ಸತ್ವದಿಂದ ಮನಗೆದ್ದಿತು ನೃತ್ಯಾಮೃತಂ


Team Udayavani, Apr 7, 2017, 3:47 PM IST

07-ANKANA-4.jpg

ನೃತ್ಯ ಕಲಾವಿದ ರಂಗದಲ್ಲಿ ತನ್ಮಯನಾಗಿ ನರ್ತಿಸುತ್ತಾ ಯಥೋಚಿತ ಭಾವಸುರಣವಾಗುವಂತೆ ಅಭಿನಯಿಸಿ, ಪ್ರೇಕ್ಷಕರ ಮನಸ್ಸಿನಲ್ಲಿ ಅತ್ಯಂತಿಕವಾದ ಆನಂದಾಮೃತವನ್ನು ಆಸ್ವಾದಿಸುವ ಭಾವವನ್ನು ಒದಗಿಸಬೇಕಾದದ್ದೇ ಕಲೆಯ ಪರಮ ಉದ್ದೇಶ. ಮಂಗಳೂರಿನ “ಭರತಾಂಜಲಿ ಕೊಟ್ಟಾರ’ ನೃತ್ಯಸಂಸ್ಥೆ ಇತ್ತೀಚೆಗೆ ಆಯೋಜಿಸಿದ ನೃತ್ಯಾಮೃತಂ ಕಾರ್ಯಕ್ರಮ ಇಂತಹ ಒಂದು ಅನುಭವವನ್ನು ನೀಡಿತು. 

ಮೊದಲಿಗೆ ನೃತ್ಯ ಪ್ರದರ್ಶನ ನೀಡಿದ ಬೆಂಗಳೂರಿನ ಮಾತಂಗಿ ಪ್ರಸನ್ನ ಪ್ರಕೃತಿಯ ವಾತ್ಸಲ್ಯ ಹಾಗೂ ಪೋಷಣೆಯ ಕುರಿತಾದ ಆಶಯದ ನೃತ್ಯದೊಂದಿಗೆ ಹೊಸತನದಿಂದ ಕೂಡಿದ ರಾಗಮಾಲಿಕೆ  -ಆದಿತಾಳದ ಸ್ವರಾಂಜಲಿಗೆ ಹೆಜ್ಜೆ ಹಾಕುತ್ತಾ ರಂಗದಲ್ಲಿ ಮಿಂಚು ಹರಿಸಿದರು. ಮುಂದೆ ಪ್ರಭೋ ಗಣಪತೇ ಎಂಬ ತಿಲಂಗ್‌ ರಾಗ, ಆದಿತಾಳದ ನೃತ್ಯದ ಮೂಲಕ ಗಣಪತಿ ವಂದನೆ ಸಲ್ಲಿಸಿದರು. ಬಳಿಕ ಕಲಾವಿದೆ ಪೂರ್ವಿಕಲ್ಯಾಣಿ ರಾಗ, ರೂಪಕ ತಾಳದ ಆನಂದ ನಟ ಮಾಡುವಾರ್‌ ತಿಲೈ ಎಂಬ ಪದಂಗೆ ಕ್ಲಿಷ್ಟಕರ ಲಯವಿನ್ಯಾಸದಿಂದ  ಕೂಡಿದ ಜತಿಗಳ ಸಹಿತ ಚುರುಕಾಗಿ ನರ್ತಿಸಿದರು. ಕೊನೆಗೆ ಬಾರೋ ಕೃಷ್ಣಯ್ಯ ಎಂಬ ರಾಗಮಾಲಿಕೆ, ಆದಿತಾಳದ ಕೀರ್ತನೆಗೆ ಸ್ನೇಹ, ವಾತ್ಸಲ್ಯಮಯ ಮಾತೃಭಾವದಿಂದ ಭಕ್ತೆಯ ರೀತಿಯಲ್ಲಿ ಅಭಿನಯಿಸಿದ್ದು ಚೆನ್ನಾಗಿ ಮೂಡಿಬಂತು. ಇಲ್ಲಿ ತುಂಟ ಕೃಷ್ಣನ ಭಾವಗಳು ಪ್ರೇಕ್ಷಕರ ಮನ ಮುಟ್ಟುವಲ್ಲಿ ಸಫ‌ಲವಾದವು. ಪ್ರಖ್ಯಾತ ನೃತ್ಯ ಗುರು ಕಿರಣ್‌ ಸುಬ್ರಹ್ಮಣ್ಯಂ ಇವರ ಗರಡಿಯಲ್ಲಿ ಪಳಗಿದ ಉದಯೋನ್ಮುಖ ಕಲಾವಿದೆ ಮಾತಂಗಿ ಪ್ರಸನ್ನ ಸೊಗಸಾದ ನೃತ್ಯ ಪ್ರಸ್ತುತಿಯೊಂದಿಗೆ ಭವಿಷ್ಯದಲ್ಲಿ ಭರವಸೆಯ ಕಲಾವಿದೆಯಾಗಿ ಬೆಳೆಯುವ ಲಕ್ಷಣಗಳನ್ನು ತೋರಿದರು.

ಮುಂದೆ ಬೆಂಗಳೂರಿನ ಪ್ರಖ್ಯಾತ ನೃತ್ಯಗುರು ಬಿ. ಭಾನುಮತಿ ಅವರ ನೃತ್ಯಕಲಾ ಮಂದಿರ ತಂಡದ ನೃತ್ಯ ಪ್ರಸ್ತುತಿ ಮನೋಜ್ಞವಾಗಿತ್ತು. ಆರಂಭಿಕ ನೃತ್ಯ ಡಾ| ವೆಂಕಟ ಲಕ್ಷಮ್ಮ ಅವರ ಸಂಯೋಜನೆಯ ತಿಶ್ರ ಅಲರಿಪು, ಗುರು ಭಾನುಮತಿ ಅವರಿಂದ ಸಮೂಹ ನೃತ್ಯಕ್ಕೆ ಅಳವಡಿಸಲ್ಪಟ್ಟದ್ದು, ಆಕರ್ಷಕವಾಗಿ ಮೂಡಿಬಂದು ನೆರೆದ ರಸಿಕರ ಮನ ಸೆಳೆಯಿತು. ಮಾಯಾಮಾಳವಗೌಳ ರಾಗದ ದೇವೀಕೃತಿಯೊಂದಿಗೆ ಮುಂದು ವರಿದ ಕಾರ್ಯಕ್ರಮದ ಅನಂತರದ ಪ್ರಸ್ತುತಿ ಚುರುಕಾದ ಅಭಿನಯದ ಜತೆಗೆ ಚೆನ್ನಾಗಿ ಮೂಡಿ ಬಂತು. ಮುಂದೆ ಗುರು ಬಿ. ಭಾನುಮತಿಯವರು ತುಂಟ ಕೃಷ್ಣನ ಚಿತ್ರಣವನ್ನು, ಯಶೋದೆಯ ಹುಸಿಮುನಿಸನ್ನು ಬಹಳ ಸೊಗಸಾಗಿ ಗುಮ್ಮನ ಕರೆಯದಿರೆ  ದೇವರನಾಮಕ್ಕೆ ಅಭಿನಯಿಸುವ ಮೂಲಕ ಜನಮನ ಸೆಳೆದರು. ಎಪ್ಪತ್ತರ ಹರೆಯದ ಗುರು ಭಾನುಮತಿ ಯವರು ರಂಗದಲ್ಲಿ ಏಳರ ಹರೆಯದ ಕೃಷ್ಣನಾಗಿ ನೀಡಿದ ಅಭಿನಯ ಹೃದ್ಯವಾಗಿತ್ತು. ಮುಂದೆ ಗುರುಗಳು ತಾವೇ ಅಭಿನಯಿಸಿದ ಶ್ರೀ ರಾಮನ ಪೂಜಿಸಲಿಲ್ಲ ಮೈ ಮರೆತನಲ್ಲ ಎಂಬ ಹಾಡಿನಲ್ಲಿ ಲೌಕಿಕ ಪ್ರಪಂಚದಲ್ಲಿ ಪರಮಾತ್ಮನನ್ನು ಮರೆತು ಬದುಕಿದ ಪರಿಯನ್ನು ಅಭಿನಯಿಸಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸಿದರು. ಕೊನೆಯದಾಗಿ ಹನುಮಂತ ದೇವ ನಮೋ  ಎಂಬ ನೃತ್ಯದ ಮೂಲಕ ರಾಮಾಯಣದಲ್ಲಿ ಬರುವ ಹನುಮಂತನ ಪಾತ್ರ ಚಿತ್ರಣವನ್ನು ಬಲು ಸೊಗಸಾಗಿ ಪ್ರಸ್ತುತಪಡಿಸಿದರು. ಇಲ್ಲಿ ಗುರು ಭಾನುಮತಿಯವರು ಹನುಮನಾಗಿ ನೀಡಿದ ಅಭಿನಯ ಅದ್ಭುತ ವಾಗಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತಿತ್ತು.  ಗುರು ಭಾನುಮತಿ ಅವರ ಶಿಷ್ಯೆಯರೂ ಅಷ್ಟೇ ಸೊಗಸಾದ ಅಂಗಶುದ್ಧಿ ಹಾಗೂ ಮುಖ ಭಾವದೊಂದಿಗೆ ಅಭಿನಯಿಸಿದರು. ನೃತ್ಯಕ್ಕೆ, ನೃತ್ಯಗಾತಿಗೆ ವಯಸ್ಸಿನ ಹಂಗಿಲ್ಲ ಎಂಬಂತೆ ಗುರು ಭಾನುಮತಿಯವರು ಸುಮಾರು ಒಂದು ತಾಸು ಕಾಲ ರಂಗ ಪ್ರಸ್ತುತಿ ನೀಡಿದ್ದು ಅಭಿನಂದನೀಯ. 

ಎರಡೂ ಕಾರ್ಯಕ್ರಮಗಳಲ್ಲೂ ಸತ್ವವೇ ಮೇಳೈಸಿ ಆನಂದ ನೀಡಿತು. ಇಂತಹ ಕಾರ್ಯಕ್ರಮವನ್ನು ಸಂಘಟಿಸಿದ ಭರತಾಂಜಲಿಯ ಶ್ರೀಧರ ಹೊಳ್ಳ, ಪ್ರತಿಮಾ ಶೀಧರ್‌ ದಂಪತಿ ಅಭಿನಂದನಾರ್ಹರು.

ಜಯಲಕ್ಷ್ಮೀ

ಟಾಪ್ ನ್ಯೂಸ್

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

1-dsdsadsa

Victory parade ; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

Maski ವಾಹನ ಸವಾರರು ಹೈರಾಣು; ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಒತ್ತಾಯ

Maski ವಾಹನ ಸವಾರರು ಹೈರಾಣು; ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಒತ್ತಾಯ

supreem

NEET-UG ಪರೀಕ್ಷೆ ರದ್ದುಗೊಳಿಸದಂತೆ ನಿರ್ದೇಶನ ನೀಡಿ: 50 ಕ್ಕೂ ಹೆಚ್ಚು ಅಭ್ಯರ್ಥಿಗಳ ಮನವಿ

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

Hosanagar; ವಿಪರೀತ ಮಳೆ: ಸಂಕ ದಾಟುವ ವೇಳೆ ಕೊಚ್ಚಿ ಹೋದ ಮಹಿಳೆ ಸಾವು

1-dsdsadsa

Victory parade ; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

Maski ವಾಹನ ಸವಾರರು ಹೈರಾಣು; ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಒತ್ತಾಯ

Maski ವಾಹನ ಸವಾರರು ಹೈರಾಣು; ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.