾದದ್ದು. ಅವರು ಬಿಟ್ಟ ಶೂನ್ಯವು ತುಂಬಲಾರದ್ದು. ಶ್ರೀಧರ ರಾಯರ ಬದುಕು ಅವರೇ ಕಟ್ಟಿದ್ದಾಗಿತ್ತು. ಜೀವನದ ಕಟುವಾಸ್ತವದ ಕರಾಳ ನೆರಳಿನಲ್ಲಿ, ತನ್ನ ಮಾವ ಕುಬಣೂರು ಪರಮೇಶ್ವರ ಬಳ್ಳಕ್ಕುರಾಯರ ಆಶ್ರಯದಲ್ಲಿ, ಅದೂ ಸಾಂಸ್ಕೃತಿಕವಾಗಿ ಪರಿಪುಷ್ಟ ವಾದ ವಾತಾವರಣದಲ್ಲಿ ಬೆಳೆದ ಶ್ರೀಧರ ರಾಯರು ಹದಿಹರೆಯದಲ್ಲೇ  ಶಾಸ್ತ್ರೀಯ ಸಂಗೀತದ ಪ್ರವೇಶ ಪಡೆದರು. ಜತೆ ಜತೆಗೇ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ಗಳಿಸಿದರು. ಮೊದಲಿಗೆ ಗುರು ಗೋಪಾಲಕೃಷ್ಣ ಮಯ್ಯ ಎಂಬವರಿಂದ ಭಾಗವತಿಕೆಯ ಪಾಠ ಹೇಳಿಸಿಕೊಂಡರು. ಆ ಬಳಿಕ ದಾಮೋದರ ಮಂಡೆಚ್ಚರಿಂದ ಪ್ರಭಾವಿಸಲ್ಪಟ್ಟು, ಅವರದೇ ಶೈಲಿಯೊಡನೆ ತಮ್ಮ ಸ್ವೋಪಜ್ಞತೆಯನ್ನೂ ಸೇರಿಸಿ ಬನಿಯಾದ ಗಾನ ಸುಧೆಯನ್ನು ಹರಿಸುವ ಭಾಗವತರಾಗಿ ಬೆಳೆದರು. 

ವ್ಯಕ್ತಿಯ ವ್ಯಕ್ತಿತ್ವ ಆತನ ನಡೆ, ನುಡಿ ಮತ್ತು ಅಭಿವ್ಯಕ್ತಿಯಲ್ಲಿ ಬಿಂಬಿತವಾಗುತ್ತದೆ. ಇದನ್ನು ಸೂಕ್ಷ್ಮ ನೋಟದಲ್ಲಿ ಕಾಣಬಹುದು. ಕುಬಣೂರು ಶ್ರೀಧರ ರಾಯರ ಕಲಾಭಿವ್ಯಕ್ತಿ ಅವರ ವ್ಯಕ್ತಿತ್ವದ ಪಡಿಯಚ್ಚು. ಮೃದುವಾದ ಸ್ವರ- ಮೃದು ಮತ್ತು ಸಂಕೋಚದ ಮನಸ್ಸು. ಅವರ ಶಾರೀರದ ಮೃದುತ್ವಕ್ಕೆ ತಕ್ಕಂತಹ ಗಾಯನ ಶೈಲಿ ತೆಂಕುತಿಟ್ಟು ಯಕ್ಷಗಾನದಲ್ಲಿ ಪ್ರತ್ಯೇಕ ಸ್ಥಾನ ಪಡೆದಿತ್ತು. `ದಾಕ್ಷಿಣ್ಯನಿಧಿರಾತ್ಮಾಧೀನಮಕರೋತ್‌’ ಎಂಬ ಕವಿವಾಣಿಯಂತೆ ತಮ್ಮ ದಾಕ್ಷಿಣ್ಯಪ್ರವೃತ್ತಿಯಿಂದ ಇತರರ ಮನವನ್ನು ಸೂರೆಗೊಳ್ಳುವ ಅತೀ ವಿರಳ ವ್ಯಕ್ತಿತ್ವ ಅವರದು. 

ತಮ್ಮ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಔಚಿತ್ಯಪೂರ್ಣ ವಾಗಿ ಯಕ್ಷಗಾನ ಭಾಗವತಿಕೆಗೆ ಅಳವಡಿಸಿಕೊಂಡಿದ್ದರು- ನಾತಿಹೃಸ್ವ ನಾತಿದೀರ್ಘ‌. ಕೃಷ್ಣ ಸಂಧಾನ ಪ್ರಸಂಗದಲ್ಲಿ ಝಂಪೆ ತಾಳದ ಆದರಾ ಪಾಂಡುಸುತರು ಪದ್ಯಕ್ಕೆ ಕದನ ಕುತೂಹಲ ರಾಗದ ಅಳವಡಿಕೆ ಇತ್ಯಾದಿಯಾಗಿ ಅನನ್ಯವಾಗಿ, ಸಂದರ್ಭ ಸಮುಚಿತವಾಗಿ ಗಾನವನ್ನು ಪ್ರಸ್ತುತಗೊಳಿಸುತ್ತಿದ್ದರು. 

ಉಲ್ಲೇಖ ಮಾಡಲೇಬೇಕಾದ ಒಂದಂಶ: ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತರಾಗಿ ಅವರು ಶ್ರೀದೇವೀ ಮಹಾತ್ಮೆ ಪ್ರಸಂಗದಲ್ಲಿನ ಚಂಡ-ಮುಂಡರ ಭಾಗದಲ್ಲಿ ತೋರುತ್ತಿದ್ದ ನಾವೀನ್ಯ. ತೆಂಕುತಿಟ್ಟು ಹಿಮ್ಮೇಳದ ಪರಂಪರೆಯ ಔಚಿತ್ಯಪೂರ್ಣ ಕ್ರಮವಾದ ಚಂಡ-ಮುಂಡರು ಶ್ರೀದೇವಿಯನ್ನು ವರ್ಣಿಸುವ ಸಂದರ್ಭದಲ್ಲಿ ಚೆಂಡೆಯನ್ನು ಬದಿಗಿರಿಸಿ, ಬರಿಯ ಮದ್ದಳೆಯಲ್ಲಿ ಚಂಡ-ಮುಂಡರನ್ನು ಕುಣಿಸುತ್ತಿದ್ದ ಧೀರತೆ – ಇದು ಬಹು ಮುಖ್ಯ ಮತ್ತು ಸದ್ಯದ ಸಂದರ್ಭ ಅನ್ಯತ್ರ ಅಲಭ್ಯ. ಕೌಶಿಕೆಯು ಚಂಡ -ಮುಂಡರ ಮೇಲೆ ಅನಿರ್ವಚನೀಯ ಮಾಯಾವಿಲಾಸ ವನ್ನು ಬೀಸಿ, ಅವರ ಬ್ರಹ್ಮಚರ್ಯದ ಊಧ್ರ್ವ ಪಾತದ ಗತಿಯನ್ನು ಅಧೋಪಾತಕ್ಕೆ ಇಳಿಸುವ ಸನ್ನಿವೇಶವನ್ನು ಪ್ರಧಾನ ಮದ್ದಳೆಗಾರನು ನುಡಿಸುವ ಮದ್ದಳೆಯ ನಾದ ಸೌಖ್ಯದ ಜತೆಗೆ ಮಿಳಿತವಾಗಿ ಸಾಗುವ ತಮ್ಮ ಇಂಪಾದ ಮಧುರ ಗಾನದ ಮೂಲಕ ಪ್ರೇಕ್ಷಕರಿಗೆ ಕಟ್ಟಿಕೊಡುತ್ತಿದ್ದ ಕುಬಣೂರರ ಆ ರಂಗ ವೈಖರಿ ಇನ್ನೆಲ್ಲಿ!

ಚೆಂಡೆಯ ನಾದದೊಂದಿಗಿನ ಅಬ್ಬರಿಸುವ ಚಂಡ-ಮುಂಡರ ಪ್ರಕರಣಕ್ಕಿಂತ ಭಿನ್ನ ನೆಲೆಯಲ್ಲಿ ರಂಗದಲ್ಲಿ ಆ ಸನ್ನಿವೇಶವನ್ನು ಸಾಕ್ಷಾತ್ಕರಿಸುತ್ತಿದ್ದರು ಕುಬಣೂರು ಶ್ರೀಧರ ರಾಯರು. ಇಂಥ ಸ್ವೋಪಜ್ಞತೆ ಅವರೊಂದಿಗೇ ನಿಲ್ಲದಿರಲಿ ಎಂಬ ಆಶಾಭಾವನೆ ನಮ್ಮದು. ಇದು ಧೀರ ಮೂಲನಿಷ್ಠ ವಿಮುಖ ನೋಟ. 

ತುಸು ವೇಗದ ಲಯಗಾರಿಕೆ ಅಳವಡಿಸಿಕೊಂಡ ಶ್ರೀಧರ ರಾಯರಿಗೆ ಈ ಕುರಿತು ವಿಷಾದ ಇತ್ತು. ಈ ಅಭಿವ್ಯಕ್ತಿ ಅವರ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಕಳೆದ ವರುಷ ಕಟೀಲಿನಲ್ಲಿ ಜರುಗಿದ ಅವರ ಅಭಿನಂದನೆಯ ಸಂದರ್ಭದಲ್ಲಿ ಬಿಡುಗಡೆಯಾದ ಅವರ ಭಾಗವತಿಕೆಯ ಧ್ವನಿ ತಟ್ಟೆ ಅತ್ಯಂತ ಮೌಲಿಕ ವಾದದ್ದು. ಯಕ್ಷಗಾನದ ಪ್ರತೀ ತಾಳದ, ವಿವಿಧ ಛಂದೋಬಂಧಗಳ ಅನೇಕ ಪದಗಳನ್ನು ಸುಂದರವಾಗಿ, ನಿಧಾನ ಲಯದಲ್ಲಿ ಮಗುವಿನಂತೆ ಪಟ್ಟಾಗಿ ಅಭ್ಯಾಸ ಮಾಡಿ ಹಾಡಿದ್ದಾರೆ. ಇದರಲ್ಲಿ ವಿರಳವಾದ ಹದಿನಾರಕ್ಷರದ ಶಾಸ್ತ್ರೀಯ ತಿಶ್ರಮಠ್ಯ ತಾಳಕ್ಕೆ ಸಂಬಂಧವಿರುವ ಚೌತಾಳದ ಪದವನ್ನೂ ಹಾಡಿದ್ದಾರೆ. ಛಾಂದಸ ರಾದ ಗಣೇಶ ಕೊಲೆಕಾಡಿಯವರ ಸಲಹೆಯೂ ಈ ಧ್ವನಿ ತಟ್ಟೆಗಿದೆ.

ವಿದ್ಯೆಗೆ ಮುಡಿಬಾಗುವ ಸಹೃದಯತೆ, ರಂಗದಲ್ಲಿ ಕಲಾವಿದನ ಯೋಗ್ಯತೆಯನ್ನು ಗುರುತಿಸುವ ಸಜ್ಜನಿಕೆ, ರಂಗದಲ್ಲಿ ಸಂಭವಿಸುವ ಅಪಭ್ರಂಶಗಳನ್ನು ಅನಿವಾರ್ಯವಾಗಿ ಸಹಿಸುವ ಸಂಯಮ ಮಾತ್ರವಲ್ಲ, ತಿದ್ದುವ ಗುರುತ್ವ ಇವೆಲ್ಲ ಮೇಳೈಸಿದ ಸರಳ ಜಾನಪದೀಯ ಹೊರಮುಖದ, ಆಧುನಿಕ ಪ್ರಜ್ಞೆಯ ಸರಳ ವ್ಯಕ್ತಿತ್ವ ನಮ್ಮನ್ನಗಲಿದ ಕುಬಣೂರು ಶ್ರೀಧರ ರಾಯರದು. ಯಕ್ಷಗಾನಕ್ಕೆ ಅವರು ಕೊಟ್ಟ ಕೊಡುಗೆ ಗಾಯನವನ್ನೊಳಗೊಂಡ ಅವರ ವ್ಯಕ್ತಿತ್ವ ಮತ್ತು ಸರಳ ಸುಂದರ `ಯಕ್ಷಪ್ರಭಾ’ ಮಾಸಪತ್ರಿಕೆ. 

ಕುಬಣೂರು ಶ್ರೀಧರ ರಾಯರು ನಮ್ಮೆಲ್ಲರ ಮನೋಸಾಮ್ರಾಜ್ಯದ ಭಾಗವಾಗಿ ಸದಾ ಇರುತ್ತಾರೆ. 

ಕೃಷ್ಣಪ್ರಕಾಶ ಉಳಿತ್ತಾಯ

ಚಿತ್ರ: ನಟೇಶ್‌ ವಿಟ್ಲ

ಟಾಪ್ ನ್ಯೂಸ್

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.