ಸಾಮಗರಿಗೆ ಸಪ್ತತಿ ಸಂಭ್ರಮ


Team Udayavani, May 24, 2019, 5:50 AM IST

q-6

ಹಿರಿಯ ವೇಷಧಾರಿ, ಆರ್ಥಧಾರಿ, ಸಂಘಟಕ ಎಂ. ಆರ್‌. ವಾಸುದೇವ ಸಾಮಗರ ಸಪ್ತತಿ ಮೇ 26ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಮಕ್ಷ ಸಂಪನ್ನಗೊಳ್ಳಲಿದೆ.

ಸಾಮಗರದ್ದು ಸಾಹಸ ಪ್ರವೃತ್ತಿಯುಳ್ಳ, ಸವಾಲುಗಳನ್ನು ಎದುರಿಸುತ್ತಾ ಏರು-ಜಾರುಗಳಲ್ಲಿ ಹರಿದು ಭೋರ್ಗರೆವ ಜಲಪಾತದಂಥ ಬದುಕಿನ ದಾರಿ. ಸದಾ ಕ್ರಿಯಾಶೀಲ, ಕನಸುಗಾರ, ನವಾನ್ವೇಷಕ, ಸಾಧಿಸುವ ಛಲಗಾರ, ಸೋಲಿನಲ್ಲಿಯೂ ಗೆಲುವನ್ನು ಕಾಣುವ ಸಮಚಿತ್ತ.

ಸಾಮಗರ ಮೋಹನ ತರಂಗಿಣಿಯ ಮನ್ಮಥ, ಮಧುರಾ ಮಹೀಂದ್ರದ ಬಾಲಕಂಸ, ಕಚದೇವಯಾನಿಯ ಕಚ, ಯಕ್ಷಲೋಕ ವಿಜಯದ ಪ್ರದೀಪ, ಶನೀಶ್ವರ ಮಹಾತೆ¾ಯ ವಿಕ್ರಮಾದಿತ್ಯ, ಉತ್ತರ ಗೋಗ್ರಹಣದ ಉತ್ತರಕುಮಾರ ಪಾತ್ರಗಳು ಚಿತ್ತಭಿತ್ತಿಯಿಂದ ಅಳಿಸಿಹೋಗದು. ತಾಳಮದ್ದಳೆಯಲ್ಲಿ ನಿರ್ವಹಿಸದ ಪ್ರಸಂಗಗಳಿಲ್ಲ, ಪಾತ್ರಗಳೇ ಇಲ್ಲವೆನ್ನಬಹುದು. ಕರ್ಣ, ಅರ್ಜುನ, ಕೃಷ್ಣ, ಶಲ್ಯರಂಥಹ ಮುಖ್ಯಪಾತ್ರಗಳಲ್ಲದೇ, ಅಶ್ವಸೇನನಂತಹ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಂಬಿಗನ ಪಾತ್ರವನ್ನು ಹೊಸ ಚಿಂತನೆ ಯಲ್ಲಿ ಕಟ್ಟಿಕೊಟ್ಟದ್ದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಆಟವಿರಲಿ, ಕೂಟವಿರಲಿ ವಾಸುದೇವ ಸಾಮಗರು ರಂಗದಲ್ಲಿ ಅನನ್ಯರಾಗಿಯೇ ಕಾಣಿಸಿಕೊಳ್ಳುತ್ತಾರೆ. ದೊಡ್ಡಪ್ಪ ಶಂಕರನಾರಾಯಣ ಸಾಮಗ ಮತ್ತು ತಂದೆ ರಾಮದಾಸ ಸಾಮಗರ ಪಾತ್ರ ನಿರ್ವಹಣೆಯ ಕೌಶಲದ ಬಳುವಳಿಯೊಂದಿಗೆ ತನ್ನದೇ ಆದ ಹೊಸ ಆಯಾಮದಲ್ಲಿ ಪಾತ್ರಗಳನ್ನು ಕಡೆದು ಕಟ್ಟಿಕೊಡುವ ಅಪೂರ್ವ ಕಲಾವಿದರು.

ತೆಂಕು-ಬಡಗು ರಂಗದಲ್ಲಿ ಪಾತ್ರೋಚಿತವಾಗಿ ಕುಣಿತವನ್ನು ಪ್ರದರ್ಶಿಸುವ ಸಾಮಗರು ವಾಚಿಕ, ಆಂಗಿಕ ಆಹಾರ್ಯಾಭಿನಯಗಳನ್ನು ಸಮದಂಡಿಯಾಗಿ ಸ್ವೀಕರಿಸಿದವರು. ಪ್ರಸಂಗವೊಂದರ ಆಶಯಕ್ಕೆ ಪೂರಕವಾಗಿ, ಅತಿ ಚಿಕ್ಕ ಪಾತ್ರಗಳನ್ನು ಕೂಡ ಅಷ್ಟೇ ಸಮರ್ಥವಾಗಿ ನಿರ್ವಹಿಸುವಲ್ಲಿ ಸಹ ಕಲಾವಿದರನ್ನು ತಿದ್ದಿತೀಡುವ ಹೃದಯ ವೈಶಾಲ್ಯ ಇವರದ್ದು.

– ಸುಜಯೀಂದ್ರ ಹಂದೆ ಎಚ್‌.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.