ಮುಂಡಾಜೆ ಬಾಲಕೃಷ್ಣ ಶೆಟ್ಟಿಯವರಿಗೆ ಮಂಡೆಚ್ಚ ಪ್ರಶಸ್ತಿ


Team Udayavani, Sep 20, 2019, 5:00 AM IST

t-2

ಮುಂಡಾಜೆಯ ಬಾಲಕೃಷ್ಣ ಶೆಟ್ಟಿ ಯವರು 2019ನೇ ಸಾಲಿನ “ದಿ.ಮಂಡೆಚ್ಚ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.ಅಪ್ರತಿಮ ಗಿರ್ಕಿ ವೀರ, ಪ್ರಖ್ಯಾತ ಪುಂಡು ವೇಷಧಾರಿ ಬಾಲಕೃಷ್ಣ ಶೆಟ್ಟಿಯವರು ಕರ್ನಾಟಕ ಮೇಳವೊಂದರಲ್ಲೆ 25 ವರ್ಷ ತಿರುಗಾಟವನ್ನು ಮಾಡಿದವರು. ದಿ.ಮಂಡೆಚ್ಚರ ಕರಕಮಲಸಂಜಾತರಾಗಿ ತುಳು ಯಕ್ಷಗಾನವನ್ನು ಶ್ರೀಮಂತಗೊಳಿಸಿದವರು.

ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ದಿ. ಕುರಿಯ ವಿಠಲ ಶಾಸ್ತ್ರಿ ಮತ್ತು ದಿ.ಪಡ್ರೆ ಚಂದು ಅವರಿಂದ ಶಾಸ್ತ್ರೀಯವಾಗಿ ನಾಟ್ಯಾಭ್ಯಾಸವನ್ನು ಪೂರೈಸಿ ಕರ್ನಾಟಕ ಮೇಳ ಸೇರಿದರು. ಪುಟ್ಟ ಪುಟ್ಟ ಪಾತ್ರಗಳನ್ನು ಮಾಡುತ್ತ ಬೆಳೆದರು.ಬೋಳಾರರ ಹಿರಣ್ಯಕಶಿಪುವಿಗೆ ಪ್ರಹ್ಲಾದ, ಕೋಳ್ಯೂರರ ಚಂದ್ರಮತಿಗೆ ಲೋಹಿತಾಶ್ವನ ಪಾತ್ರದಲ್ಲಿ ಬಹುಬೇಗನೆ ಪ್ರಸಿದ್ಧಿಯನ್ನು ಪಡೆದರು.ಪುಂಡು ವೇಷದ ವಿಭಾಗದಲ್ಲಿ ಅವರು ಮಾಡದ ಪಾತ್ರಗಳಿಲ್ಲ, ಪ್ರತೀ ಪಾತ್ರಕ್ಕೂ ಜೀವ ತುಂಬಿದರು. ದೈವದತ್ತವಾಗಿ ದೊರಕಿದ ಶರೀರ, ಶಾರೀರ, ಲವಲವಿಕೆಯ ಚುರುಕಿನ ನಡೆ. ಅವರಿಗೆ ಒಲವು ಇದ್ದದ್ದು ಕುಣಿತದಲ್ಲೆ. ತುಳು ಪ್ರಸಂಗಗಳಲ್ಲಿ ಚೆನ್ನಯ್ಯ (ಕೋಟಿ-ಚೆನ್ನಯ್ಯ), ರಾಜಶೇಖರ (ಪಟ್ಟದ ಪದ್ಮಲೆ), ಶಾಂತಕುಮಾರ (ಕಾಡಮಲ್ಲಿಗೆ), ವೀರಸೇನ (ರಾಜಮುದ್ರಿಕೆ), ಕರ್ಣಗೆ (ಮಾಯಾಜುಮಾದಿ) ಅವರಿಗೆ ಖ್ಯಾತಿ ತಂದೊದಗಿಸಿತು.

ಪ್ರಸಿದ್ಧಿಯ ತುತ್ತತುದಿಯಲ್ಲಿರುವಾಗಲೇ ಅನಾರೊಗ್ಯ ಕಾಡತೊಡಗಿತು. ವಿಪರೀತವಾದ ಕಾಲುನೋವಿನಿಂದಾಗಿ ಮೇಳ ಬಿಡಬೇಕಾದ ಅನಿವಾರ್ಯತೆ ಎದುರಾಯಿತು.ಸಣ್ಣ ವಯಸ್ಸಿನಲ್ಲೇ ಈ ರೀತಿ ಆದರೂ ಎದೆಗುಂದಲಿಲ್ಲ. ಪ್ರಸಾದನ ಕಲಾವಿದರಾಗಿ ಅನಂತರ ತಮ್ಮ ಸ್ವಂತ ಪ್ರಸಾಧನ ಉದ್ದಿಮೆಯನ್ನು ನಡೆಸಿದರು.ಅನೇಕ ಕಡೆ ಯಕ್ಷ ನಾಟ್ಯಾಭ್ಯಾಸವನ್ನು ಮಾಡಿಸಿದರು.ಈ ಮೂಲಕ ಯಕ್ಷಮಾತೆಯ ಸೇವೆಯನ್ನು ಮುಂದುವರಿಸಿದರು.

ಈ ಎಲ್ಲ ಸಾಧನೆಯನ್ನು ಗುರುತಿಸಿ ದಿ.ಮಂಡೆಚ್ಚ ಪ್ರಶಸ್ತಿಯನ್ನು ಮುಂಡಾಜೆ ಬಾಲಕೃಷ್ಣ ಶೆಟ್ಟರಿಗೆ ಈ ಬಾರಿ ಕೊಡಮಾಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸೆ. 25ರಂದು ಕಟೀಲಿನ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.ಇದೇ ಸಂದರ್ಭದಲ್ಲಿ ‘ದಿ.ಮಂಡೆಚ್ಚ ಪ್ರಶಸ್ತಿ’ಯನ್ನು ಸಂಸ್ಥಾಪಿಸಿದ ಭಾಗವತ ದಿ.ಕುಬಣೂರು ಶ್ರೀಧರ ರಾವ್‌ ಅವರ ಸಂಸ್ಮರಣೆಯೂ ನಡೆಯಲಿದೆ. ಕುಬಣೂರು ಭಾಗವತರಿಂದ ರಚಿತವಾದ ಪ್ರಸಂಗಗಳ ಆಯ್ದ ಪದ್ಯಗಳ ಗಾನವೈಭವವೂ ಇದೆ.

– ಡಾ| ಶ್ರುತಕೀರ್ತಿರಾಜ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.