ಹೆಣ್ಣಿನ ಚಿಂತನೆಯ ಎತ್ತರವನ್ನು ಪರಿಚಯಿಸಿದ ಸೂರ್ಯಪ್ರಭೆ


Team Udayavani, Apr 12, 2019, 6:00 AM IST

h-10

ನಾಟಕದ ಉತ್ತರಾರ್ಧ ಮಹಾಭಾರತದ ಕಥೆಯನ್ನು ಆಧರಿಸಿದ ಸನ್ನಿವೇಶ. ಆದರೆ ಪೂರ್ವಾರ್ಧವನ್ನು ಸಹ ಮೂಲ ಕಥೆ ಬರೆದವರು ತಮ್ಮ ಚಿಂತನಾ ಲಹರಿಯಿಂದ ಮಹಾಭಾರತದ ಕಥೆಗೆ ಹೊಂದಿಕೆಯಾಗುವಂತೆ ಅಳವಡಿಸಿಕೊಂಡಿರುವುದು ಕಥೆಗಾರನ ಸೂಕ್ಷ್ಮತೆ.
ವಿಷ್ಣು ಭಟ್‌ ಹೊಸ್ಮನೆ ಆತ್ರಾಡಿಯವರ ಪೌರಾಣಿಕ ಕಥೆ “ಸೂರ್ಯಪ್ರಭೆ’ಯನ್ನು ನಾಟಕವಾಗಿ ರೂಪಾಂತರಿಸಿದವರು ವಿಶ್ವನಾಥ ದೊಡ್ಮನೆ. ಅದನ್ನು ನಿರ್ದೇಶಿಸಿ ರಂಗಕ್ಕೆ ತಂದವರು ಅಶೋಕ ಕುಮಾರ್‌ ಕೋಡ್ಯಡ್ಕ.

ಹಿರಿಯ ನಟಿ ಪ್ರಿಯಾ ಸರೋಜಾದೇವಿ, ಅಶೋಕ್‌ ಮಾರ್ನಾಡ್‌, ಅನಿಲ್‌ ಕುಮಾರ್‌ ಸಸಿಹಿತ್ಲು, ಪ್ರಭಾಕರ್‌ ನಾಯಕ್‌, ದೀಪಕ್‌ ಪೂಜಾರಿ, ಕರುಣಾಕರ ಪೂಜಾರಿ ತಂಡ ತಮ್ಮ ಮಾತು ಹಾಗೂ ಅಭಿನಯದಿಂದ ನಾಟಕಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದೆ. ಮುಂಬಯಿಯ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಮಹೋತ್ಸವದ ಸಂದರ್ಭ ಶ್ರೀ ಗೀತಾಂಬಿಕ ಸಭಾಗೃಹ ಅಸಲ# ಇಲ್ಲಿ ಪ್ರದರ್ಶನ ಕಂಡಿತು”ಸೂರ್ಯಪ್ರಭೆ’.

ಪ್ರಾರಂಭದಿಂದ ಕೊನೆಯವರೆಗೂ ಕಥಾನಾಯಕಿ ತನ್ನ ಎತ್ತರದ ಬೌದ್ಧಿಕ ಚಿಂತನೆಯನ್ನು ಸಮರ್ಥಿಸುವಲ್ಲಿ ಯಶಸ್ವಿಯಾದದ್ದು ಕಥೆಯ ಸಾರಾಂಶ. ಕೌಟುಂಬಿಕ ಕಲಹದಿಂದಾಗಿ ಉಂಟಾದ ಯುದ್ಧದಿಂದ ತನ್ನ ಪತಿಯನ್ನು ಕಳೆದುಕೊಂಡ ಅಗಸನ ಪತ್ನಿ ತನ್ನ ಮುಂದಿನ ಬಾಳಿನ ಕುರಿತು ಯೋಚಿಸುವುದಕ್ಕಿಂತ ಈ ಯುದ್ಧದಿಂದ ಇನ್ನಷ್ಟು ಜನರಿಗೆ ತನ್ನಂತೆ ಸ್ಥಿತಿ ಬರಬಹುದು ಎನ್ನುವತ್ತ ಯೋಚಿಸಿ ಯುದ್ಧ ನಿಲ್ಲಿಸುವಂತೆ ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುವ ದೃಶ್ಯ. ಹೆಣ್ಣೊಬ್ಬಳ ಧೈರ್ಯ, ದೂರದೃಷ್ಟಿ , ವಿಶಾಲ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ.

ಭೀಷ್ಮಾಚಾರ್ಯರಾಗಿ ನಟಿಸಿದ ಅನಿಲ್‌ ಕುಮಾರ್‌ ಸಸಿಹಿತ್ಲು ಅವರ ಅಭಿನಯವು ಒಂದು ಕ್ಷಣ ಮಹಾಭಾರತದತ್ತ ಕೊಂಡೊಯ್ದದ್ದು ನಿಜ. ಅಲ್ಲದೇ ಮುಂಬಯಿಯ ಕಲಾವಿದರ ಪ್ರೌಢಿಮೆಯನ್ನು ಕಾಣುವಂತಾಯಿತು. ಮಧುಬಾಹುವಾಗಿ (ಅಗಸ) ನಟಿಸಿದ ಅಶೋಕ್‌ ಕಾರ್ನಾಡ್‌ ಕೌರವರ ಮನೆಯ ಅಗಸ ಪಾತ್ರವನ್ನು ಪ್ರಬುದ್ಧವಾಗಿ ನಿರ್ವಹಿಸಿರುವರು. ರಾಜ ಮನೆತನದ ಘನ – ಗಾಂಭೀರ್ಯದೊಂದಿಗೆ ಯುದ್ಧಕ್ಕೆ ಹೋಗುವ ಸಂದರ್ಭ ಬಂದಾಗ ಪತ್ನಿಯನ್ನು ಸಮಾಧಾನಿಸಿ ನಿರ್ಗಮಿಸುವುದು ಕರ್ತವ್ಯ ಪ್ರಜ್ಞೆಯನ್ನು ತೋರಿಸುವ ಸನ್ನಿವೇಶ ದೇಶಪ್ರೇಮವನ್ನು ಸಾರುವಂತಿತ್ತು.

ಇನ್ನು ದ್ರೋಣಾಚಾರ್ಯರ ಪಾತ್ರವನ್ನು ನಿರ್ವಹಿಸಿದ ಪ್ರಭಾಕರ್‌ ನಾಯಕ್‌ ಕಲಾಪ್ರೌಢಿಮೆ ತೋರಿಸುವಲ್ಲಿ ಹಿಂದೆ ಬೀಳಲಿಲ್ಲ. ಕೃಷ್ಣನ ಪಾತ್ರ ನಿರ್ವಹಿಸಿದ ದೀಪಕ್‌ ಪೂಜಾರಿ ಮುಂಬಯಿಯಲ್ಲೇ ಶಿಕ್ಷಣ ಪೂರೈಸಿದವರು. ತುಳು ನಾಟಕಗಳಲ್ಲಿ ಸಾಕಷ್ಟು ಅಭಿನಯಿಸಿದ್ದರು. ಕನ್ನಡ ನಾಟಕದಲ್ಲಿ ಅದೂ ಪೌರಾಣಿಕ ನಾಟಕದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿ ಭವಿಷ್ಯದಲ್ಲಿ ಭರವಸೆ ಮೂಡಿಸಿದರು.

ಸೂತ್ರಧಾರನ ಪಾತ್ರ ನಿರ್ವಹಿಸಿದ ಪ್ರಿಯಾ ಸರೋಜಾದೇವಿ ಪತಿ ಮಧುಬಾಹುವನ್ನು ಯುದ್ಧಕ್ಕೆ ಕಳುಹಿಸಿ ಕೊಡುವ ಸನ್ನಿವೇಶ, ನಂತರ ಪತಿ ಅಗಲುವಿಕೆ ಮುಂದೆ ಯುದ್ಧದಿಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂಬ ಹಂಬಲದಿಂದ ಏಕಾಂಗಿಯಾಗಿ ಪ್ರಯತ್ನಿಸಿದ ಸನ್ನಿವೇಶಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಪತಿಯನ್ನು ಕಳೆದುಕೊಂಡ “ಸೂರ್ಯಪ್ರಭೆ’ ಧೈರ್ಯಗೆಡದೇ ಭೀಷ್ಮರಲ್ಲಿಗೆ ಹೋಗಿ ಯುದ್ಧ ನಿಲ್ಲಿಸುವಂತೆ ಕೇಳಿಕೊಳ್ಳುವುದು, ಭೀಷ್ಮಚಾರ್ಯರು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ದ್ರೋಣಾಚಾರ್ಯರಲ್ಲಿಗೆ ಹೋಗಿ ಯುದ್ಧದಿಂದಾಗುವ ತೊಂದರೆಗಳನ್ನು ವಿವರಿಸುವ ಸನ್ನಿವೇಶ ಹಾಗೆ ಕೃಷ್ಣನಲ್ಲಿಗೆ ಹೋಗಿ ಧೈರ್ಯದಿಂದ ಸಮಸ್ಯೆ ಹೇಳಿಕೊಳ್ಳುವ ದೃಶ್ಯಗಳಿಗೆ ವಿಶೇಷ ಕಳೆ ತುಂಬುವಲ್ಲಿ ಯಶಸ್ವಿಯಾದದ್ದು ಅವರ ಪ್ರಬುದ್ಧತೆಗೆ ಸಾಕ್ಷಿಯಾಯಿತು.

ಶಾಂತಿಲಕ್ಷ್ಮಿ ಎಸ್‌. ಉಡುಪ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.