ಶ್ರೀಮಂತಿಕೆ ಮೆರೆದ ಮುಲ್ತಾನಿ, ಝಿಂಝೋಟಿ
Team Udayavani, Oct 25, 2019, 4:12 AM IST
ರಂಜನಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ನಡೆದ ಆರನೆಯ ರಂಜನಿ ಸಂಸ್ಮರಣ ವರ್ಷಾಚರಣೆಯ ನಾಲ್ಕನೇ ದಿನದ ಕಛೇರಿಯನ್ನು ಮೈಸೂರಿನ ಶ್ರೀಮತಿದೇವಿ ನಡೆಸಿಕೊಟ್ಟರು. ಅವರಿಗೆ ಹಾರ್ಮೋನಿಯಂನಲ್ಲಿ ಸತೀಶ್ ಭಟ್ ಹೆಗ್ಗಾರ್ ಮತ್ತು ತಬಲಾದಲ್ಲಿ ಭೀಮಾ ಶಂಕರ್ ಸಹಕರಿಸಿದ್ದರು.
ಶ್ರೀಮತಿ ದೇವಿಯವರ ಕಛೇರಿಯಲ್ಲಿ ಎದ್ದು ಕಾಣುವ ಅಂಶವೆಂದರೆ ಶ್ರುತಿ ಶುದ್ಧತೆಯಿಂದೊಡಗೂಡಿದ ತ್ರಿಸ್ಥಾಯಿಯಲ್ಲಿ ಲೀಲಾಜಾಲವಾಗಿ ಸಂಚರಿಸಬಲ್ಲ ಉತ್ಕೃಷ್ಟ ಮಟ್ಟದ ನಾಜೂಕಾಗಿ ಪಳಗಿಸಿದ ಧ್ವನಿ ಸೌಕರ್ಯ. ಮುಲ್ತಾನಿಯ ಆವರೋಹದ ಗರಿಸಾದಲ್ಲಿ ಅವರು ವಹಿಸುವ ಎಚ್ಚರ ಶ್ಲಾಘನೀಯ. ಇದರ ರಿಷಭಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡದೆ ತೋಡಿಯ ಛಾಯೆ ಬಾರದಂತೆ ವಹಿಸಿದ ಎಚ್ಚರ ಗಮನಾರ್ಹ. ಹಾಗಾದಾಗಲೇ, ತೀವ್ರ ಮ ಮತ್ತು ನಿಗಳ ಜಾತಿಗೆ ಸೇರಿದ ಮುಲ್ತಾನಿಗೆ ಸ್ವಂತಿಕೆ ಬರುವುದು. ಈ ರಾಗದಲ್ಲಿ ಹೆಣೆದ ವಿವಿಧ ಗತಿಯ ಸುಂದರ ತಾನ್ಗಳು ಮತ್ತು ವರಸೆಗಳು ಮುಲ್ತಾನಿಯ ಗಾಂಭೀರ್ಯವನ್ನು ಎತ್ತಿಡಿದಿವೆ. ಝಿಂಝೊàಟಿಯ ಬಂದಿಶ್ ನಲ್ಲಂತೂ ಅವರು ನೇಯ್ದ ರಕ್ತಿಭಾವ ಮನನೀಯ. ಮಧ್ಯ ಲಯದ ಬಂದಿಶ್ ಮತ್ತು ತರಾನಾವು ಒಂದಕ್ಕೊಂದು ಹೊಂದಿಕೆಯಾಗುವ ಮುಂದುವರಿಕೆಯ ಭಾಗವೋ ಎನ್ನುವಂತಿದ್ದವು. ಸತೀಶ್ ಅವರು ಶ್ರೀಮತಿಯ ಗಾಯನದ ಎಡೆ ಎಡೆಗಳಲ್ಲಿ ಎಚ್ಚರದಿಂದ ಪೂರಕವಾದ ಹಿತವಾದ ಸಾಥಿಯನ್ನು ಹಾರ್ಮೋನಿಯಂನಲ್ಲಿ ನೀಡಿದ್ದಾರೆ. ಗಾಯನದ ಪ್ರತಿ ಅಂಶವನ್ನು ಮೆಲ್ಲುತ್ತಾ ಮುಗುಳುನಗೆಯೊಂದಿಗೆ ಜಾಣ್ಮೆಯ ಉಠಾವ್ ಕೊಡುವ ತಬಲಾಜೀ ಭೀಮಾ ಶಂಕರ್ ಅವರು ನಿಜಕ್ಕೂ ಅಭಿನಂದನೀಯರು. “ಅವ ಧೂತಾ’ ನಿರ್ಗುಣಿ ಭಜನ್ ಅಂತೂ ಗುನುಗುನಿಸುವ ಧ್ವನಿಯಾಗಿ ಹೊರ ಹೊಮ್ಮಿತು. ಪ್ರಬುದ್ಧ ಕಲಾವಿದೆಯಾಗುತ್ತಿರುವ ಶ್ರೀಮತಿದೇವಿ ಬಹಳ ಎತ್ತರಕ್ಕೆ ಏರುತ್ತಿರುವ ಸೂಚನೆಯಿತ್ತಿದ್ದಾರೆ.
– ಕೇದಾರನಾಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.