ಶ್ರೀಮಂತಿಕೆ ಮೆರೆದ ಮುಲ್ತಾನಿ, ಝಿಂಝೋಟಿ


Team Udayavani, Oct 25, 2019, 4:12 AM IST

Q-46

ರಂಜನಿ ಮೆಮೊರಿಯಲ್‌ ಟ್ರಸ್ಟ್‌ ವತಿಯಿಂದ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ನಡೆದ ಆರನೆಯ ರಂಜನಿ ಸಂಸ್ಮರಣ ವರ್ಷಾಚರಣೆಯ ನಾಲ್ಕನೇ ದಿನದ ಕಛೇರಿಯನ್ನು ಮೈಸೂರಿನ ಶ್ರೀಮತಿದೇವಿ ನಡೆಸಿಕೊಟ್ಟರು. ಅವರಿಗೆ ಹಾರ್ಮೋನಿಯಂನಲ್ಲಿ ಸತೀಶ್‌ ಭಟ್‌ ಹೆಗ್ಗಾರ್‌ ಮತ್ತು ತಬಲಾದಲ್ಲಿ ಭೀಮಾ ಶಂಕರ್‌ ಸಹಕರಿಸಿದ್ದರು.

ಶ್ರೀಮತಿ ದೇವಿಯವರ ಕಛೇರಿಯಲ್ಲಿ ಎದ್ದು ಕಾಣುವ ಅಂಶವೆಂದರೆ ಶ್ರುತಿ ಶುದ್ಧತೆಯಿಂದೊಡಗೂಡಿದ ತ್ರಿಸ್ಥಾಯಿಯಲ್ಲಿ ಲೀಲಾಜಾಲವಾಗಿ ಸಂಚರಿಸಬಲ್ಲ ಉತ್ಕೃಷ್ಟ ಮಟ್ಟದ ನಾಜೂಕಾಗಿ ಪಳಗಿಸಿದ ಧ್ವನಿ ಸೌಕರ್ಯ. ಮುಲ್ತಾನಿಯ ಆವರೋಹದ ಗರಿಸಾದಲ್ಲಿ ಅವರು ವಹಿಸುವ ಎಚ್ಚರ ಶ್ಲಾಘನೀಯ. ಇದರ ರಿಷಭಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡದೆ ತೋಡಿಯ ಛಾಯೆ ಬಾರದಂತೆ ವಹಿಸಿದ ಎಚ್ಚರ ಗಮನಾರ್ಹ. ಹಾಗಾದಾಗಲೇ, ತೀವ್ರ ಮ ಮತ್ತು ನಿಗಳ ಜಾತಿಗೆ ಸೇರಿದ ಮುಲ್ತಾನಿಗೆ ಸ್ವಂತಿಕೆ ಬರುವುದು. ಈ ರಾಗದಲ್ಲಿ ಹೆಣೆದ ವಿವಿಧ ಗತಿಯ ಸುಂದರ ತಾನ್‌ಗಳು ಮತ್ತು ವರಸೆಗಳು ಮುಲ್ತಾನಿಯ ಗಾಂಭೀರ್ಯವನ್ನು ಎತ್ತಿಡಿದಿವೆ. ಝಿಂಝೊàಟಿಯ ಬಂದಿಶ್‌ ನಲ್ಲಂತೂ ಅವರು ನೇಯ್ದ ರಕ್ತಿಭಾವ ಮನನೀಯ. ಮಧ್ಯ ಲಯದ ಬಂದಿಶ್‌ ಮತ್ತು ತರಾನಾವು ಒಂದಕ್ಕೊಂದು ಹೊಂದಿಕೆಯಾಗುವ ಮುಂದುವರಿಕೆಯ ಭಾಗವೋ ಎನ್ನುವಂತಿದ್ದವು. ಸತೀಶ್‌ ಅವರು ಶ್ರೀಮತಿಯ ಗಾಯನದ ಎಡೆ ಎಡೆಗಳಲ್ಲಿ ಎಚ್ಚರದಿಂದ ಪೂರಕವಾದ ಹಿತವಾದ ಸಾಥಿಯನ್ನು ಹಾರ್ಮೋನಿಯಂನಲ್ಲಿ ನೀಡಿದ್ದಾರೆ. ಗಾಯನದ ಪ್ರತಿ ಅಂಶವನ್ನು ಮೆಲ್ಲುತ್ತಾ ಮುಗುಳುನಗೆಯೊಂದಿಗೆ ಜಾಣ್ಮೆಯ ಉಠಾವ್‌ ಕೊಡುವ ತಬಲಾಜೀ ಭೀಮಾ ಶಂಕರ್‌ ಅವರು ನಿಜಕ್ಕೂ ಅಭಿನಂದನೀಯರು. “ಅವ ಧೂತಾ’ ನಿರ್ಗುಣಿ ಭಜನ್‌ ಅಂತೂ ಗುನುಗುನಿಸುವ ಧ್ವನಿಯಾಗಿ ಹೊರ ಹೊಮ್ಮಿತು. ಪ್ರಬುದ್ಧ ಕಲಾವಿದೆಯಾಗುತ್ತಿರುವ ಶ್ರೀಮತಿದೇವಿ ಬಹಳ ಎತ್ತರಕ್ಕೆ ಏರುತ್ತಿರುವ ಸೂಚನೆಯಿತ್ತಿದ್ದಾರೆ.

– ಕೇದಾರನಾಥ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

SBI

Chhattisgarh: ಎಸ್‌ಬಿಐ ನಕಲಿ ಶಾಖೆ, ವಂಚನೆ!

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-tggg

CJI; ಈಗಲೂ ನಾನೇ ಮುಖ್ಯಸ್ಥ: ವಕೀಲರಿಗೆ ಚಂದ್ರಚೂಡ್‌ ಕ್ಲಾಸ್‌

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

1-jaya

Dubey ಸಮಿತಿ ಬಿಟ್ಟು ಬೊಮ್ಮಾಯಿ ಸ್ಥಾಯಿ ಸಮಿತಿಗೆ ಜಯಾ ಬಚ್ಚನ್‌

Maldives Muizzu

Maldives ಅಧ್ಯಕ್ಷ ಮುಯಿಜ್ಜು ಭಾರತ ಪ್ರವಾಸ ಅ.6ರಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.